AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶತಮಾನದ ಹಿಮಪಾತ; ಹಿಮಗಟ್ಟಿದ ಜಿಂಕೆಯ ಮುಖ, ಸಹಾಯ ಮಾಡಿದ ಚಾರಣಿಗರು

Winter Storm : ಕಡುಚಳಿಗಾಲದಲ್ಲಿ ಹಿಮವನ್ನು ಅಗೆಯುತ್ತ ಆಹಾರ ಹುಡುಕುತ್ತಿದ್ದ ಈ ಜಿಂಕೆಯು ಚಾರಣಿಗರ ಕಣ್ಣಿಗೆ ಬಿದ್ದಿದೆ. ಹಿಮಗಟ್ಟಿದ ಇದರ ಮುಖ ನೋಡಿದ ಅವರಿಗೆ ಸುಮ್ಮನಿರಲಾಗಿಲ್ಲ. ವೈರಲ್ ಆದ ಈ ವಿಡಿಯೋ ನೋಡಿ.

ಶತಮಾನದ ಹಿಮಪಾತ; ಹಿಮಗಟ್ಟಿದ ಜಿಂಕೆಯ ಮುಖ, ಸಹಾಯ ಮಾಡಿದ ಚಾರಣಿಗರು
ಹಿಮಗಟ್ಟಿದ ಜಿಂಕೆಯ ಮುಖ, ಸಹಾಯ ಮಾಡಿದ ದಾರಿಹೋಕರು
TV9 Web
| Edited By: ಶ್ರೀದೇವಿ ಕಳಸದ|

Updated on: Dec 30, 2022 | 10:07 AM

Share

Viral Video: ಅಮೆರಿಕಾ ಮತ್ತು ಕೆನಡಾದ ಕೆಲ ಪ್ರದೇಶಗಳಲ್ಲಿ ಹಿಂದೆಂದೂ ಕಾಣದಂಥ ಹಿಮಪಾತವಾಗುತ್ತಿದೆ. ಚಂಡಮಾರುತದ ಪರಿಣಾಮವಾಗಿ ವಿಪರೀತ ಚಳಿ ಆವರಿಸಿದ್ದರಿಂದ ಅಲ್ಲಿಯ ಜನಜೀವನ ಇಂಥ ಪರಿಸ್ಥಿತಿಯಿಂದ ಸಂಕಷ್ಟಕ್ಕೀಡಾಗುತ್ತಿದೆ. ಇನ್ನು ಪ್ರಾಣಿಗಳ ಪಾಡು? ಅವುಗಳ ನರಳಿಕೆ ನೋಡಲಾಗುತ್ತಿಲ್ಲ. ಅವು ಹೇಗೆ ಬದುಕುತ್ತಿವೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ. ದಾರಿಯಲ್ಲಿ ಹಾದು ಹೋಗುವವರ ಕಣ್ಣಿಗೆ ಈ ಜಿಂಕೆ ಕಣ್ಣಿಗೆ ಬಿದ್ದಿದೆ. ತಕ್ಷಣವೇ ರಕ್ಷಿಸಿದ್ದಾರೆ.

ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಲಾಗಿರುವ ಈ ವಿಡಿಯೋ ಅನ್ನು ಯಾವಾಗ ಎಲ್ಲಿ ಚಿತ್ರೀಕರಿಸಿರುವುದು ಎಂಬ ಮಾಹಿತಿ ಇಲ್ಲ. ಈ ಜಿಂಕೆಯ ತಲೆಯು ಪೂರ್ತಿ ಹಿಮಗಟ್ಟಿದೆ. ತಲೆ, ಕಣ್ಣು, ಬಾಯಿ ಸಮೇತ ಮುಚ್ಚಿಹೋಗಿದೆ. ಹೇಗೋ ಉಸಿರೊಂದು ಇದೆ. ಹಸಿವು ವಿಪರೀತವಾಗಿ. ಹಿಮವನ್ನು ಅಗೆದರೆ ಆಹಾರ ಸಿಗಬಹುದೆ ಎಂಬ ಇರಾದೆಯಲ್ಲಿ ಓಡಾಡಿಕೊಂಡಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : ಹಿಮಾಚಲಪ್ರದೇಶದಲ್ಲಿ ಅಪರೂಪದ ಹಿಮಚಿರತೆ ಪತ್ತೆ; ವಿಡಿಯೋ ವೈರಲ್

ಇದರ ಅವಸ್ಥೆ ನೋಡಿದ ಚಾರಣಿಗರು ಹತ್ತಿರ ಬಂದಿದ್ದಾರೆ. ಆದರೆ ಜಿಂಕೆಗೆ ಸಹಜವಾದ ಭಯ ಓಡಿಹೋಗಲು ಪ್ರಯತ್ನಿಸಿದೆ. ಜಿಂಕೆಯನ್ನು ಮಲಗಿಸಿ ಅದರ ಮುಖಕ್ಕೆ ಆವರಿಸಿದ್ದ ಹಿಮವನ್ನೆಲ್ಲ ತೆಗೆದಿದ್ದಾರೆ. ನಂತರ ಅದರ ನೆಗೆತ ನೋಡಿ! ಅನೇಕರು ಈ ವಿಡಿಯೋ ನೋಡಿದ ಅನೇಕರು, ಸಹಾನುಭೂತಿಯುಳ್ಳ ನಿಮಗೆ ಧನ್ಯವಾದ ಎಂದು ಚಾರಣಿಗರಿಗೆ ಧನ್ಯವಾದ ಹೇಳಿದ್ದಾರೆ. ಮಲಗಿದಾಗ ಹಿಮಪಾತವಾಗಿ ಈ ಪರಿಸ್ಥಿತಿಗೆ ಜಿಂಕೆ ಬಂದಿರಬಹುದು ಎಂದು ಒಬ್ಬರು ಊಹಿಸಿದ್ದಾರೆ. ದೊಡ್ಡ ಮೈದಾನದಲ್ಲಿ ಬೀಸಿದ ಬಿರುಗಾಳಿಗೆ ಇದರ ಮುಖ ಹೀಗಾಗಿರಬಹುದು ಎಂದಿದ್ದಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಳಿಗಾಗಿ ಕ್ಲಿಕ್ ಮಾಡಿ

Follow Us
Web contact
Web contact

TV9 Kannada

Read More
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್