AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಯಲ್ಲಿ ಡ್ಯಾನ್ಸ್​ ಮಾಡುತ್ತಿದ್ದ ವಧು-ವರರ ಮಧ್ಯೆ ಬಂದು ಪೋಸ್ ಕೊಟ್ಟ ನಾಯಿ; ವಿಡಿಯೋ ವೈರಲ್

ವಧುವಿನ ಮುದ್ದಿನ ನಾಯಿ ಕೂಡ ತನ್ನ ಒಡತಿಯ ಮದುವೆಗಾಗಿ ಸುಂದರವಾದ ಬಟ್ಟೆಯನ್ನು ತೊಟ್ಟು ರೆಡಿಯಾಗಿತ್ತು. ತನ್ನ ಒಡತಿಯ ಜೊತೆ ತಾನೂ ಡ್ಯಾನ್ಸ್ ಮಾಡಲು ಆ ನಾಯಿ ಸ್ಟೇಜ್ ಏರಿತ್ತು.

ಮದುವೆಯಲ್ಲಿ ಡ್ಯಾನ್ಸ್​ ಮಾಡುತ್ತಿದ್ದ ವಧು-ವರರ ಮಧ್ಯೆ ಬಂದು ಪೋಸ್ ಕೊಟ್ಟ ನಾಯಿ; ವಿಡಿಯೋ ವೈರಲ್
ಮದುವೆಯಲ್ಲಿ ನಾಯಿಯ ಎಂಟ್ರಿ
TV9 Web
| Edited By: |

Updated on: Dec 20, 2021 | 2:44 PM

Share

ವಿಭಿನ್ನವಾಗಿ ಮತ್ತು ಅದ್ದೂರಿಯಾಗಿ ಮದುವೆಯಾಗಬೇಕೆಂಬುದು ಬಹುತೇಕರ ಆಸೆ. ತಮ್ಮ ಕನಸಿನಂತೆ ಮದುವೆಯಾದ ಜೋಡಿಯೊಂದು ಮದುವೆಯ ನಂತರ, ಡ್ಯಾನ್ಸ್​ ಪಾರ್ಟಿ ಮಾಡಿದ್ದಾರೆ. ಕಪ್ಪು ಟುಕ್ಸೆಡೊದಲ್ಲಿ ಮಿಂಚುತ್ತಿದ್ದ ಗಂಡ ಮತ್ತು ಬಿಳಿ ಆಫ್-ಶೋಲ್ಡರ್ ಗೌನ್ ಧರಿಸಿದ್ದ ಹೆಂಡತಿ ಮ್ಯೂಸಿಕ್​ಗೆ ಹೆಜ್ಜೆ ಹಾಕುತ್ತಾ, ಒಬ್ಬರನ್ನೊಬ್ಬರು ನೋಡುತ್ತಾ, ಡ್ಯಾನ್ಸ್ ಮಾಡುತ್ತಾ ಮೈಮರೆತಿದ್ದರು. ಆ ಸುಂದರವಾದ ನೃತ್ಯವನ್ನು ನೋಡುತ್ತಿದ್ದ ಅತಿಥಿಗಳ ಕಣ್ಣು ಆ ರೊಮ್ಯಾಂಟಿಕ್ ಕಪಲ್ ಬದಲಾಗಿ ಅವರ ಮುದ್ದಿನ ನಾಯಿಯ ಮೇಲೇ ಇತ್ತು.

ವಧುವಿನ ಮುದ್ದಿನ ನಾಯಿ ಕೂಡ ತನ್ನ ಒಡತಿಯ ಮದುವೆಗಾಗಿ ಸುಂದರವಾದ ಬಟ್ಟೆಯನ್ನು ತೊಟ್ಟು ರೆಡಿಯಾಗಿತ್ತು. ತನ್ನ ಒಡತಿಯ ಜೊತೆ ತಾನೂ ಡ್ಯಾನ್ಸ್ ಮಾಡಲು ಆ ನಾಯಿ ಸ್ಟೇಜ್ ಏರಿತ್ತು. ಆ ನಾಯಿ ಸ್ಟೇಜ್ ಹತ್ತುತ್ತಿದ್ದಂತೆ ಮದುಮಕ್ಕಳ ಮೇಲಿದ್ದ ಎಲ್ಲರ ಕಣ್ಣು ಆ ನಾಯಿಯತ್ತ ಹೋಯಿತು. ವಧು-ವರರು ಡ್ಯಾನ್ಸ್ ಮಾಡುತ್ತಾ ಅಪ್ಪಿಕೊಳ್ಳುವಾಗ ಅವರಿಬ್ಬರ ನಡುವೆ ನುಸುಳಿ ಹೋಗಿ ಡಿಸ್ಟರ್ಬ್ ಮಾಡಿದ ನಾಯಿಯ ವಿಡಿಯೋ ವೈರಲ್ ಆಗಿದೆ.

ಆ ವೈರಲ್ ವಿಡಿಯೋವನ್ನು 71,000ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ವೈರಲ್ ಆಗಿರುವ ವೀಡಿಯೋದಲ್ಲಿ ನವವಿವಾಹಿತರು ವೇದಿಕೆಯ ಮೇಲೆ ಒಟ್ಟಿಗೆ ನೃತ್ಯ ಮಾಡುತ್ತಿದ್ದಾರೆ. ಎಲ್ಲರೂ ಅವರನ್ನು ಉತ್ತೇಜಿಸಲು ಚಪ್ಪಾಳೆ ತಟ್ಟುವಾಗ ಅವರು ಒಟ್ಟಿಗೆ ಸಂತೋಷದಿಂದ ಹೆಜ್ಜೆ ಹಾಕುತ್ತಿದ್ದರು. ಅಷ್ಟರಲ್ಲಿ ವಧುವಿನ ಮುದ್ದಿನ ನಾಯಿ ಶರ್ಟ್​ ಧರಿಸಿ, ವೇದಿಕೆ ಹತ್ತಿತು. ಆ ವಿಡಿಯೋವನ್ನು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ನಾನೂ ನಿಮ್ಮ ಜೊತೆ ಡ್ಯಾನ್ಸ್ ಮಾಡಬಹುದಾ? ಎಂಬ ಕ್ಯಾಪ್ಷನ್​ ಹಾಕಿ ಈ ವೀಡಿಯೊ ಅಪ್​ಲೋಡ್ ಮಾಡಲಾಗಿದೆ. ಆ ಮುದ್ದಾದ ನಾಯಿಯ ಎಂಟ್ರಿ ನೋಡಿ ನೆಟ್ಟಿಗರು ಖುಷಿಯಾಗಿ ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ವರನಿದ್ದ ಕುದುರೆ ಗಾಡಿಗೆ ಬೆಂಕಿ! ತಪ್ಪಿತು ಬಾರಿ ದೊಡ್ಡ ಅನಾಹುತ; ವಿಡಿಯೋ ವೈರಲ್

Viral Video: ಕಾಡೆಮ್ಮೆಯ ಬೆನ್ನತ್ತಿ ಓಡಿದ ಹುಲಿರಾಯ; ಮೈ ಜುಮ್ಮೆನಿಸುವ ವಿಡಿಯೋ ಶೇರ್ ಮಾಡಿದ ರಣದೀಪ್ ಹೂಡಾ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್