Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: “ನಿಲ್ಲೇ ಗಂಗಮ್ಮ ಅರ್ಜೆಂಟ್ ಯಾಕ್ ಮಾಡ್ತೀ ನಮ್ಮವ್ವ” ಕಂಡೆಕ್ಟರ್ ಪ್ರಯಾಣಿಕರನ್ನು ಬಸ್ಸಿಂದ ಹತ್ತಿ-ಇಳಿಸುವುದು ಹೀಗೆ 

ಬಸ್​​ನಲ್ಲಿ ಫುಲ್ ರಶ್ ಇದ್ರೆ ಪ್ರಯಾಣಿಕರನ್ನು ಹತ್ತಿ ಇಳಿಸುವುದೇ ಕಂಡಕ್ಟರ್​ಗೆ  ಒಂದು ದೊಡ್ಡ ತಲೆನೋವಾಗಿರುತ್ತೆ.  ಈ ಸಮಯದಲ್ಲಿ ಪ್ರಯಾಣಿಕರು ಬಸ್ಸಿಂದ ಹತ್ತಿ ಇಳಿಯಲು ನೂಕು ನುಗ್ಗಲು ಮಾಡ್ರಿದೆ, ಹೆಚ್ಚಿನ ಬಸ್ ಕಂಡಕ್ಟರ್​​ಗಳು  ಕೋಪಗೊಂಡು ಪ್ರಯಾಣಿಕರ ಮೇಲೆ ರೇಗಾಡುತ್ತಾರೆ. ಆದ್ರೆ ಇಲ್ಲೊಬ್ಬ ಕಂಡೆಕ್ಟರ್ ಮಾತ್ರ  ನಿಲ್ಲೇ ಗಂಗವ್ವ.. ಬಾರೇ ಗೌರಮ್ಮ ಅರ್ಜೆಂಟ್ ಯಾಕ್ ಮಾಡ್ತಿ, ಜನರು ಇಳಿದ ಮೇಲೆ ಬಸ್ ಹತ್ತುವಿರಂತೆ ಎಂದು ಹಾಡನ್ನು ಹಾಡುತ್ತಾ ಬಹಳ ತಾಳ್ಮೆಯಿಂದ ವರ್ತಿಸಿದ್ದಾರೆ.  ಮಾಡೋ ಕೆಲಸದಲ್ಲಿ ನೆಮ್ಮದಿ ಸಿಗಬೇಕಾದ್ರೆ ಹೀಗೆ ಖುಷಿ  ಖುಷಿಯಾಗಿರಬೇಕು ಎಂದು ನೆಟ್ಟಿಗರು ಕಂಡೆಕ್ಟರ್ ನಡೆಗೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ. 

Viral Video: ನಿಲ್ಲೇ ಗಂಗಮ್ಮ ಅರ್ಜೆಂಟ್ ಯಾಕ್ ಮಾಡ್ತೀ ನಮ್ಮವ್ವ ಕಂಡೆಕ್ಟರ್ ಪ್ರಯಾಣಿಕರನ್ನು ಬಸ್ಸಿಂದ ಹತ್ತಿ-ಇಳಿಸುವುದು ಹೀಗೆ 
ವೈರಲ್​​ ವಿಡಿಯೋ ಇಲ್ಲಿದೆ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 12, 2023 | 2:14 PM

ಹೆಚ್ಚಾಗಿ ಬೆಳಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ಬಸ್ಸುಗಳಲ್ಲಿ ಫುಲ್ ರಶ್ ಇರುತ್ತೆ. ಎಷ್ಟೇ ರಶ್ ಇದ್ರೂ ನಾನು ಮನೆಗೆ ಬೇಗ ತಲುಪಿದ್ರೆ ಸಾಕು, ನಾನು ಸಮಯಕ್ಕೆ ಸರಿಯಾಗಿ ಆಫೀಸ್ ತಲುಪಿದ್ರೆ ಸಾಕು, ಕರೆಕ್ಟ್ ಟೈಮ್​​​​ಗೆ ಕಾಲೇಜ್ ರೀಚ್ ಆದ್ರೆ ಸಾಕು ಎನ್ನುತ್ತಾ,  ಹೆಚ್ಚಿನವರು ಬಸ್ ಎಷ್ಟೇ ರಷ್ ಇದ್ರೂ ಅದೇ ಬಸ್ಸಿನಲ್ಲಿ ನೇತಾಡಿಕೊಂಡು ಹೋಗುತ್ತಾರೆ. ಹೀಗೆ ಬಸ್ಸಲ್ಲಿ ಸಿಕ್ಕಾಪಟ್ಟೆ ರಶ್ ಇದ್ರೆ ಪ್ರಯಾಣಿಕರನ್ನು ಹತ್ತಿ ಇಳಿಸುವುದೇ ಕಂಡಕ್ಟರ್​​ಗೆ ಒಂದು ದೊಡ್ಡ ತಲೆನೋವಾಗಿರುತ್ತೆ. ಅದರಲ್ಲೂ ಈ ಸಮಯದಲ್ಲಿ ಪ್ರಯಾಣಿಕರು ಬಸ್ ಹತ್ತಿ ಇಳಿಯಲು ನೂಕು ನುಗ್ಗಲು ಮಾಡಿದರೆ, ಹೆಚ್ಚಾಗಿ ಕಂಡೆಕ್ಟರ್​ಗಳು ಕೋಪಗೊಂಡು ಪ್ರಯಾಣಿಕರ ಮೇಲೆ ರೇಗಾಡಿಬಿಡುತ್ತಾರೆ.  ಯಾಕಮ್ಮ ಅರ್ಜೆಂಟ್ ಮಾಡ್ತೀರಾ, ಇಲ್ಲಿ ಬಸ್ಸಿಂದ ಇಳಿತಿರೋದು ಕಣ್ಣ್ ಕಾಣ್ಸಲ್ವಾ ಅಂತೆಲ್ಲಾ ಜೋರು ಮಾಡುತ್ತಾರೆ. ಆದರೆ ಇಲ್ಲೊಬ್ಬ  ಕಂಡೆಕ್ಟರ್ ಮಾತ್ರ ಯಾರ ಮೇಲೂ ರೇಗಾಡದೆ ನಿಲ್ಲೇ ಗಂಗವ್ವ.. ಬಾರೇ ಗೌರಮ್ಮ… ಅರ್ಜೆಂಟ್ ಮಾಡ್ಬೇಡಾ, ಜನರು ಇಳಿದ ಮೇಲೆ ನಿಧಾನಕ್ಕೆ ಬಸ್ ಹತ್ತುವಿರಂತೆ  ಎಂದು ಹಾಡನ್ನು ಹಾಡುತ್ತಾ ಬಹಳ ಲವಲವಿಕೆಯಿಂದ ಪ್ರಯಾಣಿಕರನ್ನು ಬಸ್ಸಿನಿಂದ ಹತ್ತಿ ಇಳಿಸುವ ಕೆಲಸವನ್ನು ಮಾಡಿದ್ದಾರೆ. ಈ ಕುರಿತ ವಿಡಿಯೋ ಇದೀಗ ವೈರಲ್ ಆಗಿದ್ದು, ಇದನ್ನು ನೋಡಿದ ಅನೇಕರು ಮಾಡೋ ಕೆಲಸದಲ್ಲಿ ನೆಮ್ಮದಿ ಸಿಗಬೇಕಾದ್ರೆ ಹೀಗೆ ಖುಷಿ  ಖುಷಿಯಾಗಿರಬೇಕು ಎಂದು ಹೇಳಿದ್ದಾರೆ.

@raichur_mandi_adda ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ʼಮಾಡೋ ಕೆಲಸದಲ್ಲಿ ನೆಮ್ಮದಿ ಸಿಗಬೇಕಾದ್ರೆ ಹೀಗೆ ಖುಷಿ ಖುಷಿಯಾಗಿರಬೇಕುʼ ಎಂಬ ಶೀರ್ಷಿಕೆಯನ್ನು ಸಹ ಬರೆಯಲಾಗಿದೆ.  ಬಹಳ ಲವಲವಿಕೆಯಿಂದ ಹಾಡನ್ನು ಹಾಡುತ್ತಾ ಬಸ್ಟ್ ಕಂಡಕ್ಟರ್ ಪ್ರಯಾಣಿಕರನ್ನು ಬಸ್ಸಿನಿಂದ ಪ್ರಯಾಣಿಕರನ್ನು ಹತ್ತಿ ಇಳಿಸುವ ದೃಶ್ಯಾವಳಿಯನ್ನು ವಿಡಿಯೋದಲ್ಲಿ ಕಾಣಬಹುದು.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ವಿಡಿಯೋದಲ್ಲಿ ಬಸ್ಸ್ಟ್ಯಾಂಡಿಗೆ ಬಸ್ ಬಂದ ತಕ್ಷಣ ಮಹಿಳೆಯೊಬ್ಬರು ಆ ಸ್ಟಾಪಿನಲ್ಲಿ ಪ್ರಯಾಣಿಕರು ಇಳಿಯುವ ಮುಂಚೆಯೇ ಬಸ್ಸ್ ಹತ್ತಲು ಪ್ರಯತ್ನಿಸುತ್ತಾರೆ. ಆ ಸಂದರ್ಭದಲ್ಲಿ ಈ ಕಂಡಕ್ಟರ್ ʼನಿಲ್ಲೇ ಗಂಗಮ್ಮ, ಬಾರೇ ಗೌರಮ್ಮ  ಈಗ್ಲೇ ಬಸ್  ಹತ್ತ್ ಬ್ಯಾಡ, ಜನ್ರು ಬಸ್ಸಿಂದ ಇಳಿತಾ ಇದ್ದಾರೆ. ಅರ್ಜೆಂಟ್ ಯಾಕ್ ಮಾಡ್ತಿ ನಮ್ಮವ್ವಾ.. ಬಾರೇ ನಮ್ಮವ್ವ ಎಂದು ಬಹಳ ಉತ್ಸಾಹದಿಂದ ಹಾಡನ್ನು ಹಾಡುತ್ತಾ, ಬಸ್ಸಿನಿಂದ ಪ್ರಯಾಣಿಕರನ್ನು ಹತ್ತಿ ಇಳಿಸುವ ಸೊಗಸಾದ  ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಆನೆ ಬಂತೋ.. ಕಾಪಾಡಪ್ಪ ಗಣಪ; ಈ ಹುಡುಗರು ಗೋಳಾಟ ನೋಡಿ 

ಇನ್ಸ್ಟಾಗ್ರಾಮ್ ಅಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 175 ಸಾವಿರ ವೀಕ್ಷಣೆಗಳನ್ನು ಹಾಗೂ ಹಲವಾರು ಲೈಕ್ಸ್​​ಗಳನ್ನು  ಪಡೆದುಕೊಂಡಿದೆ.  ಈ ವಿಡಿಯೋವನ್ನು ನೋಡಿದ ಅನೇಕರು ಕಂಡೆಕ್ಟರ್ ಹಾಡಿಗೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ರಾಜ್ಯ ಘಟಕವನ್ನು ಯಡಿಯೂರಪ್ಪ ಕುಟುಂಬಕ್ಕೆ ಲೀಸ್​ಗೆ ನೀಡಿರುವಂತಿದೆ:ಯತ್ನಾಳ್
ರಾಜ್ಯ ಘಟಕವನ್ನು ಯಡಿಯೂರಪ್ಪ ಕುಟುಂಬಕ್ಕೆ ಲೀಸ್​ಗೆ ನೀಡಿರುವಂತಿದೆ:ಯತ್ನಾಳ್
ನಿವೃತ್ತಿ ಪ್ಲಾನ್ ಘೋಷಿಸಲು ಮೋದಿ ಆರ್‌ಎಸ್‌ಎಸ್ ಕಚೇರಿಗೆ ಭೇಟಿ;ಸಂಜಯ್ ರಾವತ್
ನಿವೃತ್ತಿ ಪ್ಲಾನ್ ಘೋಷಿಸಲು ಮೋದಿ ಆರ್‌ಎಸ್‌ಎಸ್ ಕಚೇರಿಗೆ ಭೇಟಿ;ಸಂಜಯ್ ರಾವತ್
ಮೊದಲ ಬಾರಿ ಶಾಸಕನಾದಾಗಿನಿಂದ ನಾನು ಪಕ್ಷದ ಶಿಸ್ತಿನ ಸಿಪಾಯಿ: ತುಕಾರಾಂ
ಮೊದಲ ಬಾರಿ ಶಾಸಕನಾದಾಗಿನಿಂದ ನಾನು ಪಕ್ಷದ ಶಿಸ್ತಿನ ಸಿಪಾಯಿ: ತುಕಾರಾಂ
ಯತ್ನಾಳ್ ಉಚ್ಚಾಟನೆಯಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್​ಗೆ ಲಾಭ: ತಂಗಡಿಗಿ
ಯತ್ನಾಳ್ ಉಚ್ಚಾಟನೆಯಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್​ಗೆ ಲಾಭ: ತಂಗಡಿಗಿ
ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಅಬ್ದುಲ್ ರೆಹಮಾನ್ ಹತ್ಯೆ
ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಅಬ್ದುಲ್ ರೆಹಮಾನ್ ಹತ್ಯೆ
ಯತ್ನಾಳ್​ ವಾಪಸ್ಸು ಸೇರಿಸಿಕೊಳ್ಳುವ ಬಗ್ಗೆ ಹೇಳಿಕೆ ನೀಡಲಾಗಲ್ಲ: ರಾಜುಗೌಡ
ಯತ್ನಾಳ್​ ವಾಪಸ್ಸು ಸೇರಿಸಿಕೊಳ್ಳುವ ಬಗ್ಗೆ ಹೇಳಿಕೆ ನೀಡಲಾಗಲ್ಲ: ರಾಜುಗೌಡ
ನನ್ನ ಕೈಲಾಗಿದ್ದು ಮಾಡಿದ್ದೇನೆ, ನೀವೂ ಸಹಾಯ ಮಾಡಿ; ಕಿಚ್ಚ ಸುದೀಪ್
ನನ್ನ ಕೈಲಾಗಿದ್ದು ಮಾಡಿದ್ದೇನೆ, ನೀವೂ ಸಹಾಯ ಮಾಡಿ; ಕಿಚ್ಚ ಸುದೀಪ್