Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಮನೀರಿನಲ್ಲಿ ಮಿಂದೆದ್ದು ಕಾಫಿ ಕುಡಿಯುತ್ತಿರುವ ಯುವತಿಯ ವಿಡಿಯೋ ವೈರಲ್

Freezing water : ಈ ರಷ್ಯನ್ ಬಾಲೆಯೊಬ್ಬಳು ಕೊಳದಲ್ಲಿ ಮಿಂದು ಕಾಫಿ ಕುಡಿದಾಗ ತಾಪಮಾನ ಎಷ್ಟಿತ್ತು ನೋಡಿ. ಮಿಲಿಯನ್ಗಟ್ಟಲೆ ಜನ ಈ ವಿಡಿಯೋ ನೋಡಿದ್ದಾರೆ. ವಿಡಿಯೋ ಮಾಡಿದ ನಂತರ ಬದುಕಿದ್ದಾಳಲ್ಲ? ಎಂದಿದ್ದಾರೆ ಕೆಲವರು.

ಹಿಮನೀರಿನಲ್ಲಿ ಮಿಂದೆದ್ದು ಕಾಫಿ ಕುಡಿಯುತ್ತಿರುವ ಯುವತಿಯ ವಿಡಿಯೋ ವೈರಲ್
ಹಿಮಸ್ನಾನದ ನಂತರ ಕಾಫೀ ಕುಡಿಯುತ್ತಿರುವ ರಷ್ಯನ್​ ಮಹಿಳೆ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Dec 30, 2022 | 11:00 AM

Viral Video : ಹಿಮಪಾತವಾಗುತ್ತಿರುವ ಅನೇಕ ಪ್ರದೇಶಗಳ ಪರಿಸ್ಥಿತಿ ಹೇಗಿದೆ, ಅಲ್ಲಿಯ ಜನಜೀವನ ಏನೆಲ್ಲ ಸಂಕಷ್ಟಗಳನ್ನು ಎದುರಿಸುತ್ತಿದೆ ಎಂಬುದನ್ನು ದಿನವೂ ನೋಡುತ್ತಲೇ ಇದ್ದೀರಿ. ಎಲ್ಲವೂ ಎಲ್ಲಕಡೆಗೂ ಒಂದೇ ರೀತಿ ಇರಲು ಹೇಗೆ ಸಾಧ್ಯ? ಈ ವಿಡಿಯೋ ನೋಡಿ. ರಷ್ಯಾದ ಈ ಯುವತಿ ಹಿಮಗಟ್ಟಿದ ಕೊಳದಲ್ಲಿ ಮಿಂದು  ಮುಳುಗು ಹೊಡೆದು ಬಿಸಿಬಿಸಿ ಕಾಫಿ ಹೀರಿದ್ದಾಳೆ. ಹೀಗವಳು ಮುಳುಗು ಹೊಡೆದಾಗ ಅಲ್ಲಿಯ ತಾಪಮಾನ -27 ಡಿ.ಸೆ. ಇತ್ತು.

ಕಾಫಿ ಸಿಪ್​ನ ನಂತರ ತನ್ನ ಮೊಬೈಲಿನಲ್ಲಿ ತಾಪಮಾನವನ್ನು ತೋರಿಸುತ್ತಾಳೆ. ಮಾಡ್ಕೋದ ಬಳಿ ಯಾವುದೋ ಪ್ರದೇಶದಲ್ಲಿ ಈ ವಿಡಿಯೊ ಚಿತ್ರೀಕರಿಸಲಾಗಿದೆ. ಟ್ವೀಟರ್​ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋ ಅನ್ನು ಈತನಕ 1.8 ಮಿಲಿಯನ್​ ಜನರು ನೋಡಿದ್ದಾರೆ. 10,600 ಜನರು ಇಷ್ಟಪಟ್ಟಿದ್ದಾರೆ. ಸಾವಿರಾರು ಜನರು ರೀಟ್ವೀಟ್ ಮಾಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : ಹಿಮವ ಸೀಳಿ ಸಾಗುವಾ; ನಗುನಗುತ್ತಲೇ ದಾರಿ ಮಾಡಿಕೊಳ್ಳುತ್ತಿರುವ ಭಾರತೀಯ ಯೋಧ

ನಾನು ಕೂಡ ಈ ರೀತಿ ಮಾಡಿದ್ದೇನೆ. ಸುಮಾರು ಏಳೆಂಟು ನಿಮಿಷಗಳ ಕಾಲ ನೀರಿನೊಳಗೆ ಇದ್ದೆ. ಇದು ಅದ್ಭುತವಾದ ಅನುಭವ ಎಂದು ಒಬ್ಬರು ಹೇಳಿದ್ದಾರೆ. ಯಾಕೆ ಇಂಥ ಹುಚ್ಚುತನಕ್ಕೆ ಬೀಳುತ್ತಾರೆ ಜನ? ಎಂದು ಮತ್ತೊಬ್ಬರು ಕೇಳಿದ್ದಾರೆ. ವಿಡಿಯೋ ಮಾಡಿದ ನಂತರ ಆಕೆ ಬದುಕಿದ್ದಾಳೆ ಎಂದು ಭಾವಿಸುತ್ತೇನೆ ಎಂದಿದ್ದಾರೆ ಕೆಲವರು. ಯಾರೋ ಒಬ್ಬರು ಹೀಗೆ ಮಾಡಲು ಹೋಗಿ ತೀರಿಹೋದರಂತೆ, ನ್ಯೂಸ್​​ನಲ್ಲಿ ನೋಡಿದೆ. ನೀವು ಅದೃಷ್ಟವಂತರು ಎಂದಿದ್ದಾರೆ ಮಗದೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:54 am, Fri, 30 December 22

ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಪುಟ್ಟ ಬಾಲಕನ ದೈವ ನರ್ತನ: ಮೈ ಜುಮ್ಮೆನಿಸುವ ವಿಡಿಯೋ ನೋಡಿ
ಪುಟ್ಟ ಬಾಲಕನ ದೈವ ನರ್ತನ: ಮೈ ಜುಮ್ಮೆನಿಸುವ ವಿಡಿಯೋ ನೋಡಿ
CET ಪರೀಕ್ಷೆ ಬಗ್ಗೆ ಭಯ ಬೇಡ; ತಜ್ಞರು ನೀಡಿರುವ ಟಿಪ್ಸ್​​ ಇಲ್ಲಿದೆ
CET ಪರೀಕ್ಷೆ ಬಗ್ಗೆ ಭಯ ಬೇಡ; ತಜ್ಞರು ನೀಡಿರುವ ಟಿಪ್ಸ್​​ ಇಲ್ಲಿದೆ
ಒಂದು ಕಾಲದ ಜೋಡೆತ್ತುಗಳು, ಈಗ ಬದ್ಧ ವೈರಿಗಳು!
ಒಂದು ಕಾಲದ ಜೋಡೆತ್ತುಗಳು, ಈಗ ಬದ್ಧ ವೈರಿಗಳು!
KSRTC ಬಸ್​​ನಲ್ಲಿ ಅಕ್ರಮ ಗೋಮಾಂಸ ಸಾಗಿಸುತ್ತಿದ್ದ ಶಕೀರಾ ವಶಕ್ಕೆ
KSRTC ಬಸ್​​ನಲ್ಲಿ ಅಕ್ರಮ ಗೋಮಾಂಸ ಸಾಗಿಸುತ್ತಿದ್ದ ಶಕೀರಾ ವಶಕ್ಕೆ