AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇದು ಭಾರತದ ಜಾಗತಿಕ ಚಿತ್ರಣವಾಗಬೇಕು’ ಉದ್ಯಮಿ ಆನಂದ ಮಹೀಂದ್ರಾ ಟ್ವೀಟ್

Turkey : ಈಗಷ್ಟೇ ಅಲ್ಲ, ಅನೇಕ ವರ್ಷಗಳಿಂದ ಭಾರತೀಯ ಸೇನೆಯು ಜಗತ್ತಿನಾದ್ಯಂತ ಸಂಭವಿಸಿದ ವಿಕೋಪ ನಿರ್ವಹಣೆಗೆ ಕೈಜೋಡಿಸಿದೆ ಎಂದು ನೆಟ್ಟಿಗರು ಹೇಳಿದ್ದಾರೆ.

‘ಇದು ಭಾರತದ ಜಾಗತಿಕ ಚಿತ್ರಣವಾಗಬೇಕು’ ಉದ್ಯಮಿ ಆನಂದ ಮಹೀಂದ್ರಾ ಟ್ವೀಟ್
ಉದ್ಯಮಿ ಆನಂದ ಮಹೀಂದ್ರಾ (ಎಡ). ಟರ್ಕಿಯ ಬಾಲಕಿಯೊಂದಿಗೆ ಡಾ. ಬೀನಾ ತಿವಾರಿ.
Follow us
TV9 Web
| Updated By: ಶ್ರೀದೇವಿ ಕಳಸದ

Updated on:Feb 15, 2023 | 12:38 PM

Viral News : ಟರ್ಕಿಯಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಈಗಾಗಲೇ 40,000ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಉಳಿದವರನ್ನು ಸೂಕ್ತ ಕಾಲಾವಕಾಶದಲ್ಲಿ ರಕ್ಷಿಸುವುದು ವೈದ್ಯಜಗತ್ತಿಗೆ ಮತ್ತು ಸೇನೆಯವರಿಗೆ ಸವಾಲೇ. ಪ್ರಕೃತಿ ವಿಕೋಪಗಳು ಉಂಟಾದಾಗೆಲ್ಲ ಇದೊಂದು ಅಗ್ನಿಪರೀಕ್ಷೆಯೇ. ಆದರೆ ವೈದ್ಯವೃತ್ತಿ ಎನ್ನುವುದು ಎಲ್ಲವನ್ನೂ ಮೀರಿದ್ದು. ಜೀವ ಉಳಿಸುವುದಷ್ಟೇ ಅದಕ್ಕೆ ಗುರಿ.

ಭಾರತೀಯ ಸೇನೆಯ ಮೇಜರ್​ ಬೀನಾ ತಿವಾರಿ ಅವರನ್ನು ಟರ್ಕಿಯ ಇಸ್ಕೆಂಡರುನ್​​ನಲ್ಲಿ ರಕ್ಷಣಾಸೇವೆಗೆ ನೇಮಿಸಲಾಗಿದೆ. ಹೀಗೆ ಈ ಬಾಲಕಿಯನ್ನು ರಕ್ಷಿಸಿ ಚಿಕಿತ್ಸೆ ನೀಡುತ್ತಿರುವಾಗ ತೆಗೆದ ಚಿತ್ರ ಇದಾಗಿದೆ. ಈ ಚಿತ್ರವನ್ನು ನೋಡಿ ಪ್ರಭಾವಿತರಾದ ಆನಂದ ಮಹೀಂದ್ರಾ, ‘ ನಾವು ಇಡೀ ಜಗತ್ತಿನಲ್ಲಿಯೇ ದೊಡ್ಡದಾದಂಥ ಸೇನಾವೃಂದವನ್ನು ಹೊಂದಿದ್ದೇವೆ. ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ದಶಕಗಳಿಂದಲೂ ಉತ್ತಮ ಅನುಭವವನ್ನು ಇದು ಹೊಂದಿದೆ. ಇದು ಹೀಗೆಯೇ ಸಾಗಬೇಕು. ಇದು ಭಾರತದ ಜಾಗತಿಕ ಚಿತ್ರಣವಾಗಬೇಕು.’  ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : ದೇವಿ ಪ್ರತ್ಯಂಗಿರಾಳನ್ನು ಚೆನ್ನೈಗೆ ಕರೆತಂದ ಮೇಕಪ್​ ಕಲಾವಿದ ದೀಪನ್; ವಿಡಿಯೋ ವೈರಲ್

ಅನೇಕರು ಈ ಟ್ವೀಟ್​ಗೆ ಪ್ರತಿಕ್ರಿಯಿಸಿದ್ದಾರೆ. ಈಗಾಗಲೇ ಈ ಟ್ವೀಟ್​ ನೋಡಿದವರ ಸಂಖ್ಯೆ 10 ಲಕ್ಷವನ್ನು ತಲುಪಲಿದೆ. 37,000 ಜನರು ಇದನ್ನು ಇಷ್ಟಪಟ್ಟಿದ್ದಾರೆ. ಸುಮಾರು 2,500 ಜನರು ರೀಟ್ವೀಟ್ ಮಾಡಿದ್ದಾರೆ. ನಿಜಕ್ಕೂ ನಮ್ಮ ಯೋಧರ ಈ ಬೆಂಬಲವನ್ನು ಶ್ಲಾಘಿಸುತ್ತೇನೆ, ಧನ್ಯವಾದ ಎಂದಿದ್ದಾರೆ ಒಬ್ಬರು. ನಮ್ಮ ಯೋಧರು ವೃತ್ತಿಪರರು, ರಕ್ಷಣಾ ಕಾರ್ಯಾಚರಣೆ ಫಲವಾಗಿ ಪ್ರಪಂಚದಾದ್ಯಂತ ಅನೇಕ ಪುರಸ್ಕಾರಗಳನ್ನು ಗಳಿಸಿದ್ದಾರೆ ಎಂದು ಮತ್ತೊಬ್ಬರು ಹೇಳಿದ್ದಾರೆ.

ಇದನ್ನು ಓದಿ : ಮುಂಬೈ ಪೊಲೀಸರೇ, ನೀವು ನನ್ನ ಪ್ರೇಮಿಯಾಗುವಿರಾ?

ನಿಜವಾಗಲೂ ಇದು ಹೆಮ್ಮೆಯ ಕ್ಷಣ. ಬೀನಾ ತಿವಾರಿಯವರಿಗೆ ಧನ್ಯವಾದ ಎಂದಿದ್ದಾರೆ ಅನೇಕರು. ಇದೇನು ಮೊದಲ ಸಲವಲ್ಲ, ಭಾರತೀಯ ಸೇನೆ ಅನೇಕ ವರ್ಷಗಳಿಂದ ಜಗತ್ತಿನ ಅನೇಕ ಪ್ರಕೋಪಗಳ ಸಂದರ್ಭದಲ್ಲಿ ಕೈಜೋಡಿಸಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಮಗುವಿನ ಮುಖದ ಮೇಲಿನ ಕಳೆಯೇ ಎಲ್ಲವನ್ನೂ ಹೇಳುತ್ತದೆ, ಸೇನೆಯು ಚಿಕಿತ್ಸೆಯೊಂದಿಗೆ ಸಾಕಷ್ಟು ಪ್ರೀತಿಯನ್ನೂ ಧಾರೆ ಎರೆದಿದೆ ಎಂದು… ಹೀಗೆಂದಿದ್ದಾರೆ ಮಗದೊಬ್ಬರು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಳಿಗಾಗಿ ಕ್ಲಿಕ್ ಮಾಡಿ

Published On - 12:33 pm, Wed, 15 February 23

ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಸತ್ತಿರುವ ಶಂಕೆಯಿದೆ: ಪರಮೇಶ್ವರ್
ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಸತ್ತಿರುವ ಶಂಕೆಯಿದೆ: ಪರಮೇಶ್ವರ್
ದುರಂತದಲ್ಲಿ ಮಡಿದವರು ಭಾರತೀಯರು; ಕನ್ನಡ, ತೆಲುಗು ತಾರತಮ್ಯ ಬೇಡ: ಶಿವಕುಮಾರ್
ದುರಂತದಲ್ಲಿ ಮಡಿದವರು ಭಾರತೀಯರು; ಕನ್ನಡ, ತೆಲುಗು ತಾರತಮ್ಯ ಬೇಡ: ಶಿವಕುಮಾರ್
ಏರ್ ಇಂಡಿಯಾ ವಿಮಾನ ಪತನವಾದ ಜಾಗದಲ್ಲಿ ಬಿದ್ದ ಪ್ರಯಾಣಿಕರ ಲಗೇಜ್ ರಾಶಿ
ಏರ್ ಇಂಡಿಯಾ ವಿಮಾನ ಪತನವಾದ ಜಾಗದಲ್ಲಿ ಬಿದ್ದ ಪ್ರಯಾಣಿಕರ ಲಗೇಜ್ ರಾಶಿ
ಚಾಲಕನ ಹುಚ್ಚು ಸಾಹಸ: ಹಳ್ಳದಲ್ಲಿ ಸಿಲುಕಿದ ಜನರಿದ್ದ ಟ್ರ್ಯಾಕ್ಟರ್
ಚಾಲಕನ ಹುಚ್ಚು ಸಾಹಸ: ಹಳ್ಳದಲ್ಲಿ ಸಿಲುಕಿದ ಜನರಿದ್ದ ಟ್ರ್ಯಾಕ್ಟರ್
ಲಂಡನ್​ಗೆ ಹೊರಟಿದ್ದ ವಿಮಾನಕ್ಕೆ ಅದರ ಸಾಮರ್ಥ್ಯದಷ್ಟು ಇಂಧನ ತುಂಬಲಾಗಿತ್ತು
ಲಂಡನ್​ಗೆ ಹೊರಟಿದ್ದ ವಿಮಾನಕ್ಕೆ ಅದರ ಸಾಮರ್ಥ್ಯದಷ್ಟು ಇಂಧನ ತುಂಬಲಾಗಿತ್ತು
ಜಾತಿಗಣತಿ ಸಮೀಕ್ಷೆಗೆ ₹200 ಕೋಟಿ ಖರ್ಚಾಗಿದೆ ಎಂದರೆ ಸಚಿವನಲ್ಲಿ ಉತ್ತರವಿಲ್ಲ
ಜಾತಿಗಣತಿ ಸಮೀಕ್ಷೆಗೆ ₹200 ಕೋಟಿ ಖರ್ಚಾಗಿದೆ ಎಂದರೆ ಸಚಿವನಲ್ಲಿ ಉತ್ತರವಿಲ್ಲ
Ahmedabad Plane Crash: ಅಹಮದಾಬಾದ್​​ನಲ್ಲಿ ಏರ್​ ಇಂಡಿಯಾ ವಿಮಾನ ಪತನ
Ahmedabad Plane Crash: ಅಹಮದಾಬಾದ್​​ನಲ್ಲಿ ಏರ್​ ಇಂಡಿಯಾ ವಿಮಾನ ಪತನ
ಗೃಹ ಸಚಿವ ಕೇವಲ ತಮ್ಮ ಗೃಹಕ್ಕೆ ಮಾತ್ರ ಸಚಿವರು: ಆರ್ ಅಶೋಕ
ಗೃಹ ಸಚಿವ ಕೇವಲ ತಮ್ಮ ಗೃಹಕ್ಕೆ ಮಾತ್ರ ಸಚಿವರು: ಆರ್ ಅಶೋಕ
ವಾಲ್ಮೀಕಿ ನಿಗಮ ಪ್ರಕರಣದಲ್ಲಿ ಸರ್ಕಾರ ಸಮಗ್ರ ತನಿಖೆ ಮಾಡಿಸಿದೆ: ಗೃಹ ಸಚಿವ
ವಾಲ್ಮೀಕಿ ನಿಗಮ ಪ್ರಕರಣದಲ್ಲಿ ಸರ್ಕಾರ ಸಮಗ್ರ ತನಿಖೆ ಮಾಡಿಸಿದೆ: ಗೃಹ ಸಚಿವ
ತುಂಬಿ ಹರಿಯುತ್ತಿರುವ ಗೊನ್ವಾರ ಗ್ರಾಮ ಹೊರವಲಯದಲ್ಲಿರುವ ಹೊಳೆ
ತುಂಬಿ ಹರಿಯುತ್ತಿರುವ ಗೊನ್ವಾರ ಗ್ರಾಮ ಹೊರವಲಯದಲ್ಲಿರುವ ಹೊಳೆ