AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿಡ್ನ್ಯಾಪರ್ ಬಂದಿದ್ದಾರೆ ಎಚ್ಚರ; ಸಿಂಹದಮರಿಯನ್ನು ಅಪಹರಿಸಿದ ಕೋತಿ

Kidnapping : ಸಿಂಹಗಳ ಅಪ್ಪ ಅಮ್ಮ ದಣಿದಿರಬೇಕು. ಮರಿಗಳನ್ನು ಕೋತಿಗಳು ಆಟವಾಡಿಸುತ್ತಿವೆ ಎಂದಿದ್ದಾರೆ ಒಬ್ಬರು. ಪ್ರಾಣಿಗಳ ಈ ಗುಣ ಮನುಷ್ಯರಲ್ಲಿ ಇಲ್ಲವಾಗಿ ಹೋಯಿತಲ್ಲ ಎಂದು ಬೇಸರಿಸಿಕೊಂಡಿದ್ದಾರೆ ಇನ್ನೊಬ್ಬರು.

ಕಿಡ್ನ್ಯಾಪರ್ ಬಂದಿದ್ದಾರೆ ಎಚ್ಚರ; ಸಿಂಹದಮರಿಯನ್ನು ಅಪಹರಿಸಿದ ಕೋತಿ
Monkeys Kidnap Lion Cubs Remind Netizens Of Lion King
TV9 Web
| Edited By: ಶ್ರೀದೇವಿ ಕಳಸದ|

Updated on: Nov 12, 2022 | 11:56 AM

Share

Viral Video : ಈ ಕೋತಿಗಳಿಗೆ ಸಿಂಹಗಳ ಮೇಲೆ ಕೋಪ ಬಂದಿದೆಯೋ, ಅಥವಾ ಈ ಸಿಂಹದ ಮರಿಯ ಮೇಲೆ ಮುದ್ದು ಬಂದಿದೆಯೋ ಗೊತ್ತಿಲ್ಲ. ಅಂತೂ ಈ ಎರಡೂ ಮಂಗಗಳು ಈ ಮರಿಯನ್ನು ಎತ್ತಿಕೊಂಡು ಸರಸರನೇ ಮರ ಏರಿ ಕುಳಿತುಬಿಟ್ಟಿವೆ. ಯಾಕೆ ಹೀಗೆ ಮಾಡಿದವು ಎನ್ನುವುದನ್ನು ಯೋಚಿಸುತ್ತ ನೆಟ್ಟಿಗರು ತಲೆಯಿಂದ ಕೈಬರಳನ್ನೇ ತೆಗೆಯುತ್ತಿಲ್ಲ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ನೋಡಲು ತುಸು ವಿಚಿತ್ರವಾದ ವಿಡಿಯೋ ಇದು. ವೈರಲ್ ಆಗುತ್ತಿರುವ ಈ ವಿಡಿಯೋ ನೋಡುತ್ತಿರುವ ನೆಟ್ಟಿಗರು ಲಯನ್​ ಕಿಂಗ್​ ಸಿನೆಮಾದ ದೃಶ್ಯವನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಆದರೆ ಮರಿ ಇದೆ ಎಂದಮೇಲೆ ಅದರ ಅಪ್ಪನೋ ಅಮ್ಮನ ಇರಬೇಕಲ್ಲ ಸುತ್ತಮುತ್ತಲೂ? ಅವುಗಳು ಕಾಣುತ್ತಿಲ್ಲ. ಹಾಗಿದ್ದರೆ ಹೇಗೆ ಎಲ್ಲಿಂದ ಹೀಗೆ ಹಾರಿಸಿಕೊಂಡು ಬಂದಿವೆ ಈ ಕೋತಿಗಳು? ಹೇಳಿಕೇಳಿ ಕೋತಿ, ಎಗರುವುದೇ ಜನ್ಮಸಿದ್ಧ ಹಕ್ಕು. ಎಗರುವುದನ್ನೇ ನೆಚ್ಚಿಕೊಂಡಿರುವವರಿಂದ ಸತ್ಯ ಕಂಡುಕೊಳ್ಳಲು ಸಾದ್ಯವೇ? ಇಷ್ಟೇ ಇಷ್ಟು ಸಣ್ಣ ಕ್ಲಿಪ್​ ಇದು. ಎಂಥಾ ಸಂದಿಗ್ಧಕ್ಕೆ ತಳ್ಳಿದೆಯಲ್ಲವೆ?

ಆದರೆ ನೆಟ್ಟಿಗರು ಮಾತ್ರ ಬಹಳ ಸೂಕ್ಷ್ಮವಾಗಿ ಈ ಬಗ್ಗೆ ಪ್ರತಿಕ್ರಿಯಿಸುತ್ತಿದ್ದಾರೆ. ಸಿಂಹಗಳ ಅಪ್ಪ ಅಮ್ಮ ದಣಿದಿರಬೇಕು. ಮರಿಗಳನ್ನು ಕೋತಿಗಳು ಆಟವಾಡಿಸುತ್ತಿವೆ ಎಂದಿದ್ದಾರೆ ಒಬ್ಬರು. ಪ್ರಾಣಿಗಳ ಈ ಗುಣ ಮನುಷ್ಯರಲ್ಲಿ ಇಲ್ಲವಾಗಿ ಹೋಯಿತಲ್ಲ ಎಂದು ಬೇಸರಿಸಿಕೊಂಡಿದ್ದಾರೆ ಇನ್ನೊಬ್ಬರು.

ಆದರೆ, ಎಷ್ಟು ಕಾಳಜಿಯಿಂದ ತಮ್ಮದೇ ಮರಿಯೆಂಬಂತೆ ಹಿಡಿದುಕೊಂಡು ಓಡಾಡುತ್ತಿವೆ ನೋಡಿ ಕೋತಿಗಳು.  ಮರಿಸಿಂಹವೂ ಸುಮ್ಮನೆ ತೆಕ್ಕೆಯೊಳಗೆ ಕುಳಿತಿದೆ.

ಏನನ್ನಿಸುತ್ತಿದೆ ಈ ವಿಡಿಯೋ ನೋಡಿದ ನಿಮಗೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Follow Us
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ