Viral Video: 22 ವರ್ಷಗಳ ನಂತರ ಒಡಹುಟ್ಟಿದವರ ಪುನರ್ಮಿಲನ

Reunion : ಆಕೆ ಟೇಬಲ್​ ಮೇಲೆ ಜ್ಯೂಸ್, ಕಾಫಿ ತಂದಿಟ್ಟು ಎರಡೂ ಕೈಗಳನ್ನು ತೆರೆದು ಅಪ್ಪುಗೆಗೆ ಆಹ್ವಾನಿಸುತ್ತಾಳೆ. ಆದರೆ ಅವ ಅಪರಿಚಿತರಂತೆ ಪ್ರತಿಕ್ರಿಯಿಸುತ್ತಾನೆ. ಆಮೇಲೆ? ಮತ್ತೆ ಮತ್ತೆ ನೋಡಬೇಕೆನ್ನಿಸುವಂತಿದೆ ಈ ವಿಡಿಯೋ.

Viral Video: 22 ವರ್ಷಗಳ ನಂತರ ಒಡಹುಟ್ಟಿದವರ ಪುನರ್ಮಿಲನ
ಒಡಹುಟ್ಟಿದವರ ಪುನರ್ಮಿಲನ ಸಂಭ್ರಮ
Follow us
|

Updated on:May 31, 2023 | 2:52 PM

Siblings: ಏನೇನೋ ಕಾರಣಗಳಿಂದ ಮತ್ತು ಅನಿವಾರ್ಯ ಸನ್ನಿವೇಶಗಳಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಒಡಹುಟ್ಟಿದವರು ಬೇರ್ಪಡುವ ಸಂದರ್ಭ ಒದಗಿರುತ್ತದೆ. ಹೀಗಿರುವಾಗ ಅಕ್ಕ, ಅಣ್ಣ, ತಮ್ಮ, ತಂಗಿ ಎಲ್ಲರೂ ಪರಸ್ಪರರ ಸ್ಮೃತಿಪಟಲದಲ್ಲಿ ಮಾತ್ರ ವಾಸವಾಗಿರುತ್ತಾರೆ. ಆದರೆ ಮುಂದೊಂದು ಸಂದರ್ಭದಲ್ಲಿ ಎದುರುಗೊಳ್ಳಲು ಅವಕಾಶ ಸಿಕ್ಕರೆ ಹೇಗಿರಬೇಡ? ಇತ್ತೀಚೆಗಷ್ಟೇ ಕರ್ತಾರ್​ಪುರ್ ಕಾರಿಡಾರ್​ನಲ್ಲಿ ವಯೋವೃದ್ಧ ಅಣ್ಣತಂಗಿಯರು 75 ವರ್ಷಗಳ ನಂತರ ಒಂದಾದ ವರದಿಯನ್ನು ಓದಿದ್ದೀರಿ. ಅದಕ್ಕೆ ಸಂಬಂಧಿಸಿದ ವಿಡಿಯೋ ಪೂರ್ವನಿಯೋಜಿತವಾಗಿತ್ತು. ಆದರೆ ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. 22 ವರ್ಷಗಳ ನಂತರ ಈ ಒಡಹುಟ್ಟಿದವರು ಅಚ್ಚರಿ, ಸಂಭ್ರಮ ಮತ್ತು ಭಾವುಕತೆಯಿಂದ ಕರಗಿದ್ದನ್ನು…

ಇದನ್ನೂ ಓದಿ
Image
Literature: ನೆರೆನಾಡ ನುಡಿಯೊಳಗಾಡಿ; ‘ಈಗಲೇ ರಿಕಾರ್ಡ್ ಹಚ್ಚಬಾರದು, ಇನ್ನೂ ಅಪ್ಪನ ಖತಮು ಮುಗಿದಿಲ್ಲ’
Image
Literature : ನೆರೆನಾಡ ನುಡಿಯೊಳಗಾಡಿ; ಬಿಎಂ ಶರ್ಮಾ ಅನುವಾದಿಸಿದ ರಾಹುಲ ಸಾಂಕೃತ್ಯಾಯನ ಕಥೆ ‘ನಿಶಾ‘
Image
Literature: ನೆರೆನಾಡ ನುಡಿಯೊಳಗಾಡಿ; ‘ಉಭಯ ಜೀವನ’ ಕೆಕೆ ಗಂಗಾಧರನ್ ಅನುವಾದಿಸಿದ ಮಲಯಾಳ ಕಥೆ
Image
Literature: ನೆರೆನಾಡ ನುಡಿಯೊಳಗಾಡಿ; ಪಾವಣ್ಣನ್ ಚಿಂತಾಮಣಿ ಕೊಡ್ಲೆಕೆರೆ ಅನುವಾದಿಸಿದ ಬಿ ಜಯಮೋಹನ್ ಕಥೆ ‘ವಿಷಸರ್ಪ’
View this post on Instagram

A post shared by Good News Movement (@goodnews_movement)

ಸೋದರ ತನ್ನ ಮಗುವಿನೊಂದಿಗೆ ರೆಸ್ಟೋರೆಂಟ್​ನಲ್ಲಿ ಕುಳಿತಿದ್ದಾನೆ. ಸೋದರಿ ಕಾಫಿ ಮತ್ತು ಜ್ಯೂಸ್​ ತಂದು ಟೇಬಲ್​ ಮೇಲಿಟ್ಟು ಎರಡೂ ಕೈಚಾಚಿ ಅಪ್ಪಿಕೊಳ್ಳಲು ಕಾಯುತ್ತಾಳೆ. ಯಾರೂ ಆಗಂತುಕರು ಹೀಗೇಕೆ ಮಾಡುತ್ತಿದ್ದಾರೆ ಎಂದು ಸೋದರ ಅನುಮಾನಿಸುತ್ತಾನೆ. ನಂತರ ಆಕೆ ಗುರುತನ್ನು ಹೇಳಿದಾಗ ಕೈಯಲ್ಲಿದ್ದ ಮಗುವನ್ನು ಬಿಟ್ಟು ಆಕೆಯನ್ನು ಅಪ್ಪಿಕೊಳ್ಳುತ್ತಾನೆ.

ಇದನ್ನೂ ಓದಿ : Viral Video: ಮಳೆಯ ಆಹ್ಲಾದಕ್ಕೆ ಮನಸೋತ ಮರಿಯಾಮೆಗಳ ವಿಡಿಯೋ

ಅಬ್ಬಾ ಯಾರದೋ ಬದುಕಿನ ಅತ್ಯಪೂರ್ವ ಗಳಿಗೆಗಳಿಗೆ ನಾನು ಸಾಕ್ಷಿಯಾದೆ. ಎಲ್ಲ ಸರಿ ಆದರೆ ಆ ಮಗುವನ್ನು ಹಾಗೇಕೆ ಅವ ಕೈಬಿಟ್ಟ. ನನ್ನ ಅಣ್ಣನನ್ನು ಅಪ್ಪಿಕೊಂಡು 8 ವರ್ಷಗಳೇ ಕಳೆದವು, ಮತ್ತೆ ಅವನನ್ನು ಹೀಗೆಯೇ ಅಪ್ಪಕೊಳ್ಳಲು ಕಾಯುತ್ತಿದ್ದೇನೆ. ಈ ದೃಶ್ಯ ತುಂಬಾ ಸುಂದರ ಮತ್ತು ಶಕ್ತಿಯಿಂದ ಕೂಡಿದೆ ಅಂತೆಲ್ಲ ನೆಟ್ಟಿಗರು  ಪ್ರತಿಕ್ರಿಯಿಸುತ್ತಿದ್ದಾರೆ.

ಇದನ್ನೂ ಓದಿ : Viral: ನನ್ನನ್ನು ಮದುವೆಯಾಗುವೆಯಾ? ಡಬ್ಲಿನ್​ ವಿಮಾನ ನಿಲ್ದಾಣದಲ್ಲಿ ಹೀಗೊಂದು ಪ್ರೇಮನಿವೇದನಾ ಪ್ರಸಂಗ 

ಈ ವಿಡಿಯೋದೊಂದಿಗೆ ಇದರ ಹಿಂದಿರುವ ಕಥೆಯನ್ನೂ ಬರೆದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅನೇಕರು ಹೇಳಿದ್ದಾರೆ. ಒಡಹುಟ್ಟಿದವರಿಂದ ದೂರ ಉಳಿಯುವುದನ್ನು ನಾನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ, ಏಕೆಂದರೆ ಅವರೆಲ್ಲ ನನ್ನ ಅತ್ಯಂತ ಉತ್ತಮ ಸ್ನೇಹಿತರು ಎಂದು ಒಬ್ಬರು ಹೇಳಿದ್ಧಾರೆ. ನನಗಂತೂ ಅಳುವೇ ಬಂದಿತು ಈ ವಿಡಿಯೋ ನೋಡಿ, ನನಗೂ ಒಬ್ಬ ಅಣ್ಣನಿರಬೇಕಿತ್ತು ಎಂದು ಮತ್ತೊಬ್ಬರು ಹೇಳಿದ್ದಾರೆ.

ಬಂಧಗಳಿಲ್ಲದೆ ನಾವು ಎಂದಾದರೂ ಬದುಕಲು ಸಾಧ್ಯವೆ, ನೀವೇನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:51 pm, Wed, 31 May 23

ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ