Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟೋಲ್​ ಕಟ್ಟಿ’ ಆನೆಗಳ ಸಿಹಿಯಾದ ವಿನಂತಿ, ಶರಣಾದ ಸಹೃದಯಿ ಡ್ರೈವರ್

Toll Tax : ಆನೆಗಳ ದಾರಿಗೆ ಅಡ್ಡಬಂದವರೇ ನಿಲ್ಲಬೇಕು. ಬಂದಿದ್ದಕ್ಕೆ ಅವರು ಹೀಗೆ ಟ್ಯಾಕ್ಸ್​ ವಸೂಲಿ ಮಾಡಿಯೇ ಕಳಿಸುವುದು. ಅದರಲ್ಲೂ ಅವರಿಗೆ ಪ್ರಿಯವಾದ ಆಹಾರವಿದ್ದರೆ ಕೇಳಿಯಾರೇ? ನೋಡಿ ಈ ವಿಡಿಯೋ.

‘ಟೋಲ್​ ಕಟ್ಟಿ’ ಆನೆಗಳ ಸಿಹಿಯಾದ ವಿನಂತಿ, ಶರಣಾದ ಸಹೃದಯಿ ಡ್ರೈವರ್
Elephants stop truck carrying sugarcane to take toll tax
Follow us
TV9 Web
| Updated By: ಶ್ರೀದೇವಿ ಕಳಸದ

Updated on:Oct 21, 2022 | 12:14 PM

Viral Video : ಒಂದೂರಿನಿಂದ ಇನ್ನೊಂದೂರಿಗೆ ಅಥವಾ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೋಗುವಾಗ ಟೋಲ್​ಗಳಲ್ಲಿ ನಿಗದಿತ ತೆರಿಗೆಯನ್ನು ಪ್ರತಿಯೊಬ್ಬ ಪ್ರಯಾಣಿಕರೂ ಕಟ್ಟಬೇಕಿರುವುದು ನಿಯಮ. ಅದರಲ್ಲೂ ಸರಕು ಸಾಗಣೆ ಸಂಬಂಧಿಸಿದ ವಾಹನ ಮತ್ತು ಟ್ರಕ್​ಗಳು ಸ್ವಲ್ಪ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. ಈ ಎಲ್ಲ ವ್ಯವಸ್ಥೆಯನ್ನು ನಿರ್ವಹಿಸಲು ನಿರ್ವಹಿಸಲು ಸುಸಜ್ಜಿತವಾದ ಸಿಬ್ಬಂದಿಯನ್ನು ಪ್ರತೀ ಟೋಲ್​ಗಳಲ್ಲಿಯೂ ನೇಮಿಸಲಾಗಿರುತ್ತದೆ. ಆದರೆ ಇದೀವ ವೈರಲ್ ಆಗಿರುವ ಈ ವಿಡಿಯೋದಲ್ಲಿ ಆನೆಗಳು ಸ್ವಯಂನೇಮಕಗೊಂಡಿವೆ. ತಮಗೆ ಬೇಕಾದ ಸಿಹಿಯಾದ ಟೋಲ್​ ಅನ್ನು ತಾವಾಗಿಯೇ ಸಂಗ್ರಹಿಸಿಕೊಳ್ಳುತ್ತಿವೆ.

ಐಎಫ್​ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. ಆನೆಗಳ ದಾರಿಯಲ್ಲಿ ಈ ಕಬ್ಬಿನ ಟ್ರಕ್​ ಅಡ್ಡಬಂದಿದೆ. ಕಬ್ಬು ಮೊದಲೇ ಆನೆಗಳಿಗೆ ಪ್ರಿಯವಾದ ಆಹಾರ. ಸುಮ್ಮನೆ ಬಿಟ್ಟಾವೆಯೇ!? ಅಡ್ಡಗಟ್ಟಿ ಕಬ್ಬನ್ನು ಹಿರಿದೆಳೆದು ಮನಸಾ ತಿಂದಿವೆ. ಅಂತೂ ಹೀಗೆ ಟೋಲ್​ ತೆರಿಗೆಯನ್ನು ಸಂಗ್ರಹಿಸುವಲ್ಲಿ ಆನೆಗಳು ಯಶಸ್ವಿಯಾಗಿವೆ.

ಈ ತನಕ ಈ ವಿಡಿಯೋ ಅನ್ನು ಸುಮಾರು 74,000 ಜನರು ನೋಡಿದ್ದಾರೆ. 3,300 ಜನರು ಇಷ್ಟಪಟ್ಟಿದ್ದಾರೆ. ‘ಲಾರಿ ಡ್ರೈವರ್​ ಸಹೃದಯಿಯಾಗಿದ್ದಾರೆ, ಏನಾದರೂ ಬಹುಮಾನ ಕೊಡಬೇಕು ಅವರಿಗೆ’ ಎಂದಿದ್ದಾರೆ ಒಬ್ಬರು. ‘ಸರ್, ಈ ಕಬ್ಬಿಗೆ ಸುಮ್ಮನೆ ಚೂರು ಫ್ಲೇವರ್ ಸೇರಿಸಿದೆವು’ ಎಂದು ರೀಟ್ವೀಟ್​ ಮಾಡಿದ್ದಾರೆ ಇನ್ನೂ ಒಬ್ಬರು. ‘GST ಎಂದರೆ ಗಜರಾಜ ಟ್ಯಾಕ್ಸ್​’ ಎಂದಿದ್ದಾರೆ ಮತ್ತೂ ಒಬ್ಬರು. ‘ERT – Elephant Road Tax’ ಹೀಗೆಂದಿದ್ದಾರೆ ಮಗದೊಬ್ಬರು. ‘ಇವರು ಹೀಗೆ ಟ್ರಕ್​ ನಿಲ್ಲಿಸಿರುವುದು ಯಾಕೆ? ವನ್ಯಜೀವಿಗಳಿಗೆ ಹೀಗೆ ಆಹಾರ ಕೊಡುವುದು ಅಪರಾಧ’ ಎಂದು ಒಬ್ಬರು ನ್ಯಾಯ ಅನ್ಯಾಯದ ಬಗ್ಗೆ ಮಾತನಾಡಿದ್ದಾರೆ. ‘ಇದು ಮುದ್ದಾದ ತೆರಿಗೆ’ ಎಂದಿದ್ದಾರೆ ಹೀಗೊಬ್ಬರು. ‘ಅವರು ಟ್ಯಾಕ್ಸ್​ ಡಿಪಾರ್ಟ್​ಮೆಂಟ್​ನವರು ಅಲ್ಲ, ಫುಡ್​ ಇನ್​ಸ್ಪೆಕ್ಟರ್’ ಎಂದಿದ್ದಾರೆ. ಒಟ್ಟು 249 ಜನರು ಈ ಪೋಸ್ಟ್​ ರೀಟ್ವೀಟ್​ ಮಾಡಿದ್ದಾರೆ.

ಎಂಥ ಸಿಹಿಯಾದ ತೆರಿಗೆ ಇದಲ್ವಾ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:13 pm, Fri, 21 October 22

ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ