AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಿಸಳ್​ ಪಾವ್​ ಇದೂ ಒಂದು ತಿನಿಸೇ? ಟ್ವೀಟ್ ಮಾಡಿದ ವ್ಯಕ್ತಿಗೆ ಪಾಠ ಮಾಡುತ್ತಿರುವ ನೆಟ್ಟಿಗರು

Misal Pav : ‘ಎಣ್ಣೆ ಬಸಿಯುವ ಉಸಳಿಯಲ್ಲಿ ದಾರಿತಪ್ಪಿ ಒಂದಷ್ಟು ಸೇವು ಬಿದ್ದರೆ ಹೇಗಿರುತ್ತೋ ಹಾಗಿದೆ ಅದು’ ವ್ಯಕ್ತಿಯೊಬ್ಬರು ಟ್ವಿಟರ್​ನಲ್ಲಿ ಟೀಕಿಸಿದ್ದಾರೆ. ಅದೆಲ್ಲ ಮೈಮುರಿದು ದುಡಿಯುವವರಿಗೆ ನಿಮ್ಮಂಥವರಿಗೆಲ್ಲ ಎಂದಿದ್ದಾರೆ ನೆಟ್ಟಿಗರು.

ಮಿಸಳ್​ ಪಾವ್​ ಇದೂ ಒಂದು ತಿನಿಸೇ? ಟ್ವೀಟ್ ಮಾಡಿದ ವ್ಯಕ್ತಿಗೆ ಪಾಠ ಮಾಡುತ್ತಿರುವ ನೆಟ್ಟಿಗರು
ಮಿಸಳ್​ ಪಾವ್​, (ಪ್ರಾತಿನಿಧಿಕ ಚಿತ್ರ)
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on:Feb 01, 2023 | 12:39 PM

Share

Viral News : ಮಹಾರಾಷ್ಟ್ರ ಎಂದರೆ ಮಿಸಳ್​ ಪಾವ್ ಫಕ್ಕನೆ ಕಣ್ಮುಂದೆ ಬರುತ್ತದೆ. ಮಡಿಕೆ, ಕಡಲೆ ಅಥವಾ ಬಟಾಣಿಕಾಳುಗಳನ್ನು ನೆನೆಹಾಕಿ, ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಟೊಮ್ಯಾಟೋ, ಆಲೂಗಡ್ಡೆ, ಉಪ್ಪು, ಖಾರ, ಸ್ವಲ್ಪ ಮಸಾಲೆಯೊಂದಿಗೆ ಮಾಡುವ ರಸಭರಿತವಾದ ಭಾಜೀ. ಅದರ ತುಂಬಾ ಶೇವ್​ ಸುರಿಯುವುದು, ನಿಂಬೆರಸ ಹಿಂಡಿಕೊಳ್ಳುವುದು, ಬನ್​ಗೆ ಬೆಣ್ಣೆ ಹಚ್ಚಿ ತವಾ ಮೇಲೆ ಬೇಯಿಸಿದರೆ ಪಾವ್​ ರೆಡಿ. ಬೇಕಿದ್ದರೆ ಎರಡು ತುಂಡು ಹಸೀ ಈರುಳ್ಳಿ. ಇಂಥ ರುಚಿಕರ ಮತ್ತು ಮಹಾರಾಷ್ಟ್ರಿಗರ ನಿತ್ಯದ ನಾಷ್ಟಾ ನೋಡಿದರೆ ಯಾರಿಗೆ ತಾನೆ ಇಷ್ಟವಿಲ್ಲ? ಆದರೆ ವ್ಯಕ್ತಿಯೊಬ್ಬ ಮಿಸಳ್​ ಪಾವ್​ ಬಗ್ಗೆ ನಕಾರಾತ್ಮಕವಾಗಿ ಟ್ವೀಟ್ ಮಾಡಿದ್ದಾನೆ. ನೆಟ್ಟಿಗರೆಲ್ಲ ಅವನಿಗೆ ಮುಗಿಬಿದ್ದಿದ್ದಾರೆ.

​ಬೋಧಿಸತ್ವ ಮಜುಂದಾರ್ ಎನ್ನುವ ವ್ಯಕ್ತಿಯೇ ಟ್ವಿಟರ್​ನಲ್ಲಿ ಟೀಕಿಸಿದವರು. ‘ಮಿಸಳ್ ಪಾವ್ ಎಂದರೆ, ಅದೂ ಒಂದು ತಿನಿಸೇ? ಎಣ್ಣೆ ಬಸಿಯುವ ಉಸಳಿಯಲ್ಲಿ ದಾರಿತಪ್ಪಿ ಒಂದಷ್ಟು ಸೇವು ಬಿದ್ದರೆ ಹೇಗಿರುತ್ತೋ ಹಾಗಿದೆ ಅದು’ ಎಂದಿದ್ದಾರೆ. ನೀವು ಮುಂಬೈನಲ್ಲಿದ್ದು ಮಿಸಳ್​ ಪಾವ್​ ನಿಂದಿಸುತ್ತಿದ್ದೀರಿ ಎಂದಿದ್ದಾರೆ. ನೀವು ದಾದರ್​ನ ಶಿವಾಜಿ ಪಾರ್ಕ್​ ಬಳಿ ಇರುವ ಆಸ್ವಾದ್​ ಮತ್ತು ಥಾಣೆಯಲ್ಲಿರುವ ಆಮಂತ್ರಣ್​ದಲ್ಲಿ ಪಾವ್​ ಭಾಜಿ ತಿಂದ ನೋಡಿ. ಆದರೆ ಮಾಮ್ಲೇದಾರ್​ ಫ್ರಾಂಚೈಸಿ ಹೋಟೆಲ್​ಗಳಲ್ಲಿ ತಿನ್ನಬೇಡಿ ಎಂದಿದ್ದಾರೆ ಮತ್ತೊಬ್ಬರು. ಹೀಗೆಲ್ಲ ಹೇಳಬೇಡಿ ಇದು ತುಂಬಾ ರುಚಿಯಾದ ಖಾದ್ಯ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : ರಸ್ತೆಯಲ್ಲಿ ಮೂರ್ಛೆ ಹೋಗಿದ್ದ ನಾಯಿಯನ್ನು ರಕ್ಷಿಸಿದ ವಿಡಿಯೋ ವೈರಲ್

ಇನ್ನೂ ಕೆಲವರು ಬೋಧಿಸತ್ವರ ಮಾತನ್ನು ಅನುಮೋದಿಸಿದ್ದಾರೆ. ಹೌದು ಇದನ್ನು ಕೆಟ್ಟದಾಗಿ ಮಾಡಿದ್ದಾರೆ ಎಂದಿದ್ದಾರೆ. ನಾನು ಪಾವ್​ ಭಾಜಿ ಅಂದರೆ ಪ್ರಾಣ. ಆದರೆ ಈ ಮಿಸಳ್​ ಪಾವ್​ ಎಂದರೆ ಏನು ಎಂದು ಮತ್ತೊಬ್ಬರು ಕೇಳಿದ್ದಾರೆ. ಯಾಕೆ ಹೀಗೆ ಎಣ್ಣೆಗಸಿಯನ್ನು ಸರಿದುಕೊಳ್ಳುತ್ತಾರೋ ಕಾಣೆ ಎಂದಿದ್ದಾರೆ ಕೆಲವರು.

ಇದೆಲ್ಲವೂ ಮೈಮುರಿದು ತಿನ್ನುವವರಿಗೆ ಮಾತ್ರ ನಿಮ್ಮಂಥವರಿಗೆ ಅಲ್ಲ. ಎಂದು ಕೆಲವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು? ಮಹಾರಾಷ್ಟ್ರಿಯನ್​ ಮಿಸಳ್​ ಪಾವ್​ನ ಪಾಕವಿಧಾನ ತಿಳಿದುಕೊಳ್ಳಬೇಕೆ? ಕ್ಲಿಕ್ ಮಾಡಿ

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 11:28 am, Wed, 1 February 23

Follow Us
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ