Viral Video: ನಿಮಗೊಂದು ದೋಸಾ ಪ್ರಿಂಟರ್ ಬೇಕಾ?

Dosa Printer : ಚೆನ್ನೈನ ಸ್ಟಾರ್ಟ್​ಅಪ್​ ಕಂಪೆನಿಯೊಂದು ಆವಿಷ್ಕಾರ ಮಾಡಿದ ಈ ದೋಸಾ ಪ್ರಿಂಟರ್ ಬಗ್ಗೆ ಆನ್​ಲೈನ್​ನಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Viral Video: ನಿಮಗೊಂದು ದೋಸಾ ಪ್ರಿಂಟರ್ ಬೇಕಾ?
ಎವಾಚೆಫ್ ದೋಸಾ ಪ್ರಿಂಟರ್
Follow us
| Updated By: ಶ್ರೀದೇವಿ ಕಳಸದ

Updated on:Aug 25, 2022 | 11:48 AM

Viral Video : ತಂತ್ರಜ್ಞಾನದ ನಾಗಾಲೋಟ ದಿನವೂ ಅಚ್ಚರಿಗಳ ಮೇಲೆ ಅಚ್ಚರಿಯನ್ನು ಹುಯ್ಯುತ್ತಲೇ ಇರುತ್ತದೆ ದಿನಾ ಬೆಳಗ್ಗೆ ದೋಸೆ ಹುಯ್ದಂತೆ. ಮಾರುಕಟ್ಟೆಗೆ ಬರುತ್ತಿರುವ ಯಂತ್ರಗಳಂತೂ ಮನುಷ್ಯನಿಗೆ ಹೊಸ ಆವಿಷ್ಕಾರಗಳ ಗರಿಗರಿಯಾದ ರುಚಿರುಚಿಯಾದ ಪರಿಹಾರಗಳನ್ನು ತೋರಿಸುತ್ತಲೇ ಇರುತ್ತವೆ. ಈಗಿಲ್ಲಿ ಚೆನ್ನೈನ ಎವೊಚೆಫ್ ಎಂಬ ಸ್ಟಾರ್ಟ್​ಅಪ್ ಕಂಪೆನಿ ಅಡುಗೆಮನೆಗೆ ಸಂಬಂಧಿಸಿದ ಪ್ರಿಂಟಿಂಗ್ ಮಶೀನ್ ಪರಿಚಯಿಸಿದೆ. ಅಡುಗೆಮನೆ? ಗೊಂದಲ ಯಾರಿಗೂ ಸಹಜ. ಒಮ್ಮೆ ಈ ವಿಡಿಯೋ ನೋಡಿ. ನಿಮ್ಮನ್ನು ದಾಸ ಅಥವಾ ದಾಸೀತನ ಮಾಡಿಕೊಳ್ಳುವ ಎಲ್ಲ ಗುಣಗಳೂ ಇದಕ್ಕಿವೆ ಅನ್ನಿಸದೇ ಇರದು!

ಈ ಪ್ರಿಂಟರ್​ನ ಒಡಲಿಗೆ ಹಿಟ್ಟು ಹುಯ್ದರೆ, ಗರಿಗರಿಯಾದ ದೋಸೆಗಳು ಒಂದೇ ನಿಮಿಷದಲ್ಲಿ ನಿಮ್ಮ ಪ್ಲೇಟನ್ನು ಅಲಂಕರಿಸುತ್ತವೆ. ಎಷ್ಟು ದಪ್ಪ ಬೇಕು ಎಷ್ಟು ತೆಳು ಬೇಕು ಎನ್ನುವುದನ್ನು ಡಿಜಿಟಲೈಸ್ಡ್​ ಬಟನ್ ಮೂಲಕ ಸೆಟ್ ಮಾಡಿಕೊಳ್ಳಲು ಇಲ್ಲಿ ಅವಕಾಶವಿದೆ. ಹಾಗೆಯೇ ತುಪ್ಪ ಸವರಬೇಕಾ? ಬೆಣ್ಣೆ ಸವರಬೇಕಾ ಅಥವಾ ಚೀಸ್​ ಹಾಕಬೇಕಾ? ನಿಮ್ಮ ಆಯ್ಕೆಯಂತೆ ಕಸ್ಟಮೈಸ್ ಮಾಡಿಕೊಳ್ಳಬಹುದು.

ಸಾಕಷ್ಟು ಮಂದಿ ಸಾಕಷ್ಟು ನಮೂನೆಯಾಗಿ ಪ್ರತಿಕ್ರಿಯಿಸಿದ್ದಾರೆ. ಪರಂಪರಾಗತ ಮತ್ತು ಮನೆರುಚಿಯ ಘಮವನ್ನು ಇದು ತಂದುಕೊಡುವುದೆ? ಎಂದು ಕೆಲವರು ಪ್ರಶ್ನಿಸಿದ್ದಾರೆ. ಇದೊಂದು ಪ್ರಯೋಜನವಿಲ್ಲದ ಆವಿಷ್ಕಾರ. ದೋಸೆ ಹುಯ್ಯುವುದು ದೊಡ್ಡ ವಿಷಯವಲ್ಲ, ದೋಸೆಯ ಹಿಟ್ಟು ತಯಾರಿಸುವುದರಲ್ಲಿ ಪಾಕದ ಹದ ಅಡಗಿರುವುದು ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.

Evochef Dosa Maker ಎಂದರೆ EC Flip ಆನ್​ಲೈನ್​ನಲ್ಲಿ ಇದರ ಬೆಲೆ ರೂ. 15,999

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:41 am, Thu, 25 August 22

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ