AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ನಿಮಗೊಂದು ದೋಸಾ ಪ್ರಿಂಟರ್ ಬೇಕಾ?

Dosa Printer : ಚೆನ್ನೈನ ಸ್ಟಾರ್ಟ್​ಅಪ್​ ಕಂಪೆನಿಯೊಂದು ಆವಿಷ್ಕಾರ ಮಾಡಿದ ಈ ದೋಸಾ ಪ್ರಿಂಟರ್ ಬಗ್ಗೆ ಆನ್​ಲೈನ್​ನಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Viral Video: ನಿಮಗೊಂದು ದೋಸಾ ಪ್ರಿಂಟರ್ ಬೇಕಾ?
ಎವಾಚೆಫ್ ದೋಸಾ ಪ್ರಿಂಟರ್
TV9 Web
| Edited By: ಶ್ರೀದೇವಿ ಕಳಸದ|

Updated on:Aug 25, 2022 | 11:48 AM

Share

Viral Video : ತಂತ್ರಜ್ಞಾನದ ನಾಗಾಲೋಟ ದಿನವೂ ಅಚ್ಚರಿಗಳ ಮೇಲೆ ಅಚ್ಚರಿಯನ್ನು ಹುಯ್ಯುತ್ತಲೇ ಇರುತ್ತದೆ ದಿನಾ ಬೆಳಗ್ಗೆ ದೋಸೆ ಹುಯ್ದಂತೆ. ಮಾರುಕಟ್ಟೆಗೆ ಬರುತ್ತಿರುವ ಯಂತ್ರಗಳಂತೂ ಮನುಷ್ಯನಿಗೆ ಹೊಸ ಆವಿಷ್ಕಾರಗಳ ಗರಿಗರಿಯಾದ ರುಚಿರುಚಿಯಾದ ಪರಿಹಾರಗಳನ್ನು ತೋರಿಸುತ್ತಲೇ ಇರುತ್ತವೆ. ಈಗಿಲ್ಲಿ ಚೆನ್ನೈನ ಎವೊಚೆಫ್ ಎಂಬ ಸ್ಟಾರ್ಟ್​ಅಪ್ ಕಂಪೆನಿ ಅಡುಗೆಮನೆಗೆ ಸಂಬಂಧಿಸಿದ ಪ್ರಿಂಟಿಂಗ್ ಮಶೀನ್ ಪರಿಚಯಿಸಿದೆ. ಅಡುಗೆಮನೆ? ಗೊಂದಲ ಯಾರಿಗೂ ಸಹಜ. ಒಮ್ಮೆ ಈ ವಿಡಿಯೋ ನೋಡಿ. ನಿಮ್ಮನ್ನು ದಾಸ ಅಥವಾ ದಾಸೀತನ ಮಾಡಿಕೊಳ್ಳುವ ಎಲ್ಲ ಗುಣಗಳೂ ಇದಕ್ಕಿವೆ ಅನ್ನಿಸದೇ ಇರದು!

ಈ ಪ್ರಿಂಟರ್​ನ ಒಡಲಿಗೆ ಹಿಟ್ಟು ಹುಯ್ದರೆ, ಗರಿಗರಿಯಾದ ದೋಸೆಗಳು ಒಂದೇ ನಿಮಿಷದಲ್ಲಿ ನಿಮ್ಮ ಪ್ಲೇಟನ್ನು ಅಲಂಕರಿಸುತ್ತವೆ. ಎಷ್ಟು ದಪ್ಪ ಬೇಕು ಎಷ್ಟು ತೆಳು ಬೇಕು ಎನ್ನುವುದನ್ನು ಡಿಜಿಟಲೈಸ್ಡ್​ ಬಟನ್ ಮೂಲಕ ಸೆಟ್ ಮಾಡಿಕೊಳ್ಳಲು ಇಲ್ಲಿ ಅವಕಾಶವಿದೆ. ಹಾಗೆಯೇ ತುಪ್ಪ ಸವರಬೇಕಾ? ಬೆಣ್ಣೆ ಸವರಬೇಕಾ ಅಥವಾ ಚೀಸ್​ ಹಾಕಬೇಕಾ? ನಿಮ್ಮ ಆಯ್ಕೆಯಂತೆ ಕಸ್ಟಮೈಸ್ ಮಾಡಿಕೊಳ್ಳಬಹುದು.

ಸಾಕಷ್ಟು ಮಂದಿ ಸಾಕಷ್ಟು ನಮೂನೆಯಾಗಿ ಪ್ರತಿಕ್ರಿಯಿಸಿದ್ದಾರೆ. ಪರಂಪರಾಗತ ಮತ್ತು ಮನೆರುಚಿಯ ಘಮವನ್ನು ಇದು ತಂದುಕೊಡುವುದೆ? ಎಂದು ಕೆಲವರು ಪ್ರಶ್ನಿಸಿದ್ದಾರೆ. ಇದೊಂದು ಪ್ರಯೋಜನವಿಲ್ಲದ ಆವಿಷ್ಕಾರ. ದೋಸೆ ಹುಯ್ಯುವುದು ದೊಡ್ಡ ವಿಷಯವಲ್ಲ, ದೋಸೆಯ ಹಿಟ್ಟು ತಯಾರಿಸುವುದರಲ್ಲಿ ಪಾಕದ ಹದ ಅಡಗಿರುವುದು ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.

Evochef Dosa Maker ಎಂದರೆ EC Flip ಆನ್​ಲೈನ್​ನಲ್ಲಿ ಇದರ ಬೆಲೆ ರೂ. 15,999

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:41 am, Thu, 25 August 22

Follow Us
ಆ ಶಾಸಕರಿಂದಲೇ ಅಡ್ಡಮತದಾನ? ಸಿಟಿ ರವಿ ಏನಂದ್ರು ನೋಡಿ
ಆ ಶಾಸಕರಿಂದಲೇ ಅಡ್ಡಮತದಾನ? ಸಿಟಿ ರವಿ ಏನಂದ್ರು ನೋಡಿ
ಮರದ ಕೊಂಬೆ ಬಿದ್ದು ಖಾಸಗಿ ಬಸ್ ಜಖಂ; ಚಾಲಕ, ಕ್ಲೀನರ್ ಜಸ್ಟ್ ಮಿಸ್!
ಮರದ ಕೊಂಬೆ ಬಿದ್ದು ಖಾಸಗಿ ಬಸ್ ಜಖಂ; ಚಾಲಕ, ಕ್ಲೀನರ್ ಜಸ್ಟ್ ಮಿಸ್!
ಕನ್ನಡ ಬಾವುಟಕ್ಕೆ ಅಪಮಾನ: ನಮ್ಮ ಮೆಟ್ರೋ ಸಿಬ್ಬಂದಿ ವಿರುದ್ಧ ಆಕ್ರೋಶ
ಕನ್ನಡ ಬಾವುಟಕ್ಕೆ ಅಪಮಾನ: ನಮ್ಮ ಮೆಟ್ರೋ ಸಿಬ್ಬಂದಿ ವಿರುದ್ಧ ಆಕ್ರೋಶ
ಕೊಳ್ಳೇಗಾಲದಲ್ಲಿ ಪ್ರಿಂಟಿಂಗ್ ಪ್ರೆಸ್‌ಗೆ ನುಗ್ಗಿದ ಬೃಹತ್ ಗಾತ್ರದ ಉಡ
ಕೊಳ್ಳೇಗಾಲದಲ್ಲಿ ಪ್ರಿಂಟಿಂಗ್ ಪ್ರೆಸ್‌ಗೆ ನುಗ್ಗಿದ ಬೃಹತ್ ಗಾತ್ರದ ಉಡ
‘ಆ ರೀತಿ ಗಿಮಿಕ್ ಯಾರೂ ಮಾಡಲ್ಲ’; ವಿನೋದ್ ಆರೋಗ್ಯದ ಬಗ್ಗೆ ಸ್ಪಷ್ಟನೆ
‘ಆ ರೀತಿ ಗಿಮಿಕ್ ಯಾರೂ ಮಾಡಲ್ಲ’; ವಿನೋದ್ ಆರೋಗ್ಯದ ಬಗ್ಗೆ ಸ್ಪಷ್ಟನೆ
ಇಂದು ಈ ರಾಶಿಯವರಿಗೆ ಧನಯೋಗ!
ಇಂದು ಈ ರಾಶಿಯವರಿಗೆ ಧನಯೋಗ!
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ