Viral Video: ಉಬರ್ ಚಾಲಕ ಗೂಗಲ್​ನಲ್ಲಿ ಕೆಲಸ ಬಿಟ್ಟು ಬೆಂಗಳೂರಿಗೆ ಬಂದಿದ್ದು ಈ ಕಾರಣಕ್ಕೆ

Uber : ಬೆಂಗಳೂರನ್ನು ಸುತ್ತಾಡಲು ತಾನು ಹೈದರಾಬಾದಿನಲ್ಲಿ ಗೂಗಲ್​ನಲ್ಲಿ ಕೆಲಸ ಬಿಟ್ಟು ಬಂದಿದ್ದೇನೆ ಎಂದು ಉಬರ್ ಮೋಟೋ ಡ್ರೈವರ್ X ಖಾತೆದಾರರ ಬಳಿ ಹೇಳಿಕೊಂಡಿದ್ದಾನೆ. ನೆಟ್ಟಿಗರಲ್ಲಿ ಕೆಲವರು ಈ ವ್ಯಕ್ತಿಯನ್ನು ಶ್ಲಾಘಿಸಿದ್ದಾರೆ. ಇನ್ನೂ ಕೆಲವರು ಇದನ್ನು ನಂಬುತ್ತೀರಾ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿದ ಮೇಲೆ ನಿಮ್ಮ ಅಭಿಪ್ರಾಯ ಏನಿರಬಹುದು?

Viral Video: ಉಬರ್ ಚಾಲಕ ಗೂಗಲ್​ನಲ್ಲಿ ಕೆಲಸ  ಬಿಟ್ಟು ಬೆಂಗಳೂರಿಗೆ ಬಂದಿದ್ದು ಈ ಕಾರಣಕ್ಕೆ
ಉಬರ್ ಮೊಟೊ ಡ್ರೈವರ್​ನೊಂದಿಗೆ ಸವಾರಿ ಹೊರಟ ರಾಘವ
Follow us
|

Updated on: Oct 26, 2023 | 10:36 AM

Bengaluru: ಬೆಂಗಳೂರು ಎಂದಾಕ್ಷಣ ಐಟಿ, ಐಟಿ ಎಂದಾಕ್ಷಣ ಬೆಂಗಳೂರು ಎನ್ನುವುದು ಸಲೀಸಾಗಿ ಹೊಳೆಯುತ್ತದೆ. ಅಲ್ಲದೆ ಬೆಂಗಳೂರು ಎಂಬ ಮಹಾನಗರ ತನ್ನದೇ ಆದ ವಿಶಿಷ್ಟ ಸಂಸ್ಕೃತಿ ಮತ್ತು ಆಕರ್ಷಣೆಯಿಂದ ಜಗತ್ತಿನ ಜನರನ್ನು ಸೆಳೆಯುತ್ತಲೇ ಇರುತ್ತದೆ. ಅದರಲ್ಲೂ ಐಟಿ ಜನರನ್ನು ಸೆಳೆಯುವ ಪರಿ ಹೇಳತೀರದು. ಇದೀಗ ವೈರಲ್ ಆಗಿರುವ ಪೋಸ್ಟ್ ನೋಡಿದ ನೆಟ್ಟಿಗರು ಇದು ಮತ್ತೊಂದು ‘ಪೀಕ್ ಬೆಂಗಳೂರು’ ಕ್ಷಣ ಎಂದಿದ್ದಾರೆ. X ಖಾತೆದಾರ ರಾಘವ್ ದುವಾ ಉಬರ್ ಮೋಟೋ ಡ್ರೈವರ್​ನೊಂದಿಗೆ ಮಾತಿಗಿಳಿದಾಗ ಹೊಮ್ಮಿದ ಕಥೆಯನ್ನು ಹಂಚಿಕೊಂಡಿದ್ದಾರೆ. ಈ ಡ್ರೈವರ್ ಹೈದರಾಬಾದಿನಲ್ಲಿ ಗೂಗಲ್​ನಲ್ಲಿ (Google) ಉದ್ಯೋಗಿಯಾಗಿದ್ದ ಕಥೆ ಇದಾಗಿದೆ.

ಇದನ್ನೂ ಓದಿ : Viral: ಲಂಡನ್​; ಮಕ್ಕಳ ‘ಹ್ಯಾಪ್ಪಿ ಮೀಲ್​’ನಲ್ಲಿ ಸಿಗರೇಟ್​ ತುಂಡು; ಮೆಕ್​ಡೊನಾಲ್ಡ್ಸ್​ ಪ್ರತಿಕ್ರಿಯೆ

ಬೆಂಗಳೂರನ್ನು ಸುತ್ತಾಡಲು ತಾನು ಗೂಗಲ್​ ಕೆಲಸವನ್ನು ತೊರೆದಿದ್ದೇನೆ ಎಂದು ಉಬರ್​ ಚಾಲಕ ರಾಘವ ಅವರ ಬಳಿ ಹೇಳಿಕೊಂಡಿದ್ದಾನೆ. ‘ನನ್ನ ಉಬರ್​ ಮೋಟೋ ಡ್ರೈವರ್ ಈ ಮೊದಲು ಗೂಗಲ್​ನಲ್ಲಿ ಕೆಲಸ ಮಾಡುತ್ತಿದ್ದ. ಕಳೆದ ಇಪ್ಪತ್ತು ದಿನಗಳಿಂದ ಬೆಂಗಳೂರಿನಲ್ಲಿ ಉಬರ್​ ಡ್ರೈವರ್ ಕೆಲಸ ಮಾಡುತ್ತಿದ್ದಾನೆ. ಈ ನಗರವನ್ನು ಸುತ್ತಾಡುವ ಉದ್ದೇಶದಿಂದ ಹಿಂದಿನ ಕೆಲಸವನ್ನು ತೊರೆದಿದ್ದೇನೆ ಎಂದು ಹೇಳಿದ್ದಾರೆ’ ಎಂದು ರಾಘವ ತಮ್ಮ ಪೋಸ್ಟ್​ನಲ್ಲಿ ಉಲ್ಲೇಖಿಸಿದ್ದಾರೆ.

ಉಬರ್ ಮೋಟೋ ಡ್ರೈವರ್​ನೊಂದಿಗೆ ಸವಾರಿ

ಈ ಪೋಸ್ಟ್ ನೋಡಿದ ಅನೇಕರು ಬೆಂಗಳೂರಿಗೆ ಸಂಬಂಧಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ನಿಜಕ್ಕೂ ಈ ಸಮಯ ಬಹಳ ಉಲ್ಲಾಸಮಯವಾಗಿತ್ತು ಎಂದು ನಾನು ಭಾವಿಸುತ್ತೇನೆ ಎಂದು ಒಬ್ಬರು ಹೇಳಿದ್ದಾರೆ. ಹೌದು ನಾನು ಕೂಡ ಹೀಗೆ ಡ್ರೈವರ್​ಗಳೊಂದಿಗೆ ಮಾತನಾಡುತ್ತ ಹೋಗುತ್ತೇನೆ, ಅವರು ತಮ್ಮ ಕಥೆಗಳನ್ನು ಹೇಳಿಕೊಂಡಿದ್ದಾರೆ ಎಂದಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral Video: ಮಹಾರಾಷ್ಟ್ರದ ಈ ಬಾಲಕನ ಕೌಶಲಕ್ಕೆ ನೆಟ್ಟಿಗರೇನೋ ಮನಸೋತರು, ಆದರೆ…

ಕಮರ್ಷಿಯಲ್ ಲೈಸೆನ್ಸ್​ ಇಲ್ಲದೇ ಹೇಗೆ ಡ್ರೈವ್ ಮಾಡುತ್ತಾರೆ ಎಂದು ಕೇಳಿದ್ದಾರೆ ಒಬ್ಬರು. ನೀವು ಬಹಳ ಮುಗ್ಧರಿಬೇಕು ಇಂಥ ಕಥೆಯನ್ನು ನಂಬುತ್ತೀರಲ್ಲ… ಎಂದಿದ್ದಾರೆ ಇನ್ನೊಬ್ಬರು. ಗೂಗಲ್​ನಲ್ಲಿ ಬಹುಶಃ ಇವರು ಸಾಫ್ಟ್​ವೇರ್ ಎಂಜಿನಿಯರ್ ಆಗಿರಲಿಕ್ಕಿಲ್ಲವೇನೋ ಎಂದಿದ್ದಾರೆ ಮತ್ತೊಬ್ಬರು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್