AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಇಡೀ ಕಲ್ಲಂಗಡಿಯನ್ನು ಕರಿದ ಭೂಪ; ತಲೆ ಕೆರೆದುಕೊಳ್ಳುತ್ತಿರುವ ನೆಟ್​ಮಂದಿ

Watermelon : ಈ ರೀಲ್​ಮಂದಿ ಪ್ರಚಾರಕ್ಕಾಗಿ ಏನೇನೆಲ್ಲ ಪಾಕಪ್ರಯೋಗಗಳನ್ನು ಮಾಡುತ್ತದೆ ಎನ್ನುವುದನ್ನು ನೋಡುತ್ತಲೇ ಇದ್ದೀರಿ. ಆದರೆ ದಯವಿಟ್ಟು ಈ ವಿಡಿಯೋದಲ್ಲಿರುವಂಥ ಅಪಾಯಕಾರೀ ಪ್ರಯೋಗವನ್ನಂತು ಯಾರೂ ಮಾಡಬೇಡಿ!

Viral Video: ಇಡೀ ಕಲ್ಲಂಗಡಿಯನ್ನು ಕರಿದ ಭೂಪ; ತಲೆ ಕೆರೆದುಕೊಳ್ಳುತ್ತಿರುವ ನೆಟ್​ಮಂದಿ
ಕಲ್ಲಂಗಡಿಯನ್ನು ಎಣ್ಣೆಯಲ್ಲಿ ಕರಿದು ತಿನ್ನುತ್ತಿರುವ ಈ ಭೂಪ
TV9 Web
| Updated By: ಶ್ರೀದೇವಿ ಕಳಸದ|

Updated on:Jun 03, 2023 | 3:32 PM

Share

Kitchen Hacks : ಒಂದೊಂದು ಹಣ್ಣು ತಿನ್ನುವಾಗಲೂ ಅದರ ಸ್ವಾದವನ್ನು ಅನುಭವಿಸುತ್ತ ಪ್ರಕೃತಿಯ ಈ ಕೊಡುಗೆಯ ಬಗ್ಗೆ ಅಚ್ಚರಿ ಪಡುತ್ತಿರುತ್ತೇವಲ್ಲ? ಆಯಾ ಬಣ್ಣ, ಆಯಾ ರುಚಿ, ಪೋಷಕಾಂಶ… ಹೀಗೆ ಯೋಚಿಸುತ್ತಾ ಹೋದರೆ ಅದ್ಭುತವಲ್ಲದೆ ಇನ್ನೇನು ಎನ್ನಿಸತೊಡಗುತ್ತದೆ. ಸಾಮಾನ್ಯವಾಗಿ ಹಣ್ಣುಗಳನ್ನು ಬೇಕ್ ಮಾಡುವುದು ಬೇಕರಿ ತಿನಿಸುಗಳನ್ನು ಮಾಡುವಾಗ. ಆದರೆ ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. ಈ ಭೂಪ ದೊಡ್ಡ ಕಲ್ಲಂಗಡಿ (watermelon) ಹಣ್ಣನ್ನು ಇಡಿಯಾಗಿ ಎಣ್ಣೆಯಲ್ಲಿ ಕರೆದಿದ್ದಾನೆ!

ಸುಮಾರು 3 ನಿಮಿಷದ ಈ ವಿಡಿಯೋ ಮೂಲಕ ಈ ಮನುಷ್ಯ ಜಗತ್ತಿಗೆ ಏನನ್ನು ತಿಳಿಯಪಡಿಸಲು ಹೊರಟಿದ್ದಾನೆ? ಇವನ ಈ ಪಾಕಪ್ರಯೋಗ ಎಷ್ಟು ಅನಾರೋಗ್ಯಕರ ಮತ್ತು ಅಪಾಯಕಾರಿಯಿಂದ ಕೂಡಿದೆ. ಬೇಸಿಗೆಯ ಹಣ್ಣುಗಳನ್ನು ಹೀಗೆ ಕೊತಕೊತ ಕುದಿಯುವ ಎಣ್ಣೆಯಲ್ಲಿ ಇಡಿಯಾಗಿ ಕರಿದು ತಿನ್ನುತ್ತಾನಲ್ಲ! ಇವನಿಗೆ ಏನು ಹೇಳುವುದು?

ಇದನ್ನೂ ಓದಿ : Viral Video: ಇದನ್ನು ಆಸ್ಕರ್​ಗೆ ಕಳಿಸಬೇಕಿತ್ತು! ನೆಟ್ಟಿಗರ ಒಕ್ಕೊರಲಿನ ದನಿ

ಹೀಗೆ ಎಣ್ಣೆಯಲ್ಲಿ ಕರಿಯುವುದರಿಂದ ಹಣ್ಣು ಗರಿಗರಿಯಾಗುತ್ತದೆ ಎಂದು ಬೇರೆ ಹೇಳಿದ್ದಾನೆ ಈತ. ಗರಿಗರಿ ಹೋಗಲಿ ಆದರೆ ಅವನು ದೊಡ್ಡ ಕಲ್ಲಂಗಡಿಯನ್ನು ಅಷ್ಟೊಂದು ಎಣ್ಣೆಯಲ್ಲಿ ಕರಿಯುವುದನ್ನು ನೋಡುವುದಕ್ಕೆ ಭಯವಾಗುತ್ತಿತ್ತು. ನೆಟ್ಟಿಗರಂತೂ ರೊಚ್ಚಿಗೆದ್ದು ಇವನ ತಲೆಯನ್ನು ಕಲ್ಲಂಗಡಿ ಹಣ್ಣಿನಿಂದ ಒಡೆಯಬೇಕು ಎನ್ನುತ್ತಿದ್ದಾರೆ.

ಇದನ್ನೂ ಓದಿ : Viral Video: ಓನು ಬಂಗಾರಾ ಓನು ಪುಟ್ಟಾ, ಈ ವೀಕೆಂಡ್​ ಎಲ್ಲಿ ಹೋಗೋಣ?

ಬೇಸಿಗೆಯಲ್ಲಿ ಹಣ್ಣು ತಿನ್ನುವುದೇ ಹೊಟ್ಟೆ ತಂಪಗಿರಲೆಂದು. ಆದರೆ ಇವ ಇಷ್ಟು ದೊಡ್ಡ ಹಣ್ಣನ್ನು ಕರಿದು ತಿನ್ನುತ್ತಿದ್ದಾನೆಂದರೆ ಖಂಡಿತ ಇವನಿಗೆ ಹುಚ್ಚು ಹಿಡಿದಿದೆ. ನಾನು ನನ್ನ ಮೂರು ನಿಮಿಷವನ್ನು ಹಾಳು ಮಾಡಿಕೊಂಡೆ. ಇಷ್ಟು ದಿನ ನೋಡಿದ ಕಿಚನ್​ ಹ್ಯಾಕ್​ ವಿಡಿಯೋಗಳಲ್ಲಿ ಇದು ಅತ್ಯಂತ ಅಪಾಯಕಾರಿ ಅಂತೆಲ್ಲ ಪ್ರತಿಕ್ರಿಯಿಸುತ್ತಿದ್ದಾರೆ. ನೀವೇನಂತೀರಿ?

(ವಿ. ಸೂ : ನೀವಂತೂ ಇಂಥ ಪ್ರಯೋಗಗಳನ್ನು ಅಪ್ಪಿತಪ್ಪಿಯೂ ಮಾಡಬೇಡಿ. ಇದು ಅತ್ಯಂತ ಅಪಾಯಕಾರಿ)

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:25 pm, Sat, 3 June 23

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ