AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ನನ್ನನ್ನೂ ವಾಕಿಂಗ್ ಕರೆದುಕೊಂಡು ಹೋಗು; ಕಣ್ಣಲ್ಲೇ ಒಡೆಯನಿಗೆ ಮನವಿ ಮಾಡಿದ ನಾಯಿಯ ವಿಡಿಯೋ ವೈರಲ್

Trending Video: ನಾಯಿಯೊಂದು ತನ್ನನ್ನೂ ವಾಕ್ ಕರೆದುಕೊಂಡು ಹೋಗು ಎಂದು ತನ್ನ ಮಾಲೀಕನಿಗೆ ಕಣ್ಣಿನಲ್ಲೇ ಸನ್ನೆ ಮಾಡಿ ಮನವಿ ಮಾಡಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ.

Viral Video: ನನ್ನನ್ನೂ ವಾಕಿಂಗ್ ಕರೆದುಕೊಂಡು ಹೋಗು; ಕಣ್ಣಲ್ಲೇ ಒಡೆಯನಿಗೆ ಮನವಿ ಮಾಡಿದ ನಾಯಿಯ ವಿಡಿಯೋ ವೈರಲ್
ವೈರಲ್ ಆಗಿರುವ ನಾಯಿಯ ವಿಡಿಯೋ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Dec 29, 2021 | 1:30 PM

ಕೆಲವೊಮ್ಮೆ ಮನುಷ್ಯರಿಗಿಂತಲೂ ಪ್ರಾಣಿ, ಪಕ್ಷಿಗಳೇ ನಮಗೆ ಒಳ್ಳೆ ಕಂಪನಿ ಕೊಡುತ್ತವೆ. ನಾವು ಏನು ಹೇಳಿದರೂ ಕೇಳಿಸಿಕೊಂಡು, ನಮ್ಮ ಖುಷಿ, ನೋವು, ದುಃಖಕ್ಕೆ ನಾಯಿ, ಬೆಕ್ಕುಗಳು ಸಾಥ್ ಕೊಡುತ್ತವೆ. ನೀವು ಮನೆಯಲ್ಲಿ ನಾಯಿ ಸಾಕಿದ್ದೀರಾ? ನಿಮಗೂ ನಾಯಿ ಎಂದರೆ ತುಂಬಾ ಇಷ್ಟಾನಾ? ಹಾಗಿದ್ದರೆ ನಿಮಗೆ ಇಂಟರ್ನೆಟ್​ನಲ್ಲಿ ಬೇಕಾದಷ್ಟು ನಾಯಿ, ಬೆಕ್ಕುಗಳ ಕ್ಯೂಟ್ ವಿಡಿಯೋಗಳು ಕಾಣುತ್ತಲೇ ಇರುತ್ತವೆ. ಇನ್​ಸ್ಟಾಗ್ರಾಂ, ಫೇಸ್​ಬುಕ್, ಯೂಟ್ಯೂಬ್​ನಲ್ಲಿ ಒಂದಕ್ಕಿಂತ ಒಂದು ಮುದ್ದಾದ ವಿಡಿಯೋಗಳು ಹರಿದಾಡುತ್ತಲೇ ಇರುತ್ತವೆ. ನಿಮಗೂ ಅಂತಹ ವಿಡಿಯೋಗಳು ಇಷ್ಟವಾಗುವುದಾದರೆ ಈ ವಿಡಿಯೋ ಕೂಡ ನಿಮಗೆ ಇಷ್ಟವಾಗುವುದರಲ್ಲಿ ಅನುಮಾನವೇ ಇಲ್ಲ. ನಾಯಿಯೊಂದು ತನ್ನನ್ನೂ ವಾಕ್ ಕರೆದುಕೊಂಡು ಹೋಗು ಎಂದು ತನ್ನ ಮಾಲೀಕನಿಗೆ ಕಣ್ಣಿನಲ್ಲೇ ಸನ್ನೆ ಮಾಡಿ ಮನವಿ ಮಾಡಿಕೊಳ್ಳುತ್ತಿರುವ ವಿಡಿಯೋ ನೋಡಿದರೆ ಎಂಥವರ ಮನಸೂ ಕರಗುತ್ತದೆ.

ಹೊರಗೆ ಹೊರಟಿದ್ದ ಮಾಲೀಕನ ಎದುರು ಹೋಗಿ ಕುಳಿತ ನಾಯಿ ಅಲ್ಲೇ ಗೋಡೆಗೆ ಸಿಕ್ಕಿಸಿಟ್ಟಿದ್ದ ಚೈನ್ ಅನ್ನು ತೋರಿಸುತ್ತಾ ನಿನ್ನ ಜೊತೆ ನನ್ನನ್ನೂ ವಾಕಿಂಗ್ ಕರೆದುಕೊಂಡು ಹೋಗು ಎಂದು ಮನವಿ ಮಾಡುತ್ತಿರುವ ವಿಡಿಯೋ ನೆಟ್ಟಿಗರ ಮನಸನ್ನು ಗೆದ್ದಿದೆ. ರೆಡ್ಡಿಟ್​ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ.

ಬಾಗಿಲಿನ ಮುಂದೆ ಕುಳಿತಿರುವ ನಾಯಿಯು ತನ್ನ ಕಣ್ಣುಗಳಿಂದಲೇ ಒಡೆಯನಿಗೆ ಚೈನ್ ಅನ್ನು ತೋರಿಸಿ, ತಾನೂ ಹೊರಗೆ ಬರುತ್ತೇನೆ ಎಂದು ಮನವಿ ಮಾಡುತ್ತಿದೆ. ಅಪ್​ಲೋಡ್ ಆದ ಆರು ಗಂಟೆಯೊಳಗೆ ಈ ವಿಡಿಯೋ ವೈರಲ್ ಆಗಿದ್ದು, 5,400ಕ್ಕೂ ಹೆಚ್ಚು ಜನರು ಲೈಕಿಸಿದ್ದಾರೆ. ಈ ವಿಡಿಯೋ ನೋಡಿದ ಶ್ವಾನಪ್ರಿಯರು ತಮ್ಮ ಮನೆಯ ನಾಯಿ ಯಾವೆಲ್ಲ ರೀತಿಯಲ್ಲಿ ಕಾಟ ಕೊಡುತ್ತದೆ, ಹುಡುಗಾಟವಾಡುತ್ತದೆ ಎಂಬುದನ್ನು ವಿವರಿಸಿ ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Viral Video: ಸಮೋಸಾಕ್ಕೆ ಜಾಮೂನ್​ ಸೇರಿಸಿ ತಿಂದ ಫುಡ್​ ಬ್ಲಾಗರ್​: ಕೆಟ್ಟ ರುಚಿ ಎಂದ ನೆಟ್ಟಿಗರು

Viral Video: ಉದ್ದಿನ ದೋಸೆ, ನೀರ್ ದೋಸೆಯೆಲ್ಲ ಹಳೇದಾಯ್ತು; ಫ್ರೂಟ್ ದೋಸೆ ಮಾಡೋದು ಹೇಗಂತ ಗೊತ್ತಾ?

ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ