Viral Video: ಈ ಶ್ವಾನದ ದೇಶಪ್ರೇಮ ನೋಡಿ, ಇದು ಭಾರತೀಯರಿಗೆ ಹೆಮ್ಮೆಯ ವಿಚಾರ

ಪ್ರಾಣಿಗಳು ಭಾವನೆಗೆ ಬೆಲೆ ಕೊಡುತ್ತದೆ ನಿಜ. ಆದರೆ ಅವುಗಳಿಗೆ ದೇಶ ಪ್ರೇಮದ ಬಗ್ಗೆ ಅರಿವಿರಬಹುದುದಾ ಎಂಬ ಪ್ರಶ್ನೆ ಮೂಡಬಹುದು. ಈ ವೈರಲ್ ಆಗಿರುವ ವಿಡಿಯೊವನ್ನು ನೋಡಿದರೆ ಪ್ರಾಣಿಗಳ ದೇಶ ಪ್ರೇಮದ ಬಗ್ಗೆ ನೀವು ಕೂಡಾ ಹೆಮ್ಮೆ ಪಡುತ್ತೀರಾ.

Viral Video: ಈ ಶ್ವಾನದ ದೇಶಪ್ರೇಮ ನೋಡಿ, ಇದು ಭಾರತೀಯರಿಗೆ ಹೆಮ್ಮೆಯ ವಿಚಾರ
ಶ್ವಾನ ವೈರಲ್ ವಿಡಿಯೊ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 02, 2023 | 6:07 PM

ಶ್ವಾನವೊಂದು ಭಾರತದ ಮ್ಯಾಪ್ ಬಳಿ ಬಂದು ತನ್ನೆರಡು ಕಾಲುಗಳನ್ನು ಎತ್ತಿ ತಾಯಿ ಭಾರತಿಗೆ ನಮಿಸುವ ವಿಡಿಯೊ ವೈರಲ್ ಆಗಿದೆ. ನಮ್ಮ ದೇಶ ಎಂದಾಕ್ಷಣ ನಮಗೆಲ್ಲರಿಗೂ ಅದೇನೋ ಹೆಮ್ಮೆ. ಗರ್ವದಿಂದ ನಾವು ಭಾರತೀಯರು ಎಂದು ಹೇಳಿಕೊಳ್ಳುತ್ತೇವೆ. ಈ ದೇಶಕ್ಕೆ ಏನಾದರೂ ಸಂಕಟದ ಕ್ಷಣ ಬಂದಾಗ ಇದು ನಮ್ಮ ಸ್ವಂತ ನೋವೆನ್ನುವಷ್ಟು ನೋವು ಅನುಭವಿಸುತ್ತೇವೆ. ಅದೇ ರೀತಿ ದೇಶಕ್ಕೆ ಹೆಮ್ಮೆ ತರುವಂತಹ ಯಾವುದೇ ಶುಭ ಗಳಿಗೆಗಳು ಬಂದಾಗ, ನಮ್ಮ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಅಷ್ಟೊಂದು ಖುಷಿ ಪಡುತ್ತೇವೆ. ದೇಶದ ಬಗ್ಗೆ ಒಂದು ಸಣ್ಣ ವಿಷಯವನ್ನು ಕೇಳಿದರೂ ನಮ್ಮ ಮನಸ್ಸಿನೊಳಗೆ ಏನೋ ರೋಮಾಂಚನಕಾರಿ ಅನುಭವವಾದಂತೆ ಆಗುತ್ತದೆ. ತಾಯಿ, ತಾಯ್ನಡು ಅಂದರೆ ಎಲ್ಲರಿಗೂ ಪ್ರೀತಿ, ಗೌರವ ತುಸು ಹೆಚ್ಚೇ ಇರುತ್ತದೆ. ನಾವು ಅಂದುಕೊಳ್ಳುತ್ತೇವೆ, ಮನುಷ್ಯನಾದವನಿಗೆ ಮಾತ್ರ ಭಾವನೆಗಳಿರುತ್ತದೆ, ಅವನಿಗೆ ಅತೀವ ದೇಶಪ್ರೇಮವಿರುತ್ತದೆ ಎಂದು. ಆದರೆ ನಮ್ಮ ಈ ಊಹೆ ತಪ್ಪು. ಮನುಷ್ಯನಿಗಿಂತ ಪ್ರಾಣಿಗಳೇ ಭಾವನೆಗಳಿಗೆ ಸ್ಪಂದಿಸುತ್ತವೆ ಅದೇ ರೀತಿ ನಿಷ್ಕಲ್ಮಷ ಪ್ರೀತಿಯನ್ನು ತೋರುತ್ತದೆ.

ಈ ಪ್ರಾಣಿಗಳು ಭಾವನೆಗೆ ಬೆಲೆ ಕೊಡುತ್ತದೆ ನಿಜ. ಆದರೆ ಅವುಗಳಿಗೆ ದೇಶ ಪ್ರೇಮದ ಬಗ್ಗೆ ಅರಿವಿರಬಹುದುದಾ ಎಂಬ ಪ್ರಶ್ನೆ ಮೂಡಬಹುದು. ಈ ವೈರಲ್ ಆಗಿರುವ ವಿಡಿಯೊವನ್ನು ನೋಡಿದರೆ ಪ್ರಾಣಿಗಳ ದೇಶ ಪ್ರೇಮದ ಬಗ್ಗೆ ನೀವು ಕೂಡಾ ಹೆಮ್ಮೆ ಪಡುತ್ತೀರಾ. ಇನ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ಶ್ವಾನದ ದೇಶಪ್ರೆಮದ ವಿಡಿಯೊದಲ್ಲಿ, ಯಾವುದೋ ಒಂದು ಕಾರ್ಯಕ್ರಮವೊಂದರಲ್ಲಿ ಒಂದಷ್ಟು ಸೇನಾ ಶ್ವಾನಗಳಿದ್ದವು. ಹಾಗೇನೆ ಅಲ್ಲಿ ಭಾರತ, ಜರ್ಮನಿ, ಪಾಕಿಸ್ತಾನ ಹೀಗೆ ಬೇರೆ ಬೇರೆ ದೇಶದ ಮ್ಯಾಪ್‌ನನ್ನು ಇಟ್ಟಿದ್ದರು. ಅಲ್ಲಿಗೆ ಬಿಳಿ ಶ್ವಾನವೊಂದನ್ನು ಕರೆದುಕೊಂಡು ಬರಲಾಯಿತು. ಅದು ಬೇರೆಲ್ಲಾ ದೇಶಗಳ ಮ್ಯಾಪ್ ಬಳಿ ಕಣ್ಣಾಡಿಸಿ ಹೋಗಿ ನಂತರ ಭಾರತದ ಮ್ಯಾಪ್ ಬಳಿ ಬಂದು ಕುಳಿತು ತನ್ನೆರಡು ಕಾಲುಗಳನ್ನೆತ್ತಿ ಭಾರತ ಮಾತೆಗೆ ಗೌರವವನ್ನು ಸಮರ್ಪಿಸುತ್ತದೆ. ಮಾತು ಬರದ ಮುಗ್ಧ ಶ್ವಾನದ ದೇಶ ಪ್ರೇಮದ ಈ ರೋಮಾಂಚನಕಾರಿ ವೀಡಿಯೋ ನಮ್ಮನ್ನು ಭಾವುಕರನ್ನಾಗಿ ಮಾಡುತ್ತದೆ.

ಇದನ್ನೂ ಓದಿ: Viral Video: ಅಬ್ಬಬ್ಬಾ… ಹೆಡೆ ಎತ್ತಿ ನಿಂತ ಕಾಳಿಂಗ ಸರ್ಪದ ಭಯಾನಕ ವಿಡಿಯೊ ಇಲ್ಲಿದೆ ನೋಡಿ

ನೆಟ್ಟಿಗರ ಮನಸ್ಸು ಗೆದ್ದಿರುವ ಈ ಅದ್ಭುತವಾದ ವೀಡಿಯೋ 16.2 ಮಿಲಿಯನ್ ವೀಕ್ಷಣೆಯನ್ನು ಪಡೆದುಕೊಂಡಿದೆ. ಹಾಗೂ 3.8 ಮಿಲಿಯನ್ ಲೈಕ್ಸ್ ಹಾಗೂ ಸುಮಾರು 12 ಸಾವಿರದಷ್ಟು ಲೈಕ್ಸ್​ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾದರು ಪ್ರೌಡ್ ಆಫ್ ಇಂಡಿಯಾ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಅನೇಕರು ಜೈ ಹಿಂದ್ ಎಂದು ಕಮೆಂಟ್ ಮಾಡಿದ್ದಾರೆ.

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್