AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಅಮ್ಮಾ, ನಿನ್ನ ಹೊಟ್ಟೆಯೊಳಗಿರುವುದು ಬೆಕ್ಕಿನಮರಿ ಅಲ್ಲವೋ…

Pregnant Lady : ಅಮ್ಮನ ಹೊಟ್ಟೆಯಿಂದ ಮಗು ಹೊರಬಂದಮೇಲೆ ಅದು ಹೇಗಿರುತ್ತದೆ? ನನ್ನ ಹಾಗೆಯೋ ಅಮ್ಮನ ಹಾಗೆಯೋ ಎಂಬ ಧ್ಯಾನದಲ್ಲಿ ಈ ಬೆಕ್ಕು ಮುಳುಗಿದಂತಿದೆ. ಕೊನೆಗೂ ಒಂದು ದಿನ...

Viral Video: ಅಮ್ಮಾ, ನಿನ್ನ ಹೊಟ್ಟೆಯೊಳಗಿರುವುದು ಬೆಕ್ಕಿನಮರಿ ಅಲ್ಲವೋ...
ಓಹೋ ಅಮ್ಮನ ಹೊಟ್ಟೆಯಲ್ಲಿ ಪುಟ್ಟಮಗು ಇದೆ!
Follow us
TV9 Web
| Updated By: ಶ್ರೀದೇವಿ ಕಳಸದ

Updated on: Jun 01, 2023 | 2:31 PM

Cat : ಸಾಕಿದವರು ತನ್ನನ್ನು ಬಿಟ್ಟು ಬೇರೆ ಯಾರನ್ನೂ ಮುದ್ದು ಮಾಡಬಾರದು ಎನ್ನುವಷ್ಟು ಪೊಸೆಸಿವ್​​ನೆಸ್​ (possessiveness)​ ಈ ಬೆಕ್ಕು ಎಂಬ ಮೆತ್ತಗಿನ ಜೀವಕ್ಕೆ. ಅದಕ್ಕೇ ಸದಾ ಅಂಟಿಕೊಂಡೇ ಇರುತ್ತದೆ. ಗುಡರ್ ಗುಡರ್ ಎಂದು ಶಬ್ದ ಮಾಡುತ್ತ ಮೈಕೈಗೆ ತಿಕ್ಕುತ್ತ ಮುದ್ದುಕ್ಕಿಸುವಂತೆ ಮುಖ ಮಾಡಿ ಗಮನ ಸೆಳೆಯುತ್ತಿರುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ಗಮನಿಸಿ. ಇದನ್ನು ಸಾಕಿದ ಮಹಿಳೆಯ ಒಡಲೊಳಗೊಂದು ಜೀವ ಮಿಸುಕಾಡುತ್ತಿದೆ ಎಂದು ಗೊತ್ತಾಗುತ್ತಿದ್ದಂತೆ ಎಷ್ಟು ಸೂಕ್ಷ್ಮವಾಗಿ ಮುಟ್ಟಿ ನೋಡುತ್ತದೆಯಲ್ಲ?

ಅಯ್ಯೋ ಆಕೆಯ ಹೊಟ್ಟೆಯಲ್ಲಿರೋದು ಬೆಕ್ಕಿನ ಮರಿ ಅಲ್ಲ ಎಂಬು ಬೇಸರ ಮಾಡಿಕೊಳ್ಳುತ್ತದೆ. ಡಾಕ್ಟರ್​ ಬೆಕ್ಕು! ಮಗುವಿನ ಹಾರ್ಟ್​ ಬೀಟ್​ ಎಲ್ಲ ಸರಿ ಇದೆಯಾ? ಮಗು ಹೊರಗೆ ಬಂದಮೇಲೆ ನಿನ್ನ ಕತೆ ಅಷ್ಟೇ ಬೆಕ್ಕೇ. ಎಂಥ ಮುದ್ದಾದ ಬೆಕ್ಕಿದು ಎಷ್ಟು ಮೃದುವಾಗಿ ಅಮ್ಮನನ್ನು ಮಗುವನ್ನು ಕಾಯುತ್ತಿದೆ… ಹೀಗೆ ಅನೇಕರು ಈ ವಿಡಿಯೋ ನೋಡಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Viral Video: 22 ವರ್ಷಗಳ ನಂತರ ಒಡಹುಟ್ಟಿದವರ ಪುನರ್ಮಿಲನ

ಬೆಕ್ಕುಗಳು ಮಗುವಿನ ಹೃದಯಬಡಿತವನ್ನು ಕೇಳಬಲ್ಲವು. ಅಷ್ಟೇ ಏಕೆ ಎಲ್ಲವನ್ನೂ ಅವು ಸೂಕ್ಷ್ಮವಾಗಿ ಗ್ರಹಿಸಬಲ್ಲವು. ಹೊಸತಾಯಿಗೆ ಅಭಿನಂದನೆ, ಬೆಕ್ಕು ಮಗುವಿನ ಸುತ್ತ ಓಡಾಡುತ್ತ, ಆಟವಾಡುತ್ತಿರುವ ವಿಡಿಯೋಗಳಿಗಾಗಿ ಕಾಯುತ್ತೇವೆ… ಅಂತೆಲ್ಲ ಮತ್ತೂ ಒಂದಿಷ್ಟು ಜನ ಪ್ರತಿಕ್ರಿಯಿಸಿದ್ದಾರೆ.

4 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ಈ ವಿಡಿಯೋ ನೋಡಿ ನಿಮಗೇನು ಅನ್ನಿಸುತ್ತಿದೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ
ಆನೇಕಲ್​ನಲ್ಲಿ ನಿಗೂಢ ಸ್ಫೋಟ: ಕಾಂಕ್ರೀಟ್ ರಸ್ತೆ ಛಿದ್ರ
ಆನೇಕಲ್​ನಲ್ಲಿ ನಿಗೂಢ ಸ್ಫೋಟ: ಕಾಂಕ್ರೀಟ್ ರಸ್ತೆ ಛಿದ್ರ
ಹತ್ಯೆಯಾದ ಯುವಕನ ತಾಯಿಯಿಂದ ಅಸ್ಪಷ್ಟ ಮಾಹಿತಿ!
ಹತ್ಯೆಯಾದ ಯುವಕನ ತಾಯಿಯಿಂದ ಅಸ್ಪಷ್ಟ ಮಾಹಿತಿ!
ಪಾಕಿಸ್ತಾನಕ್ಕೆ ಭಾರತದಿಂದ ಚೆನಾಬ್ ನದಿ ನೀರು ಬಂದ್; ಒಣಗಿದ ಸಲಾಲ್ ಡ್ಯಾಂ
ಪಾಕಿಸ್ತಾನಕ್ಕೆ ಭಾರತದಿಂದ ಚೆನಾಬ್ ನದಿ ನೀರು ಬಂದ್; ಒಣಗಿದ ಸಲಾಲ್ ಡ್ಯಾಂ
ಜಿಂಕೆಯನ್ನ ಬೇಟೆಯಾಡಿ ಬಾಯಲ್ಲಿ ಹಿಡಿದ ಹುಲಿಯ ಅಪರೂಪದ ದೃಶ್ಯ
ಜಿಂಕೆಯನ್ನ ಬೇಟೆಯಾಡಿ ಬಾಯಲ್ಲಿ ಹಿಡಿದ ಹುಲಿಯ ಅಪರೂಪದ ದೃಶ್ಯ