Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮುದ್ರದ ನಡುವಲ್ಲಿ ಎದುರಾಯ್ತು ದೈತ್ಯ ಹಾವು; ಬೋಟ್​ನತ್ತ ಹಾವು ನುಗ್ಗಿ ಬಂದ ವಿಡಿಯೋ ವೈರಲ್​

ಹಾವಿನ ಈ ವರ್ತನೆಯನ್ನು ವರ್ಣಿಸಿರುವ ಬ್ರೋಡಿ ಮಾಸ್, ಹಾವಿನ ಈ ವರ್ತನೆ ಅದರ ಸಂತಾನ ಕ್ರಿಯೆಗೆ ಸಂಬಂಧಿಸಿದ್ದಾಗಿದೆ. ಅದು ಕುತೂಹಲದಿಂದ ತನಗೆ ಸಂಗಾತಿ ಸಿಗಬಹುದೆಂದು ಭಾವಿಸಿ ಇತ್ತ ಹರಿದು ಬಂದಿದೆ. ಅದಲ್ಲದೇ ಇದ್ದರೆ ಹಾಗೆ ಮೈಮರೆತು ಮೋಸ ಹೋಗುವುದು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದಾರೆ.

ಸಮುದ್ರದ ನಡುವಲ್ಲಿ ಎದುರಾಯ್ತು ದೈತ್ಯ ಹಾವು; ಬೋಟ್​ನತ್ತ ಹಾವು ನುಗ್ಗಿ ಬಂದ ವಿಡಿಯೋ ವೈರಲ್​
ಬೋಟ್​​ನತ್ತ ನುಗ್ಗಿ ಬಂದ ಹಾವು
Follow us
TV9 Web
| Updated By: Skanda

Updated on: Sep 03, 2021 | 3:09 PM

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಕೆಲ ವಿಡಿಯೋಗಳು ಅರೆರೆ! ಎನ್ನಿಸುವಂತೆ ಇರುತ್ತವೆ. ಅದರಲ್ಲೂ ಪ್ರಾಣಿ, ಪಕ್ಷಿ, ಪ್ರಕೃತಿಗೆ ಸಂಬಂಧಿಸಿದ ಅಪರೂಪದ ವಿಚಾರಗಳು ಶರವೇಗದಲ್ಲಿ ಎಲ್ಲರ ಮೊಬೈಲ್​ಗೆ ಹೊಕ್ಕು ವೈರಲ್​ ಆಗಿಬಿಡುತ್ತವೆ. ಇತ್ತೀಚೆಗೆ ಆಸ್ಟ್ರೇಲಿಯಾದ ಯೂಟ್ಯೂಬರ್​ ಒಬ್ಬಾತ ಹಂಚಿಕೊಂಡ ವಿಡಿಯೋ ಒಂದು ಈಗ ಎಲ್ಲರ ಗಮನ ಸೆಳೆದು ಹುಬ್ಬೇರುವಂತೆ ಮಾಡುತ್ತಿದೆ. ಆಸಿಸ್​​ನ ಬ್ರೋಡಿ ಮಾಸ್​ ಎಂಬಾತ ಈ ವಿಡಿಯೋ ಮಾಡಿದ್ದು, ಅದನ್ನು ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾನೆ. ಆ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್​ ಆಗಿ ಸದ್ದು ಮಾಡುತ್ತಿದೆ.

ಆತ ಹಂಚಿಕೊಂಡ ವಿಡಿಯೋ ಅಷ್ಟು ಸಂಚಲನ ಮೂಡಿಸೋಕೆ ಕಾರಣ ಸಮುದ್ರದ ದೈತ್ಯ ಹಾವು. ಸಾಧಾರಣವಾಗಿ ಮನುಷ್ಯರು ಅಥವಾ ಯಾವುದೇ ಅಪರಿಚಿತ ವಸ್ತುವಿನಿಂದ ದೂರ ಸರಿಯುವ ಆ ಜಾತಿಯ ಹಾವು ಇಲ್ಲಿ ಮಾತ್ರ ಇವನತ್ತಲೇ ನುಗ್ಗಿ ಬಂದಿದೆ. ತುಸು ದೂರದಿಂದಲೇ ಹಾವು ಹರಿದು ಬರುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದು, ಅದರ ಈ ವರ್ತನೆಗೆ ಸ್ವತಃ ಬ್ರೋಡಿ ಮಾಸ್ ಬೆರಗಾಗಿದ್ದಾನೆ.

View this post on Instagram

A post shared by YBS (@brodiemoss)

ಶುಭ್ರ ಸಾಗರದಲ್ಲಿ ಈತನಿದ್ದ ಬೋಟ್​ನತ್ತಲೇ ಹರಿದು ಬಂದ ಕಂದು ಬಣ್ಣದ ದೈತ್ಯ ಹಾವು ಬರುವ ಶೈಲಿಯನ್ನು ನೋಡಿದರೆ ಎಂಥವರೂ ಭಯ ಬೀಳಬೇಕು. ಅಷ್ಟು ವೇಗವಾಗಿ ಬಂದ ಹಾವು ನೇರ ಈತನ ಸಮೀಪಕ್ಕೇ ಬಂದು ಒಮ್ಮೆ ಬೋಟ್​ನಲ್ಲಿ ಇಣುಕಿ ನೋಡಿ ಮತ್ತೆ ಫಟ್ಟನೆ ವಾಪಾಸ್​ ಹೋಗಿದೆ.

ಆಹಾರವನ್ನು ಅರಸಿ ಬರುವಂತೆ ಬಂದ ಹಾವು, ಬೋಟ್​ ಒಳಗೆ ಒಮ್ಮೆ ಇಣುಕಿ ವಾಪಾಸ್​ ಆಗಿರುವುದು ಅಚ್ಚರಿ ಮೂಡಿಸಿದೆ. ಆದರೆ, ಹಾವಿನ ಈ ವರ್ತನೆಯನ್ನು ವರ್ಣಿಸಿರುವ ಬ್ರೋಡಿ ಮಾಸ್, ಹಾವಿನ ಈ ವರ್ತನೆ ಅದರ ಸಂತಾನ ಕ್ರಿಯೆಗೆ ಸಂಬಂಧಿಸಿದ್ದಾಗಿದೆ. ಅದು ಕುತೂಹಲದಿಂದ ತನಗೆ ಸಂಗಾತಿ ಸಿಗಬಹುದೆಂದು ಭಾವಿಸಿ ಇತ್ತ ಹರಿದು ಬಂದಿದೆ. ಅದಲ್ಲದೇ ಇದ್ದರೆ ಹಾಗೆ ಮೈಮರೆತು ಮೋಸ ಹೋಗುವುದು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Viral Video: ರಾಖಿ ಕಟ್ಟಿದವನನ್ನೇ ಕಚ್ಚಿ ಕೊಂದ ಹಾವುಗಳು!; ಈ ವಿಡಿಯೋ ನೋಡಿದರೆ ಬೆಚ್ಚಿ ಬೀಳ್ತೀರಿ

ವಿಷಪೂರಿತ ಹಾವನ್ನು ಹಿಡಿದು ಕಚ್ಚಿ ಸಾಯಿಸಿದ ವ್ಯಕ್ತಿ; ನೋವು ತಾಳಲಾರದೇ ಸತ್ತ ಹಾವು

‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್