Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚತುರ ಆನೆ! ವಿದ್ಯುತ್ ತಂತಿ ಬೇಲಿಯನ್ನು ಮುರಿದು ರಸ್ತೆ ದಾಟಿದ ಹಳೆಯ ವಿಡಿಯೋ ವೈರಲ್

Elephant : ತಂತಿಯನ್ನು ಮುಟ್ಟಿದರೆ ವಿದ್ಯುತ್​ ಶಾಕ್​ ಹೊಡೆಯುತ್ತದೆಯಾ? ಮುಟ್ಟಿ ಮುಟ್ಟಿ ನೋಡುತ್ತದೆ ಆನೆ. ಹಾಗಿದ್ದರೆ ಹೇಗೆ ಈ ಬೇಲಿಯನ್ನು ದಾಟುವುದು? ನೋಡಿ ಆನೆ ಏನು ಉಪಾಯ ಮಾಡುತ್ತದೆ...

ಚತುರ ಆನೆ! ವಿದ್ಯುತ್ ತಂತಿ ಬೇಲಿಯನ್ನು ಮುರಿದು ರಸ್ತೆ ದಾಟಿದ ಹಳೆಯ ವಿಡಿಯೋ ವೈರಲ್
ಎಲೆಕ್ಟ್ರಿಕ್​ ಬೇಲಿಯನ್ನು ದಾಟಲು ಪ್ರಯತ್ನಿಸುತ್ತಿರುವ ಆನೆ
Follow us
TV9 Web
| Updated By: ಶ್ರೀದೇವಿ ಕಳಸದ

Updated on: Dec 06, 2022 | 12:45 PM

Viral Video : ಆನೆ ನಾಡಿಗೆ ಬಂದಿತು, ಆನೆ ದಾಳಿ ಮಾಡಿತು ಎನ್ನುತ್ತೇವೆ. ಆದರೆ ಆನೆಗೇನು ನಾಡಿಗೆ ಬರಬೇಕೆಂಬ ಖಯಾಲಿ ಇರುವುದಿಲ್ಲ. ಅದು ಓಡಾಡು ಜಾಗವನ್ನೇ ನಾವು ಆಕ್ರಮಿಸಿಕೊಂಡಿರುವುದು. ಆನೆಯ ದಾರಿಯಲ್ಲಿ ರಸ್ತೆಗಳನ್ನು, ಊರುಗಳನ್ನು ಅಭಿವೃದ್ಧಿಪಡಿಸಿದರೆ ಅದು ಎಲ್ಲಿ ಓಡಾಡಿಕೊಂಡಿರಬೇಕು? ಅದರಲ್ಲಿಯೂ ಬೇಲಿ ಹಾಕಿದರೆ ಅದೇನು ಮಾಡಬೇಕು? ಏನು ಮಾಡಬೇಕೋ ಅದನ್ನೇ ಮಾಡುತ್ತದೆ. ಈ ವಿಡಿಯೋದಲ್ಲಿ ಹಾಕಿರುವ ಬೇಲಿ ಎಲೆಕ್ಟ್ರಿಕ್.  ಆದರೆ ಆನೆಯ ಓಡಾಡುವ ಜಾಗವನ್ನು ಮಾನವ ಆಕ್ರಮಿಸಿಕೊಂಡಾಗ ಅದೇನು ಮಾಡಬೇಕು? ಜಾಣ ಆನೆ ಆ ಬೇಲಿಯನ್ನು ಮುರಿದು ತನ್ನ ದಾರಿಯಲ್ಲಿ ಸಾಗುತ್ತದೆ. ನೋಡಿ ಈ ಹಳೆಯ ವಿಡಿಯೋ ಮತ್ತೆ ವೈರಲ್ ಆಗಿದೆ.

ನೋಡಿ ಹೇಗೆ ಕಾಲಿನಿಂದ ವಿದ್ಯುತ್​ ತಂತಿಯನ್ನು ಮುಟ್ಟಿಮುಟ್ಟಿ ಪರೀಕ್ಷಿಸುತ್ತದೆ. ತಂತಿಯನ್ನು ಮುಟ್ಟಿದರೆ ವಿದ್ಯುತ್​ ಶಾಕ್​ ಹೊಡೆಯುತ್ತದೆ ಎನ್ನುವ ಅರಿವಿನೊಂದಿಗೆ ಕಟ್ಟಿಗೆಯ ಕಂಬವನ್ನು ಒದ್ದು ಬೇಲಿಯನ್ನು ಮುರಿಯುತ್ತದೆ. ನಂತರ ಆರಾಮಾಗಿ ರಸ್ತೆ ದಾಟಿಕೊಂಡು ಹೋಗುತ್ತದೆ. ಈ ವಿಡಿಯೋ ಚಿತ್ರೀಕರಿಸಿದ್ದು 2019ರಲ್ಲಿ. ಇದೀಗ ಈ ವಿಡಿಯೋ ಅನ್ನು ಐಎಫ್​ಎಸ್ ಅಧಿಕಾರಿ ಪರ್ವೀನ್​ ಕಸ್ವಾನ್​ ಹಂಚಿಕೊಂಡಿದ್ದಾರೆ. ನೆಟ್ಟಿಗರು ಆನೆಯ ಬುದ್ಧಿವಂತಿಕೆಯನ್ನು ಅಚ್ಚರಿಯಿಂದ ನೋಡುತ್ತಿದ್ದಾರೆ. ಈತನಕ 76,000 ಜನರು ನೋಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ.

ಮನುಷ್ಯ ಭೂಮಿಯ ಇಂಚಿಂಚನ್ನೂ ಆವರಿಸಿಕೊಳ್ಳುತ್ತಿರುವಾಗ ಆನೆಗಳು ಬುದ್ದಿವಂತಿಕೆ ಉಪಯೋಗಿಸಲೇಬೇಕಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ
ಯತ್ನಾಳ್​ಗೆ ರೇಣುಕಾ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ!
ಯತ್ನಾಳ್​ಗೆ ರೇಣುಕಾ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ!
ವಾರಾಹಿ ಪಂಜುರ್ಲಿ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಬಂದಾಗ ಏನೆಲ್ಲ ನಡೆಯಿತು?
ವಾರಾಹಿ ಪಂಜುರ್ಲಿ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಬಂದಾಗ ಏನೆಲ್ಲ ನಡೆಯಿತು?
ಯುವತಿಯ ಖಾಸಗಿ ಅಂಗ ಸ್ಪರ್ಶ ಕೇಸ್: ಉಡಾಫೆ ಉತ್ತರ ಕೊಟ್ಟ ಗೃಹ ಸಚಿವ
ಯುವತಿಯ ಖಾಸಗಿ ಅಂಗ ಸ್ಪರ್ಶ ಕೇಸ್: ಉಡಾಫೆ ಉತ್ತರ ಕೊಟ್ಟ ಗೃಹ ಸಚಿವ
ಪೊಲೀಸ್ ಭದ್ರತೆ ಮಧ್ಯೆ ಪ್ರವೀಣ್ ನೆಟ್ಟರು ಹಂತಕನಿಗೆ ಮುತ್ತಿಕ್ಕಿದ ಯುವಕ!
ಪೊಲೀಸ್ ಭದ್ರತೆ ಮಧ್ಯೆ ಪ್ರವೀಣ್ ನೆಟ್ಟರು ಹಂತಕನಿಗೆ ಮುತ್ತಿಕ್ಕಿದ ಯುವಕ!
ರಿಷಬ್ ಶೆಟ್ಟಿ ಭೇಟಿ ನೀಡಿದ ವಾರಾಹಿ ಪಂಜುರ್ಲಿ ಕ್ಷೇತ್ರ ಹೇಗಿದೆ ನೋಡಿ..
ರಿಷಬ್ ಶೆಟ್ಟಿ ಭೇಟಿ ನೀಡಿದ ವಾರಾಹಿ ಪಂಜುರ್ಲಿ ಕ್ಷೇತ್ರ ಹೇಗಿದೆ ನೋಡಿ..
ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ನಡುವೆ ಅಸಮಾಧಾನಗಳಿವೆಯಾ?
ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ನಡುವೆ ಅಸಮಾಧಾನಗಳಿವೆಯಾ?
ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಕೆಟ್ಟ ಐಸಿಯು ಎಸಿ: ರೋಗಿಗಳು ಬೇರೆಡೆ ಶಿಫ್ಟ್
ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಕೆಟ್ಟ ಐಸಿಯು ಎಸಿ: ರೋಗಿಗಳು ಬೇರೆಡೆ ಶಿಫ್ಟ್
ಬ್ಯಾಗ್ ಕದಿಯಲು ಬಂದವಗೆ ಒಳ್ಳೆ ರಿಪ್ಲೇ ಕೊಟ್ಟ ಯುವತಿ
ಬ್ಯಾಗ್ ಕದಿಯಲು ಬಂದವಗೆ ಒಳ್ಳೆ ರಿಪ್ಲೇ ಕೊಟ್ಟ ಯುವತಿ