AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hurricane : ‘ಮೈಕ್ರೋಫೋನಿಗೆ ಕಾಂಡೋಮ್​ ಹಾಕಿ ವರದಿ ಮಾಡುತ್ತಿದ್ದೇನೆ, ನಿಮ್ಮ ಊಹೆ ಸರಿ ಇದೆ’

Florida : ಇಯಾನ್​ ಚಂಡಮಾರುತದಿಂದ ತತ್ತರಿಸಿರುವ ಫ್ಲೊರಿಡಾದ ಸ್ಥಳಗಳಲ್ಲಿ ವರದಿಗಾರಿಕೆಗೆ ತೆರಳಿರುವ NBC2 ಸುದ್ದಿವಾಹಿನಿಯ ಪತ್ರಕರ್ತೆ ಕೈಲಾ ಗೇಲರ್​ಳ ಟ್ವೀಟ್​ಗೆ​ ನೆಟ್ಟಿಗರು ತೀವ್ರ ಕುತೂಹಲ ವ್ಯಕ್ತಪಡಿಸಿದ್ದಾರೆ.

Hurricane : ‘ಮೈಕ್ರೋಫೋನಿಗೆ ಕಾಂಡೋಮ್​ ಹಾಕಿ ವರದಿ ಮಾಡುತ್ತಿದ್ದೇನೆ, ನಿಮ್ಮ ಊಹೆ ಸರಿ ಇದೆ’
ಮೈಕ್​ ಅನ್ನು ಮಳೆಯಿಂದ ರಕ್ಷಿಸಲು ಅದಕ್ಕೆ ಕಾಂಡೋಮ್ ಹಾಕಿರುವ ಪತ್ರಕರ್ತೆ
TV9 Web
| Updated By: ಶ್ರೀದೇವಿ ಕಳಸದ|

Updated on:Oct 03, 2022 | 6:02 PM

Share

Viral : ಚಂಡಮಾರುತದಿಂದಾಗಿ ಫ್ಲೊರಿಡಾದ ನಿವಾಸಿಗಳ ಜನಜೀವನವು ಛಿದ್ರಗೊಂಡು ನಾಲ್ಕು ದಿನಗಳಾದರೂ ಇನ್ನೂ ಸಹಜ ಸ್ಥಿತಿಗೆ ಮರಳುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ನೂರಾರು ಜನರು ಮರಣವನ್ನಪ್ಪಿದ್ದಾರೆ. ಲಕ್ಷಾಂತರ ಜನರು ವಿದ್ಯುತ್​ ಮತ್ತು ಮೂಲಸೌಲಭ್ಯಗಳಿಲ್ಲದೆ ವ್ಯಾಪಾರೋದ್ಯಮವನ್ನು ಸ್ಥಗಿತಗೊಳಿಸಿ ಅತಂತ್ರರಾಗಿದ್ದಾರೆ. ಪರಿಸ್ಥಿತಿ ಇಷ್ಟು ಗಂಭೀರವಿರುವಾಗ ಪತ್ರಕರ್ತರಿಗಂತೂ ಎಡೆಬಿಡದ ಕೆಲಸ. ಪ್ರಕೃತಿವಿಕೋಪ ಉಂಟಾದ ಸ್ಥಳಗಳಲ್ಲಿ ವರದಿಗಾರಿಕೆ ಮಾಡುವುದೆಂದರೆ ಅದು ದೊಡ್ಡ ಸಾಹಸವೇ. ಕ್ಷಣಕ್ಷಣಕ್ಕೂ ಮೈಯೆಲ್ಲ ಕಣ್ಣಾಗಿರಬೇಕು. ಎದುರಾಗುವ ಅಡೆತಡೆಗಳನ್ನು ನಿರ್ಭಿಡೆಯಿಂದ, ಪ್ರಜ್ಞೆಯಿಂದ, ಚಾಣಾಕ್ಷತನದಿಂದ ನಿರ್ವಹಿಸಿ ಕರ್ತವ್ಯಕ್ಕೆ ತೊಡಕುಂಟಾಗದಂತೆ ನಿಭಾಯಿಸಬೇಕು.

ಇದೀಗ NBC2 ಸುದ್ದಿವಾಹಿನಿಯ ಪತ್ರಕರ್ತೆ ಕೈಲಾ ಗೇಲರ್ ಚಂಡಮಾರುತ ಅಪ್ಪಳಿಸಿದ ಸ್ಥಳಗಳಲ್ಲಿ ವರದಿಗಾರಿಕೆಗೆ ತೆರಳಿದ್ದಾರೆ. ಮಳೆಗಾಳಿಯಿಂದ ತಮ್ಮ ಮೈಕ್ರೋಫೋನ್​ ರಕ್ಷಿಸಿಕೊಳ್ಳಲು ಕಂಡುಕೊಂಡ ಉಪಾಯದಿಂದ ಇದೀಗ ಅವರು ಸುದ್ದಿಯಲ್ಲಿದ್ದಾರೆ. ಮೈಕ್ರೋಫೋನ್​ಗೆ ಕಾಂಡೋಮ್ ಹಾಕಿ ವರದಿಗಾರಿಕೆ ಮಾಡುತ್ತಿರುವ ಅವರ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

‘ನನ್ನ ಮೈಕ್ರೋಫೋನ್​ಗೆ ಹಾಕಿರುವುದು ಏನು ಎಂದು ಬಹಳಷ್ಟು ಜನ ಕುತೂಹಲದಿಂದ ಕೇಳುತ್ತಿದ್ದೀರಿ. ನೀವೇನು ಮನಸಿನಲ್ಲಿ ಯೋಚಿಸುತ್ತಿದ್ದೀರೋ ಅದು ಅದೇ ಆಗಿದೆ. ಹೌದು ಇದು ಕಾಂಡೋಮ್​. ಇಲ್ಲಿ ಎಡೆಬಿಡದೆ ಗಾಳಿ ಮಳೆ ಸುರಿಯುತ್ತಿದೆ. ಹಾಗಾಗಿ ಈ ಉಪಾಯವನ್ನು ಕಂಡುಕೊಂಡು ಕೆಲಸ ಮಾಡುತ್ತಿದ್ದೇನೆ’ ಎಂದಿದ್ದಾಳೆ.

ಈ ಟ್ವೀಟ್  66,000ಕ್ಕೂ ಹೆಚ್ಚು ಜನರನ್ನು ತಲುಪಿದೆ.

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 5:48 pm, Mon, 3 October 22

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!