AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ನಿವೃತ್ತಿಯಾಯಿತೆಂದು ನಿನ್ನನ್ನು ತೊರೆಯುವುದು ಅಷ್ಟು ಸುಲಭವೇ?

Bus Driver : 'ಈ ವೃತ್ತಿಗೆ ಬಂದಮೇಲೆ ನಾನು ಮದುವೆಯಾದೆ, ಕುಟುಂಬ ಕಟ್ಟಿಕೊಂಡೆ, ಸಮಾಜದಲ್ಲಿ ಸ್ಥಾನಮಾನ ಪಡೆದುಕೊಂಡೆ. ಎಲ್ಲವೂ ನಿನ್ನಿಂದಲೇ. 30 ವರ್ಷದ ನಿನ್ನೊಂದಿಗಿನ ಬಂಧವನ್ನು ಈಗ ಹೇಗೆ ಮುರಿದುಕೊಳ್ಳಲಿ?'

Viral Video: ನಿವೃತ್ತಿಯಾಯಿತೆಂದು ನಿನ್ನನ್ನು ತೊರೆಯುವುದು ಅಷ್ಟು ಸುಲಭವೇ?
ತಮಿಳುನಾಡು ರಾಜ್ಯ ಸಾರಿಗೆ ಸಂಸ್ಥೆಯಿಂದ ನಿವೃತ್ತಿಗೊಂಡ ಮುತುಪಾಂಡಿ ತನ್ನ ಆಪ್ತಮಿತ್ರನನ್ನು ಅಪ್ಪಿಕೊಂಡ ಸಂದರ್ಭ. (ಸೌಜನ್ಯ : ದಿ ಸೌತ್​ ಫಸ್ಟ್)
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jun 02, 2023 | 4:00 PM

Driver : ಯಾರು ಈ ಕೆಲಸ ಮಾಡುತ್ತಾರೆ, ದಿನವೂ ಇದೇ ಆಯಿತು. ಮೂರಕ್ಕೆ ಇಳೀಲಿಲ್ಲ ಆರಕ್ಕೆ ಏರಲಿಲ್ಲ ಎಂದು ಗೊಣಗುಟ್ಟುತ್ತಲೇ ಕೆಲಸ ಮಾಡುವ ಅನೇಕರು ನಮ್ಮ ಸುತ್ತಮುತ್ತಲಿದ್ದಾರೆ. ಅಂಥವರ ಮಧ್ಯೆಯೇ ಸಿಕ್ಕ ಕೆಲಸವನ್ನು ಕಣ್ಣಿಗೊತ್ತಿಕೊಂಡು ಮಾಡುವ ಕೆಲವರೂ ನಮ್ಮ ನಡುವೆ ಇದ್ದಾರೆ. ಆದರೆ ಈ ಕೆಲಸದಿಂದಲೇ ಜೀವನ ಸಾರ್ಥಕವಾಯಿತು ಎಂದುಕೊಳ್ಳುವ ವಿರಳರೂ ಇದ್ದಾರೆ. ಅಂಥ ವ್ಯಕ್ತಿಯೊಬ್ಬರ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಇದರಲ್ಲಿ ತಮಿಳುನಾಡಿನ (Tamilnadu) ಬಸ್ ಚಾಲಕ ಯಾಕೆ ಹೀಗೆ ಬಸ್​ ಅನ್ನು ಅಪ್ಪಿಕೊಂಡು ಅಳುತ್ತಿರುವುದು?

ಈ ಮೇಲಿನ ವಿಡಿಯೋ ಅನ್ನು ‘ದಿ ಸೌತ್​ ಫಸ್ಟ್​​’ (The South First) ಟ್ವೀಟ್ ಮಾಡಿದೆ. ನಿವೃತ್ತಿ ಎಂದರೆ ಕೆಲವರಿಗೆ ಬಿಡುಗಡೆ ಇನ್ನೂ ಕೆಲವರಿಗೆ ಬೇಸರ. ಆದರೆ ಮಧುರೈನ ಮುತುಪಾಂಡಿ ಅವರಿಗೆ ಮಾತ್ರ ಇದು ಅತ್ಯಂತ ದುಃಖವನ್ನುಂಟು ಮಾಡಿರುವ ಸಂದರ್ಭ. 30 ವರ್ಷಗಳ ತನಕ ತಮಿಳುನಾಡು ರಾಜ್ಯ ಸಾರಿಗೆ ಸಂಸ್ಥೆ (Tamil Nadu State Transport Corporation)ಯಲ್ಲಿ ಚಾಲಕರಾಗಿ ಕಾರ್ಯ ನಿರ್ವಹಿಸಿದ ಇವರು ಮೇ 31ರಂದು ನಿವೃತ್ತಿಗೊಂಡಿದ್ದಾರೆ. ವಿಡಿಯೋ ನೋಡಿದೊಡನೆ ವೃತ್ತಿಯ ಬಗೆಗೆ ಇವರು ಇಟ್ಟುಕೊಂಡಿದ್ದ ಶ್ರದ್ಧೆ, ಗೌರವ ನಿಮ್ಮ ಅನುಭವಕ್ಕೆ ಬಂದಿರಲು ಸಾಕು.

ಇದನ್ನೂ ಓದಿ : Viral: ನನ್ನ ಆತ್ಮ ಪ್ಲಾಸ್ಟಿಕ್​ನಿಂದ ಮಾಡಲ್ಪಟ್ಟಿಲ್ಲ; 8 ವರ್ಷದ ಬಾಲಕಿಯ ಮೊದಲ ಕವನ

ಬಸ್​ ನಂಬರ್​ 31A ಕಳೆದ 30 ವರ್ಷಗಳಿಂದ ಇವರ ಆಪ್ತಮಿತ್ರ. ತಮಿಳುನಾಡಿನ ಅನುಪ್ಪಾನದಿಯಿಂದ (Anuppanadi) ಮಹಾಲಕ್ಷ್ಮೀನಗರಕ್ಕೆ (Mahalakshmi Nagar) ಇವನೊಂದಿಗೆ ಚಲಿಸಿದರು. ಬದುಕಿನ ಎಲ್ಲಾ ಸಂದರ್ಭಗಳಿಗೂ, ಸನ್ನಿವೇಶಗಳಿಗೂ ಈತ ಜೊತೆಗಾರನಾಗುತ್ತ ಹೋದ. ‘ಈ ವೃತ್ತಿಗೆ ಬಂದಮೇಲೆ ನಾನು ಮದುವೆಯಾದೆ, ಕುಟುಂಬ ಕಟ್ಟಿಕೊಂಡೆ, ಸಮಾಜದಲ್ಲಿ ಸ್ಥಾನಮಾನ ಪಡೆದುಕೊಂಡೆ. ಎಲ್ಲವೂ ಇವನಿಂದಲೇ. ಈಗ ಹೇಗೆ ಇವನನ್ನು ಬಿಟ್ಟು ಹೋಗುವುದು’ ಎಂದು ದೈತ್ಯದೇಹಿ ಮಿತ್ರನನ್ನು ತಬ್ಬಿಕೊಂಡು ಕಣ್ಣೀರಾಗಿದ್ದಾರೆ ಮುತುಪಾಂಡಿ.

ಇದನ್ನೂ ಓದಿ : Viral: ಗ್ರಾಹಕರ ಹೂಕುಂಡವೇನೋ ಒಡೆಯಿತು, ಡೆಲಿವರಿ ಸಿಬ್ಬಂದಿ ಮುಂದೇನು ಮಾಡಿದ?

ಮುತುಪಾಂಡಿಯ ಕಾಯಕನಿಷ್ಠೆಯನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ನಿಮ್ಮ ಜೀವನವನ್ನು ಉತ್ತಮಗೊಳಿಸಿದ ಸಂಗತಿಗಳ ಬಗ್ಗೆ ಕೃತಜ್ಞರಾಗಿರಿ. ತನ್ನ ವೃತ್ತಿ, ವಾಹನದ ಬಗ್ಗೆ ಇಷ್ಟೊಂದು ಪ್ರೀತಿ ಇಟ್ಟುಕೊಂಡಿದ್ದ ಮುತುಪಾಂಡಿಯ ನಿವೃತ್ತಿ ಜೀವನ ಕ್ಷೇಮವಾಗಿರಲಿ. ಈ ಟ್ವೀಟ್ ಅನ್ನು ಆನಂದ್​ ಮಹೀಂದ್ರಾ ಅವರ ಕಣ್ಣಿಗೆ ಬೀಳದಿರಲಿ… ಅಂತೆಲ್ಲ ಪ್ರತಿಕ್ರಿಯಿಸಿದ್ದಾರೆ ಜನರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:43 pm, Fri, 2 June 23

ಭಾರತೀಯ ಸೇನೆ ಸಂವಿಧಾನಿಕ ಮೌಲ್ಯಗಳಲ್ಲಿ ವಿಶ್ವಾಸ ಹೊಂದಿದೆ: ಸೋಫಿಯಾ ಖುರೇಷಿ
ಭಾರತೀಯ ಸೇನೆ ಸಂವಿಧಾನಿಕ ಮೌಲ್ಯಗಳಲ್ಲಿ ವಿಶ್ವಾಸ ಹೊಂದಿದೆ: ಸೋಫಿಯಾ ಖುರೇಷಿ
ಯುದ್ಧ ಬೇಡ ಅಂತ ನಾನು ಹೇಳಿದ್ದಕ್ಕೆ ದೊಡ್ಡ ಯುದ್ಧವೇ ಆಗಿತ್ತು: ಸಿದ್ದರಾಮಯ್ಯ
ಯುದ್ಧ ಬೇಡ ಅಂತ ನಾನು ಹೇಳಿದ್ದಕ್ಕೆ ದೊಡ್ಡ ಯುದ್ಧವೇ ಆಗಿತ್ತು: ಸಿದ್ದರಾಮಯ್ಯ
ಒಂದನ್ನು ಜೈಸಲಮ್ಮೇರ್​ನಲ್ಲಿ ಪುಡಿಗಟ್ಟಿದರೆ ಮತ್ತೊಂದನ್ನು ಸಿರ್ಸಾದಲ್ಲಿ
ಒಂದನ್ನು ಜೈಸಲಮ್ಮೇರ್​ನಲ್ಲಿ ಪುಡಿಗಟ್ಟಿದರೆ ಮತ್ತೊಂದನ್ನು ಸಿರ್ಸಾದಲ್ಲಿ
ಎಲ್ಲ ಸರಿಯಾದ ಬಳಿಕ ಊರಿಗೆ ವಾಪಸ್ಸು ಬರುತ್ತೇವೆ ಎನ್ನುತ್ತಿರುವ ಜನ
ಎಲ್ಲ ಸರಿಯಾದ ಬಳಿಕ ಊರಿಗೆ ವಾಪಸ್ಸು ಬರುತ್ತೇವೆ ಎನ್ನುತ್ತಿರುವ ಜನ
Live: ರಕ್ಷಣಾ ಇಲಾಖೆಯಿಂದ ಸುದ್ದಿಗೋಷ್ಠಿ
Live: ರಕ್ಷಣಾ ಇಲಾಖೆಯಿಂದ ಸುದ್ದಿಗೋಷ್ಠಿ
ದೇಶಕ್ಕಾಗಿ ಏನು ಮಾಡಿದರೂ ಕಮ್ಮಿ: ಜಮೀರ್ ಅಹ್ಮದ್, ಸಚಿವ
ದೇಶಕ್ಕಾಗಿ ಏನು ಮಾಡಿದರೂ ಕಮ್ಮಿ: ಜಮೀರ್ ಅಹ್ಮದ್, ಸಚಿವ
ನೋಂದಣಿಗೆ ಬಂದವರಲ್ಲಿ ಯುವತಿಯರು ಮತ್ತು ವಯಸ್ಕರೂ ಶಾಮೀಲು!
ನೋಂದಣಿಗೆ ಬಂದವರಲ್ಲಿ ಯುವತಿಯರು ಮತ್ತು ವಯಸ್ಕರೂ ಶಾಮೀಲು!
ಪ್ರಧಾನಿ ಮೋದಿ ತೆಗೆದುಕೊಳ್ಳುತ್ತಿರುವ ಕ್ರಮಗಳ ಜೊತೆಗಿದ್ದೇವೆ: ಮುಸಲ್ಮಾನರು
ಪ್ರಧಾನಿ ಮೋದಿ ತೆಗೆದುಕೊಳ್ಳುತ್ತಿರುವ ಕ್ರಮಗಳ ಜೊತೆಗಿದ್ದೇವೆ: ಮುಸಲ್ಮಾನರು
ದಿನೇದಿನೆ ಅತೀವ ಹಾನಿಗೊಳಗಾಗುತ್ತಿದ್ದರೂ ಬುದ್ಧಿ ಕಲಿಯದ ಪಾಕಿಸ್ತಾನ
ದಿನೇದಿನೆ ಅತೀವ ಹಾನಿಗೊಳಗಾಗುತ್ತಿದ್ದರೂ ಬುದ್ಧಿ ಕಲಿಯದ ಪಾಕಿಸ್ತಾನ
ಕಾಶ್ಮೀರ ಗಡಿಯಲ್ಲಿ ಉಗ್ರ ನೆಲೆಗಳು ಉಡೀಸ್: ಸೇನೆಯ ಅಧಿಕೃತ ವಿಡಿಯೋ ಇಲ್ಲಿದೆ
ಕಾಶ್ಮೀರ ಗಡಿಯಲ್ಲಿ ಉಗ್ರ ನೆಲೆಗಳು ಉಡೀಸ್: ಸೇನೆಯ ಅಧಿಕೃತ ವಿಡಿಯೋ ಇಲ್ಲಿದೆ