AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hurricane : ‘ಮೈಕ್ರೋಫೋನಿಗೆ ಕಾಂಡೋಮ್​ ಹಾಕಿ ವರದಿ ಮಾಡುತ್ತಿದ್ದೇನೆ, ನಿಮ್ಮ ಊಹೆ ಸರಿ ಇದೆ’

Florida : ಇಯಾನ್​ ಚಂಡಮಾರುತದಿಂದ ತತ್ತರಿಸಿರುವ ಫ್ಲೊರಿಡಾದ ಸ್ಥಳಗಳಲ್ಲಿ ವರದಿಗಾರಿಕೆಗೆ ತೆರಳಿರುವ NBC2 ಸುದ್ದಿವಾಹಿನಿಯ ಪತ್ರಕರ್ತೆ ಕೈಲಾ ಗೇಲರ್​ಳ ಟ್ವೀಟ್​ಗೆ​ ನೆಟ್ಟಿಗರು ತೀವ್ರ ಕುತೂಹಲ ವ್ಯಕ್ತಪಡಿಸಿದ್ದಾರೆ.

Hurricane : ‘ಮೈಕ್ರೋಫೋನಿಗೆ ಕಾಂಡೋಮ್​ ಹಾಕಿ ವರದಿ ಮಾಡುತ್ತಿದ್ದೇನೆ, ನಿಮ್ಮ ಊಹೆ ಸರಿ ಇದೆ’
ಮೈಕ್​ ಅನ್ನು ಮಳೆಯಿಂದ ರಕ್ಷಿಸಲು ಅದಕ್ಕೆ ಕಾಂಡೋಮ್ ಹಾಕಿರುವ ಪತ್ರಕರ್ತೆ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Oct 03, 2022 | 6:02 PM

Viral : ಚಂಡಮಾರುತದಿಂದಾಗಿ ಫ್ಲೊರಿಡಾದ ನಿವಾಸಿಗಳ ಜನಜೀವನವು ಛಿದ್ರಗೊಂಡು ನಾಲ್ಕು ದಿನಗಳಾದರೂ ಇನ್ನೂ ಸಹಜ ಸ್ಥಿತಿಗೆ ಮರಳುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ನೂರಾರು ಜನರು ಮರಣವನ್ನಪ್ಪಿದ್ದಾರೆ. ಲಕ್ಷಾಂತರ ಜನರು ವಿದ್ಯುತ್​ ಮತ್ತು ಮೂಲಸೌಲಭ್ಯಗಳಿಲ್ಲದೆ ವ್ಯಾಪಾರೋದ್ಯಮವನ್ನು ಸ್ಥಗಿತಗೊಳಿಸಿ ಅತಂತ್ರರಾಗಿದ್ದಾರೆ. ಪರಿಸ್ಥಿತಿ ಇಷ್ಟು ಗಂಭೀರವಿರುವಾಗ ಪತ್ರಕರ್ತರಿಗಂತೂ ಎಡೆಬಿಡದ ಕೆಲಸ. ಪ್ರಕೃತಿವಿಕೋಪ ಉಂಟಾದ ಸ್ಥಳಗಳಲ್ಲಿ ವರದಿಗಾರಿಕೆ ಮಾಡುವುದೆಂದರೆ ಅದು ದೊಡ್ಡ ಸಾಹಸವೇ. ಕ್ಷಣಕ್ಷಣಕ್ಕೂ ಮೈಯೆಲ್ಲ ಕಣ್ಣಾಗಿರಬೇಕು. ಎದುರಾಗುವ ಅಡೆತಡೆಗಳನ್ನು ನಿರ್ಭಿಡೆಯಿಂದ, ಪ್ರಜ್ಞೆಯಿಂದ, ಚಾಣಾಕ್ಷತನದಿಂದ ನಿರ್ವಹಿಸಿ ಕರ್ತವ್ಯಕ್ಕೆ ತೊಡಕುಂಟಾಗದಂತೆ ನಿಭಾಯಿಸಬೇಕು.

ಇದೀಗ NBC2 ಸುದ್ದಿವಾಹಿನಿಯ ಪತ್ರಕರ್ತೆ ಕೈಲಾ ಗೇಲರ್ ಚಂಡಮಾರುತ ಅಪ್ಪಳಿಸಿದ ಸ್ಥಳಗಳಲ್ಲಿ ವರದಿಗಾರಿಕೆಗೆ ತೆರಳಿದ್ದಾರೆ. ಮಳೆಗಾಳಿಯಿಂದ ತಮ್ಮ ಮೈಕ್ರೋಫೋನ್​ ರಕ್ಷಿಸಿಕೊಳ್ಳಲು ಕಂಡುಕೊಂಡ ಉಪಾಯದಿಂದ ಇದೀಗ ಅವರು ಸುದ್ದಿಯಲ್ಲಿದ್ದಾರೆ. ಮೈಕ್ರೋಫೋನ್​ಗೆ ಕಾಂಡೋಮ್ ಹಾಕಿ ವರದಿಗಾರಿಕೆ ಮಾಡುತ್ತಿರುವ ಅವರ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

‘ನನ್ನ ಮೈಕ್ರೋಫೋನ್​ಗೆ ಹಾಕಿರುವುದು ಏನು ಎಂದು ಬಹಳಷ್ಟು ಜನ ಕುತೂಹಲದಿಂದ ಕೇಳುತ್ತಿದ್ದೀರಿ. ನೀವೇನು ಮನಸಿನಲ್ಲಿ ಯೋಚಿಸುತ್ತಿದ್ದೀರೋ ಅದು ಅದೇ ಆಗಿದೆ. ಹೌದು ಇದು ಕಾಂಡೋಮ್​. ಇಲ್ಲಿ ಎಡೆಬಿಡದೆ ಗಾಳಿ ಮಳೆ ಸುರಿಯುತ್ತಿದೆ. ಹಾಗಾಗಿ ಈ ಉಪಾಯವನ್ನು ಕಂಡುಕೊಂಡು ಕೆಲಸ ಮಾಡುತ್ತಿದ್ದೇನೆ’ ಎಂದಿದ್ದಾಳೆ.

ಈ ಟ್ವೀಟ್  66,000ಕ್ಕೂ ಹೆಚ್ಚು ಜನರನ್ನು ತಲುಪಿದೆ.

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 5:48 pm, Mon, 3 October 22

ಶಿವರಾಜಕುಮಾರ್ ಮತ್ತು ರಮ್ಯಾ ಸಹ ವಿಷಾದ ವ್ಯಕ್ತಪಡಿಸಬೇಕು: ಸಂತೋಷ್ ಹೆಗ್ಡೆ
ಶಿವರಾಜಕುಮಾರ್ ಮತ್ತು ರಮ್ಯಾ ಸಹ ವಿಷಾದ ವ್ಯಕ್ತಪಡಿಸಬೇಕು: ಸಂತೋಷ್ ಹೆಗ್ಡೆ
1 ತಿಂಗಳಲ್ಲಿ ಕೇದಾರನಾಥ ದೇವಾಲಯಕ್ಕೆ 6.5 ಲಕ್ಷ ಭಕ್ತರ ಭೇಟಿ
1 ತಿಂಗಳಲ್ಲಿ ಕೇದಾರನಾಥ ದೇವಾಲಯಕ್ಕೆ 6.5 ಲಕ್ಷ ಭಕ್ತರ ಭೇಟಿ
ಈಗಾಗಲೇ ಹತ್ತಕ್ಕೂ ಹೆಚ್ಚು ಕಡೆ ಕುಸಿದಿರುವ ಚಾರ್ಮಾಡಿ ಘಾಟ್
ಈಗಾಗಲೇ ಹತ್ತಕ್ಕೂ ಹೆಚ್ಚು ಕಡೆ ಕುಸಿದಿರುವ ಚಾರ್ಮಾಡಿ ಘಾಟ್
ಅಸ್ಸಾಂನ ಲಖಿಂಪುರದಲ್ಲಿ ಭಾರೀ ಪ್ರವಾಹ; 230 ಹಳ್ಳಿಗಳು ಮುಳುಗಡೆ
ಅಸ್ಸಾಂನ ಲಖಿಂಪುರದಲ್ಲಿ ಭಾರೀ ಪ್ರವಾಹ; 230 ಹಳ್ಳಿಗಳು ಮುಳುಗಡೆ
ವೀರಶೈವ ಸಮುದಾಯದ ಎಲ್ಲ ಉಪಪಂಗಡಗಳನ್ನು ಒಗ್ಗೂಡಿಸಬೇಕಿದೆ: ಪಾಟೀಲ್
ವೀರಶೈವ ಸಮುದಾಯದ ಎಲ್ಲ ಉಪಪಂಗಡಗಳನ್ನು ಒಗ್ಗೂಡಿಸಬೇಕಿದೆ: ಪಾಟೀಲ್
ಗುತ್ತಿಗೆದಾರನ ದ್ವಿಚಕ್ರವಾಹನ ಹಾಸನದ ಬಸ್​ ನಿಲ್ದಾಣದ ಬಳಿ ಪತ್ತೆ
ಗುತ್ತಿಗೆದಾರನ ದ್ವಿಚಕ್ರವಾಹನ ಹಾಸನದ ಬಸ್​ ನಿಲ್ದಾಣದ ಬಳಿ ಪತ್ತೆ
ಕೋಮು ನಿಗ್ರಹ ದಳ ರಚಿಸಿರುವುದು ಹಿಂದೂಗಳನ್ನು ಟಾರ್ಗೆಟ್ ಮಾಡಲು: ವಿಜಯೇಂದ್ರ
ಕೋಮು ನಿಗ್ರಹ ದಳ ರಚಿಸಿರುವುದು ಹಿಂದೂಗಳನ್ನು ಟಾರ್ಗೆಟ್ ಮಾಡಲು: ವಿಜಯೇಂದ್ರ
ಒಕ್ಕಲಿಗರ ಕೋಟೆಯಲ್ಲಿ ಲಿಂಗಾಯತ ಸಿಎಂ ಮಾತು: ಡಿಕೆಶಿ ಆಪ್ತನಿಂದಲೇ MB ಪಾಟೀಲ್
ಒಕ್ಕಲಿಗರ ಕೋಟೆಯಲ್ಲಿ ಲಿಂಗಾಯತ ಸಿಎಂ ಮಾತು: ಡಿಕೆಶಿ ಆಪ್ತನಿಂದಲೇ MB ಪಾಟೀಲ್
ಹೋರಿಗೆ ಕೇಕ್ ತಿನ್ನಿಸಿ ತಾನೂ ತಿಂದ ಮಾಜಿ ಸಚಿವ ರೇಣುಕಾಚಾರ್ಯ
ಹೋರಿಗೆ ಕೇಕ್ ತಿನ್ನಿಸಿ ತಾನೂ ತಿಂದ ಮಾಜಿ ಸಚಿವ ರೇಣುಕಾಚಾರ್ಯ
ಚಾರ್ಮಾಡಿ ಘಾಟಿ ಡೇಂಜರ್ ಡೇಂಜರ್ ಮತ್ತಷ್ಟು ಕುಸಿಯುವ ಆತಂಕ
ಚಾರ್ಮಾಡಿ ಘಾಟಿ ಡೇಂಜರ್ ಡೇಂಜರ್ ಮತ್ತಷ್ಟು ಕುಸಿಯುವ ಆತಂಕ