AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕಾಮಾಟಿಪುರ; ನನ್ನ ಅಮ್ಮನನ್ನು ಮೊದಲ ಸಲ ನೋಡಿದಾಗ ನನಗೆ 8 ವರ್ಷ

Girl Child: ''ಅಮ್ಮನಿಲ್ಲದ ಬಾಲ್ಯ ನನ್ನದು. ಅಮ್ಮ ಒಬ್ಬ ವೇಶ್ಯೆ ಎಂದು ಗೊತ್ತಾದಾಗ ನನಗೆ ಎಂಟು ವರ್ಷ. ಮಲತಂದೆ ಮಲತಂಗಿಯೊಂದಿಗೆ ವಾಸಿಸತೊಡಗಿದೆ. ಮತ್ತೊಮ್ಮೆ ಅಮ್ಮ ನನ್ನನ್ನು ಬಿಟ್ಟು ಹೋದಳು. ಮಲತಂದೆಯಿಂದ ಅತ್ಯಾಚಾರಕ್ಕೆ ಒಳಗಾಗುತ್ತ ಹೋದೆ. ಇನ್ನೇನು ಈ ಜಗತ್ತಿನ ನಂಟು ಬೇಡವೇ ಬೇಡವೆಂದುಕೊಂಡು ಸಾಯಲು ಪ್ರಯತ್ನಿಸಿದೆ. ಆದರೆ 'ಕ್ರಾಂತಿ' ಕೈಹಿಡಿಯಿತು'' ಝುಂಬಾ ಇನ್​ಸ್ಟ್ರಕ್ಟರ್​

Viral Video: ಕಾಮಾಟಿಪುರ; ನನ್ನ ಅಮ್ಮನನ್ನು ಮೊದಲ ಸಲ ನೋಡಿದಾಗ ನನಗೆ 8 ವರ್ಷ
'ಕ್ರಾಂತಿ ನನ್ನನ್ನು ಬದುಕಿಸಿತು' ಝುಂಬಾ ಇನ್​ಸ್ಟ್ರಕ್ಟರ್
ಶ್ರೀದೇವಿ ಕಳಸದ
|

Updated on:Oct 12, 2023 | 12:24 PM

Share

Mother: ‘ನಾನು ಹುಟ್ಟಿದ ತಕ್ಷಣ ನನ್ನ ಅಮ್ಮ ನನ್ನನ್ನು ಬಿಟ್ಟು ಹೊರಟುಹೋದಳು. ನನ್ನ ಚಿಕ್ಕಮ್ಮಂದಿರೇನೋ ನನ್ನನ್ನು ನೋಡಿಕೊಂಡರು. ಆದರೆ ಅವರು ಶಾಲೆಗೆ ಕಳಿಸಲಿಲ್ಲ. 8 ವರ್ಷದವಳಿದ್ದಾಗ ಒಂದು ದಿನ ನನ್ನ ಅಮ್ಮ ಮುಂಬೈನಿಂದ ಬಂದಳು. ಮೊದಲ ಸಲ ಆಕೆಯನ್ನು ನೋಡಿದೆ, ಆದರೆ ಆಕೆ ನನ್ನ ಅಮ್ಮ ಎಂದು ನನಗೆ ಒಪ್ಪಿಕೊಳ್ಳಲಾಗಲಿಲ್ಲ. ನಂತರ ಆಕೆ ನನ್ನನ್ನು ಮುಂಬೈಗೆ ಕರೆದೊಯ್ದಳು. ಅಲ್ಲಿ ಮಲತಂಗಿ ಮತ್ತು ಮಲತಂದೆಯೊಂದಿಗೆ ವಾಸಿಸತೊಡಗಿದೆ. ನಾನು ಅವರೆಲ್ಲರೊಂದಿಗೆ ಸುರಕ್ಷಿತವಾಗಿದ್ದೇನೆ ಎನ್ನಿಸಿತು. ಆದರೆ ನನ್ನ ತಾಯಿ ಒಬ್ಬ ವೇಶ್ಯೆ (Prostitute) ಎನ್ನುವುದು ಮೊದಲಬಾರಿಗೆ ತಿಳಿಯಿತು. ಅಷ್ಟೊತ್ತಿಗಾಗಲೇ ನನ್ನ ಮಲತಂದೆಯಿಂದ ಆಕೆ ಹೊಡೆತ ತಿಂದು ಬೇಸತ್ತಿದ್ದಳು.’

ಇದನ್ನೂ ಓದಿ : Viral Puzzle: ಕ್ರಾಸ್​ವರ್ಡ್​; ಈ ಒಂದು ಶಬ್ದಕ್ಕಾಗಿ ನೆಟ್ಟಿಗರೆಲ್ಲಾ ಸಾಕಷ್ಟು ತಲೆ ಕೆಡಿಸಿಕೊಂಡಿದ್ದಾರೆ, ನೀವು?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ನನಗೆ 12 ತುಂಬಿದಾಗ ನನ್ನ ಅಮ್ಮ ನನ್ನನ್ನು ಮತ್ತೊಮ್ಮೆ ಬಿಟ್ಟು ಹೊರಟುಹೋದಳು. ಆಗ ನನ್ನ ಮಲತಂದೆ ನನ್ನನ್ನು ದಿನಾ ಹೊಡೆಯುತ್ತಿದ್ದ ಅಷ್ಟೇ ಅಲ್ಲ ದಿನಾ ರಾತ್ರಿ ನನ್ನ ಮೇಲೆ ಅತ್ಯಾಚಾರ ಮಾಡುತ್ತಿದ್ದ. ನಾನು ಮೂರು ಸಲ ಆತ್ಮಹತ್ಯೆಗೆ ಯತ್ನಿಸಿದೆ. ಇನ್ನೇನು ನನ್ನ ಬದುಕು ಮುಗಿದೇ ಹೋಯಿತು ಎನ್ನುವಾಗ ‘ಕ್ರಾಂತಿ’ ನನ್ನ ಕೈಹಿಡಿಯಿತು.’

‘ಕ್ರಾಂತಿ ನನಗೆ ಹೊಸ ಜೀವನ ಕೊಟ್ಟಿತು’

‘ಮುಂಬೈ ಕಾಮಾಟಿಪುರದೊಂದಿಗೆ ಒಡನಾಟವಿಟ್ಟುಕೊಂಡಿದ್ದ ‘ಕ್ರಾಂತಿ’ ಹೆಣ್ಣುಮಕ್ಕಳನ್ನು ಸಬಲೀಕರಣಗೊಳಿಸುವ ಸಂಸ್ಥೆ. ಕ್ರಾಂತಿಯ ತೆಕ್ಕೆಗೆ ಬಿದ್ದ ಮೇಲೆ ನಾನು ಸುರಕ್ಷಿತವಾಗಿದ್ದೇನೆ ಎನ್ನಿಸತೊಡಗಿತು. ಅವರು ಅಲ್ಲಿ ನನ್ನ ಆರೋಗ್ಯ ಮತ್ತು ಶಿಕ್ಷಣದ ಜವಾಬ್ದಾರಿ ವಹಿಸಿಕೊಂಡರು. ಜೊತೆಗೆ ಥೆರಪಿಗೆ ಒಳಪಡಿಸಿದರು. ನಾನು ಝುಂಬಾ ಡ್ಯಾನ್ಸ್​ ತರಬೇತಿ ಪಡೆದೆ. ಏಳು ವರ್ಷಗಳಿಂದ ಲೈಸೆನ್ಸ್​ ಹೊಂದಿದ ಝುಂಬಾ ತರಬೇತುದಾರಳಾಗಿ ಕೆಲಸ ಮಾಡುತ್ತಿದ್ದೇನೆ.  ನನ್ನ ತಪ್ಪು ಏನೂ ಇಲ್ಲ ಎನ್ನುವುದು ಅರಿವಾಗುತ್ತಿದೆ. ನನ್ನ ಬದುಕನ್ನು ಪ್ರೀತಿಸುತ್ತಿದ್ದೇನೆ. ‘ಕ್ರಾಂತಿ’ ನನಗೆ ಹೊಸ ಬದುಕನ್ನು ನೀಡಿದೆ.’ ಝುಂಬಾ ಇನ್​ಸ್ಟ್ರಕ್ಟರ್​

ಇದನ್ನೂ ಓದಿ : Viral Video: ನಾಗಾಲ್ಯಾಂಡ್ ಸಚಿವರು ವಡಾ ಪಾವ್​ ಮಾಡಿದ ವಿಡಿಯೋ ವೈರಲ್

ಈ ವಿಡಿಯೋ ಅನ್ನು ಇನ್​ಸ್ಟಾಗ್ರಾಂನ  officialpeopleofindia ನಲ್ಲಿ 17 ಗಂಟೆಗಳ ಹಿಂದೆ ಹಂಚಿಕೊಳ್ಳಲಾಗಿದೆ. ಈ ತನಕ ಸುಮಾರು 45,000 ಜನರು ಈ ಪೋಸ್ಟ್​ ಲೈಕ್ ಮಾಡಿದ್ದಾರೆ. ನೂರಾರು ಜನರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಎಲ್ಲ ನಿನ್ನ ತಾಯಿಯದೇ ತಪ್ಪು ಎಂದು ಒಬ್ಬರು ಹೇಳಿದ್ದಾರೆ. ಖಂಡಿತ ತಪ್ಪು, ತಾಯಿ ಈ ಪರಿಸ್ಥಿತಿಗೆ ಬರಲು ಗಂಡಸು ಮತ್ತು ಸಮಾಜವೇ ಹೊಣೆ ಎಂದು ಅನೇಕರು ತಿಳಿಹೇಳಿದ್ದಾರೆ. ಎಲ್ಲ ಕಷ್ಟಗಳನ್ನೂ ದಾಟಿಕೊಂಡು ಸ್ವಾವಲಂಬಿಯಾಗಿ ಬದುಕುತ್ತಿರುವ ನಿಮಗೆ ಒಳ್ಳೆಯದಾಗಲಿ ಎಂದು ಅನೇಕರು ಹಾರೈಸಿದ್ದಾರೆ.

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 12:24 pm, Thu, 12 October 23

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು