AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಿಸಳ್​ ಪಾವ್​ ಇದೂ ಒಂದು ತಿನಿಸೇ? ಟ್ವೀಟ್ ಮಾಡಿದ ವ್ಯಕ್ತಿಗೆ ಪಾಠ ಮಾಡುತ್ತಿರುವ ನೆಟ್ಟಿಗರು

Misal Pav : ‘ಎಣ್ಣೆ ಬಸಿಯುವ ಉಸಳಿಯಲ್ಲಿ ದಾರಿತಪ್ಪಿ ಒಂದಷ್ಟು ಸೇವು ಬಿದ್ದರೆ ಹೇಗಿರುತ್ತೋ ಹಾಗಿದೆ ಅದು’ ವ್ಯಕ್ತಿಯೊಬ್ಬರು ಟ್ವಿಟರ್​ನಲ್ಲಿ ಟೀಕಿಸಿದ್ದಾರೆ. ಅದೆಲ್ಲ ಮೈಮುರಿದು ದುಡಿಯುವವರಿಗೆ ನಿಮ್ಮಂಥವರಿಗೆಲ್ಲ ಎಂದಿದ್ದಾರೆ ನೆಟ್ಟಿಗರು.

ಮಿಸಳ್​ ಪಾವ್​ ಇದೂ ಒಂದು ತಿನಿಸೇ? ಟ್ವೀಟ್ ಮಾಡಿದ ವ್ಯಕ್ತಿಗೆ ಪಾಠ ಮಾಡುತ್ತಿರುವ ನೆಟ್ಟಿಗರು
ಮಿಸಳ್​ ಪಾವ್​, (ಪ್ರಾತಿನಿಧಿಕ ಚಿತ್ರ)
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on:Feb 01, 2023 | 12:39 PM

Share

Viral News : ಮಹಾರಾಷ್ಟ್ರ ಎಂದರೆ ಮಿಸಳ್​ ಪಾವ್ ಫಕ್ಕನೆ ಕಣ್ಮುಂದೆ ಬರುತ್ತದೆ. ಮಡಿಕೆ, ಕಡಲೆ ಅಥವಾ ಬಟಾಣಿಕಾಳುಗಳನ್ನು ನೆನೆಹಾಕಿ, ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಟೊಮ್ಯಾಟೋ, ಆಲೂಗಡ್ಡೆ, ಉಪ್ಪು, ಖಾರ, ಸ್ವಲ್ಪ ಮಸಾಲೆಯೊಂದಿಗೆ ಮಾಡುವ ರಸಭರಿತವಾದ ಭಾಜೀ. ಅದರ ತುಂಬಾ ಶೇವ್​ ಸುರಿಯುವುದು, ನಿಂಬೆರಸ ಹಿಂಡಿಕೊಳ್ಳುವುದು, ಬನ್​ಗೆ ಬೆಣ್ಣೆ ಹಚ್ಚಿ ತವಾ ಮೇಲೆ ಬೇಯಿಸಿದರೆ ಪಾವ್​ ರೆಡಿ. ಬೇಕಿದ್ದರೆ ಎರಡು ತುಂಡು ಹಸೀ ಈರುಳ್ಳಿ. ಇಂಥ ರುಚಿಕರ ಮತ್ತು ಮಹಾರಾಷ್ಟ್ರಿಗರ ನಿತ್ಯದ ನಾಷ್ಟಾ ನೋಡಿದರೆ ಯಾರಿಗೆ ತಾನೆ ಇಷ್ಟವಿಲ್ಲ? ಆದರೆ ವ್ಯಕ್ತಿಯೊಬ್ಬ ಮಿಸಳ್​ ಪಾವ್​ ಬಗ್ಗೆ ನಕಾರಾತ್ಮಕವಾಗಿ ಟ್ವೀಟ್ ಮಾಡಿದ್ದಾನೆ. ನೆಟ್ಟಿಗರೆಲ್ಲ ಅವನಿಗೆ ಮುಗಿಬಿದ್ದಿದ್ದಾರೆ.

​ಬೋಧಿಸತ್ವ ಮಜುಂದಾರ್ ಎನ್ನುವ ವ್ಯಕ್ತಿಯೇ ಟ್ವಿಟರ್​ನಲ್ಲಿ ಟೀಕಿಸಿದವರು. ‘ಮಿಸಳ್ ಪಾವ್ ಎಂದರೆ, ಅದೂ ಒಂದು ತಿನಿಸೇ? ಎಣ್ಣೆ ಬಸಿಯುವ ಉಸಳಿಯಲ್ಲಿ ದಾರಿತಪ್ಪಿ ಒಂದಷ್ಟು ಸೇವು ಬಿದ್ದರೆ ಹೇಗಿರುತ್ತೋ ಹಾಗಿದೆ ಅದು’ ಎಂದಿದ್ದಾರೆ. ನೀವು ಮುಂಬೈನಲ್ಲಿದ್ದು ಮಿಸಳ್​ ಪಾವ್​ ನಿಂದಿಸುತ್ತಿದ್ದೀರಿ ಎಂದಿದ್ದಾರೆ. ನೀವು ದಾದರ್​ನ ಶಿವಾಜಿ ಪಾರ್ಕ್​ ಬಳಿ ಇರುವ ಆಸ್ವಾದ್​ ಮತ್ತು ಥಾಣೆಯಲ್ಲಿರುವ ಆಮಂತ್ರಣ್​ದಲ್ಲಿ ಪಾವ್​ ಭಾಜಿ ತಿಂದ ನೋಡಿ. ಆದರೆ ಮಾಮ್ಲೇದಾರ್​ ಫ್ರಾಂಚೈಸಿ ಹೋಟೆಲ್​ಗಳಲ್ಲಿ ತಿನ್ನಬೇಡಿ ಎಂದಿದ್ದಾರೆ ಮತ್ತೊಬ್ಬರು. ಹೀಗೆಲ್ಲ ಹೇಳಬೇಡಿ ಇದು ತುಂಬಾ ರುಚಿಯಾದ ಖಾದ್ಯ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : ರಸ್ತೆಯಲ್ಲಿ ಮೂರ್ಛೆ ಹೋಗಿದ್ದ ನಾಯಿಯನ್ನು ರಕ್ಷಿಸಿದ ವಿಡಿಯೋ ವೈರಲ್

ಇನ್ನೂ ಕೆಲವರು ಬೋಧಿಸತ್ವರ ಮಾತನ್ನು ಅನುಮೋದಿಸಿದ್ದಾರೆ. ಹೌದು ಇದನ್ನು ಕೆಟ್ಟದಾಗಿ ಮಾಡಿದ್ದಾರೆ ಎಂದಿದ್ದಾರೆ. ನಾನು ಪಾವ್​ ಭಾಜಿ ಅಂದರೆ ಪ್ರಾಣ. ಆದರೆ ಈ ಮಿಸಳ್​ ಪಾವ್​ ಎಂದರೆ ಏನು ಎಂದು ಮತ್ತೊಬ್ಬರು ಕೇಳಿದ್ದಾರೆ. ಯಾಕೆ ಹೀಗೆ ಎಣ್ಣೆಗಸಿಯನ್ನು ಸರಿದುಕೊಳ್ಳುತ್ತಾರೋ ಕಾಣೆ ಎಂದಿದ್ದಾರೆ ಕೆಲವರು.

ಇದೆಲ್ಲವೂ ಮೈಮುರಿದು ತಿನ್ನುವವರಿಗೆ ಮಾತ್ರ ನಿಮ್ಮಂಥವರಿಗೆ ಅಲ್ಲ. ಎಂದು ಕೆಲವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು? ಮಹಾರಾಷ್ಟ್ರಿಯನ್​ ಮಿಸಳ್​ ಪಾವ್​ನ ಪಾಕವಿಧಾನ ತಿಳಿದುಕೊಳ್ಳಬೇಕೆ? ಕ್ಲಿಕ್ ಮಾಡಿ

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 11:28 am, Wed, 1 February 23

Follow Us
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ
ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ
ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ