AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಇಡೀ ಕಲ್ಲಂಗಡಿಯನ್ನು ಕರಿದ ಭೂಪ; ತಲೆ ಕೆರೆದುಕೊಳ್ಳುತ್ತಿರುವ ನೆಟ್​ಮಂದಿ

Watermelon : ಈ ರೀಲ್​ಮಂದಿ ಪ್ರಚಾರಕ್ಕಾಗಿ ಏನೇನೆಲ್ಲ ಪಾಕಪ್ರಯೋಗಗಳನ್ನು ಮಾಡುತ್ತದೆ ಎನ್ನುವುದನ್ನು ನೋಡುತ್ತಲೇ ಇದ್ದೀರಿ. ಆದರೆ ದಯವಿಟ್ಟು ಈ ವಿಡಿಯೋದಲ್ಲಿರುವಂಥ ಅಪಾಯಕಾರೀ ಪ್ರಯೋಗವನ್ನಂತು ಯಾರೂ ಮಾಡಬೇಡಿ!

Viral Video: ಇಡೀ ಕಲ್ಲಂಗಡಿಯನ್ನು ಕರಿದ ಭೂಪ; ತಲೆ ಕೆರೆದುಕೊಳ್ಳುತ್ತಿರುವ ನೆಟ್​ಮಂದಿ
ಕಲ್ಲಂಗಡಿಯನ್ನು ಎಣ್ಣೆಯಲ್ಲಿ ಕರಿದು ತಿನ್ನುತ್ತಿರುವ ಈ ಭೂಪ
TV9 Web
| Edited By: |

Updated on:Jun 03, 2023 | 3:32 PM

Share

Kitchen Hacks : ಒಂದೊಂದು ಹಣ್ಣು ತಿನ್ನುವಾಗಲೂ ಅದರ ಸ್ವಾದವನ್ನು ಅನುಭವಿಸುತ್ತ ಪ್ರಕೃತಿಯ ಈ ಕೊಡುಗೆಯ ಬಗ್ಗೆ ಅಚ್ಚರಿ ಪಡುತ್ತಿರುತ್ತೇವಲ್ಲ? ಆಯಾ ಬಣ್ಣ, ಆಯಾ ರುಚಿ, ಪೋಷಕಾಂಶ… ಹೀಗೆ ಯೋಚಿಸುತ್ತಾ ಹೋದರೆ ಅದ್ಭುತವಲ್ಲದೆ ಇನ್ನೇನು ಎನ್ನಿಸತೊಡಗುತ್ತದೆ. ಸಾಮಾನ್ಯವಾಗಿ ಹಣ್ಣುಗಳನ್ನು ಬೇಕ್ ಮಾಡುವುದು ಬೇಕರಿ ತಿನಿಸುಗಳನ್ನು ಮಾಡುವಾಗ. ಆದರೆ ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. ಈ ಭೂಪ ದೊಡ್ಡ ಕಲ್ಲಂಗಡಿ (watermelon) ಹಣ್ಣನ್ನು ಇಡಿಯಾಗಿ ಎಣ್ಣೆಯಲ್ಲಿ ಕರೆದಿದ್ದಾನೆ!

ಸುಮಾರು 3 ನಿಮಿಷದ ಈ ವಿಡಿಯೋ ಮೂಲಕ ಈ ಮನುಷ್ಯ ಜಗತ್ತಿಗೆ ಏನನ್ನು ತಿಳಿಯಪಡಿಸಲು ಹೊರಟಿದ್ದಾನೆ? ಇವನ ಈ ಪಾಕಪ್ರಯೋಗ ಎಷ್ಟು ಅನಾರೋಗ್ಯಕರ ಮತ್ತು ಅಪಾಯಕಾರಿಯಿಂದ ಕೂಡಿದೆ. ಬೇಸಿಗೆಯ ಹಣ್ಣುಗಳನ್ನು ಹೀಗೆ ಕೊತಕೊತ ಕುದಿಯುವ ಎಣ್ಣೆಯಲ್ಲಿ ಇಡಿಯಾಗಿ ಕರಿದು ತಿನ್ನುತ್ತಾನಲ್ಲ! ಇವನಿಗೆ ಏನು ಹೇಳುವುದು?

ಇದನ್ನೂ ಓದಿ : Viral Video: ಇದನ್ನು ಆಸ್ಕರ್​ಗೆ ಕಳಿಸಬೇಕಿತ್ತು! ನೆಟ್ಟಿಗರ ಒಕ್ಕೊರಲಿನ ದನಿ

ಹೀಗೆ ಎಣ್ಣೆಯಲ್ಲಿ ಕರಿಯುವುದರಿಂದ ಹಣ್ಣು ಗರಿಗರಿಯಾಗುತ್ತದೆ ಎಂದು ಬೇರೆ ಹೇಳಿದ್ದಾನೆ ಈತ. ಗರಿಗರಿ ಹೋಗಲಿ ಆದರೆ ಅವನು ದೊಡ್ಡ ಕಲ್ಲಂಗಡಿಯನ್ನು ಅಷ್ಟೊಂದು ಎಣ್ಣೆಯಲ್ಲಿ ಕರಿಯುವುದನ್ನು ನೋಡುವುದಕ್ಕೆ ಭಯವಾಗುತ್ತಿತ್ತು. ನೆಟ್ಟಿಗರಂತೂ ರೊಚ್ಚಿಗೆದ್ದು ಇವನ ತಲೆಯನ್ನು ಕಲ್ಲಂಗಡಿ ಹಣ್ಣಿನಿಂದ ಒಡೆಯಬೇಕು ಎನ್ನುತ್ತಿದ್ದಾರೆ.

ಇದನ್ನೂ ಓದಿ : Viral Video: ಓನು ಬಂಗಾರಾ ಓನು ಪುಟ್ಟಾ, ಈ ವೀಕೆಂಡ್​ ಎಲ್ಲಿ ಹೋಗೋಣ?

ಬೇಸಿಗೆಯಲ್ಲಿ ಹಣ್ಣು ತಿನ್ನುವುದೇ ಹೊಟ್ಟೆ ತಂಪಗಿರಲೆಂದು. ಆದರೆ ಇವ ಇಷ್ಟು ದೊಡ್ಡ ಹಣ್ಣನ್ನು ಕರಿದು ತಿನ್ನುತ್ತಿದ್ದಾನೆಂದರೆ ಖಂಡಿತ ಇವನಿಗೆ ಹುಚ್ಚು ಹಿಡಿದಿದೆ. ನಾನು ನನ್ನ ಮೂರು ನಿಮಿಷವನ್ನು ಹಾಳು ಮಾಡಿಕೊಂಡೆ. ಇಷ್ಟು ದಿನ ನೋಡಿದ ಕಿಚನ್​ ಹ್ಯಾಕ್​ ವಿಡಿಯೋಗಳಲ್ಲಿ ಇದು ಅತ್ಯಂತ ಅಪಾಯಕಾರಿ ಅಂತೆಲ್ಲ ಪ್ರತಿಕ್ರಿಯಿಸುತ್ತಿದ್ದಾರೆ. ನೀವೇನಂತೀರಿ?

(ವಿ. ಸೂ : ನೀವಂತೂ ಇಂಥ ಪ್ರಯೋಗಗಳನ್ನು ಅಪ್ಪಿತಪ್ಪಿಯೂ ಮಾಡಬೇಡಿ. ಇದು ಅತ್ಯಂತ ಅಪಾಯಕಾರಿ)

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:25 pm, Sat, 3 June 23

ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ