AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ಲಾಸ್ಟಿಕ್​, ಪೇಪರ್​ ರದ್ದೀ… ಈತನನ್ನು ಗುಜರಿಯವನೆಂದು ಹೇಳುವುದಾದರೂ ಹೇಗೆ? ಹಾಡು ಕೇಳಿ

Street Singer : ತೇರೇ ನಾಮ್​ ಚಿತ್ರದ ಈ ಹಾಡನ್ನು ಈತನ ಕಂಠದಲ್ಲಿ ಕೇಳಿ. ತಮ್ಮ ಇಕ್ಕಟ್ಟು, ಚೌಕಟ್ಟನ್ನು ಮೀರಲಾಗದಂಥ ಅಸಹಾಯಕತೆಯಲ್ಲಿಯೂ ಬದುಕಿನ ಬಂಡಿಯನ್ನು ಹೀಗೆ ಕೌಶಲಯುತವಾಗಿ ಎಳೆಯುವ ಇಂಥವರ ಉತ್ಸಾಹಕ್ಕೆ ನಮೋನ್ನಮಃ.

ಪ್ಲಾಸ್ಟಿಕ್​, ಪೇಪರ್​ ರದ್ದೀ... ಈತನನ್ನು ಗುಜರಿಯವನೆಂದು ಹೇಳುವುದಾದರೂ ಹೇಗೆ? ಹಾಡು ಕೇಳಿ
ತೇರೇ ನಾಮ್ ಸಿನೆಮಾದ ಹಾಡನ್ನು ಹಾಡುತ್ತಿರುವ ಗುಜರಿ ವ್ಯಾಪಾರಿ
Follow us
ಶ್ರೀದೇವಿ ಕಳಸದ
|

Updated on:Feb 09, 2023 | 6:14 PM

Viral Video : ಕಲೆ ತಾನಾಗಿಯೇ ಒಲಿಯುತ್ತದೆಯೋ, ಕಲೆಯನ್ನು ನಾವಾಗಿಯೇ ಒಲಿಸಿಕೊಳ್ಳಬೇಕೋ ಎಂಬ ಪ್ರಶ್ನೆ ಕೆಲವೊಮ್ಮೆ ಸಂದಿಗ್ಧಕ್ಕೆ ತಳ್ಳುತ್ತದೆ. ಏಕೆಂದರೆ ಹೀಗೆ ಹೊಟ್ಟೆಪಾಡಿಗಾಗಿ ನಿತ್ಯವೂ ಬೀದಿ ಅಲೆಯುವ ಅನೇಕರ ಬಳಿ ಸರಸ್ವತಿ ತಾನಾಗಿಯೇ ಹೋಗಿ ನೆಲೆಸುವುದನ್ನು ನೋಡಿದಾಗ ಇನ್ನೇನು ಅನ್ನಿಸಲು ಸಾಧ್ಯ? ಇದೀಗ ವೈರಲ್ ಆಗುತ್ತಿರುವ ಈ ಈ ವಿಡಿಯೋ ಗಮನಿಸಿ. ಈ ವ್ಯಕ್ತಿ ಸಲ್ಮಾನ್​ ಖಾನ್​ ಅಭಿನಯದ ತೇರೇ ನಾಮ್​ ಸಿನೆಮಾದ ತೂ ಕಿಸೀ ಕೀ ಹಾಡನ್ನು ಹಾಡುತ್ತಿದ್ದಾನೆ. ಹೀಗೆ ಹಾಡಿದರೆ ಹೊಟ್ಟೆ ತುಂಬುವುದೇ? ಹಾಡಿನ ಕೊನೆಯಲ್ಲಿ ಆತ ಏನು ಹೇಳುತ್ತಾನೆ ಕೇಳಿಸಿಕೊಳ್ಳಿ. ಅದೇ ಅವನ ನಿತ್ಯದ ಹಾಡುಪಾಡು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by RawSingerOfficial (@rawsingerofficial)

20 ನಿಮಿಷದ ಹಿಂದೆಯಷ್ಟೇ ಈ ವಿಡಿಯೋ ಅನ್ನು ಇನ್​ಸ್ಟಾಗ್ರಾಂನ @RawSingerOfficial ಪುಟದಲ್ಲಿ ಹಂಚಿಕೊಳ್ಳಲಾಗಿದೆ. ಈತ ಗುಜರಿಗಾಗಿ ಮನೆಮನೆ ಅಲೆದು ಬದುಕು ನಡೆಸುವ ವ್ಯಕ್ತಿ. ಬೀದಿಗಳಲ್ಲಿ ಹೀಗೆ ಸಾಗುವಾಗ ಈತ ಹಾಡುತ್ತ ಜನರ ಗಮನ ಸೆಳೆಯುತ್ತಾನೆ. ಹೀಗೆ ಹೋಗುತ್ತಿರುವಾಗ ಯಾರೋ ದಾರಿಹೋಕರು ಈತನನ್ನು ನಿಲ್ಲಿಸಿ ಹಾಡಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್​ಲೋಡ್ ಮಾಡಿದ್ದಾರೆ. ಈತ ಹಾಡಿರುವ ತೇರೇ ನಾಮ್​ ಸಿನೆಮಾದ ಮೂಲ ಹಾಡು ಇಲ್ಲಿದೆ ಕೇಳಿ.

ಯಾವ ಊರಲ್ಲಿ ಚಿತ್ರೀಕರಿಸಲಾಗಿದೆ ಎಂಬ ಮಾಹಿತಿ ಈ ವಿಡಿಯೋಗೆ ಇಲ್ಲ. ಆದರೆ ಈತ ಹೀಗೆ ಮನದುಂಬಿ ಹಾಡಿರುವುದು ಮಾತ್ರ ಕಿವಿಯಲ್ಲಿ ಅನುರಣಿಸುತ್ತಲೇ ಇರುತ್ತದೆ. ಏನು ಮಾಡುವುದು ಸಾಕಷ್ಟು ಇಂಥ ಪ್ರತಿಭಾವಂತರಿಗೆ ನಮ್ಮ ಭಾರತದಲ್ಲಿ ಅವಕಾಶಗಳು ಇಲ್ಲದಿರುವುದು ಅತ್ಯಂತ ಬೇಸರದ ಸಂಗತಿ.

ಇದನ್ನೂ ಓದಿ : ಬೆಂಗಳೂರಿನ ಮೆಕ್​​ಡೊನಾಲ್ಡ್ಸ್​​ನಿಂದ ಹತ್ತು ಸೆಕೆಂಡುಗಳಲ್ಲಿ ಫುಡ್​ ಡೆಲಿವರಿ ಪಡೆದ ಕೆನಡಾದ ವ್ಯಕ್ತಿ

ಇಂಥವರು ಹಾಡಿಕೊಳ್ಳುವುದು ತಮ್ಮ ಖುಷಿಗಾಗಿ ಮತ್ತು ಹೊಟ್ಟೆಪಾಡಿಗಾಗಿ. ಯಾವ ಮನ್ನಣೆಯ ಕನಸನ್ನೂ ಅವರು ಕಾಣಲು ಸಾಧ್ಯವಾಗದು. ತಮ್ಮ ಇಕ್ಕಟ್ಟು, ಚೌಕಟ್ಟು ಮತ್ತದನ್ನು ಮೀರಲಾಗದಂಥ ಅಸಹಾಯಕತೆ ಅವರ ಅರವಿನಲ್ಲಿರುತ್ತದೆ. ಆದರೆ ದಿನದ ಬಂಡಿ ಸಾಗಬೇಕಲ್ಲ? ಸವೆಸುವ ಹಾದಿ ಸುಗಮವಾಗಬೇಕಲ್ಲ? ಅದಕ್ಕಾಗಿ ವಿನೂತನ ತಂತ್ರಗಳನ್ನು ಅವರು ಹೀಗೆ ಹೆಣೆಯಲೇಬೇಕಲ್ಲ? ಕೇಳಿಸಿತೆ ಕೊನೆಯಲ್ಲಿ, ಪ್ಲಾಸ್ಟಿಕ್​ ಪೇಪರ್ ರದ್ದೀ

ಈ ವಿಡಿಯೋ ನೋಡಿದ ನೀವೇನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಳನ್ನು ನೋಡಲು ಕ್ಲಿಕ್ ಮಾಡಿ

Published On - 6:06 pm, Thu, 9 February 23

Daily Devotional: ಮನೆ ಹತ್ತಿರ ಅಶ್ವಥ್ಥ ವೃಕ್ಷ ಬೆಳೆದರೆ ಏನು ಮಾಡಬೇಕು?
Daily Devotional: ಮನೆ ಹತ್ತಿರ ಅಶ್ವಥ್ಥ ವೃಕ್ಷ ಬೆಳೆದರೆ ಏನು ಮಾಡಬೇಕು?
horoscope: ಈ ರಾಶಿಯವರು ಅಪರಿಚಿತರಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳುವರು
horoscope: ಈ ರಾಶಿಯವರು ಅಪರಿಚಿತರಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳುವರು
3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ