Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ಲಾಸ್ಟಿಕ್​, ಪೇಪರ್​ ರದ್ದೀ… ಈತನನ್ನು ಗುಜರಿಯವನೆಂದು ಹೇಳುವುದಾದರೂ ಹೇಗೆ? ಹಾಡು ಕೇಳಿ

Street Singer : ತೇರೇ ನಾಮ್​ ಚಿತ್ರದ ಈ ಹಾಡನ್ನು ಈತನ ಕಂಠದಲ್ಲಿ ಕೇಳಿ. ತಮ್ಮ ಇಕ್ಕಟ್ಟು, ಚೌಕಟ್ಟನ್ನು ಮೀರಲಾಗದಂಥ ಅಸಹಾಯಕತೆಯಲ್ಲಿಯೂ ಬದುಕಿನ ಬಂಡಿಯನ್ನು ಹೀಗೆ ಕೌಶಲಯುತವಾಗಿ ಎಳೆಯುವ ಇಂಥವರ ಉತ್ಸಾಹಕ್ಕೆ ನಮೋನ್ನಮಃ.

ಪ್ಲಾಸ್ಟಿಕ್​, ಪೇಪರ್​ ರದ್ದೀ... ಈತನನ್ನು ಗುಜರಿಯವನೆಂದು ಹೇಳುವುದಾದರೂ ಹೇಗೆ? ಹಾಡು ಕೇಳಿ
ತೇರೇ ನಾಮ್ ಸಿನೆಮಾದ ಹಾಡನ್ನು ಹಾಡುತ್ತಿರುವ ಗುಜರಿ ವ್ಯಾಪಾರಿ
Follow us
ಶ್ರೀದೇವಿ ಕಳಸದ
|

Updated on:Feb 09, 2023 | 6:14 PM

Viral Video : ಕಲೆ ತಾನಾಗಿಯೇ ಒಲಿಯುತ್ತದೆಯೋ, ಕಲೆಯನ್ನು ನಾವಾಗಿಯೇ ಒಲಿಸಿಕೊಳ್ಳಬೇಕೋ ಎಂಬ ಪ್ರಶ್ನೆ ಕೆಲವೊಮ್ಮೆ ಸಂದಿಗ್ಧಕ್ಕೆ ತಳ್ಳುತ್ತದೆ. ಏಕೆಂದರೆ ಹೀಗೆ ಹೊಟ್ಟೆಪಾಡಿಗಾಗಿ ನಿತ್ಯವೂ ಬೀದಿ ಅಲೆಯುವ ಅನೇಕರ ಬಳಿ ಸರಸ್ವತಿ ತಾನಾಗಿಯೇ ಹೋಗಿ ನೆಲೆಸುವುದನ್ನು ನೋಡಿದಾಗ ಇನ್ನೇನು ಅನ್ನಿಸಲು ಸಾಧ್ಯ? ಇದೀಗ ವೈರಲ್ ಆಗುತ್ತಿರುವ ಈ ಈ ವಿಡಿಯೋ ಗಮನಿಸಿ. ಈ ವ್ಯಕ್ತಿ ಸಲ್ಮಾನ್​ ಖಾನ್​ ಅಭಿನಯದ ತೇರೇ ನಾಮ್​ ಸಿನೆಮಾದ ತೂ ಕಿಸೀ ಕೀ ಹಾಡನ್ನು ಹಾಡುತ್ತಿದ್ದಾನೆ. ಹೀಗೆ ಹಾಡಿದರೆ ಹೊಟ್ಟೆ ತುಂಬುವುದೇ? ಹಾಡಿನ ಕೊನೆಯಲ್ಲಿ ಆತ ಏನು ಹೇಳುತ್ತಾನೆ ಕೇಳಿಸಿಕೊಳ್ಳಿ. ಅದೇ ಅವನ ನಿತ್ಯದ ಹಾಡುಪಾಡು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by RawSingerOfficial (@rawsingerofficial)

20 ನಿಮಿಷದ ಹಿಂದೆಯಷ್ಟೇ ಈ ವಿಡಿಯೋ ಅನ್ನು ಇನ್​ಸ್ಟಾಗ್ರಾಂನ @RawSingerOfficial ಪುಟದಲ್ಲಿ ಹಂಚಿಕೊಳ್ಳಲಾಗಿದೆ. ಈತ ಗುಜರಿಗಾಗಿ ಮನೆಮನೆ ಅಲೆದು ಬದುಕು ನಡೆಸುವ ವ್ಯಕ್ತಿ. ಬೀದಿಗಳಲ್ಲಿ ಹೀಗೆ ಸಾಗುವಾಗ ಈತ ಹಾಡುತ್ತ ಜನರ ಗಮನ ಸೆಳೆಯುತ್ತಾನೆ. ಹೀಗೆ ಹೋಗುತ್ತಿರುವಾಗ ಯಾರೋ ದಾರಿಹೋಕರು ಈತನನ್ನು ನಿಲ್ಲಿಸಿ ಹಾಡಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್​ಲೋಡ್ ಮಾಡಿದ್ದಾರೆ. ಈತ ಹಾಡಿರುವ ತೇರೇ ನಾಮ್​ ಸಿನೆಮಾದ ಮೂಲ ಹಾಡು ಇಲ್ಲಿದೆ ಕೇಳಿ.

ಯಾವ ಊರಲ್ಲಿ ಚಿತ್ರೀಕರಿಸಲಾಗಿದೆ ಎಂಬ ಮಾಹಿತಿ ಈ ವಿಡಿಯೋಗೆ ಇಲ್ಲ. ಆದರೆ ಈತ ಹೀಗೆ ಮನದುಂಬಿ ಹಾಡಿರುವುದು ಮಾತ್ರ ಕಿವಿಯಲ್ಲಿ ಅನುರಣಿಸುತ್ತಲೇ ಇರುತ್ತದೆ. ಏನು ಮಾಡುವುದು ಸಾಕಷ್ಟು ಇಂಥ ಪ್ರತಿಭಾವಂತರಿಗೆ ನಮ್ಮ ಭಾರತದಲ್ಲಿ ಅವಕಾಶಗಳು ಇಲ್ಲದಿರುವುದು ಅತ್ಯಂತ ಬೇಸರದ ಸಂಗತಿ.

ಇದನ್ನೂ ಓದಿ : ಬೆಂಗಳೂರಿನ ಮೆಕ್​​ಡೊನಾಲ್ಡ್ಸ್​​ನಿಂದ ಹತ್ತು ಸೆಕೆಂಡುಗಳಲ್ಲಿ ಫುಡ್​ ಡೆಲಿವರಿ ಪಡೆದ ಕೆನಡಾದ ವ್ಯಕ್ತಿ

ಇಂಥವರು ಹಾಡಿಕೊಳ್ಳುವುದು ತಮ್ಮ ಖುಷಿಗಾಗಿ ಮತ್ತು ಹೊಟ್ಟೆಪಾಡಿಗಾಗಿ. ಯಾವ ಮನ್ನಣೆಯ ಕನಸನ್ನೂ ಅವರು ಕಾಣಲು ಸಾಧ್ಯವಾಗದು. ತಮ್ಮ ಇಕ್ಕಟ್ಟು, ಚೌಕಟ್ಟು ಮತ್ತದನ್ನು ಮೀರಲಾಗದಂಥ ಅಸಹಾಯಕತೆ ಅವರ ಅರವಿನಲ್ಲಿರುತ್ತದೆ. ಆದರೆ ದಿನದ ಬಂಡಿ ಸಾಗಬೇಕಲ್ಲ? ಸವೆಸುವ ಹಾದಿ ಸುಗಮವಾಗಬೇಕಲ್ಲ? ಅದಕ್ಕಾಗಿ ವಿನೂತನ ತಂತ್ರಗಳನ್ನು ಅವರು ಹೀಗೆ ಹೆಣೆಯಲೇಬೇಕಲ್ಲ? ಕೇಳಿಸಿತೆ ಕೊನೆಯಲ್ಲಿ, ಪ್ಲಾಸ್ಟಿಕ್​ ಪೇಪರ್ ರದ್ದೀ

ಈ ವಿಡಿಯೋ ನೋಡಿದ ನೀವೇನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಳನ್ನು ನೋಡಲು ಕ್ಲಿಕ್ ಮಾಡಿ

Published On - 6:06 pm, Thu, 9 February 23

ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್