AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video Viral: ಮಗುವನ್ನು ರಕ್ಷಿಸಿ ಹೀರೋ ಆದ ವ್ಯಕ್ತಿ! ನೆಟ್ಟಿಗರಿಂದ ಭರಪೂರ ಪ್ರಶಂಸೆ

ಕ್ಯಾಲಿಫೋರ್ನಿಯಾದ ಹೆಸ್ಪೆರಿಯಾದಲ್ಲಿ ವ್ಯಕ್ತಿಯೊಬ್ಬ ಮಗುವಿನ ಜೀವವನ್ನು ಹೇಗೆ ಉಳಿಸಿದ್ದಾನೆ ಎಂಬುದನ್ನು ತೋರಿಸುವ ವೀಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ಬಗ್ಗೆ ನೆಟ್ಟಿಗರ ಅಭಿಪ್ರಾಯ ಏನು? ಇಲ್ಲಿದೆ ಮಾಹಿತಿ.

Video Viral: ಮಗುವನ್ನು ರಕ್ಷಿಸಿ ಹೀರೋ ಆದ ವ್ಯಕ್ತಿ! ನೆಟ್ಟಿಗರಿಂದ ಭರಪೂರ ಪ್ರಶಂಸೆ
Viral Video
ಪ್ರೀತಿ ಭಟ್​, ಗುಣವಂತೆ
| Edited By: |

Updated on: May 06, 2023 | 5:54 PM

Share

ನೀವು ತುಂಬಾ ವಿಡಿಯೋಗಳಲ್ಲಿ ನೋಡಿರಬಹುದು, ಇನ್ನೇನು ಮಕ್ಕಳು ಬೀಳುತ್ತಾರೆ ಎನ್ನುವಾಗ ತಂದೆ ಬಂದು ಕಾಪಾಡುವ ದೃಶ್ಯವನ್ನು, ಅದೇ ರೀತಿ ಇಲ್ಲೊಂದು ವಿಡಿಯೋದಲ್ಲಿ ಒಬ್ಬ ವ್ಯಕ್ತಿಯು ಮಗುವಿನ ಜೀವವನ್ನು ಹೇಗೆ ಉಳಿಸಿದ್ದಾನೆ ಎಂಬುದನ್ನು ತೋರಿಸುವ, ನಂಬಲಾಗದ ತುಣುಕನ್ನು ಆನ್ ಲೈನ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ, ರಸ್ತೆಯ ಕಡೆಗೆ ಸಾಗುತ್ತಿದ್ದ ಸ್ಟ್ರೋಲರ್ ಅನ್ನು ನಿಲ್ಲಿಸಲು ಆ ವ್ಯಕ್ತಿ ಧಾವಿಸುತ್ತಿರುವುದನ್ನು ತೋರಿಸಲಾಗುತ್ತದೆ. ಬಳಿಕ ಆ ವ್ಯಕ್ತಿ ಮಗುವನ್ನು ಕಾಪಾಡುತ್ತಾನೆ.

ಈ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ ಎನ್ನಲಾಗಿದೆ. ಗುಡ್ ನ್ಯೂಸ್ ಮೂವ್ಮೆಂಟ್ ಈ ವೀಡಿಯೊವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು ಜೊತೆಗೆ, ಅದಕ್ಕೆ ವಿವರವಾಗಿ ದೀರ್ಘ ಶೀರ್ಷಿಕೆಯನ್ನು ಸಹ ಪೋಸ್ಟ್ ಮಾಡಿದ್ದಾರೆ. “ಮಹಿಳೆಯೊಬ್ಬರು ಎ 1 ಹ್ಯಾಂಡ್ ಕಾರ್ ಅನ್ನು ವಾಶ್ ಮಾಡಲು ಬಂದಿದ್ದು ಹೊರಗೆ ತನ್ನ ಕಾರನ್ನು ನಿಲ್ಲಿಸಿ, ಮಗುವನ್ನು ಸ್ಟ್ರೋಲರ್ನಲ್ಲಿ ಕುಳ್ಳಿರಿಸಿದ್ದಾರೆ. ಇಳಿಜಾರಿದ್ದರಿಂದ ಗಾಳಿಯ ರಭಸಕ್ಕೆ ಸ್ಟ್ರೋಲರ್ ರಸ್ತೆಯ ಕಡೆಗೆ ಹೋಗಿದೆ ಎಂದು ವರದಿಯಾಗಿದ್ದು. ಸ್ಟ್ರೋಲರ್ ಸುಮಾರು ದೂರ ಕ್ರಮಿಸಿದ್ದು ಮಗುವಿನ ಸಂಬಂಧಿಕರೊಬ್ಬರು ಕಾಪಾಡಲು ಹೋಗುತ್ತಿರುವಾಗ ಬಿದ್ದಿದ್ದಾರೆ. ಬಳಿಕ ಅವರಿಗೆ ಎಷ್ಟೇ ಮಾಡಿದರೂ ಎದ್ದು ಹೋಗಲು ಸಾಧ್ಯವಾಗದೆ ನಿಲ್ಲಲು ಪ್ರಯತ್ನ ಪಡುತ್ತಿರುವ ಸಂದರ್ಭ ಹೀರೊನಂತೆ ಬಂದ ವ್ಯಕ್ತಿ ಆ ಮಗುವನ್ನು ಕಾಪಾಡಿದ್ದಾನೆ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ವಿಂಡೋ ಮೂಲಕ ಬಸ್​​ ಹತ್ತಿದ ಯುವತಿ! ನೆಟ್ಟಿಗರು ಹೇಳಿದ್ದೇನು ಗೊತ್ತಾ?

“ಮಗುವನ್ನು ಉಳಿಸುವ ಪ್ರಯತ್ನದಲ್ಲಿ ಅವರ ಸಂಬಂಧಿಕರು ಬಿದ್ದಿದ್ದರು. ಆದರೆ ಸಮಯಕ್ಕೆ ಸರಿಯಾಗಿ ಬಂದ ಆ ವ್ಯಕ್ತಿಯಿಂದ ಮಗು ಮರಳಿ ಬಂದಿದೆ. ಎಲ್ಲಿಯಾದರೂ ಆತ ಬರದಿದ್ದರೆ? ಎಂದು ನೆನೆಸಿಕೊಂಡಾಗ ಮೈ ಜುಮ್ ಎನ್ನುತ್ತದೆ” ಎಂದು ಕೆಲವು ಬಳಕೆದಾರರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಇನ್ನು ಕೆಲವು ಬಳಕೆದಾರರು ವಿಡಿಯೋ ವೀಕ್ಷಿಸಿದ ಬಳಿಕ ಅವನನ್ನು ನಿಜವಾದ ಹೀರೊ ಎಂದಿದ್ದಾರೆ. ಸುಮಾರು 18 ಗಂಟೆಗಳ ಹಿಂದೆ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದಾಗಿನಿಂದ, ಕ್ಲಿಪ್ ವೈರಲ್ ಆಗಿದೆ. ಇಲ್ಲಿಯವರೆಗೆ, ಇದು 1.5 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ ಮತ್ತು ಪೋಸ್ಟ್ ಹಲವಾರು ಲೈಕ್ ಗಳನ್ನು ಗಳಿಸಿದೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ