Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಇಡೀ ಕಲ್ಲಂಗಡಿಯನ್ನು ಕರಿದ ಭೂಪ; ತಲೆ ಕೆರೆದುಕೊಳ್ಳುತ್ತಿರುವ ನೆಟ್​ಮಂದಿ

Watermelon : ಈ ರೀಲ್​ಮಂದಿ ಪ್ರಚಾರಕ್ಕಾಗಿ ಏನೇನೆಲ್ಲ ಪಾಕಪ್ರಯೋಗಗಳನ್ನು ಮಾಡುತ್ತದೆ ಎನ್ನುವುದನ್ನು ನೋಡುತ್ತಲೇ ಇದ್ದೀರಿ. ಆದರೆ ದಯವಿಟ್ಟು ಈ ವಿಡಿಯೋದಲ್ಲಿರುವಂಥ ಅಪಾಯಕಾರೀ ಪ್ರಯೋಗವನ್ನಂತು ಯಾರೂ ಮಾಡಬೇಡಿ!

Viral Video: ಇಡೀ ಕಲ್ಲಂಗಡಿಯನ್ನು ಕರಿದ ಭೂಪ; ತಲೆ ಕೆರೆದುಕೊಳ್ಳುತ್ತಿರುವ ನೆಟ್​ಮಂದಿ
ಕಲ್ಲಂಗಡಿಯನ್ನು ಎಣ್ಣೆಯಲ್ಲಿ ಕರಿದು ತಿನ್ನುತ್ತಿರುವ ಈ ಭೂಪ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jun 03, 2023 | 3:32 PM

Kitchen Hacks : ಒಂದೊಂದು ಹಣ್ಣು ತಿನ್ನುವಾಗಲೂ ಅದರ ಸ್ವಾದವನ್ನು ಅನುಭವಿಸುತ್ತ ಪ್ರಕೃತಿಯ ಈ ಕೊಡುಗೆಯ ಬಗ್ಗೆ ಅಚ್ಚರಿ ಪಡುತ್ತಿರುತ್ತೇವಲ್ಲ? ಆಯಾ ಬಣ್ಣ, ಆಯಾ ರುಚಿ, ಪೋಷಕಾಂಶ… ಹೀಗೆ ಯೋಚಿಸುತ್ತಾ ಹೋದರೆ ಅದ್ಭುತವಲ್ಲದೆ ಇನ್ನೇನು ಎನ್ನಿಸತೊಡಗುತ್ತದೆ. ಸಾಮಾನ್ಯವಾಗಿ ಹಣ್ಣುಗಳನ್ನು ಬೇಕ್ ಮಾಡುವುದು ಬೇಕರಿ ತಿನಿಸುಗಳನ್ನು ಮಾಡುವಾಗ. ಆದರೆ ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. ಈ ಭೂಪ ದೊಡ್ಡ ಕಲ್ಲಂಗಡಿ (watermelon) ಹಣ್ಣನ್ನು ಇಡಿಯಾಗಿ ಎಣ್ಣೆಯಲ್ಲಿ ಕರೆದಿದ್ದಾನೆ!

ಸುಮಾರು 3 ನಿಮಿಷದ ಈ ವಿಡಿಯೋ ಮೂಲಕ ಈ ಮನುಷ್ಯ ಜಗತ್ತಿಗೆ ಏನನ್ನು ತಿಳಿಯಪಡಿಸಲು ಹೊರಟಿದ್ದಾನೆ? ಇವನ ಈ ಪಾಕಪ್ರಯೋಗ ಎಷ್ಟು ಅನಾರೋಗ್ಯಕರ ಮತ್ತು ಅಪಾಯಕಾರಿಯಿಂದ ಕೂಡಿದೆ. ಬೇಸಿಗೆಯ ಹಣ್ಣುಗಳನ್ನು ಹೀಗೆ ಕೊತಕೊತ ಕುದಿಯುವ ಎಣ್ಣೆಯಲ್ಲಿ ಇಡಿಯಾಗಿ ಕರಿದು ತಿನ್ನುತ್ತಾನಲ್ಲ! ಇವನಿಗೆ ಏನು ಹೇಳುವುದು?

ಇದನ್ನೂ ಓದಿ : Viral Video: ಇದನ್ನು ಆಸ್ಕರ್​ಗೆ ಕಳಿಸಬೇಕಿತ್ತು! ನೆಟ್ಟಿಗರ ಒಕ್ಕೊರಲಿನ ದನಿ

ಹೀಗೆ ಎಣ್ಣೆಯಲ್ಲಿ ಕರಿಯುವುದರಿಂದ ಹಣ್ಣು ಗರಿಗರಿಯಾಗುತ್ತದೆ ಎಂದು ಬೇರೆ ಹೇಳಿದ್ದಾನೆ ಈತ. ಗರಿಗರಿ ಹೋಗಲಿ ಆದರೆ ಅವನು ದೊಡ್ಡ ಕಲ್ಲಂಗಡಿಯನ್ನು ಅಷ್ಟೊಂದು ಎಣ್ಣೆಯಲ್ಲಿ ಕರಿಯುವುದನ್ನು ನೋಡುವುದಕ್ಕೆ ಭಯವಾಗುತ್ತಿತ್ತು. ನೆಟ್ಟಿಗರಂತೂ ರೊಚ್ಚಿಗೆದ್ದು ಇವನ ತಲೆಯನ್ನು ಕಲ್ಲಂಗಡಿ ಹಣ್ಣಿನಿಂದ ಒಡೆಯಬೇಕು ಎನ್ನುತ್ತಿದ್ದಾರೆ.

ಇದನ್ನೂ ಓದಿ : Viral Video: ಓನು ಬಂಗಾರಾ ಓನು ಪುಟ್ಟಾ, ಈ ವೀಕೆಂಡ್​ ಎಲ್ಲಿ ಹೋಗೋಣ?

ಬೇಸಿಗೆಯಲ್ಲಿ ಹಣ್ಣು ತಿನ್ನುವುದೇ ಹೊಟ್ಟೆ ತಂಪಗಿರಲೆಂದು. ಆದರೆ ಇವ ಇಷ್ಟು ದೊಡ್ಡ ಹಣ್ಣನ್ನು ಕರಿದು ತಿನ್ನುತ್ತಿದ್ದಾನೆಂದರೆ ಖಂಡಿತ ಇವನಿಗೆ ಹುಚ್ಚು ಹಿಡಿದಿದೆ. ನಾನು ನನ್ನ ಮೂರು ನಿಮಿಷವನ್ನು ಹಾಳು ಮಾಡಿಕೊಂಡೆ. ಇಷ್ಟು ದಿನ ನೋಡಿದ ಕಿಚನ್​ ಹ್ಯಾಕ್​ ವಿಡಿಯೋಗಳಲ್ಲಿ ಇದು ಅತ್ಯಂತ ಅಪಾಯಕಾರಿ ಅಂತೆಲ್ಲ ಪ್ರತಿಕ್ರಿಯಿಸುತ್ತಿದ್ದಾರೆ. ನೀವೇನಂತೀರಿ?

(ವಿ. ಸೂ : ನೀವಂತೂ ಇಂಥ ಪ್ರಯೋಗಗಳನ್ನು ಅಪ್ಪಿತಪ್ಪಿಯೂ ಮಾಡಬೇಡಿ. ಇದು ಅತ್ಯಂತ ಅಪಾಯಕಾರಿ)

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:25 pm, Sat, 3 June 23

ಬಸನಗೌಡ ಯತ್ನಾಳ್ ಒಬ್ಬ ನಕಲಿ ಹಿಂದೂತ್ವವಾದಿ: ರೇಣುಕಾಚಾರ್ಯ
ಬಸನಗೌಡ ಯತ್ನಾಳ್ ಒಬ್ಬ ನಕಲಿ ಹಿಂದೂತ್ವವಾದಿ: ರೇಣುಕಾಚಾರ್ಯ
ಜವಾಬ್ದಾರಿಯುತ ಸ್ಥಾನದಲ್ಲಿರುವ ಶಿವಕುಮಾರ್ ವಿರುದ್ಧ ಆರೋಪ ಸರಿಯಲ್ಲ: ಶಾಸಕ
ಜವಾಬ್ದಾರಿಯುತ ಸ್ಥಾನದಲ್ಲಿರುವ ಶಿವಕುಮಾರ್ ವಿರುದ್ಧ ಆರೋಪ ಸರಿಯಲ್ಲ: ಶಾಸಕ
ವ್ಯಾಪಾರಿಗಳು ಹೆಸರು ನೋಂದಾಯಿಸಿಕೊಳ್ಳಲು ಏಪ್ರಿಲ್ 30 ಕಡೇದಿನ: ಶಿವಕುಮಾರ್
ವ್ಯಾಪಾರಿಗಳು ಹೆಸರು ನೋಂದಾಯಿಸಿಕೊಳ್ಳಲು ಏಪ್ರಿಲ್ 30 ಕಡೇದಿನ: ಶಿವಕುಮಾರ್
ಚೀಟಿಯಲ್ಲಿ ಏನು ಬರೆದಿತ್ತು ಅಂತ ಮುಂದಿನ ದಿನಗಳಲ್ಲಿ ಹೇಳ್ತೇನೆ: ಯತ್ನಾಳ್
ಚೀಟಿಯಲ್ಲಿ ಏನು ಬರೆದಿತ್ತು ಅಂತ ಮುಂದಿನ ದಿನಗಳಲ್ಲಿ ಹೇಳ್ತೇನೆ: ಯತ್ನಾಳ್
VIDEO: CSK ಮತ್ತೆ ಮೋಸದಾಟ? ಅನುಮಾನ ಹುಟ್ಟಿಸಿದ ವಿಡಿಯೋ
VIDEO: CSK ಮತ್ತೆ ಮೋಸದಾಟ? ಅನುಮಾನ ಹುಟ್ಟಿಸಿದ ವಿಡಿಯೋ
ರಾಜಣ್ಣ ಪರೋಕ್ಷವಾಗಿ ಮತ್ತೊಬ್ಬ ಸಚಿವನ ಕಡೆ ಬೊಟ್ಟು ಮಾಡುತ್ತಿದ್ದಾರೆ: ರವಿ
ರಾಜಣ್ಣ ಪರೋಕ್ಷವಾಗಿ ಮತ್ತೊಬ್ಬ ಸಚಿವನ ಕಡೆ ಬೊಟ್ಟು ಮಾಡುತ್ತಿದ್ದಾರೆ: ರವಿ
ರಾಜಣ್ಣ ದೂರು ದಾಖಲಿಸದ ಹೊರತು ನಾವೇನೂ ಮಾಡಲಾಗದು: ಪರಮೇಶ್ವರ್
ರಾಜಣ್ಣ ದೂರು ದಾಖಲಿಸದ ಹೊರತು ನಾವೇನೂ ಮಾಡಲಾಗದು: ಪರಮೇಶ್ವರ್
ರಾಜಣ್ಣರೊಂದಿಗೆ ಮೊದ್ಲಿಂದ್ಲೂ ಸಲುಗೆಯಿಂದ ಇದ್ದೇನೆ: ಡಾ ರಂಗನಾಥ್
ರಾಜಣ್ಣರೊಂದಿಗೆ ಮೊದ್ಲಿಂದ್ಲೂ ಸಲುಗೆಯಿಂದ ಇದ್ದೇನೆ: ಡಾ ರಂಗನಾಥ್
ನಾಗ್ಪುರ ಹಿಂಸಾಚಾರದ ಪ್ರಮುಖ ಆರೋಪಿ ಫಾಹಿಂ ಖಾನ್ ಮನೆ ನೆಲಸಮ
ನಾಗ್ಪುರ ಹಿಂಸಾಚಾರದ ಪ್ರಮುಖ ಆರೋಪಿ ಫಾಹಿಂ ಖಾನ್ ಮನೆ ನೆಲಸಮ
ಬೆಳೆಸಿದ ವ್ಯಕ್ತಿಗಳ ಮೇಲೆ ಯಶ್​ಗೆ ಅದೆಂಥಾ ಗೌರವ; ಇಲ್ಲಿದೆ ಸಾಕ್ಷಿ
ಬೆಳೆಸಿದ ವ್ಯಕ್ತಿಗಳ ಮೇಲೆ ಯಶ್​ಗೆ ಅದೆಂಥಾ ಗೌರವ; ಇಲ್ಲಿದೆ ಸಾಕ್ಷಿ