AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಆಮೆಯನ್ನು ರಕ್ಷಿಸಲು ಮನುಷ್ಯರ ಬಳಿ ಸಹಾಯ ಕೇಳಿದ ಶಾರ್ಕ್​?!

Turtle : ಈ ವಿಡಿಯೋ ಅನ್ನು ಈತನಕ 2.7 ಮಿಲಿಯನ್​ ಜನರು ನೋಡಿದ್ದಾರೆ. ಕೊನೇಪಕ್ಷ ಈ ಶಾರ್ಕ್​ಗಾದರೂ ಕರುಣೆ ಇದೆಯಲ್ಲ ಎಂದು ಕೆಲವರು ಹೇಳಿದ್ದಾರೆ. ಆದರೆ ವಾಸ್ತವ ಏನಿದೆ ಎನ್ನುವುದು ನಿಮಗಾದರೂ ತಿಳಿಯಬಹುದೆ?

Viral Video: ಆಮೆಯನ್ನು ರಕ್ಷಿಸಲು ಮನುಷ್ಯರ ಬಳಿ ಸಹಾಯ ಕೇಳಿದ ಶಾರ್ಕ್​?!
ಶಾರ್ಕ್​ ಮತ್ತು ಗಾಯಗೊಂಡ ಆಮೆ
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on: May 30, 2023 | 3:24 PM

Share

Turtle : ದೈತ್ಯದೇಹಿ ಶಾರ್ಕ್​ಗೆ (Shark)​ ಆಮೆಯನ್ನು (Toutle) ಕಬಳಿಸುವ ಬದಲು ರಕ್ಷಿಸುವ ಆಲೋಚನೆ ಬಂದಿದ್ದಾದರೂ ಹೇಗೆ? ಆಹಾರ ಸರಪಳಿಯಲ್ಲಿ ಏನು ವ್ಯತ್ಯಾಸವಾಗುತ್ತಿದೆ ಹಾಗಿದ್ದರೆ? ಸಮುದ್ರದಾಳದಲ್ಲಿರುವ ಜೀವಸಂಕುಲವೂ ಸಹಾಯ, ಸಹಾನುಭೂತಿಯಂಥ ಗುಣಗಳನ್ನು ರೂಢಿಸಿಕೊಳ್ಳುತ್ತಿದೆಯೋ ಹೇಗೆ? ಅಥವಾ ಇದೊಂದು ಪವಾಡವೆ? ಹೀಗೆ ನಿಮ್ಮ ತಲೆಯಲ್ಲಿ ಪ್ರಶ್ನೆಗಳು ದಾಂಗುಡಿ ಇಡುತ್ತಿರಬಹುದು. ​ಈ ಕೆಳಗಿನ ವಿಡಿಯೋ ನೋಡಿ ಹಾಗಿದ್ದರೆ.

ಶಾರ್ಕ್​ ಈ ಆಮೆಯ ಬೆನ್ನಟ್ಟಿಕೊಂಡು ಬರುವಾಗ ಆಮೆ ಎದುರಾದ ದೋಣಿಯನ್ನು ಏರಲು ಪ್ರಯತ್ನಿಸಿದೆ. ದೋಣಿಯಲ್ಲಿರುವ ಹುಡುಗರಿಬ್ಬರು ಈ ಆಮೆಯನ್ನು ರಕ್ಷಿಸಿದ್ದಾರೆ. ಉಸಿರಾಡಲು ಕಷ್ಟಪಡುತ್ತಿದ್ದ ಆಮೆಯನ್ನು ಗಮನಿಸಿ ಅದರ ಕುತ್ತಿಗೆಗೆ ಯಾರೋ ಕಟ್ಟಿದ್ದ ದಪ್ಪ ಹಗ್ಗಗಳನ್ನು ಚಾಕುವಿನಿಂದ ಕತ್ತರಿಸಿದ್ದಾರೆ. ಸೀಳಿದ ಕುತ್ತಿಗೆಗೆ ಅರಿಷಿಣ ಪುಡಿ ಸವರಿದ್ದಾರೆ. ಆದರೆ ಇಷ್ಟೊಂದು ಆಳವಾದ ಗಾಯಕ್ಕೆ ಒಳಗಾದ ಆಮೆ ಬದುಕುವುದೆ?

ಇದನ್ನೂ ಓದಿ : Viral: ಅತ್ತೆ ಸೊಸೆ ಒಂದೇ ಸೀರೆ; ಇದು ನಿಜಕ್ಕೂ ಆರ್ಥಿಕ ಹಿಂಜರಿಕೆ ಎನ್ನುತ್ತಿರುವ ನೆಟ್ಟಿಗರು

ಈ ವಿಡಿಯೋ ಅನ್ನು ಈತನಕ 2.7 ಮಿಲಿಯನ್​ ಜನರು ನೋಡಿದ್ದಾರೆ. ಕೊನೇಪಕ್ಷ ಈ ಶಾರ್ಕ್​ಗಾದರೂ ಕರುಣೆ ಇದೆಯಲ್ಲ ಎಂದು ಕೆಲವರು ಹೇಳಿದ್ದಾರೆ. ಶಾರ್ಕ್​ ಆಮೆಯನ್ನು ರಕ್ಷಿಸಲು ಮನುಷ್ಯನ ಸಹಾಯ ಕೇಳಿದೆ ಎಂದು ಹೇಗೆ ಹೇಳುತ್ತೀರಿ? ಶಾರ್ಕ್​ ಆಮೆಯನ್ನು ತಿನ್ನಲು ಬೆನ್ನಟ್ಟಿಕೊಂಡು ಬಂದಿರಬಹುದಲ್ಲವೆ? ಎಂದು  ಕೆಲ ಜನ ಕೇಳಿದ್ದಾರೆ.

ಇದನ್ನೂ ಓದಿ : Viral Video; ಮೊಸರಿನೊಂದಿಗೆ ಗುಲಾಬ್​ ಜಾಮೂನ್​! ನೆಟ್ಟಿಗರಿಗೆ ಬೈಗಳುಗಳು ಸಾಲುತ್ತಿಲ್ಲ

ಶಾರ್ಕ್​ಗೆ ಕೊನೆಯಲ್ಲಿ ಅನ್ನಿಸಿರಬಹುದು, ಆಮೆಯ ಸೂಪ್​ ಔಟ್ ಆಫ್ ಫ್ಯಾಷನ್ ಆಗಿದೆಯೆಂದು. ಹಗ್ಗವನ್ನು ಕತ್ತರಿಸಿದ ಮೇಲೆ ಶಾರ್ಕ್​ ಬಂದು ಆಮೆಯನ್ನು ತಿನ್ನಲು ಎತ್ತಿಕೊಂಡು ಹೋಯಿತು. ಆಮೆ ಯಾವ ಸಹಾಯವನ್ನೂ ಕೇಳಿಕೊಂಡು ಬಂದಿಲ್ಲ, ಆಮೆಯನ್ನು ಹಿಡಿದು ತಿನ್ನಲು ಕಷ್ಟಪಡುತ್ತಿದೆ ಎನ್ನುವುದು ಅತ್ಯಂತ ಸ್ಪಷ್ಟವಾಗಿದೆ. ಏನಾಗಿದೆ ನಿಮಗೆ ಇಂಥ ವಿಡಿಯೋಗಳ ಮೂಲಕ ನೀವು ಪ್ರಚಾರ ಪಡೆದುಕೊಳ್ಳಲು ಹವಣಿಸುತ್ತೀರಿ? ಅಂತೆಲ್ಲ ಪ್ರತಿಕ್ರಿಯಸಿದ್ದಾರೆ ಅನೇಕರು.

ಇದನ್ನು ನೋಡಿದ ನೀವು ಏನು ಹೇಳುತ್ತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Follow Us
Shridevi Kalasad
Shridevi Kalasad

ಶ್ರೀದೇವಿ ಕಳಸದ : ಮುಖ್ಯ ಉಪಸಂಪಾದಕಿ. ವಿಜಯ ಕರ್ನಾಟಕ, ಸುವರ್ಣ ನ್ಯೂಸ್, ಪ್ರಜಾವಾಣಿ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಒಟ್ಟು 16 ವರ್ಷಗಳ ಅನುಭವ. ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ವಿಶೇಷ ಆಸಕ್ತಿ.

‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!