Viral Video: ಹೈವೇಯಲ್ಲಿ ಕಾರಿಗೆ ಡಿಕ್ಕಿ ಹೊಡೆದು, ರಸ್ತೆ ಮಧ್ಯೆ ಒದ್ದಾಡಿದ ಚಿರತೆ; ಶಾಕಿಂಗ್ ವಿಡಿಯೋ ಇಲ್ಲಿದೆ

ಈ ವಿಡಿಯೋ ಇಂಟರ್​ನೆಟ್​ನಲ್ಲಿ ಬಿರುಗಾಳಿಯನ್ನೇ ಸೃಷ್ಟಿಸಿದೆ. ಸಾವಿರಾರು ಜನರು ಈಗಾಗಲೇ ಈ ವಿಡಿಯೋ ವೀಕ್ಷಿಸಿದ್ದಾರೆ. ಈ ರೀತಿ ವಾಹನಗಳಿಗೆ ಡಿಕ್ಕಿ ಹೊಡೆದು ಚಿರತೆ ಸಾವನ್ನಪ್ಪುತ್ತಿರುವ ಪ್ರಕರಣಗಳು ಭಾರತದಲ್ಲಿ ಹೆಚ್ಚಾಗುತ್ತಿದೆ.

Viral Video: ಹೈವೇಯಲ್ಲಿ ಕಾರಿಗೆ ಡಿಕ್ಕಿ ಹೊಡೆದು, ರಸ್ತೆ ಮಧ್ಯೆ ಒದ್ದಾಡಿದ ಚಿರತೆ; ಶಾಕಿಂಗ್ ವಿಡಿಯೋ ಇಲ್ಲಿದೆ
ಹೆದ್ದಾರಿಯಲ್ಲಿ ಕಾರಿಗೆ ಚಿರತೆ ಡಿಕ್ಕಿ
Image Credit source: NDTV
Updated By: ಸುಷ್ಮಾ ಚಕ್ರೆ

Updated on: Jun 21, 2022 | 1:55 PM

ರಸ್ತೆಯಲ್ಲಿ ವೇಗವಾಗಿ ಬರುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದ ಚಿರತೆ (Leopard) ಕಾರಿನ ಬಾನೆಟ್‌ನಡಿ ಸಿಲುಕಿಕೊಂಡ ಭಯಾನಕ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಘಟನೆ ನಡೆದ ಸ್ಥಳ ಯಾವುದೆಂದು ಇನ್ನೂ ತಿಳಿದುಬಂದಿಲ್ಲ. ಆದರೆ, ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ (Social Media) ಹರಿದಾಡುತ್ತಿವೆ. ಬಾಲಿವುಡ್ ನಟಿ ರವೀನಾ ಟಂಡನ್ (Raveena Tondon) ಕೂಡ ಈ ವಿಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಹೆದ್ದಾರಿಯಲ್ಲಿ ಕಾರಿಗೆ ಚಿರತೆ ಡಿಕ್ಕಿ ಹೊಡೆದ ನಂತರ ಚಿರತೆ ಆ ಸ್ಥಳದಿಂದ ಪರಾರಿಯಾಗುವುದನ್ನು ವಿಡಿಯೋದಲ್ಲಿ ನೋಡಬಹುದು.

ಈ ಸುಂದರವಾದ ಚಿರತೆಗಾಗಿ ಪ್ರಾರ್ಥಿಸಿ. ಈ ಚಿರತೆ ಬದುಕುಳಿದಿದೆ ಎಂದು ನಾನು ಭಾವಿಸುತ್ತೇನೆ. ಚಿರತೆಗೆ ತೀವ್ರವಾಗಿ ಗಾಯಗೊಂಡಿದ್ದರೂ, ಅದು ಕಾಡಿನೊಳಗೆ ಓಡಿಹೋಗಿ ತಪ್ಪಿಸಿಕೊಂಡಿದೆ ಎಂದು ರವೀನಾ ಟಂಡನ್ ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ
ಕಾಂಬೋಡಿಯಾದ ಮೀನುಗಾರರ ಬಲೆಗೆ ಬಿದ್ದ ವಿಶ್ವದ ಅತ್ಯಂತ ದೊಡ್ಡ ಮೀನು, ಫೋಟೋ ವೈರಲ್​​
Shocking News: ಹೆರಿಗೆ ವೇಳೆ ಶಿಶುವಿನ ತಲೆ ಕತ್ತರಿಸಿ ಮಹಿಳೆಯ ಗರ್ಭದಲ್ಲೇ ಬಿಟ್ಟ ಆಸ್ಪತ್ರೆ ಸಿಬ್ಬಂದಿ!
Assam Tea: ನೀವು ಚಹಾ ಪ್ರಿಯರಾ?; 1 ಲಕ್ಷ ರೂ.ಗೆ ಮಾರಾಟವಾಯ್ತು ಅಪರೂಪದ ಅಸ್ಸಾಂ ಟೀ!
ಮದುವೆಯಾದ 10 ತಿಂಗಳ ಬಳಿಕ ಗಂಡನ ಅಸಲಿಯತ್ತು ತಿಳಿದು ಆಶ್ಚರ್ಯಗೊಂಡ ಪತ್ನಿ

ವನ್ಯಜೀವಿ ಕಾರ್ಯಕರ್ತರೊಬ್ಬರು ಹಂಚಿಕೊಂಡ ಮತ್ತೊಂದು ವಿಡಿಯೋ ಕ್ಲಿಪ್‌ನಲ್ಲಿ, ಚಿರತೆ ವಾಹನದ ಬಾನೆಟ್ ಅಡಿಯಲ್ಲಿ ಸಿಲುಕಿಕೊಂಡಿರುವುದನ್ನು ನೋಡಬಹುದು. ಕಾಡುಪ್ರಾಣಿಯನ್ನು ಉಳಿಸಲು ಚಾಲಕ ಕಾರನ್ನು ಹಿಂದಕ್ಕೆ ಎಳೆದಾಗ, ಚಿರತೆ ತನ್ನ ಕೋಪವನ್ನು ವ್ಯಕ್ತಪಡಿಸಿ ದಾಳಿ ಮಾಡಲು ಹೋದಾಗ ಆ ಕಾರು ತನ್ನ ಜೊತೆಯೇ ಚಿರತೆಯನ್ನು ರಸ್ತೆಮೇಲೆ ಎಳೆದುಕೊಂಡು ಹೋಗಿರುವುದನ್ನು ನೋಡಬಹುದು. ಕೊನೆಗೆ ಬಾನೆಟ್​ನಿಂದ ತನ್ನ ಹಿಡಿತವನ್ನು ಬಿಟ್ಟ ಚಿರತೆ ಪಕ್ಕದ ರಸ್ತೆಯಿಂದ ಕಾಂಪೌಂಡ್ ಹಾರಿ ಓಡಿಹೋಗಿದೆ.

ಇದನ್ನೂ ಓದಿ: Viral Video: ಮೂರು ಚಿರತೆಗಳನ್ನು ತಬ್ಬಿ ಮಲಗಿದ ವ್ಯಕ್ತಿಯ ವಿಡಿಯೋ ವೈರಲ್; ತಬ್ಬಿಬ್ಬಾದ ನೆಟ್ಟಿಗರು

ಈ ವಿಡಿಯೋ ಇಂಟರ್​ನೆಟ್​ನಲ್ಲಿ ಬಿರುಗಾಳಿಯನ್ನೇ ಸೃಷ್ಟಿಸಿದೆ. ಸಾವಿರಾರು ಜನರು ಈಗಾಗಲೇ ಈ ವಿಡಿಯೋ ವೀಕ್ಷಿಸಿದ್ದಾರೆ. ಈ ರೀತಿ ವಾಹನಗಳಿಗೆ ಡಿಕ್ಕಿ ಹೊಡೆದು ಚಿರತೆ ಸಾವನ್ನಪ್ಪುತ್ತಿರುವ ಪ್ರಕರಣಗಳು ಭಾರತದಲ್ಲಿ ಹೆಚ್ಚಾಗುತ್ತಿದೆ. ಕಳೆದ ವರ್ಷ, ಗುರುಗ್ರಾಮ್ ಬಳಿಯ ಪಾಲಿ-ಸೂರಜ್‌ಕುಂಡ್ ರಸ್ತೆಯಲ್ಲಿ ಎರಡು ವರ್ಷದ ಚಿರತೆ ಸತ್ತಿರುವುದು ಪತ್ತೆಯಾಗಿದ್ದು, ಶವಪರೀಕ್ಷೆ ವರದಿಗಳು ವಾಹನಕ್ಕೆ ಡಿಕ್ಕಿ ಹೊಡೆದಿರಬಹುದು ಎಂದು ಸೂಚಿಸಲಾಗಿತ್ತು. 2019ರಲ್ಲಿ ಮನೇಸರ್‌ನ NH-48ನಲ್ಲಿ ಒಂದೂವರೆ ವರ್ಷದ ಹೆಣ್ಣು ಚಿರತೆ ಕೂಡ ಟ್ರಕ್‌ ಡಿಕ್ಕಿ ಹೊಡೆದು ಸಾವನ್ನಪ್ಪಿತ್ತು.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:53 pm, Tue, 21 June 22