Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನ್ನ ಅಮ್ಮನೇ ಅಪ್ಪನಿಗೆ ಕಿಡ್ನಿ ದಾನ ಮಾಡಿದರು, ಇದೊಂದು ಸುಂದರ ಪ್ರೇಮಕಥೆಯಂತೆ ಭಾಸವಾಗುತ್ತಿದೆ’

Wife donated kidney to husband : ‘ನನ್ನ ಅಪ್ಪ 98 ಸಲ ಡಯಾಲಿಸಿಸ್​ಗೆ ಒಳಗಾದರು. ಪ್ರತೀ ಸಲ ಅಮ್ಮ ಅವರೊಂದಿಗೆ ಸುಮಾರು 5 ತಾಸುಗಳ ತನಕ ಇರಬೇಕಾಗುತ್ತಿತ್ತು. ಅವರನ್ನು ಉಳಿಸಿಕೊಳ್ಳಲೇಬೇಕೆಂದು ಅಮ್ಮ ಈ ನಿರ್ಧಾರಕ್ಕೆ ಬಂದರು.

‘ನನ್ನ ಅಮ್ಮನೇ ಅಪ್ಪನಿಗೆ ಕಿಡ್ನಿ ದಾನ ಮಾಡಿದರು, ಇದೊಂದು ಸುಂದರ ಪ್ರೇಮಕಥೆಯಂತೆ ಭಾಸವಾಗುತ್ತಿದೆ’
ಲಿಯೋ ಅವರ ಅಮ್ಮ, ಅಪ್ಪ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Oct 21, 2022 | 10:31 AM

Trending : ರಕ್ತದಾನಂದಂತೆ ಅಂಗದಾನವೂ ಶ್ರೇಷ್ಠ. ಏಕೆಂದರೆ ಇದು ಇನ್ನೊಬ್ಬರ ಜೀವವನ್ನು ಉಳಿಸುತ್ತದೆ. ಅಪರಿಚಿತರಿಗೆ ಅಂಗದಾನ ಮಾಡುವುದು ಒಂದು ರೀತಿಯಾದರೆ ನಿಮ್ಮೊಂದಿಗಿರುವವರಿಗೆ ಅಂಗದಾನ ಮಾಡುವುದು ಇನ್ನೊಂದು ರೀತಿಯದು. ಈಗಿಲ್ಲಿ ವೈರಲ್ ಆಗಿರುವ ಈ ಟ್ವಿಟರ್​ ಪೋಸ್ಟ್ ನೋಡಿ. ಸಾಕಷ್ಟು ಸಲ ಡಯಾಲಿಸಿಸ್​ಗೆ ಒಳಗಾದ ನಂತರ ತನ್ನ ಗಂಡನ ಜೀವ ಉಳಿಸಲು ಹೆಂಡತಿಯೇ ತನ್ನ ಕಿಡ್ನಿ ದಾನ ಮಾಡಿದ ಕಥೆಯನ್ನು ಇದು ಹೇಳುತ್ತದೆ. ‘ನನ್ನ ತಂದೆಯನ್ನು ಉಳಿಸಲು ನನ್ನ ತಾಯಿ ದೊಡ್ಡ ಸಹಾಯ ಮಾಡಿದರು.  ಇವರಿಬ್ಬರ ಮಧ್ಯೆ ಇರುವ ಪ್ರೀತಿ ಮತ್ತು ಅನುಬಂಧ ಬಹಳ ದೊಡ್ಡದು’ ಎಂದು ಅವರ ಮಗ ಟ್ವಿಟರ್ ಪೋಸ್ಟ್​ನಲ್ಲಿ ಹಂಚಿಕೊಂಡಿದ್ದಾನೆ. ನೆಟ್ಟಿಗರು ಈ ಹೃದಯಸ್ಪರ್ಶಿಯಾದ ಕಥೆಯನ್ನು ಓದಿ ಟ್ವೀಟಿಸುತ್ತಿದ್ದಾರೆ.

ನನ್ನ ಅಪ್ಪ ಡಯಾಲಿಸಿಸ್​ಗೆ ಒಳಗಾಗುವಾಗೆಲ್ಲ ನನ್ನ ಅಮ್ಮ ಅವರಿಗಾಗಿ ಸುಮಾರು 5 ತಾಸಿನತನಕ ಕಾಯ್ದುಕೊಂಡೇ ಇರುತ್ತಿದ್ದರು. ವಾರದಲ್ಲಿ 3 ದಿನ ಅವರಿಗೆ ಡಯಾಲಿಸಿಸ್ ಮಾಡುತ್ತಿದ್ದರು. ಈತನಕ ನನ್ನ ಅಪ್ಪ 98 ಸಲ ಡಯಾಲಿಸಿಸ್​ ಸೆಷನ್​ ಮಾಡಿಸಿಕೊಂಡಿದ್ದಾರೆ. ಕೊನೆಗೆ ಅವರನ್ನು ಹೇಗಾದರೂ ಉಳಿಸಿಕೊಳ್ಳಲೇಬೇಕು ಎಂದು ನಿರ್ಧಾರ ಮಾಡಿದ ಅಮ್ಮ ತನ್ನ ಒಂದು ಕಿಡ್ನಿಯನ್ನು ಅಪ್ಪನಿಗೆ ದಾನ ಮಾಡಿದರು. ಈಗ ಇಬ್ಬರೂ ಆರಾಮಾಗಿ ಸಂತೋಷದಿಂದ ಇದ್ದಾರೆ. ನನಗಿದೊಂದು ಸುಂದರವಾದ ಪ್ರೇಮಕಥೆಯಂತೆ ಕಾಣುತ್ತಿದೆ ಎಂದಿದ್ದಾರೆ ಅವರ ಮಗ ಲಿಯೋ.

ಈತನ ಈ ಪೋಸ್ಟ್​ 1,200 ಜನರ ಮೆಚ್ಚುಗೆಗೆ ಒಳಗಾಗಿದೆ. 95 ಜನರು ರೀಟ್ವೀಟ್​ ಮಾಡಿದ್ದಾರೆ. ಒಂದಿಷ್ಟು ಜನ ಪ್ರತಿಕ್ರಿಯಿಸಿದ್ದಾರೆ. ‘ನಿಜಕ್ಕೂ ಇದನ್ನು ಓದಿ ನನಗೆ ಬಹಳ ಖುಷಿಯಾಗುತ್ತಿದೆ. ನನ್ನ ತಂದೆ ನನ್ನ ತಾಯಿಗೆ ಕಿಡ್ನಿ ದಾನ ಮಾಡಿದ್ದಾರೆ’ ಎಂದು ತಮ್ಮ ಅಪ್ಪ-ಅಮ್ಮನ ಕಥೆಯನ್ನು ಹೇಳಿಕೊಂಡಿದ್ದಾರೆ ಒಬ್ಬರು. ‘ನಿಮ್ಮ ಅಪ್ಪ ಅಮ್ಮನಿಗೆ ಒಳ್ಳೆಯದಾಗಲಿ’ ಎಂದು ಹಾರೈಸಿದ್ದಾರೆ ಇನ್ನೂ ಒಬ್ಬರು. ‘ಎಂಥ ಅದ್ಭುತ! ನಿಮ್ಮ ಅಪ್ಪಅಮ್ಮ ಸುಖದಿಂದ ಬಾಳಲಿ. ಅವರ ಬಗ್ಗೆ ನೀವು ಇಲ್ಲಿ ಹಂಚಿಕೊಂಡಿರುವುದು ಒಳ್ಳೆಯದಾಯಿತು’ ಎಂದಿದ್ದಾರೆ ಮಗದೊಬ್ಬರು. ‘ನಿಮ್ಮ ತಂದೆ-ತಾಯಿ ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ವಿಷಯ ತಿಳಿದು ಅತ್ಯಂತ ಸಂತಸವಾಯಿತು’ ಎಂದಿದ್ದಾರೆ ಮತ್ತೊಬ್ಬರು.

ಇನ್ನು ಮುಗಿದೇ ಹೋಯಿತು ಎನ್ನುವ ಸಂದರ್ಭಕ್ಕೆ ತಿರುವು ಸಿಗುವುದು ನಮ್ಮ ಗಟ್ಟಿ ಮನಸ್ಸು, ಪ್ರೀತಿ ಮತ್ತು ಪ್ರಯತ್ನದಿಂದ.

ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:26 am, Fri, 21 October 22

Daily Devotional: ಬಾಳೆ ಗಿಡವನ್ನ ಮನೆ ಆವರಣದಲ್ಲಿ ಬೆಳೆಸಬಹುದಾ
Daily Devotional: ಬಾಳೆ ಗಿಡವನ್ನ ಮನೆ ಆವರಣದಲ್ಲಿ ಬೆಳೆಸಬಹುದಾ
ರವಿ ಕುಂಭ, ಚಂದ್ರ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ರವಿ ಕುಂಭ, ಚಂದ್ರ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!