‘ಟೋಲ್​ ಕಟ್ಟಿ’ ಆನೆಗಳ ಸಿಹಿಯಾದ ವಿನಂತಿ, ಶರಣಾದ ಸಹೃದಯಿ ಡ್ರೈವರ್

Toll Tax : ಆನೆಗಳ ದಾರಿಗೆ ಅಡ್ಡಬಂದವರೇ ನಿಲ್ಲಬೇಕು. ಬಂದಿದ್ದಕ್ಕೆ ಅವರು ಹೀಗೆ ಟ್ಯಾಕ್ಸ್​ ವಸೂಲಿ ಮಾಡಿಯೇ ಕಳಿಸುವುದು. ಅದರಲ್ಲೂ ಅವರಿಗೆ ಪ್ರಿಯವಾದ ಆಹಾರವಿದ್ದರೆ ಕೇಳಿಯಾರೇ? ನೋಡಿ ಈ ವಿಡಿಯೋ.

‘ಟೋಲ್​ ಕಟ್ಟಿ’ ಆನೆಗಳ ಸಿಹಿಯಾದ ವಿನಂತಿ, ಶರಣಾದ ಸಹೃದಯಿ ಡ್ರೈವರ್
Elephants stop truck carrying sugarcane to take toll tax
Follow us
| Updated By: ಶ್ರೀದೇವಿ ಕಳಸದ

Updated on:Oct 21, 2022 | 12:14 PM

Viral Video : ಒಂದೂರಿನಿಂದ ಇನ್ನೊಂದೂರಿಗೆ ಅಥವಾ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೋಗುವಾಗ ಟೋಲ್​ಗಳಲ್ಲಿ ನಿಗದಿತ ತೆರಿಗೆಯನ್ನು ಪ್ರತಿಯೊಬ್ಬ ಪ್ರಯಾಣಿಕರೂ ಕಟ್ಟಬೇಕಿರುವುದು ನಿಯಮ. ಅದರಲ್ಲೂ ಸರಕು ಸಾಗಣೆ ಸಂಬಂಧಿಸಿದ ವಾಹನ ಮತ್ತು ಟ್ರಕ್​ಗಳು ಸ್ವಲ್ಪ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. ಈ ಎಲ್ಲ ವ್ಯವಸ್ಥೆಯನ್ನು ನಿರ್ವಹಿಸಲು ನಿರ್ವಹಿಸಲು ಸುಸಜ್ಜಿತವಾದ ಸಿಬ್ಬಂದಿಯನ್ನು ಪ್ರತೀ ಟೋಲ್​ಗಳಲ್ಲಿಯೂ ನೇಮಿಸಲಾಗಿರುತ್ತದೆ. ಆದರೆ ಇದೀವ ವೈರಲ್ ಆಗಿರುವ ಈ ವಿಡಿಯೋದಲ್ಲಿ ಆನೆಗಳು ಸ್ವಯಂನೇಮಕಗೊಂಡಿವೆ. ತಮಗೆ ಬೇಕಾದ ಸಿಹಿಯಾದ ಟೋಲ್​ ಅನ್ನು ತಾವಾಗಿಯೇ ಸಂಗ್ರಹಿಸಿಕೊಳ್ಳುತ್ತಿವೆ.

ಐಎಫ್​ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. ಆನೆಗಳ ದಾರಿಯಲ್ಲಿ ಈ ಕಬ್ಬಿನ ಟ್ರಕ್​ ಅಡ್ಡಬಂದಿದೆ. ಕಬ್ಬು ಮೊದಲೇ ಆನೆಗಳಿಗೆ ಪ್ರಿಯವಾದ ಆಹಾರ. ಸುಮ್ಮನೆ ಬಿಟ್ಟಾವೆಯೇ!? ಅಡ್ಡಗಟ್ಟಿ ಕಬ್ಬನ್ನು ಹಿರಿದೆಳೆದು ಮನಸಾ ತಿಂದಿವೆ. ಅಂತೂ ಹೀಗೆ ಟೋಲ್​ ತೆರಿಗೆಯನ್ನು ಸಂಗ್ರಹಿಸುವಲ್ಲಿ ಆನೆಗಳು ಯಶಸ್ವಿಯಾಗಿವೆ.

ಈ ತನಕ ಈ ವಿಡಿಯೋ ಅನ್ನು ಸುಮಾರು 74,000 ಜನರು ನೋಡಿದ್ದಾರೆ. 3,300 ಜನರು ಇಷ್ಟಪಟ್ಟಿದ್ದಾರೆ. ‘ಲಾರಿ ಡ್ರೈವರ್​ ಸಹೃದಯಿಯಾಗಿದ್ದಾರೆ, ಏನಾದರೂ ಬಹುಮಾನ ಕೊಡಬೇಕು ಅವರಿಗೆ’ ಎಂದಿದ್ದಾರೆ ಒಬ್ಬರು. ‘ಸರ್, ಈ ಕಬ್ಬಿಗೆ ಸುಮ್ಮನೆ ಚೂರು ಫ್ಲೇವರ್ ಸೇರಿಸಿದೆವು’ ಎಂದು ರೀಟ್ವೀಟ್​ ಮಾಡಿದ್ದಾರೆ ಇನ್ನೂ ಒಬ್ಬರು. ‘GST ಎಂದರೆ ಗಜರಾಜ ಟ್ಯಾಕ್ಸ್​’ ಎಂದಿದ್ದಾರೆ ಮತ್ತೂ ಒಬ್ಬರು. ‘ERT – Elephant Road Tax’ ಹೀಗೆಂದಿದ್ದಾರೆ ಮಗದೊಬ್ಬರು. ‘ಇವರು ಹೀಗೆ ಟ್ರಕ್​ ನಿಲ್ಲಿಸಿರುವುದು ಯಾಕೆ? ವನ್ಯಜೀವಿಗಳಿಗೆ ಹೀಗೆ ಆಹಾರ ಕೊಡುವುದು ಅಪರಾಧ’ ಎಂದು ಒಬ್ಬರು ನ್ಯಾಯ ಅನ್ಯಾಯದ ಬಗ್ಗೆ ಮಾತನಾಡಿದ್ದಾರೆ. ‘ಇದು ಮುದ್ದಾದ ತೆರಿಗೆ’ ಎಂದಿದ್ದಾರೆ ಹೀಗೊಬ್ಬರು. ‘ಅವರು ಟ್ಯಾಕ್ಸ್​ ಡಿಪಾರ್ಟ್​ಮೆಂಟ್​ನವರು ಅಲ್ಲ, ಫುಡ್​ ಇನ್​ಸ್ಪೆಕ್ಟರ್’ ಎಂದಿದ್ದಾರೆ. ಒಟ್ಟು 249 ಜನರು ಈ ಪೋಸ್ಟ್​ ರೀಟ್ವೀಟ್​ ಮಾಡಿದ್ದಾರೆ.

ಎಂಥ ಸಿಹಿಯಾದ ತೆರಿಗೆ ಇದಲ್ವಾ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:13 pm, Fri, 21 October 22

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ