AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೇಗಿದೆ ಈ ಮುಟ್ಟುವ ಆಟ? ಮಗುವಿನೊಂದಿಗೆ ಆಟಕ್ಕೆಬಿದ್ದ ಈ ಸಿಂಹಿಣಿ

Lioness Playing with Kid : ಮಗುವಿಗೂ ಮುಟ್ಟಬೇಕು ಎನ್ನಿಸುತ್ತಿದೆ, ಅತ್ತ ಸಿಂಹಿಣಿಗೂ. ಪರಸ್ಪರ ಮುಟ್ಟಲು ನೋಡುತ್ತ ಅದೊಂದು ಬಗೆಯ ಆಟವಾಗಿ ಮಾರ್ಪಟ್ಟಿದೆ. ತಾನೊಂದು ವನ್ಯಮೃಗ ಎನ್ನುವುದನ್ನೇ ಈ ಸಿಂಹಿಣಿ ಮರೆತಂತಿದೆ.

ಹೇಗಿದೆ ಈ ಮುಟ್ಟುವ ಆಟ? ಮಗುವಿನೊಂದಿಗೆ ಆಟಕ್ಕೆಬಿದ್ದ ಈ ಸಿಂಹಿಣಿ
Little Girl Plays With Lioness Through Glass Window Viral Video
TV9 Web
| Edited By: |

Updated on:Oct 20, 2022 | 5:50 PM

Share

Viral Video : ಈ ಮಗುವಿಗೆ ಸಿಂಹಿಣಿಯೊಂದಿಗೆ ಆಟವಾಡಬೇಕು ಎನ್ನಿಸಿದೆ. ಓಡೋಡಿ ಹೋಗಿ ಅದನ್ನು ಮುಟ್ಟಲು ನೋಡಿದೆ. ಅತ್ತ ಕಡೆಯಿಂದ ಆ ಸಿಂಹಿಣಿಗೂ ಮಗುವನ್ನು ನೋಡಿ ಆಟವಾಡಬೇಕೆನ್ನಿಸಿ ಮುಟ್ಟಲು ನೋಡಿದೆ. ಸತತವಾಗಿ ಇಬ್ಬರೂ ಪರಸ್ಪರ ಮುಟ್ಟಲು ನೋಡುತ್ತಿದ್ದಾರೆ. ಇಬ್ಬರೂ ಸಿಕ್ಕಾಪಟ್ಟೆ ಆಟದ ಮೂಡ್​​ನಲ್ಲಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ. ಅಬ್ಬಾ! ಸದ್ಯ ಇವರಿಬ್ಬರ ಮಧ್ಯೆ ಗಾಜು ಇದೆಯಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದಾರೆ ನೆಟ್ಟಿಗರು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ವಿಡಿಯೋ ಅನ್ನು ಸುಮಾರು 19.2 ಮಿಲಿಯನ್ ಜನರು ನೋಡಿದ್ದಾರೆ. 1.4 ಮಿಲಿಯನ್ ಜನರು ಇಷ್ಟಪಟ್ಟಿದ್ದಾರೆ. ಅಬ್ಬಾ ಎಂಥಾ ಧೈರ್ಯ ಈ ಪುಟ್ಟಮಗುವಿಗೆ ಎಂದು ನೆಟ್ಟಿಗರು ಅಚ್ಚರಿಪಡುತ್ತಿದ್ದಾರೆ. ಆದರೆ ಮಕ್ಕಳಲ್ಲಿ ನಾವು ತುಂಬಿದರೆ ಮಾತ್ರ ಭಯ! ಇಲ್ಲವಾದಲ್ಲಿ ಇಲ್ಲ. ಎಲ್ಲ ಭಾವಗಳನ್ನು ನಾವು ನಮ್ಮ ಹಾವಭಾವ, ನೋಟ, ಮಾತು, ಸನ್ನೆಯಿಂದಲೇ ಮಕ್ಕಳಿಗೆ ತುಂಬುತ್ತೇವೆ. ಅಲ್ಲೀತನಕ ಅವು ತಮ್ಮ ಪಾಡಿಗೆ ದೇವರಂತಿರುತ್ತವೆ.

ಆದರೂ ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ‘ದಯವಿಟ್ಟು ಎಚ್ಚರವಹಿಸಿ ಪುಟ್ಟಮಗು ಅದು. ಮೊದಲೇ ಅಪಾಯಕಾರಿ ಮೃಗ ಅದು’ ಎಂದು ಒಬ್ಬರು ಕಾಳಜಿಯಿಂದ ಪ್ರತಿಕ್ರಿಯಿಸಿದ್ದಾರೆ. ‘ಸಿಂಹಿಣಿ ಕೈ ಎತ್ತಿದಾಗೊಮ್ಮೆ ಮಗು ಆಹಾಹಾ ಎಂದು ನಗುವುದು ಎಂಥ ಮುದ್ದಾಗಿದೆ’ ಎಂದಿದ್ದಾರೆ ಮತ್ತೊಬ್ಬರು. ‘ಮಗು ಏನಾದರೂ ತಿಂಡಿ ಕೊಡುತ್ತದೆಯಾ ಎಂದು ಕಾಯುತ್ತಿದೆ’ ಎಂದಿದ್ದಾರೆ ಮಗದೊಬ್ಬರು.

ಸಿಂಹಿಣಿಯನ್ನ ನೋಡುತ್ತಿದ್ದರೆ ಅದರ ಮುಖದಲ್ಲಿ ಉಗ್ರತೆ ಕಾಣುತ್ತಿಲ್ಲ. ಮಗುವಿನೊಂದಿಗೆ ಮಗುವಿನಂತೆ ಆಡುತ್ತಿದೆ ಎನ್ನಿಸುತ್ತಿಲ್ಲವೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:43 pm, Thu, 20 October 22

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ