AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ‘ಕೋಕೋ ಲೀಫಿ ಸ್ಟ್ರಾ’ ಬೇಡವಾದ ತೆಂಗಿನ ಎಲೆಗಳಿಂದ ರೂಪುಗೊಳ್ಳುವ ಪರಿಸರಸ್ನೇಹಿ ಸ್ಟ್ರಾ

Ecofriendly : ಈ ಕೊಳವೆಗಳಿಗೆ ಮಣಿಗಂಡನ್​ ಕೋಕೋ ಲೀಫಿ ಸ್ಟ್ರಾಸ್​ ಎಂದು ನಾಮಕರಣ ಮಾಡಿದ್ದಾರೆ. ಬಿಸಿ ಪಾನೀಯಗಳಲ್ಲಿ ಅರ್ಧ ಗಂಟೆ, ತಂಪು ಪಾನೀಯಗಳಲ್ಲಿ 6 ಗಂಟೆಯತನಕ ಇವು ಹಾಗೇ ಇರುತ್ತವೆ. ಸದ್ಯ ದಿನಕ್ಕೆ 10,000ದಂತೆ 12ಇಂಚುಗಳ ಸ್ಟ್ರಾ ತಯಾರಿಸಲಾಗುತ್ತಿದೆ. ಇವುಗಳ ಬೆಲೆ ಒಂದಕ್ಕೆ ರೂ. 1.5ರಿಂದ ರೂ. 3. ಗ್ರಾಮೀಣ ಮಹಿಳೆಯರು ಇವುಗಳ ಉತ್ಪಾದನೆಯಲ್ಲಿ ತೊಡಗಿಕೊಂಡಿದ್ದಾರೆ.

Viral Video: 'ಕೋಕೋ ಲೀಫಿ ಸ್ಟ್ರಾ' ಬೇಡವಾದ ತೆಂಗಿನ ಎಲೆಗಳಿಂದ ರೂಪುಗೊಳ್ಳುವ ಪರಿಸರಸ್ನೇಹಿ ಸ್ಟ್ರಾ
ಎವ್ಲೋಗಿಯಾ ಎಕೋ ಕೇರ್ ಸಂಸ್ಥೆಯಿಂದ ತಯಾರಿಸಲ್ಪಟ್ಟ ತೆಂಗಿನ ಎಲೆಗಳ ಸ್ಟ್ರಾ
Follow us
ಶ್ರೀದೇವಿ ಕಳಸದ
|

Updated on:Aug 24, 2023 | 7:07 PM

Straw: ನೀರು, ಜ್ಯೂಸ್​​, ಎಳನೀರು ಮತ್ತು ಮುಂತಾದ ಪಾನೀಯಗಳನ್ನು ಕುಡಿಯಲು ಪ್ಲಾಸ್ಟಿಕ್​ ಮತ್ತು ಪೇಪರ್​ನಿಂದ ಮಾಡಿದ ಸ್ಟ್ರಾಗಳನ್ನು ಬಳಸದೇ ಗತ್ಯಂತರವೇ ಇಲ್ಲವೆ? ಪ್ಲಾಸ್ಟಿಕ್​ ಬಳಕೆಯಿಂದ ನಮ್ಮ ಮನಸ್ಸು, ದೇಹದ ಮೇಲೆ ಸಾಕಷ್ಟು ದುಷ್ಪರಿಣಾಮ ಉಂಟಾಗುತ್ತದೆ ಎಂಬ ಅರಿವಿದ್ದರೂ ನಾವು ಪರ್ಯಾಯದ ಕಡೆ ಗಮನ ಹರಿಸುತ್ತಿಲ್ಲವೇಕೆ? ನಮ್ಮನ್ನು ಸುತ್ತುವರಿದ ಜೀವಜಂತುಗಳು ಮತ್ತು ಪ್ರಾಣಿಪಕ್ಷಿಗಳು, ಪರಿಸರ ಮತ್ತು ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ನಮ್ಮ ಆಯ್ಕೆಯೇ ತಾನೆ? ಈ ಸ್ಟೋರಿ ಓದಿ. ಬೆಂಗಳೂರಿನಲ್ಲಿರುವ ಎವ್ಲೋಗಿಯಾ ಇಕೋ ಕೇರ್ (Evlogia Eco Care) ಪ್ಲಾಸ್ಟಿಕ್​ ಸ್ಟ್ರಾಗಳಿಗೆ ಬದಲಾಗಿ ಪರಿಸರಸ್ನೇಹಿ ಸ್ಟ್ರಾ ತಯಾರಿಸುತ್ತಿದೆ. ಬಿದ್ದ ತೆಂಗಿನಗರಿಗಳಿಂದ ದಿನಕ್ಕೆ 10,000 ಸ್ಟ್ರಾಗಳನ್ನು ಇದು ತಯಾರಿಸುತ್ತದೆ. ಈ ಸಂಸ್ಥೆಯ ಮಾಲಿಕರಾದ ಮಣಿಗಂಡನ್​ ಕುಮಾರಪ್ಪನ್ (Manigandan Kumarappan) ಮತ್ತು ರಾಧಾ ಕಣ್ಣನ್ ದಂಪತಿ​ ಗ್ರಾಮೀಣ ಹೆಣ್ಣುಮಕ್ಕಳ ಸ್ವಾವಲಂಬಿತನವನ್ನು ಈ ಮೂಲಕ ಪ್ರೋತ್ಸಾಹಿಸುತ್ತಿದ್ದಾರೆ.

ಇದನ್ನೂ ಓದಿ : Viral Video: ತಾಯಿಯ ಹೊಟ್ಟೆಯಿಂದ ಹೊರಬರುತ್ತಿದ್ದಂತೆ ಸಾಹಸ ಪ್ರದರ್ಶನಕ್ಕಿಳಿದ ಮಗುವಿನ ವಿಡಿಯೋ ವೈರಲ್ 

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ಈ ಮೊದಲು ನಗರಪ್ರದೇಶದಲ್ಲಿ ಎಳನೀರು ಸರಬರಾಜು ಮಾಡುವ ಟೆಂಕೋ ಎಂಬ ಕಂಪೆನಿಯನ್ನು ನಿರ್ವಹಿಸುತ್ತಿದ್ದೆ. ಆಗ ಗ್ರಾಹಕರು ಸ್ಟ್ರಾಗಳನ್ನು ಕೇಳುತ್ತಿದ್ದರು. ಪ್ಲಾಸ್ಟಿಕ್​ ಸ್ಟ್ರಾ ಕೊಡಲು ಮನಸ್ಸಾಗುತ್ತಿರಲಿಲ್ಲ ಇನ್ನು ಪೇಪರ್​ ಸ್ಟ್ರಾಗಳು ಒದ್ದೆಯಾಗಿಬಿಡುತ್ತಿದ್ದವು. ಆಗ ಇದಕ್ಕೆ ಏನಾದರೂ ಪರ್ಯಾಯ ಕಂಡುಕೊಳ್ಳಬೇಕು ಎನ್ನಿಸಿತು. ಇದೆಲ್ಲ ಯೋಚಿಸುತ್ತಿರುವಾಗ ನೆಲಕ್ಕೆ ಬಿದ್ದ ತೆಂಗಿನಗರಿಗಳು ಮತ್ತು ಕೆಲವೆಡೆ ಅವುಗಳನ್ನು ಸುಡುತ್ತಿದ್ದುದು ಕಿರಿಕಿರಿ ಮಾಡುತ್ತಿದ್ದವು. ಇದಕ್ಕೇನಾದರೂ ಪರಿಹಾರ ಕಂಡುಹಿಡಿಯಬೇಕು ಎಂದು ಉದ್ದೇಶಿಸಿ ಬಿದ್ದ ತೆಂಗಿನಗರಿಗಳ ಸಂಗ್ರಹದಲ್ಲಿ ತೊಡಗಿದೆ.’ ಎನ್ನುತ್ತಾರೆ ಮಣಿಗಂಡನ್​.

ತೆಂಗಿನಗರಿಗಳಿಂದ ಸ್ಟ್ರಾ ತಯಾರಿಸುತ್ತಿವ ಬಗೆ ನೋಡಿ

ಇದೇ ಹೊತ್ತಿಗೆ ಮಣಿಗಂಡನ್​ ಅವರಿಗೆ ತೆಂಗಿನ ಗರಿಗಳಿಂದ ಸ್ಟ್ರಾ ತಯಾರಿಸಬಹುದು ಎಂಬ ಸುದ್ದಿ ಇವರ ಕಣ್ಣಿಗೆ ಬಿದ್ದಿತು. ಮುಂದಿನ ದಿನ ತಜ್ಞರೊಂದಿಗೆ ಮಾತನಾಡಿ ತಂತ್ರಜ್ಞಾನದ ಬಗ್ಗೆ ಅರ್ಥ ಮಾಡಿಕೊಂಡು ಸಂಶೋಧನೆಗೆ ತೊಡಗಿದರು. ಎಂಜಿನಿಯರುಗಳ ಸಹಾಯದಿಂದ ಈ ಉದ್ಯಮವನ್ನು ಪ್ರಾರಂಭಿಸಿಯೇ ಬಿಟ್ಟರು. ತಮಿಳುನಾಡಿನ ನಾಲ್ಕು ಬೇರೆ ಬೇರೆ ಫಾರ್ಮ್​ಗಳಿಂದ ತೆಂಗಿನ ಗರಿಗಳನ್ನು ಸಂಗ್ರಹಿಸಿ, ಸ್ವಚ್ಛಗೊಳಿಸಿ ಬೆಂಗಳೂರಿನ ಉತ್ಪಾದನಾ ಘಟಕಕ್ಕೆ ಕಳುಹಿಸಲಾಗುತ್ತದೆ.

ಎವ್ಲೋಗಿಯಾದ ಸಿಬ್ಬಂದಿಯೊಂದಿಗೆ ಮಣಿಗಂಡನ್

ಸ್ಟ್ರಾಗಳನ್ನು ಹೇಗೆ ತಯಾರಿಸಲಾಗುತ್ತದೆ?

ಗರಿಗಳಿಂದ ತೆಂಗಿನ ಎಲೆಗಳನ್ನು ಬೇರ್ಪಡಿಸಿ 120 ಡಿಗ್ರೀ ಸೆಲ್ಸಿಯಶ್​ನಲ್ಲಿ ಶಾಖ ಹಾಯಿಸಲಾಗುತ್ತದೆ. ನಂತರ ಯಂತ್ರದಿಂದ ಬೆಚ್ಚಿಗಿನ ಎಲೆಗಳನ್ನು ಸುರುಳಿಸುತ್ತಲಾಗುತ್ತದೆ. ತಣಿದ ನಂತರ ಕಟರ್​ ಬಳಸಿ ಬೇಕಾದ ಗಾತ್ರದಲ್ಲಿ ಕತ್ತರಿಸಲಾಗುತ್ತದೆ. ತಯಾರಾದ ಈ ಕೊಳವೆಗಳಿಗೆ ಮಣಿಗಂಡನ್​ ಕೋಕೋ ಲೀಫಿ ಸ್ಟ್ರಾಸ್​ ಎಂದು ನಾಮಕರಣ ಮಾಡಿದ್ದಾರೆ. ಬಿಸಿ ಪಾನೀಯಗಳಲ್ಲಿ ಅರ್ಧ ಗಂಟೆ, ತಂಪು ಪಾನೀಯಗಳಲ್ಲಿ 6 ಗಂಟೆಯತನಕ ಇವು ಹಾಗೇ ಇರುತ್ತವೆ. ಸದ್ಯ 12ಇಂಚುಗಳ ಸ್ಟ್ರಾ ತಯಾರಿಸಲಾಗುತ್ತಿದೆ. ಇವುಗಳ ಬೆಲೆ ಒಂದಕ್ಕೆ ರೂ. 1.5ರಿಂದ ರೂ. 3.

ಗ್ರಾಮೀಣ ಮಹಿಳೆಯರ ಸಬಲೀಕರಣ

ಆರಂಭದಲ್ಲಿ ಮೂರು ಮಹಿಳೆಯರನ್ನು ತೊಡಗಿಸಿಕೊಂಡು ಯಂತ್ರೋಪಕರಣ ಬಳಕೆ ಕುರಿತು ತರಬೇತಿ ನೀಡಲಾಯಿತು. ಇದೀಗ ಪೂರ್ಣಪ್ರಮಾಣದಲ್ಲಿ 15 ಮಹಿಳೆಯರನ್ನು ನೇಮಿಸಿಕೊಳ್ಳಾಗಿದೆ. ಇದೀಗ ಈ ಉತ್ಪಾದನಾ ಘಟಕವು ಪ್ರತಿ ತಿಂಗಳು 2,50,000 ಸ್ಟ್ರಾಗಳನ್ನು ಉತ್ಪಾದಿಸುತ್ತಿದೆ, ಭಾರತ, ಅಮೆರಿಕಾ, ಕೆನಡಾ ಮುಂತಾದ ದೇಶಗಳಿಗೆ ಇವು ರಫ್ತಾಗುತ್ತವೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 7:05 pm, Thu, 24 August 23

ಪಾಟ್ನಾದಲ್ಲಿ 1,200 ಕೋಟಿ ವೆಚ್ಚದ ಟರ್ಮಿನಲ್ ಉದ್ಘಾಟಿಸಿದ ಮೋದಿ
ಪಾಟ್ನಾದಲ್ಲಿ 1,200 ಕೋಟಿ ವೆಚ್ಚದ ಟರ್ಮಿನಲ್ ಉದ್ಘಾಟಿಸಿದ ಮೋದಿ
ಪಾಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ರೋಡ್ ಶೋ
ಪಾಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ರೋಡ್ ಶೋ
ಆರ್​ಸಿಬಿ ವೇಗಿಗಳ ವಿಕೆಟ್ ಬೇಟೆ ಹೇಗಿದೆ ನೀವೇ ನೋಡಿ
ಆರ್​ಸಿಬಿ ವೇಗಿಗಳ ವಿಕೆಟ್ ಬೇಟೆ ಹೇಗಿದೆ ನೀವೇ ನೋಡಿ
ಕನ್ನಡದ ಬಗ್ಗೆ ಕಮಲ್ ಹಾಸನ್​ ಹೇಳಿದ್ದು ಸರಿಯೇ? ನಟಿ ಜಯಮಾಲಾ ಪ್ರತಿಕ್ರಿಯೆ
ಕನ್ನಡದ ಬಗ್ಗೆ ಕಮಲ್ ಹಾಸನ್​ ಹೇಳಿದ್ದು ಸರಿಯೇ? ನಟಿ ಜಯಮಾಲಾ ಪ್ರತಿಕ್ರಿಯೆ
ರೆಹಮಾನ್ ಕೊಲೆಗೆ ಪೊಲೀಸ್ ಕಮೀಶನರ್ ಹೊಣೆ: ಯುವ ಮುಖಂಡರು
ರೆಹಮಾನ್ ಕೊಲೆಗೆ ಪೊಲೀಸ್ ಕಮೀಶನರ್ ಹೊಣೆ: ಯುವ ಮುಖಂಡರು
ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ
ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​