AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಯಲ್ಲಿ ಡ್ಯಾನ್ಸ್​ ಮಾಡುತ್ತಿದ್ದ ವಧು-ವರರ ಮಧ್ಯೆ ಬಂದು ಪೋಸ್ ಕೊಟ್ಟ ನಾಯಿ; ವಿಡಿಯೋ ವೈರಲ್

ವಧುವಿನ ಮುದ್ದಿನ ನಾಯಿ ಕೂಡ ತನ್ನ ಒಡತಿಯ ಮದುವೆಗಾಗಿ ಸುಂದರವಾದ ಬಟ್ಟೆಯನ್ನು ತೊಟ್ಟು ರೆಡಿಯಾಗಿತ್ತು. ತನ್ನ ಒಡತಿಯ ಜೊತೆ ತಾನೂ ಡ್ಯಾನ್ಸ್ ಮಾಡಲು ಆ ನಾಯಿ ಸ್ಟೇಜ್ ಏರಿತ್ತು.

ಮದುವೆಯಲ್ಲಿ ಡ್ಯಾನ್ಸ್​ ಮಾಡುತ್ತಿದ್ದ ವಧು-ವರರ ಮಧ್ಯೆ ಬಂದು ಪೋಸ್ ಕೊಟ್ಟ ನಾಯಿ; ವಿಡಿಯೋ ವೈರಲ್
ಮದುವೆಯಲ್ಲಿ ನಾಯಿಯ ಎಂಟ್ರಿ
TV9 Web
| Edited By: |

Updated on: Dec 20, 2021 | 2:44 PM

Share

ವಿಭಿನ್ನವಾಗಿ ಮತ್ತು ಅದ್ದೂರಿಯಾಗಿ ಮದುವೆಯಾಗಬೇಕೆಂಬುದು ಬಹುತೇಕರ ಆಸೆ. ತಮ್ಮ ಕನಸಿನಂತೆ ಮದುವೆಯಾದ ಜೋಡಿಯೊಂದು ಮದುವೆಯ ನಂತರ, ಡ್ಯಾನ್ಸ್​ ಪಾರ್ಟಿ ಮಾಡಿದ್ದಾರೆ. ಕಪ್ಪು ಟುಕ್ಸೆಡೊದಲ್ಲಿ ಮಿಂಚುತ್ತಿದ್ದ ಗಂಡ ಮತ್ತು ಬಿಳಿ ಆಫ್-ಶೋಲ್ಡರ್ ಗೌನ್ ಧರಿಸಿದ್ದ ಹೆಂಡತಿ ಮ್ಯೂಸಿಕ್​ಗೆ ಹೆಜ್ಜೆ ಹಾಕುತ್ತಾ, ಒಬ್ಬರನ್ನೊಬ್ಬರು ನೋಡುತ್ತಾ, ಡ್ಯಾನ್ಸ್ ಮಾಡುತ್ತಾ ಮೈಮರೆತಿದ್ದರು. ಆ ಸುಂದರವಾದ ನೃತ್ಯವನ್ನು ನೋಡುತ್ತಿದ್ದ ಅತಿಥಿಗಳ ಕಣ್ಣು ಆ ರೊಮ್ಯಾಂಟಿಕ್ ಕಪಲ್ ಬದಲಾಗಿ ಅವರ ಮುದ್ದಿನ ನಾಯಿಯ ಮೇಲೇ ಇತ್ತು.

ವಧುವಿನ ಮುದ್ದಿನ ನಾಯಿ ಕೂಡ ತನ್ನ ಒಡತಿಯ ಮದುವೆಗಾಗಿ ಸುಂದರವಾದ ಬಟ್ಟೆಯನ್ನು ತೊಟ್ಟು ರೆಡಿಯಾಗಿತ್ತು. ತನ್ನ ಒಡತಿಯ ಜೊತೆ ತಾನೂ ಡ್ಯಾನ್ಸ್ ಮಾಡಲು ಆ ನಾಯಿ ಸ್ಟೇಜ್ ಏರಿತ್ತು. ಆ ನಾಯಿ ಸ್ಟೇಜ್ ಹತ್ತುತ್ತಿದ್ದಂತೆ ಮದುಮಕ್ಕಳ ಮೇಲಿದ್ದ ಎಲ್ಲರ ಕಣ್ಣು ಆ ನಾಯಿಯತ್ತ ಹೋಯಿತು. ವಧು-ವರರು ಡ್ಯಾನ್ಸ್ ಮಾಡುತ್ತಾ ಅಪ್ಪಿಕೊಳ್ಳುವಾಗ ಅವರಿಬ್ಬರ ನಡುವೆ ನುಸುಳಿ ಹೋಗಿ ಡಿಸ್ಟರ್ಬ್ ಮಾಡಿದ ನಾಯಿಯ ವಿಡಿಯೋ ವೈರಲ್ ಆಗಿದೆ.

ಆ ವೈರಲ್ ವಿಡಿಯೋವನ್ನು 71,000ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ವೈರಲ್ ಆಗಿರುವ ವೀಡಿಯೋದಲ್ಲಿ ನವವಿವಾಹಿತರು ವೇದಿಕೆಯ ಮೇಲೆ ಒಟ್ಟಿಗೆ ನೃತ್ಯ ಮಾಡುತ್ತಿದ್ದಾರೆ. ಎಲ್ಲರೂ ಅವರನ್ನು ಉತ್ತೇಜಿಸಲು ಚಪ್ಪಾಳೆ ತಟ್ಟುವಾಗ ಅವರು ಒಟ್ಟಿಗೆ ಸಂತೋಷದಿಂದ ಹೆಜ್ಜೆ ಹಾಕುತ್ತಿದ್ದರು. ಅಷ್ಟರಲ್ಲಿ ವಧುವಿನ ಮುದ್ದಿನ ನಾಯಿ ಶರ್ಟ್​ ಧರಿಸಿ, ವೇದಿಕೆ ಹತ್ತಿತು. ಆ ವಿಡಿಯೋವನ್ನು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ನಾನೂ ನಿಮ್ಮ ಜೊತೆ ಡ್ಯಾನ್ಸ್ ಮಾಡಬಹುದಾ? ಎಂಬ ಕ್ಯಾಪ್ಷನ್​ ಹಾಕಿ ಈ ವೀಡಿಯೊ ಅಪ್​ಲೋಡ್ ಮಾಡಲಾಗಿದೆ. ಆ ಮುದ್ದಾದ ನಾಯಿಯ ಎಂಟ್ರಿ ನೋಡಿ ನೆಟ್ಟಿಗರು ಖುಷಿಯಾಗಿ ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ವರನಿದ್ದ ಕುದುರೆ ಗಾಡಿಗೆ ಬೆಂಕಿ! ತಪ್ಪಿತು ಬಾರಿ ದೊಡ್ಡ ಅನಾಹುತ; ವಿಡಿಯೋ ವೈರಲ್

Viral Video: ಕಾಡೆಮ್ಮೆಯ ಬೆನ್ನತ್ತಿ ಓಡಿದ ಹುಲಿರಾಯ; ಮೈ ಜುಮ್ಮೆನಿಸುವ ವಿಡಿಯೋ ಶೇರ್ ಮಾಡಿದ ರಣದೀಪ್ ಹೂಡಾ

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ