AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hurricane : ‘ಮೈಕ್ರೋಫೋನಿಗೆ ಕಾಂಡೋಮ್​ ಹಾಕಿ ವರದಿ ಮಾಡುತ್ತಿದ್ದೇನೆ, ನಿಮ್ಮ ಊಹೆ ಸರಿ ಇದೆ’

Florida : ಇಯಾನ್​ ಚಂಡಮಾರುತದಿಂದ ತತ್ತರಿಸಿರುವ ಫ್ಲೊರಿಡಾದ ಸ್ಥಳಗಳಲ್ಲಿ ವರದಿಗಾರಿಕೆಗೆ ತೆರಳಿರುವ NBC2 ಸುದ್ದಿವಾಹಿನಿಯ ಪತ್ರಕರ್ತೆ ಕೈಲಾ ಗೇಲರ್​ಳ ಟ್ವೀಟ್​ಗೆ​ ನೆಟ್ಟಿಗರು ತೀವ್ರ ಕುತೂಹಲ ವ್ಯಕ್ತಪಡಿಸಿದ್ದಾರೆ.

Hurricane : ‘ಮೈಕ್ರೋಫೋನಿಗೆ ಕಾಂಡೋಮ್​ ಹಾಕಿ ವರದಿ ಮಾಡುತ್ತಿದ್ದೇನೆ, ನಿಮ್ಮ ಊಹೆ ಸರಿ ಇದೆ’
ಮೈಕ್​ ಅನ್ನು ಮಳೆಯಿಂದ ರಕ್ಷಿಸಲು ಅದಕ್ಕೆ ಕಾಂಡೋಮ್ ಹಾಕಿರುವ ಪತ್ರಕರ್ತೆ
TV9 Web
| Edited By: |

Updated on:Oct 03, 2022 | 6:02 PM

Share

Viral : ಚಂಡಮಾರುತದಿಂದಾಗಿ ಫ್ಲೊರಿಡಾದ ನಿವಾಸಿಗಳ ಜನಜೀವನವು ಛಿದ್ರಗೊಂಡು ನಾಲ್ಕು ದಿನಗಳಾದರೂ ಇನ್ನೂ ಸಹಜ ಸ್ಥಿತಿಗೆ ಮರಳುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ನೂರಾರು ಜನರು ಮರಣವನ್ನಪ್ಪಿದ್ದಾರೆ. ಲಕ್ಷಾಂತರ ಜನರು ವಿದ್ಯುತ್​ ಮತ್ತು ಮೂಲಸೌಲಭ್ಯಗಳಿಲ್ಲದೆ ವ್ಯಾಪಾರೋದ್ಯಮವನ್ನು ಸ್ಥಗಿತಗೊಳಿಸಿ ಅತಂತ್ರರಾಗಿದ್ದಾರೆ. ಪರಿಸ್ಥಿತಿ ಇಷ್ಟು ಗಂಭೀರವಿರುವಾಗ ಪತ್ರಕರ್ತರಿಗಂತೂ ಎಡೆಬಿಡದ ಕೆಲಸ. ಪ್ರಕೃತಿವಿಕೋಪ ಉಂಟಾದ ಸ್ಥಳಗಳಲ್ಲಿ ವರದಿಗಾರಿಕೆ ಮಾಡುವುದೆಂದರೆ ಅದು ದೊಡ್ಡ ಸಾಹಸವೇ. ಕ್ಷಣಕ್ಷಣಕ್ಕೂ ಮೈಯೆಲ್ಲ ಕಣ್ಣಾಗಿರಬೇಕು. ಎದುರಾಗುವ ಅಡೆತಡೆಗಳನ್ನು ನಿರ್ಭಿಡೆಯಿಂದ, ಪ್ರಜ್ಞೆಯಿಂದ, ಚಾಣಾಕ್ಷತನದಿಂದ ನಿರ್ವಹಿಸಿ ಕರ್ತವ್ಯಕ್ಕೆ ತೊಡಕುಂಟಾಗದಂತೆ ನಿಭಾಯಿಸಬೇಕು.

ಇದೀಗ NBC2 ಸುದ್ದಿವಾಹಿನಿಯ ಪತ್ರಕರ್ತೆ ಕೈಲಾ ಗೇಲರ್ ಚಂಡಮಾರುತ ಅಪ್ಪಳಿಸಿದ ಸ್ಥಳಗಳಲ್ಲಿ ವರದಿಗಾರಿಕೆಗೆ ತೆರಳಿದ್ದಾರೆ. ಮಳೆಗಾಳಿಯಿಂದ ತಮ್ಮ ಮೈಕ್ರೋಫೋನ್​ ರಕ್ಷಿಸಿಕೊಳ್ಳಲು ಕಂಡುಕೊಂಡ ಉಪಾಯದಿಂದ ಇದೀಗ ಅವರು ಸುದ್ದಿಯಲ್ಲಿದ್ದಾರೆ. ಮೈಕ್ರೋಫೋನ್​ಗೆ ಕಾಂಡೋಮ್ ಹಾಕಿ ವರದಿಗಾರಿಕೆ ಮಾಡುತ್ತಿರುವ ಅವರ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

‘ನನ್ನ ಮೈಕ್ರೋಫೋನ್​ಗೆ ಹಾಕಿರುವುದು ಏನು ಎಂದು ಬಹಳಷ್ಟು ಜನ ಕುತೂಹಲದಿಂದ ಕೇಳುತ್ತಿದ್ದೀರಿ. ನೀವೇನು ಮನಸಿನಲ್ಲಿ ಯೋಚಿಸುತ್ತಿದ್ದೀರೋ ಅದು ಅದೇ ಆಗಿದೆ. ಹೌದು ಇದು ಕಾಂಡೋಮ್​. ಇಲ್ಲಿ ಎಡೆಬಿಡದೆ ಗಾಳಿ ಮಳೆ ಸುರಿಯುತ್ತಿದೆ. ಹಾಗಾಗಿ ಈ ಉಪಾಯವನ್ನು ಕಂಡುಕೊಂಡು ಕೆಲಸ ಮಾಡುತ್ತಿದ್ದೇನೆ’ ಎಂದಿದ್ದಾಳೆ.

ಈ ಟ್ವೀಟ್  66,000ಕ್ಕೂ ಹೆಚ್ಚು ಜನರನ್ನು ತಲುಪಿದೆ.

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 5:48 pm, Mon, 3 October 22

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ