AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ನಿಮಗೊಂದು ದೋಸಾ ಪ್ರಿಂಟರ್ ಬೇಕಾ?

Dosa Printer : ಚೆನ್ನೈನ ಸ್ಟಾರ್ಟ್​ಅಪ್​ ಕಂಪೆನಿಯೊಂದು ಆವಿಷ್ಕಾರ ಮಾಡಿದ ಈ ದೋಸಾ ಪ್ರಿಂಟರ್ ಬಗ್ಗೆ ಆನ್​ಲೈನ್​ನಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Viral Video: ನಿಮಗೊಂದು ದೋಸಾ ಪ್ರಿಂಟರ್ ಬೇಕಾ?
ಎವಾಚೆಫ್ ದೋಸಾ ಪ್ರಿಂಟರ್
TV9 Web
| Edited By: |

Updated on:Aug 25, 2022 | 11:48 AM

Share

Viral Video : ತಂತ್ರಜ್ಞಾನದ ನಾಗಾಲೋಟ ದಿನವೂ ಅಚ್ಚರಿಗಳ ಮೇಲೆ ಅಚ್ಚರಿಯನ್ನು ಹುಯ್ಯುತ್ತಲೇ ಇರುತ್ತದೆ ದಿನಾ ಬೆಳಗ್ಗೆ ದೋಸೆ ಹುಯ್ದಂತೆ. ಮಾರುಕಟ್ಟೆಗೆ ಬರುತ್ತಿರುವ ಯಂತ್ರಗಳಂತೂ ಮನುಷ್ಯನಿಗೆ ಹೊಸ ಆವಿಷ್ಕಾರಗಳ ಗರಿಗರಿಯಾದ ರುಚಿರುಚಿಯಾದ ಪರಿಹಾರಗಳನ್ನು ತೋರಿಸುತ್ತಲೇ ಇರುತ್ತವೆ. ಈಗಿಲ್ಲಿ ಚೆನ್ನೈನ ಎವೊಚೆಫ್ ಎಂಬ ಸ್ಟಾರ್ಟ್​ಅಪ್ ಕಂಪೆನಿ ಅಡುಗೆಮನೆಗೆ ಸಂಬಂಧಿಸಿದ ಪ್ರಿಂಟಿಂಗ್ ಮಶೀನ್ ಪರಿಚಯಿಸಿದೆ. ಅಡುಗೆಮನೆ? ಗೊಂದಲ ಯಾರಿಗೂ ಸಹಜ. ಒಮ್ಮೆ ಈ ವಿಡಿಯೋ ನೋಡಿ. ನಿಮ್ಮನ್ನು ದಾಸ ಅಥವಾ ದಾಸೀತನ ಮಾಡಿಕೊಳ್ಳುವ ಎಲ್ಲ ಗುಣಗಳೂ ಇದಕ್ಕಿವೆ ಅನ್ನಿಸದೇ ಇರದು!

ಈ ಪ್ರಿಂಟರ್​ನ ಒಡಲಿಗೆ ಹಿಟ್ಟು ಹುಯ್ದರೆ, ಗರಿಗರಿಯಾದ ದೋಸೆಗಳು ಒಂದೇ ನಿಮಿಷದಲ್ಲಿ ನಿಮ್ಮ ಪ್ಲೇಟನ್ನು ಅಲಂಕರಿಸುತ್ತವೆ. ಎಷ್ಟು ದಪ್ಪ ಬೇಕು ಎಷ್ಟು ತೆಳು ಬೇಕು ಎನ್ನುವುದನ್ನು ಡಿಜಿಟಲೈಸ್ಡ್​ ಬಟನ್ ಮೂಲಕ ಸೆಟ್ ಮಾಡಿಕೊಳ್ಳಲು ಇಲ್ಲಿ ಅವಕಾಶವಿದೆ. ಹಾಗೆಯೇ ತುಪ್ಪ ಸವರಬೇಕಾ? ಬೆಣ್ಣೆ ಸವರಬೇಕಾ ಅಥವಾ ಚೀಸ್​ ಹಾಕಬೇಕಾ? ನಿಮ್ಮ ಆಯ್ಕೆಯಂತೆ ಕಸ್ಟಮೈಸ್ ಮಾಡಿಕೊಳ್ಳಬಹುದು.

ಸಾಕಷ್ಟು ಮಂದಿ ಸಾಕಷ್ಟು ನಮೂನೆಯಾಗಿ ಪ್ರತಿಕ್ರಿಯಿಸಿದ್ದಾರೆ. ಪರಂಪರಾಗತ ಮತ್ತು ಮನೆರುಚಿಯ ಘಮವನ್ನು ಇದು ತಂದುಕೊಡುವುದೆ? ಎಂದು ಕೆಲವರು ಪ್ರಶ್ನಿಸಿದ್ದಾರೆ. ಇದೊಂದು ಪ್ರಯೋಜನವಿಲ್ಲದ ಆವಿಷ್ಕಾರ. ದೋಸೆ ಹುಯ್ಯುವುದು ದೊಡ್ಡ ವಿಷಯವಲ್ಲ, ದೋಸೆಯ ಹಿಟ್ಟು ತಯಾರಿಸುವುದರಲ್ಲಿ ಪಾಕದ ಹದ ಅಡಗಿರುವುದು ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.

Evochef Dosa Maker ಎಂದರೆ EC Flip ಆನ್​ಲೈನ್​ನಲ್ಲಿ ಇದರ ಬೆಲೆ ರೂ. 15,999

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:41 am, Thu, 25 August 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ