Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುಟ್ಟಾ, ನಾವೇ ಹೀಗೆ ನಿಧಾನಕ್ಕೆ ರಸ್ತೆ ದಾಟಬೇಕು; ಆನೆಯಮ್ಮನ ಪ್ರಾತ್ಯಕ್ಷಿಕೆ ವಿಡಿಯೋ ವೈರಲ್

Elephant : ಅಭಿವೃದ್ಧಿಯ ಆಟಾಟೋಪದ ಈ ಕಾಲದಲ್ಲಿ ತಾಳ್ಮೆಯಿಂದ ಬದುಕದಿದ್ದರೆ ದಾರಿ ತೆರೆದುಕೊಳ್ಳಲಾರದು; ಪ್ರಾಣಿಗಳಿಗೂ ಈ ಸತ್ಯ ಅರ್ಥವಾಗಿರುವ ಈ ಕಾಲದಲ್ಲಿ ನಾವು, ಅಂದರೆ ಮನುಷ್ಯರು ಬದುಕುತ್ತಿದ್ದೇವೆ! ನೋಡಿ ವಿಡಿಯೋ.

ಪುಟ್ಟಾ, ನಾವೇ ಹೀಗೆ ನಿಧಾನಕ್ಕೆ ರಸ್ತೆ ದಾಟಬೇಕು; ಆನೆಯಮ್ಮನ ಪ್ರಾತ್ಯಕ್ಷಿಕೆ ವಿಡಿಯೋ ವೈರಲ್
ಹೀಗೆ ನಿಧಾನ ರಸ್ತೆ ದಾಟೋಣ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jan 31, 2023 | 11:56 AM

Viral Video : ಎಚ್ಚರಿಕೆ! ಮಕ್ಕಳು ಬೆಳೆಯುತ್ತಿದ್ದಂತೆ ಅಮ್ಮ ಕಲಿಸುವುದು ಇದನ್ನೇ. ಅದರಲ್ಲೂ ಕಾಡಿನ ಪ್ರಾಣಿಗಳಂತೂ ತಮ್ಮ ಮರಿಗಳಿಗೆ ಸದಾ ಇದನ್ನೇ ಕಲಿಸಿಕೊಡಬೇಕಾದಂಥ ಅನಿವಾರ್ಯ ಪರಿಸ್ಥಿತಿ ಉಂಟಾಗಿದೆ. ಆನೆ ನಡೆದದ್ದೇ ಹಾದಿ ಎನ್ನುವ ಹಮ್ಮಿನಲ್ಲಿ ಈಗಿನ ಆನೆಗಳು ಚಲಿಸಲಾರವು. ಎಲ್ಲೆಂದರಲ್ಲಿ ರಸ್ತೆಗಳು ತೆರೆದುಕೊಂಡು ತಾರಾಬಾರಾ ಗಾಡಿಗಳು ಓಡಾಡುತ್ತಿರುವಾಗ ಆಗುವ ನೋವು ಯಾರಿಗೆ ಎನ್ನುವುದು ಅವುಗಳಿಗೂ ಅರಿವಾಗಿದೆ. ಹಾಗಾಗಿಯೇ ನಾವೇ ಇನ್ನಷ್ಟು ತಾಳ್ಮೆಯನ್ನು ಕಲಿಯಬೇಕು ಎಂದುಕೊಳ್ಳುತ್ತ ಮಕ್ಕಳಿಗೂ ಅದನ್ನೇ ಹೇಳಿಕೊಡುತ್ತಿವೆ ಎನ್ನಿಸುತ್ತದೆ.

ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಒಂದಿಷ್ಟು ಆನೆಗಳು ಏನನ್ನೋ ತಿಂದುಕೊಂಡು ತಮ್ಮ ಗುಂಗಿನಲ್ಲಿವೆ. ರಸ್ತೆಬದಿ ಬಂದು ನಿಂತ ಮರಿ ಮತ್ತು ಅತ್ತಕಡೆಯಿಂದ ಬಂದ ಕಾರು. ಇದನ್ನು ಗಮನಿಸಿದ ಆನೆಯಮ್ಮ ತನ್ನ ಮರಿಗೆ ರಸ್ತೆ ದಾಟವುದು ಹೇಗೆ ಎಂದು ಹೇಳಿಕೊಡುತ್ತದೆ.

ಇದನ್ನೂ ಓದಿ : ಆನೆಗೆ ಕೋಲಿನಿಂದ ಹೊಡೆದ ಹುಡುಗರು, ತಿರುಗಿ ಬೆನ್ನಟ್ಟಿದ ಆನೆ

ಈತನಕ ಸುಮಾರು 17,000 ಜನರು ಈ ವಿಡಿಯೋ ನೋಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ರಸ್ತೆಯನ್ನು ನಿರ್ಮಿಸುವಾಗ ವನ್ಯಪ್ರಾಣಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಅನೇಕರು ಹೇಳಿದ್ದಾರೆ. ಆನೆಗಳು ಸೌಮ್ಯ ಮತ್ತು ಬುದ್ಧಿವಂತ ಪ್ರಾಣಿಗಳು. ಅವು ಬದಲಾವಣೆಗೆ ಬೇಗನೆ ಹೊಂದಿಕೊಳ್ಳುತ್ತವೆ ಎಂದಿದ್ದಾರೆ ಇನ್ನೂ ಹಲವರು. ನಮ್ಮ ಜನ ಅರಣ್ಯ ಪ್ರದೇಶದಲ್ಲಿ ನಿಧಾನವಾಗಿ ಸಾಗಬೇಕು ಎಂದು ಇನ್ನೂ ಕೆಲವರು ಹೇಳಿದ್ದಾರೆ.

ಇದನ್ನೂ ಓದಿ :ಚತುರ ಆನೆ! ವಿದ್ಯುತ್ ತಂತಿ ಬೇಲಿಯನ್ನು ಮುರಿದು ರಸ್ತೆ ದಾಟಿದ ಹಳೆಯ ವಿಡಿಯೋ ವೈರಲ್

ಪರಸ್ಪರ ನಿಧಾನದಲ್ಲಿ ಅನುಸರಿಸಿ ಸಾಗಿದರೆ ಮಾತ್ರ ದಾರಿ ಸುಗಮ ಅಲ್ಲವೆ? ಅಭಿವೃದ್ಧಿಯ ಆಟಾಟೋಪದ ಈ ಕಾಲದಲ್ಲಿ ಹೀಗೆ ಯೋಚಿಸದಿದ್ದರೆ ದಾರಿ ತೆರೆದುಕೊಳ್ಳಲಾರದು, ಇರುವುದೊಂದೇ ಬದುಕು ಎನ್ನುವ ಸತ್ಯ ಪ್ರಾಣಿಗಳಿಗೂ ಅರ್ಥವಾಗಿರುವ ಕಾಲದಲ್ಲಿ ನಾವು, ಅಂದರೆ ಮನುಷ್ಯರು ಬದುಕುತ್ತಿದ್ದೇವೆ!

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:53 am, Tue, 31 January 23

ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ