AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Post: ಅನ್ನ ನೀರಿಲ್ಲದೇ 8 ದಿನಗಳ ವರೆಗೆ ಶಿಪ್ಪಿಂಗ್ ಕಂಟೈನರ್​​​ನಲ್ಲಿ ಸಿಲುಕಿದ್ದ ಶ್ವಾನ

ಟೆಕ್ಸಾಸ್ ಬಂದರಿನಲ್ಲಿ ದಿನನಿತ್ಯದ ತಪಾಸಣೆಯ ಸಮಯದಲ್ಲಿ, ಮೆರೈನ್ ಅಧಿಕಾರಿಗಳ ತಂಡವು ಒಂದು ವಾರದವರೆಗೆ ಕಂಟೇನರ್‌ನಲ್ಲಿ ಸಿಕ್ಕಿಬಿದ್ದ ನಾಯಿಯನ್ನು ರಕ್ಷಿಸಿದ್ದಾರೆ. ಕಂಟೈನರ್​​ ಒಳಗಡೆ ಶ್ವಾನ ಹೇಗೆ ಬಂತು ಎಂದು ಅಧಿಕಾರಿಗಳಿಗೆ ಖಚಿತವಾಗಿಲ್ಲ. ಸದ್ಯ ಶ್ವಾನವನ್ನು ರಕ್ಷಿಸಿದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗುತ್ತಿದೆ.

Viral Post: ಅನ್ನ ನೀರಿಲ್ಲದೇ 8 ದಿನಗಳ ವರೆಗೆ ಶಿಪ್ಪಿಂಗ್ ಕಂಟೈನರ್​​​ನಲ್ಲಿ ಸಿಲುಕಿದ್ದ ಶ್ವಾನ
8 ದಿನಗಳ ವರೆಗೆ ಶಿಪ್ಪಿಂಗ್ ಕಂಟೈನರ್​​​ನಲ್ಲಿ ಸಿಲುಕಿದ್ದ ಶ್ವಾನImage Credit source: Facebook
ಅಕ್ಷತಾ ವರ್ಕಾಡಿ
|

Updated on: Feb 06, 2024 | 12:40 PM

Share

ಶಿಪ್ಪಿಂಗ್ ಕಂಟೈನರ್​​​ನಲ್ಲಿ ಉಗುರಿನಿಂದ ಪರಚುವಂತಹ ಶಬ್ದ ಬರುತ್ತಿದ್ದುದನ್ನು ಗಮನಿಸಿದ ನೌಕಾ ಸಿಬ್ಬಂದಿ ಕಂಟೈನರ್​​​ನಲ್ಲಿ ತೆರೆದು ನೋಡಿದಾಗ ಶ್ವಾನ ಒಂದು ಪತ್ತೆಯಾಗಿದೆ. 8 ದಿನಗಳಿಂದ ಅನ್ನ ನೀರಿಲ್ಲದೇ ಬದುಕುಳಿದಿದ್ದ ಶ್ವಾನಕ್ಕೆ ತಕ್ಷಣ ಆಹಾರ ನೀಡಿ ಪಶು ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಶಿಪ್ಪಿಂಗ್ ನೌಕರನ ನಿರ್ಲಕ್ಷ್ಯದಿಂದ ಈ ರೀತಿ ಆಗಿದ್ದು, ಕೊನೆಗೂ ನಾಯಿ ಬದುಕುಳಿದಿದೆ. ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗಿದೆ.

ಮೆರೈನ್ ಅಧಿಕಾರಿಗಳು ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮೂಲಕ ಈ ಕುರಿತು ಬಹಿರಂಗಪಡಿಸಿದ್ದು, ಯುಎಸ್ ಕೋಸ್ಟ್ ಗಾರ್ಡ್ ಹಾರ್ಟ್‌ಲ್ಯಾಂಡ್ ಕೂಡ ಶ್ವಾನದ ಕೆಲವು ಫೋಟೋಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದೆ. ಇಂದು ಮುಂಜಾನೆ, US ಕೋಸ್ಟ್ ಗಾರ್ಡ್ ಸೆಕ್ಟರ್ ಹೂಸ್ಟನ್-ಗ್ಯಾಲ್ವೆಸ್ಟನ್‌ನ ಸಮುದ್ರ ತನಿಖಾಧಿಕಾರಿಗಳ ತಂಡವು ನಾಯಿಯ ಜೀವವನ್ನು ಉಳಿಸಿದೆ ಎಂದು ಬರೆದಿದ್ದಾರೆ. ಶಬ್ದ ಕೇಳಿ ಶಿಪ್ಪಿಂಗ್ ಕಂಟೈನರ್‌ಗಳನ್ನು ಪರಿಶೀಲಿಸುತ್ತಿದ್ದಾಗ ನಾಯಿಯೊಂದು ಹೊರಬಂದಿತು. ಕೋಸ್ಟ್ ಗಾರ್ಡ್ ಸದಸ್ಯರ ಸಮಯ ಪ್ರಜ್ಞೆಯಿಂದ ಶ್ವಾನದ ಜೀವ ಉಳಿದಿದೆ ಎಂದು ಪೋಸ್ಟ್​​​ನಲ್ಲಿ ಬರೆದುಕೊಂಡಿದ್ದಾರೆ.

ವೈರಲ್​​ ಪೋಸ್ಟ್​​ ಇಲ್ಲಿದೆ ನೋಡಿ: ‘

ಇದನ್ನೂ ಓದಿ: ಗಂಡನ ಬೆವರಿನ ವಾಸನೆ ತಡೆಯಲಾರದೆ ವಿಚ್ಛೇದನ ನೀಡಿದ ಪತ್ನಿ

ಸದ್ಯ ಶ್ವಾನವನ್ನು ರಕ್ಷಿಸಿದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗುತ್ತಿದ್ದು, ಫೋಟೋ ಒಂದರಲ್ಲಿ ಶ್ವಾನದ ರಕ್ಷಣೆಯ ನಂತರ ಕ್ಯಾಮೆರಾಗೆ ಪೋಸ್ ನೀಡಿರುವುದನ್ನು ಕಾಣಬಹುದು. ಫೆಬ್ರವರಿ 1 ರಂದು ಫೇಸ್‌ಬುಕ್ ಪೋಸ್ಟ್ ಅನ್ನು ಹಂಚಿಕೊಳ್ಳಲಾಗಿದೆ. ಅಂದಿನಿಂದ ಅನೇಕ ಶ್ವಾನ ಪ್ರೇಮಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದು, ಈ ಬಗ್ಗೆ ಹಲವು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಮಗ ಆಯುಷ್ ಸಿನಿಮಾ ಬಗ್ಗೆ ದೊಡ್ಡ ಅಪ್​​ಡೇಟ್ ಕೊಟ್ಟ ಪ್ರಿಯಾಂಕಾ ಉಪೇಂದ್ರ
ಮಗ ಆಯುಷ್ ಸಿನಿಮಾ ಬಗ್ಗೆ ದೊಡ್ಡ ಅಪ್​​ಡೇಟ್ ಕೊಟ್ಟ ಪ್ರಿಯಾಂಕಾ ಉಪೇಂದ್ರ
ಜಂತರ್​ ಮಂತರ್​ನಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಜಟಾಪಟಿ
ಜಂತರ್​ ಮಂತರ್​ನಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಜಟಾಪಟಿ
ವೃಷಭ ರಾಶಿಯಲ್ಲಿ ಕುಜ ಸಂಚಾರ: ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ವೃಷಭ ರಾಶಿಯಲ್ಲಿ ಕುಜ ಸಂಚಾರ: ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಬಿಜೆಪಿ ನಾಯಕರು ಹೇಡಿಗಳು; ಬಂಧನದ ಬಳಿಕ ಪ್ರಿಯಾಂಕಾ ಗಾಂಧಿ ಆಕ್ರೋಶ
ಬಿಜೆಪಿ ನಾಯಕರು ಹೇಡಿಗಳು; ಬಂಧನದ ಬಳಿಕ ಪ್ರಿಯಾಂಕಾ ಗಾಂಧಿ ಆಕ್ರೋಶ
‘ಮಹಾಕವಿ’ ಸಿನಿಮಾದಲ್ಲಿ ಪಂಪನ ಪಾತ್ರ ಮಾಡಿದ ಖ್ಯಾತ ನಟ ಕಿಶೋರ್
‘ಮಹಾಕವಿ’ ಸಿನಿಮಾದಲ್ಲಿ ಪಂಪನ ಪಾತ್ರ ಮಾಡಿದ ಖ್ಯಾತ ನಟ ಕಿಶೋರ್
ಕೊಲೆ ಆರೋಪಿ ದರ್ಶನ್ ಭೇಟಿಗೆ ಆಗಮಿಸಿದ ನಟಿ ರಕ್ಷಿತಾ ಪ್ರೇಮ್, ವಿಜಯಲಕ್ಷ್ಮೀ
ಕೊಲೆ ಆರೋಪಿ ದರ್ಶನ್ ಭೇಟಿಗೆ ಆಗಮಿಸಿದ ನಟಿ ರಕ್ಷಿತಾ ಪ್ರೇಮ್, ವಿಜಯಲಕ್ಷ್ಮೀ
ಪ್ರಧಾನಿ ನಿವಾಸದ ಬಳಿ ಧರಣಿ ವೇಳೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಪ್ರಧಾನಿ ನಿವಾಸದ ಬಳಿ ಧರಣಿ ವೇಳೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಕೃಷ್ಣಾ ನದಿಗೆ ಹರಿದುಬಂತು 60,000 ಕ್ಯೂಸೆಕ್ ನೀರು
ಕೃಷ್ಣಾ ನದಿಗೆ ಹರಿದುಬಂತು 60,000 ಕ್ಯೂಸೆಕ್ ನೀರು
ಪ್ರಧಾನಿ ಮನೆ ಮುಂದೆ ಕರ್ನಾಟಕದ ಸಿಎಂ ಡಿ.ಕೆ. ಶಿವಕುಮಾರ್ ಕೂಡ ಧರಣಿ
ಪ್ರಧಾನಿ ಮನೆ ಮುಂದೆ ಕರ್ನಾಟಕದ ಸಿಎಂ ಡಿ.ಕೆ. ಶಿವಕುಮಾರ್ ಕೂಡ ಧರಣಿ
ನನ್ನ ತಂದೆಗೆ ಇಲ್ಲವಾದರೆ ನನಗೆ ಸಚಿವ ಸ್ಥಾನ ನೀಡಿ: ರಾಜೇಂದ್ರ ರಾಜಣ್ಣ
ನನ್ನ ತಂದೆಗೆ ಇಲ್ಲವಾದರೆ ನನಗೆ ಸಚಿವ ಸ್ಥಾನ ನೀಡಿ: ರಾಜೇಂದ್ರ ರಾಜಣ್ಣ