ಇಲ್ಲೊಂದು ಬೆಕ್ಕನ್ನು ಬೆಂಚಿಗೆ ಕಟ್ಟಿ ಹಾಕಲಾಗಿದೆ, ಮುಂದೇನಾಯಿತೆಂದು ನೋಡಿ

Cat : ಈ ಬೆಕ್ಕನ್ನು ಸಾಕಿದವನಿಗೆ ಕಠಿಣ ಶಿಕ್ಷೆಯಾಗಬೇಕು. ತಮ್ಮ ರಂಜನೆಗಾಗಿ ಪ್ರಾಣಿಗಳನ್ನು ಹೀಗೆ ಹಿಂಸಿಸಬಾರದು ಎಂದು ನೆಟ್ಟಿಗರು ಆಕ್ರೋಶಗೊಂಡಿದ್ದಾರೆ. ವಿಡಿಯೋ ನೋಡಿ.

ಇಲ್ಲೊಂದು ಬೆಕ್ಕನ್ನು ಬೆಂಚಿಗೆ ಕಟ್ಟಿ ಹಾಕಲಾಗಿದೆ, ಮುಂದೇನಾಯಿತೆಂದು ನೋಡಿ
ಕಟ್ಟಿದ ಬೆಂಚನ್ನೇ ಎಳೆದುಕೊಂಡು ಹೋಗುತ್ತಿರುವ ಬೆಕ್ಕು
Follow us
| Updated By: ಶ್ರೀದೇವಿ ಕಳಸದ

Updated on:Feb 09, 2023 | 3:40 PM

Viral Video : ಪ್ರಾಣಿಗಳು ತಮ್ಮ ಆಟದೊಂದಿಗೆ ತಾವಾಗಿಯೇ ನಮ್ಮನ್ನು ರಂಜಿಸುವುದು ಬೇರೆ. ಆದರೆ ನಮ್ಮ ರಂಜನೆಗೆ ಪ್ರಾಣಿಗಳಿಗೆ ತೊಂದರೆ ಕೊಡುವುದು ಬೇರೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಯಾರೋ ಒಬ್ಬಾತ ಈ ಬೆಕ್ಕನ್ನೇನೋ ಸಾಕಿದ್ದಾನೆ. ಆದರೆ ತನ್ನ ತಿಳಿಗೇಡಿತನದಿಂದ ಈ ಬೆಕ್ಕನ್ನು ಬೆಂಚಿಗೆ ಕಟ್ಟಿದ್ಧಾನೆ. ಆಗ ಈ ಬೆಕ್ಕು ಏನು ಮಾಡಬೇಕು? ಅದೇನು ನಾಯಿಯೇ, ಕಟ್ಟಿದಲ್ಲಿ ಇರಲು? ನೋಡಿ ಏನು ಮಾಡಿದೆ.

ಈತ ಕಟ್ಟಿಹಾಕಿರುವುದು ಸಣ್ಣ ಬೆಂಚಲ್ಲ. ಕಟ್ಟಿಗೆಯ ದೊಡ್ಡ ಬೆಂಚು. ದಾರಿಗಾಣದ ಬೆಕ್ಕು ಅದನ್ನೇ ಎಳೆದುಕೊಂಡು ಹೊರಟಿದೆ. ಇದನ್ನು ನೋಡಿದ ನೆಟ್ಟಿಗರು ಇದರ ಪೋಷಕನ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ತನಕ ಈ ವಿಡಿಯೋ ಅನ್ನು 1.7 ಲಕ್ಷ ಜನರು ನೋಡಿದ್ದಾರೆ. ಸಾವಿರಕ್ಕಿಂತಲೂ ಹೆಚ್ಚು ಜನರು ಇಷ್ಪಪಟ್ಟಿದ್ದಾರೆ. 145 ಜನರು ರೀಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : ಹಾಡಹಗಲೇ ಹುಲಿಯೊಂದು ರಸ್ತೆ ದಾಟುತ್ತಿರುವ ವಿಡಿಯೋ ವೈರಲ್

ಇದು ಪ್ರಾಣಿಹಿಂಸೆ ಎಂದು ಅನೇಕರು ಹೇಳಿದ್ದಾರೆ. ಈ ಬೆಕ್ಕಿನ ಪೋಷಕನನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ನೀಡಬೇಕು ಎಂದಿದ್ದಾರೆ ಕೆಲವರು. ಬೇಗ ಇದರ ಪೋಷಕ ಕಟ್ಟಿದ್ದನ್ನು ಬಿಚ್ಚಬಾರದೆ? ಎಂದು ಅನೇಕರು ಕೇಳಿದ್ದಾರೆ. ಆದರೆ ರೀಲ್​ ಮಾಡಲೆಂದೇ ಹೀಗೆ ಆತ ಮಾಡಿದ್ದರೆ ಏನು ಮಾಡುವುದು ಎಂದು ಮತ್ತೊಂದಿಷ್ಟು ಜನ ಹೇಳಿದ್ದಾರೆ.

ಇದನ್ನೂ ಓದಿ : ನಿನ್ನನ್ನು ಬಿಟ್ಟುಕೊಡಲೊಲ್ಲೇ ಅಕ್ಕಾ; ವೈರಲ್ ಆಗುತ್ತಿರುವ ನಾಯಿಯ ಈ ವಿಡಿಯೋ

ಪ್ರಾಣಿಗಳನ್ನು ಸಾಕಿದ ನಂತರ ಅವುಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ನಮ್ಮ ಖುಷಿಗಾಗಿ, ಮಜಾಗಾಗಿ ಅವುಗಳಿಗೆ ತೊಂದರೆ ಕೊಡಬಾರದು. ಈಗಂತೂ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡಲೆಂದೇ ಪ್ರಾಣಿಗಳನ್ನು ತಮ್ಮ ಮನಬಂದಂತೆ ಕುಣಿಸುತ್ತಾರೆ. ಆದರೆ ಇದರಿಂದ ಅವುಗಳಿಗೆ, ಖುಷಿ ಸಮಾಧಾನ ಆಗುವುದೆ? ಅವೂ ಜೀವವೇ ತಾನೆ? ಸಾಕುವ ಮೊದಲು ಯೋಚಿಸಿ. ಸಾಕಿದ ನಂತರ ಪ್ರಜ್ಞೆಯಿಂದ ಪೋಷಿಸಿ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:40 pm, Thu, 9 February 23

‘ಅನ್ನ’ ಸಿನಿಮಾ ವೀಕ್ಷಿಸಿ ಭಾವುಕರಾದ ಸಿದ್ದರಾಮಯ್ಯ; ಕಾಡಿತು ಬಾಲ್ಯದ ನೆನಪು
‘ಅನ್ನ’ ಸಿನಿಮಾ ವೀಕ್ಷಿಸಿ ಭಾವುಕರಾದ ಸಿದ್ದರಾಮಯ್ಯ; ಕಾಡಿತು ಬಾಲ್ಯದ ನೆನಪು
ಗೇಟ್​ ಬಿದ್ದು ಮಗು ಸಾವು ಕೇಸ್:​ ಈ ಬಗ್ಗೆ ತನಿಖೆ ಮಾಡ್ತೇವೆ ಎಂದ ದಿನೇಶ್
ಗೇಟ್​ ಬಿದ್ದು ಮಗು ಸಾವು ಕೇಸ್:​ ಈ ಬಗ್ಗೆ ತನಿಖೆ ಮಾಡ್ತೇವೆ ಎಂದ ದಿನೇಶ್
ಈದ್ ಮಿಲಾದ್ ಮೆರವಣಿಗೆಯಲ್ಲಿ ಎದುರಾದ ಕೂಡಲಸಂಗಮ ಸ್ವಾಮೀಜಿ; ಪರಸ್ಪರ ಘೋಷಣೆ
ಈದ್ ಮಿಲಾದ್ ಮೆರವಣಿಗೆಯಲ್ಲಿ ಎದುರಾದ ಕೂಡಲಸಂಗಮ ಸ್ವಾಮೀಜಿ; ಪರಸ್ಪರ ಘೋಷಣೆ
ನಾವು ಇಲ್ಲದಿದ್ರೆ ಬೆಂಗಳೂರು ಖಾಲಿ ಎಂದ ಮಹಿಳೆಗೆ ಕರವೇ ನಾರಾಯಣಗೌಡ ಎಚ್ಚರಿಕೆ
ನಾವು ಇಲ್ಲದಿದ್ರೆ ಬೆಂಗಳೂರು ಖಾಲಿ ಎಂದ ಮಹಿಳೆಗೆ ಕರವೇ ನಾರಾಯಣಗೌಡ ಎಚ್ಚರಿಕೆ
ಸಾವಿನ ನಂತರದ ಕಥೆ; ಸ್ಮಶಾನದಲ್ಲಿ ಭೈರಾದೇವಿ ಶೂಟಿಂಗ್; ರಮೇಶ್ ಹೇಳಿದ್ದಿಷ್ಟು
ಸಾವಿನ ನಂತರದ ಕಥೆ; ಸ್ಮಶಾನದಲ್ಲಿ ಭೈರಾದೇವಿ ಶೂಟಿಂಗ್; ರಮೇಶ್ ಹೇಳಿದ್ದಿಷ್ಟು
ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ