AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶತಮಾನದ ಹಿಮಪಾತ; ಹಿಮಗಟ್ಟಿದ ಜಿಂಕೆಯ ಮುಖ, ಸಹಾಯ ಮಾಡಿದ ಚಾರಣಿಗರು

Winter Storm : ಕಡುಚಳಿಗಾಲದಲ್ಲಿ ಹಿಮವನ್ನು ಅಗೆಯುತ್ತ ಆಹಾರ ಹುಡುಕುತ್ತಿದ್ದ ಈ ಜಿಂಕೆಯು ಚಾರಣಿಗರ ಕಣ್ಣಿಗೆ ಬಿದ್ದಿದೆ. ಹಿಮಗಟ್ಟಿದ ಇದರ ಮುಖ ನೋಡಿದ ಅವರಿಗೆ ಸುಮ್ಮನಿರಲಾಗಿಲ್ಲ. ವೈರಲ್ ಆದ ಈ ವಿಡಿಯೋ ನೋಡಿ.

ಶತಮಾನದ ಹಿಮಪಾತ; ಹಿಮಗಟ್ಟಿದ ಜಿಂಕೆಯ ಮುಖ, ಸಹಾಯ ಮಾಡಿದ ಚಾರಣಿಗರು
ಹಿಮಗಟ್ಟಿದ ಜಿಂಕೆಯ ಮುಖ, ಸಹಾಯ ಮಾಡಿದ ದಾರಿಹೋಕರು
TV9 Web
| Edited By: |

Updated on: Dec 30, 2022 | 10:07 AM

Share

Viral Video: ಅಮೆರಿಕಾ ಮತ್ತು ಕೆನಡಾದ ಕೆಲ ಪ್ರದೇಶಗಳಲ್ಲಿ ಹಿಂದೆಂದೂ ಕಾಣದಂಥ ಹಿಮಪಾತವಾಗುತ್ತಿದೆ. ಚಂಡಮಾರುತದ ಪರಿಣಾಮವಾಗಿ ವಿಪರೀತ ಚಳಿ ಆವರಿಸಿದ್ದರಿಂದ ಅಲ್ಲಿಯ ಜನಜೀವನ ಇಂಥ ಪರಿಸ್ಥಿತಿಯಿಂದ ಸಂಕಷ್ಟಕ್ಕೀಡಾಗುತ್ತಿದೆ. ಇನ್ನು ಪ್ರಾಣಿಗಳ ಪಾಡು? ಅವುಗಳ ನರಳಿಕೆ ನೋಡಲಾಗುತ್ತಿಲ್ಲ. ಅವು ಹೇಗೆ ಬದುಕುತ್ತಿವೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ. ದಾರಿಯಲ್ಲಿ ಹಾದು ಹೋಗುವವರ ಕಣ್ಣಿಗೆ ಈ ಜಿಂಕೆ ಕಣ್ಣಿಗೆ ಬಿದ್ದಿದೆ. ತಕ್ಷಣವೇ ರಕ್ಷಿಸಿದ್ದಾರೆ.

ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಲಾಗಿರುವ ಈ ವಿಡಿಯೋ ಅನ್ನು ಯಾವಾಗ ಎಲ್ಲಿ ಚಿತ್ರೀಕರಿಸಿರುವುದು ಎಂಬ ಮಾಹಿತಿ ಇಲ್ಲ. ಈ ಜಿಂಕೆಯ ತಲೆಯು ಪೂರ್ತಿ ಹಿಮಗಟ್ಟಿದೆ. ತಲೆ, ಕಣ್ಣು, ಬಾಯಿ ಸಮೇತ ಮುಚ್ಚಿಹೋಗಿದೆ. ಹೇಗೋ ಉಸಿರೊಂದು ಇದೆ. ಹಸಿವು ವಿಪರೀತವಾಗಿ. ಹಿಮವನ್ನು ಅಗೆದರೆ ಆಹಾರ ಸಿಗಬಹುದೆ ಎಂಬ ಇರಾದೆಯಲ್ಲಿ ಓಡಾಡಿಕೊಂಡಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : ಹಿಮಾಚಲಪ್ರದೇಶದಲ್ಲಿ ಅಪರೂಪದ ಹಿಮಚಿರತೆ ಪತ್ತೆ; ವಿಡಿಯೋ ವೈರಲ್

ಇದರ ಅವಸ್ಥೆ ನೋಡಿದ ಚಾರಣಿಗರು ಹತ್ತಿರ ಬಂದಿದ್ದಾರೆ. ಆದರೆ ಜಿಂಕೆಗೆ ಸಹಜವಾದ ಭಯ ಓಡಿಹೋಗಲು ಪ್ರಯತ್ನಿಸಿದೆ. ಜಿಂಕೆಯನ್ನು ಮಲಗಿಸಿ ಅದರ ಮುಖಕ್ಕೆ ಆವರಿಸಿದ್ದ ಹಿಮವನ್ನೆಲ್ಲ ತೆಗೆದಿದ್ದಾರೆ. ನಂತರ ಅದರ ನೆಗೆತ ನೋಡಿ! ಅನೇಕರು ಈ ವಿಡಿಯೋ ನೋಡಿದ ಅನೇಕರು, ಸಹಾನುಭೂತಿಯುಳ್ಳ ನಿಮಗೆ ಧನ್ಯವಾದ ಎಂದು ಚಾರಣಿಗರಿಗೆ ಧನ್ಯವಾದ ಹೇಳಿದ್ದಾರೆ. ಮಲಗಿದಾಗ ಹಿಮಪಾತವಾಗಿ ಈ ಪರಿಸ್ಥಿತಿಗೆ ಜಿಂಕೆ ಬಂದಿರಬಹುದು ಎಂದು ಒಬ್ಬರು ಊಹಿಸಿದ್ದಾರೆ. ದೊಡ್ಡ ಮೈದಾನದಲ್ಲಿ ಬೀಸಿದ ಬಿರುಗಾಳಿಗೆ ಇದರ ಮುಖ ಹೀಗಾಗಿರಬಹುದು ಎಂದಿದ್ದಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಳಿಗಾಗಿ ಕ್ಲಿಕ್ ಮಾಡಿ

ರಾಜ್ಯ ಸರ್ಕಾರದ ಹಿರಿಯ ಸಚಿವರಲ್ಲೇ ಅಸಮಾಧಾನ: ಬೇಸರಕ್ಕೆ ಕಾರಣ ಇಲ್ಲಿದೆ
ರಾಜ್ಯ ಸರ್ಕಾರದ ಹಿರಿಯ ಸಚಿವರಲ್ಲೇ ಅಸಮಾಧಾನ: ಬೇಸರಕ್ಕೆ ಕಾರಣ ಇಲ್ಲಿದೆ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ