AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಚ್ಛೇ ದಿನ್; 2 ಸಮೋಸಾ, 1 ಕಾಫಿ, 1 ನೀರಿನ ಬಾಟಲಿಗೆ ಮುಂಬೈ ಏರ್​ಪೋರ್ಟ್​ನಲ್ಲಿ ರೂ. 490

Viral News : ಕಾಫೀ ಅಚ್ಛೇ ದಿನ್ ಆಗಯೇ ಹೈ- ಸರ್ಕಾರವನ್ನು ಗೇಲಿ ಮಾಡಿ ಟ್ವೀಟ್ ಮಾಡಿದ ಪತ್ರಕರ್ತೆಯೊಬ್ಬರ ಟ್ವೀಟಿನಡಿ ಇತರೇ ವಿಮಾನ ನಿಲ್ದಾಣ, ಮಲ್ಟಿಪ್ಲೆಕ್ಸ್​ಗಳಲ್ಲಿರುವ ಆಹಾರೋತ್ಪನ್ನಗಳ ಬೆಲೆಯ ಬಗ್ಗೆ ನೆಟ್ಟಿಗರು ಚರ್ಚೆ ಮಾಡಿದ್ಧಾರೆ.

ಅಚ್ಛೇ ದಿನ್; 2 ಸಮೋಸಾ, 1 ಕಾಫಿ, 1 ನೀರಿನ ಬಾಟಲಿಗೆ ಮುಂಬೈ ಏರ್​ಪೋರ್ಟ್​ನಲ್ಲಿ ರೂ. 490
ಸಮೋಸಾ, ಕಾಫಿ
TV9 Web
| Updated By: ಶ್ರೀದೇವಿ ಕಳಸದ|

Updated on:Dec 30, 2022 | 11:51 AM

Share

Viral : ಅಚ್ಛೇ ದಿನ್​ಗಳ ಬಗ್ಗೆ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ಇದೀಗ ವೈರಲ್ ಆಗಿರುವ ಈ ಸುದ್ದಿಯನ್ನು ಗಮನಿಸಿ. ಪತ್ರಕರ್ತೆಯೊಬ್ಬರು ಮುಂಬೈ ವಿಮಾನದಲ್ಲಿ ರೂ. 490 ಕೊಟ್ಟು ಎರಡು ಸಮೋಸಾ, ಒಂದು ಕಾಫಿ ಮತ್ತು ಒಂದು ನೀರಿನ ಬಾಟಲಿಯನ್ನು ಖರೀದಿಸಿದ ನಂತರ ‘ಕಾಫೀ ಅಚ್ಛೇ ದಿನ್ ಆಗಯೇ ಹೈ​’ ಎಂದು ಬಿಜೆಪಿ ಸರ್ಕಾರವನ್ನು ಗೇಲಿ ಮಾಡಿ ಬಿಲ್​ ಸಮೇತ ಟ್ವೀಟ್ ಮಾಡಿದ್ದಾರೆ. ಇದೀಗ ಈ ಟ್ವೀಟ್ ಸಾಕಷ್ಟು ವೈರಲ್ ಆಗಿದೆ.

ಛತ್ರಪತಿ ಶಿವಾಜಿ ಮಹಾರಾಜ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಮೋಸಾ, ನೀರಿನ ಬಾಟಲಿ ಮತ್ತು ಕಾಫಿ ಖರೀದಿಸಿದ ಪತ್ರಕರ್ತೆ ಫರಾ ಖಾನ್​ ಬಹಳೇ ಒಳ್ಳೆಯದ ದಿನಗಳು ಬಂದಿವೆ ಎಂದು ಮಾಡಿದ ಟ್ವೀಟ್ ಇದಾಗಿದೆ. ಇದಕ್ಕೆ ಅನೇಕರು ಪ್ರತಿಕ್ರಿಯಿಸಿದ್ದಾರೆ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಿಂಡಿ ಕಾಫಿ ಕೈಗೆಟಕುವ ದರದಲ್ಲಿದೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ.

ಇದನ್ನೂ ಓದಿ : ವರಮಾಲಾಗೆ ಸವಾಲು ಹಾಕಿದ ವಧು‘ಯೋಗ‘; ವೈರಲ್ ಆದ ವಿಡಿಯೋ

ಆಹಾರ ಮತ್ತು ಪ್ರಯಾಣದ ಆಯ್ಕೆ ಆದಷ್ಟು ಅಗ್ಗವಾಗಿರಲಿ ಅದಕ್ಕಾಗಿ ಸಾಕಷ್ಟು ಮಾರ್ಗಗಳಿವೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಹೈದರಾಬಾದ್​ ವಿಮಾನ ನಿಲ್ದಾಣದ ಬೇರೆ ಬೇರೆ ಮಳಿಗೆಗಳಲ್ಲಿ ಒಂದೇ ತಿಂಡಿಯ ಬೆಲೆಯಲ್ಲಿ ಹೇಗೆ ಮತ್ತು ಎಷ್ಟು ವ್ಯತ್ಯಾಸವಿರುತ್ತದೆ ಎನ್ನುವುದನ್ನು ಚರ್ಚಿಸಿದ್ದಾರೆ ಕೆಲವರು. ಹೈದರಾಬಾದಿನ ವಿಮಾನ ನಿಲ್ದಾಣದಲ್ಲಿ ಒಂದು ಇಡ್ಲಿ ವಡೆಗೆ ನೂರು ರೂಪಾಯಿ, ಕಿತ್ತಳೆ ಜ್ಯೂಸಿಗೆ ರೂ. 150. ಅಚ್ಛೆ ದಿನಗಳು ಹೇಗೆ ಆದಾವು? ಎಂದು ಕೇಳಿದ್ದಾರೆ ಇನ್ನೂ ಒಬ್ಬರು. ಇದಕ್ಕೆ ಪ್ರತಿಯಾಗಿ, ಇದು ಯಾವ ಮಳಿಗೆಯಲ್ಲಿ ಎನ್ನುವ ವಿವರವನ್ನು ಕೊಡಿ ಎಂದಿದ್ಧಾರೆ ಒಬ್ಬರು.

ಇದನ್ನೂ ಓದಿ : ಏರ್​ಪಾಡ್ಸ್​ ಕಳೆದುಕೊಂಡಿದ್ದು ವಿಮಾನದಲ್ಲಿ, ಹುಡುಕಿಕೊಡಿ ಎನ್ನುತ್ತಿರುವುದು ನೆಟ್ಟಿಗರಲ್ಲಿ

ದುಬೈ ಏರ್​ಪೋರ್ಟ್​ಗೆ ಬಂದು ನೋಡಿ ಎಂದು ಮತ್ತೊಬ್ಬರು ಆಹ್ವಾನಿಸಿದ್ಧಾರೆ. ಕೇವಲ ಏರ್​ಪೋರ್ಟ್​ನಲ್ಲಿ ಮಾತ್ರವಲ್ಲ ಮಲ್ಟಿಪ್ಲೆಕ್ಸ್​ಗಳಲ್ಲಿಯೂ ಸಮೋಸಾ ಮತ್ತು ಪಾಪ್​ಕಾರ್ನ್​ ಬೆಲೆ ಶುರುವಾಗುವುದೇ ರೂ. 200 ಮತ್ತು ರೂ. 300ರಿಂದ ಎಂದಿದ್ದಾರೆ ಮತ್ತೊಬ್ಬರು.

ಅಚ್ಛೇ ದಿನ್​ ಬಗ್ಗೆ ಮತ್ತು ವಿಮಾನ ನಿಲ್ದಾಣಗಳ ಆಹಾರೋತ್ಪನ್ನಗಳ ಬೆಲೆಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 11:45 am, Fri, 30 December 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ