AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ನಿವೃತ್ತಿಯಾಯಿತೆಂದು ನಿನ್ನನ್ನು ತೊರೆಯುವುದು ಅಷ್ಟು ಸುಲಭವೇ?

Bus Driver : 'ಈ ವೃತ್ತಿಗೆ ಬಂದಮೇಲೆ ನಾನು ಮದುವೆಯಾದೆ, ಕುಟುಂಬ ಕಟ್ಟಿಕೊಂಡೆ, ಸಮಾಜದಲ್ಲಿ ಸ್ಥಾನಮಾನ ಪಡೆದುಕೊಂಡೆ. ಎಲ್ಲವೂ ನಿನ್ನಿಂದಲೇ. 30 ವರ್ಷದ ನಿನ್ನೊಂದಿಗಿನ ಬಂಧವನ್ನು ಈಗ ಹೇಗೆ ಮುರಿದುಕೊಳ್ಳಲಿ?'

Viral Video: ನಿವೃತ್ತಿಯಾಯಿತೆಂದು ನಿನ್ನನ್ನು ತೊರೆಯುವುದು ಅಷ್ಟು ಸುಲಭವೇ?
ತಮಿಳುನಾಡು ರಾಜ್ಯ ಸಾರಿಗೆ ಸಂಸ್ಥೆಯಿಂದ ನಿವೃತ್ತಿಗೊಂಡ ಮುತುಪಾಂಡಿ ತನ್ನ ಆಪ್ತಮಿತ್ರನನ್ನು ಅಪ್ಪಿಕೊಂಡ ಸಂದರ್ಭ. (ಸೌಜನ್ಯ : ದಿ ಸೌತ್​ ಫಸ್ಟ್)
TV9 Web
| Updated By: ಶ್ರೀದೇವಿ ಕಳಸದ|

Updated on:Jun 02, 2023 | 4:00 PM

Share

Driver : ಯಾರು ಈ ಕೆಲಸ ಮಾಡುತ್ತಾರೆ, ದಿನವೂ ಇದೇ ಆಯಿತು. ಮೂರಕ್ಕೆ ಇಳೀಲಿಲ್ಲ ಆರಕ್ಕೆ ಏರಲಿಲ್ಲ ಎಂದು ಗೊಣಗುಟ್ಟುತ್ತಲೇ ಕೆಲಸ ಮಾಡುವ ಅನೇಕರು ನಮ್ಮ ಸುತ್ತಮುತ್ತಲಿದ್ದಾರೆ. ಅಂಥವರ ಮಧ್ಯೆಯೇ ಸಿಕ್ಕ ಕೆಲಸವನ್ನು ಕಣ್ಣಿಗೊತ್ತಿಕೊಂಡು ಮಾಡುವ ಕೆಲವರೂ ನಮ್ಮ ನಡುವೆ ಇದ್ದಾರೆ. ಆದರೆ ಈ ಕೆಲಸದಿಂದಲೇ ಜೀವನ ಸಾರ್ಥಕವಾಯಿತು ಎಂದುಕೊಳ್ಳುವ ವಿರಳರೂ ಇದ್ದಾರೆ. ಅಂಥ ವ್ಯಕ್ತಿಯೊಬ್ಬರ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಇದರಲ್ಲಿ ತಮಿಳುನಾಡಿನ (Tamilnadu) ಬಸ್ ಚಾಲಕ ಯಾಕೆ ಹೀಗೆ ಬಸ್​ ಅನ್ನು ಅಪ್ಪಿಕೊಂಡು ಅಳುತ್ತಿರುವುದು?

ಈ ಮೇಲಿನ ವಿಡಿಯೋ ಅನ್ನು ‘ದಿ ಸೌತ್​ ಫಸ್ಟ್​​’ (The South First) ಟ್ವೀಟ್ ಮಾಡಿದೆ. ನಿವೃತ್ತಿ ಎಂದರೆ ಕೆಲವರಿಗೆ ಬಿಡುಗಡೆ ಇನ್ನೂ ಕೆಲವರಿಗೆ ಬೇಸರ. ಆದರೆ ಮಧುರೈನ ಮುತುಪಾಂಡಿ ಅವರಿಗೆ ಮಾತ್ರ ಇದು ಅತ್ಯಂತ ದುಃಖವನ್ನುಂಟು ಮಾಡಿರುವ ಸಂದರ್ಭ. 30 ವರ್ಷಗಳ ತನಕ ತಮಿಳುನಾಡು ರಾಜ್ಯ ಸಾರಿಗೆ ಸಂಸ್ಥೆ (Tamil Nadu State Transport Corporation)ಯಲ್ಲಿ ಚಾಲಕರಾಗಿ ಕಾರ್ಯ ನಿರ್ವಹಿಸಿದ ಇವರು ಮೇ 31ರಂದು ನಿವೃತ್ತಿಗೊಂಡಿದ್ದಾರೆ. ವಿಡಿಯೋ ನೋಡಿದೊಡನೆ ವೃತ್ತಿಯ ಬಗೆಗೆ ಇವರು ಇಟ್ಟುಕೊಂಡಿದ್ದ ಶ್ರದ್ಧೆ, ಗೌರವ ನಿಮ್ಮ ಅನುಭವಕ್ಕೆ ಬಂದಿರಲು ಸಾಕು.

ಇದನ್ನೂ ಓದಿ : Viral: ನನ್ನ ಆತ್ಮ ಪ್ಲಾಸ್ಟಿಕ್​ನಿಂದ ಮಾಡಲ್ಪಟ್ಟಿಲ್ಲ; 8 ವರ್ಷದ ಬಾಲಕಿಯ ಮೊದಲ ಕವನ

ಬಸ್​ ನಂಬರ್​ 31A ಕಳೆದ 30 ವರ್ಷಗಳಿಂದ ಇವರ ಆಪ್ತಮಿತ್ರ. ತಮಿಳುನಾಡಿನ ಅನುಪ್ಪಾನದಿಯಿಂದ (Anuppanadi) ಮಹಾಲಕ್ಷ್ಮೀನಗರಕ್ಕೆ (Mahalakshmi Nagar) ಇವನೊಂದಿಗೆ ಚಲಿಸಿದರು. ಬದುಕಿನ ಎಲ್ಲಾ ಸಂದರ್ಭಗಳಿಗೂ, ಸನ್ನಿವೇಶಗಳಿಗೂ ಈತ ಜೊತೆಗಾರನಾಗುತ್ತ ಹೋದ. ‘ಈ ವೃತ್ತಿಗೆ ಬಂದಮೇಲೆ ನಾನು ಮದುವೆಯಾದೆ, ಕುಟುಂಬ ಕಟ್ಟಿಕೊಂಡೆ, ಸಮಾಜದಲ್ಲಿ ಸ್ಥಾನಮಾನ ಪಡೆದುಕೊಂಡೆ. ಎಲ್ಲವೂ ಇವನಿಂದಲೇ. ಈಗ ಹೇಗೆ ಇವನನ್ನು ಬಿಟ್ಟು ಹೋಗುವುದು’ ಎಂದು ದೈತ್ಯದೇಹಿ ಮಿತ್ರನನ್ನು ತಬ್ಬಿಕೊಂಡು ಕಣ್ಣೀರಾಗಿದ್ದಾರೆ ಮುತುಪಾಂಡಿ.

ಇದನ್ನೂ ಓದಿ : Viral: ಗ್ರಾಹಕರ ಹೂಕುಂಡವೇನೋ ಒಡೆಯಿತು, ಡೆಲಿವರಿ ಸಿಬ್ಬಂದಿ ಮುಂದೇನು ಮಾಡಿದ?

ಮುತುಪಾಂಡಿಯ ಕಾಯಕನಿಷ್ಠೆಯನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ನಿಮ್ಮ ಜೀವನವನ್ನು ಉತ್ತಮಗೊಳಿಸಿದ ಸಂಗತಿಗಳ ಬಗ್ಗೆ ಕೃತಜ್ಞರಾಗಿರಿ. ತನ್ನ ವೃತ್ತಿ, ವಾಹನದ ಬಗ್ಗೆ ಇಷ್ಟೊಂದು ಪ್ರೀತಿ ಇಟ್ಟುಕೊಂಡಿದ್ದ ಮುತುಪಾಂಡಿಯ ನಿವೃತ್ತಿ ಜೀವನ ಕ್ಷೇಮವಾಗಿರಲಿ. ಈ ಟ್ವೀಟ್ ಅನ್ನು ಆನಂದ್​ ಮಹೀಂದ್ರಾ ಅವರ ಕಣ್ಣಿಗೆ ಬೀಳದಿರಲಿ… ಅಂತೆಲ್ಲ ಪ್ರತಿಕ್ರಿಯಿಸಿದ್ದಾರೆ ಜನರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:43 pm, Fri, 2 June 23

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ