AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳದ ಈ ಪ್ರದೇಶ ಯಾವುದು ಎಂದು ಕಂಡುಹಿಡಿಯುವಿರಾ? ಇದೀಗ ಸಖತ್ ವೈರಲ್​​

ಹಚ್ಚ ಹಸಿರಿನ ಸುಂದರವಾದ ತಾಣವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ಈ ತಾಣವನ್ನು ಕಣ್ತುಂಬಿಸಿಕೊಂಡಾಗ ದೇವರ ಸೃಷ್ಟಿ ಎಷ್ಟು ಅದ್ಭುತ ಎಂದೆನಿಸುವುದಂತೂ ಖಂಡಿತಾ.

ಕೇರಳದ ಈ ಪ್ರದೇಶ ಯಾವುದು ಎಂದು ಕಂಡುಹಿಡಿಯುವಿರಾ? ಇದೀಗ ಸಖತ್ ವೈರಲ್​​
ಕೇರಳದ ಇಡುಕ್ಕಿ ಜಿಲ್ಲೆಯ ಮುನ್ನಾರ್‌Image Credit source: Pinterest
ಅಕ್ಷತಾ ವರ್ಕಾಡಿ
|

Updated on:Apr 22, 2023 | 11:47 AM

Share

ಮುಖ್ಯಾಂಶಗಳು

  • ಹಚ್ಚ ಹಸಿರಿನ ಸುಂದರವಾದ ತಾಣವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.
  • ಈ ತಾಣವನ್ನು ಕಣ್ತುಂಬಿಸಿಕೊಂಡಾಗ ದೇವರ ಸೃಷ್ಟಿ ಎಷ್ಟು ಅದ್ಭುತ ಎಂದೆನಿಸುವುದಂತೂ ಖಂಡಿತಾ.
  • ವೀಡಿಯೋದಲ್ಲಿ , ಬೆಟ್ಟಗಳ ಅದ್ಭುತ ನೋಟವನ್ನು ಕ್ಯಾಮೆರಾ ಪ್ಯಾನ್ ಮಾಡುವಾಗ ಸೂರ್ಯನು ಪ್ರಕಾಶಮಾನವಾಗಿ ಹೊಳೆಯುತ್ತಿರುವುದನ್ನು ಕಾಣಬಹುದು.

ಬಿತ್ತರದಾಗಸ ಹಿನ್ನೆಲೆಯಾಗಿರೆ, ಪರ್ವತದೆತ್ತರ ಸಾಲಾಗೆಸೆದಿರೆ, ಕಿಕ್ಕಿರದಡವಿಗಳಂಚಿನ ನಡುವೆ, ಮೆರೆದಿರೆ ಜಲಸುಂದರಿ ತುಂಗೆ,ದೇವರು ರುಜು ಮಾಡಿದನು; ರಸವಶನಾಗುತ ಕವಿ ಅದ ನೋಡಿದನು! ಕುವೆಂಪುರವರ ಸಾಲುಗಳು ಮತ್ತೆ ಮತ್ತೆ ನೆನಪಾಗುವುದೇ ಕೆಲವೊಂದು ಅದ್ಭುತ ತಾಣಗಳನ್ನುಕಣ್ತುಂಬಿಸಿಕೊಂಡಾಗ. ಹೌದು ಇದೀಗಾ ಹಚ್ಚ ಹಸಿರಿನ ಸುಂದರವಾದ ತಾಣವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ಈ ತಾಣವನ್ನು ಕಣ್ತುಂಬಿಸಿಕೊಂಡಾಗ ದೇವರ ಸೃಷ್ಟಿ ಎಷ್ಟು ಅದ್ಭುತ ಎಂದೆನಿಸುವುದಂತೂ ಖಂಡಿತಾ.

ಇಲ್ಲಿದೆ ನೋಡಿ ವೈರಲ್​ ವಿಡಿಯೋ: 

ಈ ವಿಡಿಯೋವನ್ನು ಛಾಯಾಗ್ರಾಹಕರಾಗಿರುವ ಅನೀಶ್ ಕೆಕೆ ಅವರು _the_exxplorer_ ಎಂಬ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಂಡಿದ್ದು, ಮುಸ್ಸಂಜೆಯ ಸೂರ್ಯಾಸ್ತವೂ ಕೂಡ ವಿಡಿಯೋದಲ್ಲಿ ಸರೆಯಾಗಿದೆ. ಈ ವಿಡಿಯೋವನ್ನು ನೋಡಿದ ಸಾಕಷ್ಟು ಸೋಶಿಯಲ್​ ಮೀಡಿಯಾ ಬಳಕೆದಾರರು ಇದು ಯಾವ ಪ್ರದೇಶ ಎಂದು ಕಾಮೆಂಟ್​​ನಲ್ಲಿ ಬರೆದುಕೊಂಡಿದ್ದಾರೆ. ಇದು ‘ದಕ್ಷಿಣದ ಕಾಶ್ಮೀರ ಎಂದೇ ಕರೆಯಲ್ಪಡುವ ಕೇರಳದ ಇಡುಕ್ಕಿ ಜಿಲ್ಲೆಯ ಮುನ್ನಾರ್‌.

ಇದನ್ನೂ ಓದಿ: ಗೋವಾದಲ್ಲಿ ಏ.21 ರಿಂದ 23ರವರೆಗೆ ನಡೆಯಲಿದೆ ‘ಸ್ಪಿರಿಟ್ ಆಫ್ ಗೋವಾ’ ಉತ್ಸವ

ವೀಡಿಯೋದಲ್ಲಿ , ಬೆಟ್ಟಗಳ ಅದ್ಭುತ ನೋಟವನ್ನು ಕ್ಯಾಮೆರಾ ಪ್ಯಾನ್ ಮಾಡುವಾಗ ಸೂರ್ಯನು ಪ್ರಕಾಶಮಾನವಾಗಿ ಹೊಳೆಯುತ್ತಿರುವುದನ್ನು ಕಾಣಬಹುದು. ಚಹಾದ ತೋಟದ ಹಚ್ಚ ಹಸುರಿನ ಮಧ್ಯದಲ್ಲಿರುವ ರಸ್ತೆಯಲ್ಲಿ ನೀವೂ ಸಂಚರಿಸುತ್ತಿದ್ದರೆ, ನಿಮ್ಮನ್ನು ಯಾವುದೇ ಸ್ವರ್ಗದಲ್ಲಿರುವಂತೆ ಭಾಸವಾಗುವುದು.ಈ ಸೌಂದರ್ಯವನ್ನು ವ್ಯಾಖ್ಯಾನಿಸಲು ಪದಗಳಿಲ್ಲ. ಇದು ಯಾವ ಸ್ಥಳ ಎಂದು ಊಹಿಸಬಲ್ಲಿರಾ? ” ಎಂದು ಪೋಸ್ಟ್‌ಗೆ ಕ್ಯಾಪ್ಷನ್​​ ಹಾಕಲಾಗಿದೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

Published On - 11:44 am, Sat, 22 April 23

Follow Us
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ
ನಶಾಮುಕ್ತ ಭಾರತ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು
ನಶಾಮುಕ್ತ ಭಾರತ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು
ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ; ಬೆಂಗಳೂರಿನಲ್ಲಿ ಹೈ ಅಲರ್ಟ್
ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ; ಬೆಂಗಳೂರಿನಲ್ಲಿ ಹೈ ಅಲರ್ಟ್
ರೈಲು ಸಂಚಾರ ಸ್ಥಗಿತ: ಪರದಾಡಿದ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷಾರ್ಥಿಗಳು
ರೈಲು ಸಂಚಾರ ಸ್ಥಗಿತ: ಪರದಾಡಿದ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷಾರ್ಥಿಗಳು