Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಗ್ರಾಹಕರ ಹೂಕುಂಡವೇನೋ ಒಡೆಯಿತು, ಡೆಲಿವರಿ ಸಿಬ್ಬಂದಿ ಮುಂದೇನು ಮಾಡಿದ?

Honesty : ಲೆಕ್ಕಕ್ಕೆ ಲೆಕ್ಕವನ್ನೂ ಮರೆತು ಬದುಕುತ್ತಿರುವ ಅನೇಕ ಉಕ್ಕಿನ ಎದೆಗಳಿಗೆ ಇಂಥ ಅನುಭವಗಳು ತಾಕಬೇಕಿದೆ. ನಿತ್ಯವೂ ಮೈಮುರಿದು ದುಡಿಯುವ ಪ್ರಾಮಾಣಿಕ, ಸಹೃದಯಿ ಜೋರ್ಡಾನ್​ನಂಥ ಅನೇಕರ ಭವಿಷ್ಯವು ಉಜ್ವಲವಾಗಬೇಕಿದೆ.

Viral: ಗ್ರಾಹಕರ ಹೂಕುಂಡವೇನೋ ಒಡೆಯಿತು, ಡೆಲಿವರಿ ಸಿಬ್ಬಂದಿ ಮುಂದೇನು ಮಾಡಿದ?
ಊಬರ್​ ಡ್ರೈವರ್​ ಪತ್ರ ಬರೆದಿಟ್ಟು ಕೊಟ್ಟ ಹೂಕುಂಡ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jun 02, 2023 | 1:25 PM

Delivery Boy : ಗ್ರಾಹಕರಿಗೆ ತಲುಪಿಸುವಾಗ ಅಕಸ್ಮಾತ್ ಆಗಿ ಈ ಹೂಕುಂಡ (Flower Pot) ಒಡೆದುಬಿಟ್ಟಿದೆ. ಆದರೆ ಡೆಲಿವರಿ ಸಿಬ್ಬಂದಿ ಎದೆ ಒಡೆದುಕೊಳ್ಳದೆ ಮತ್ತು ನೆಪ ಹೇಳಿ ನುಣುಚಿಕೊಳ್ಳದೆ ಅಥವಾ ಓಡಿಹೋಗದೆ ಸಹೃದಯದಿಂದ, ವಿಚಾರಪೂರ್ಣವಾಗಿ ವರ್ತಿಸಿದ್ದಾನೆ. ಈ ಮೂಲಕ ಮಿಲಿಯನ್​ಗಟ್ಟಲೆ ಜನರ ಮನಸ್ಸನ್ನು ಗೆದ್ದಿದ್ದಾನೆ. ಈ ಕುರಿತ ಟ್ವೀಟ್​ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್​ ಆದಾಗಿನಿಂದ ಈತನಕ ಎರಡೂವರೆ ಮಿಲಿಯನ್​ ಜನರು ಟ್ವೀಟ್​ ನೋಡಿದ್ದಾರೆ. ಸುಮಾರು 35,000 ಜನರು ಇದನ್ನು ಇಷ್ಟಪಟ್ಟಿದ್ದಾರೆ.

ಎಲಿ ಮ್ಯಾಕ್​ಕಾನ್​ ಎನ್ನುವವರು ಮೇ 28ರಂದು ಈ ಟ್ವೀಟ್ ಮಾಡಿದ್ದಾರೆ. ‘ನನ್ನ ಗಂಡ ರಾತ್ರಿ ಊಟಕ್ಕಾಗಿ ಆರ್ಡರ್​ ಮಾಡಿದ್ದರು. ಸಿಬ್ಬಂದಿ ಡೆಲಿವರಿಗೆ ಬಂದಾಗ ನಮ್ಮ ಅಂಗಳದಲ್ಲಿದ್ದ ಸುಂದರವಾದ ಹೂಕುಂಡ ಅಕಸ್ಮಾತ್ ಆಗಿ ತಾಗಿ ಒಡೆದುಹೋಯಿತು. ಈ ಪ್ರಮಾದಕ್ಕೆ ಕ್ಷಮೆ ಯಾಚಿಸಲು ಆತ ನಮ್ಮನ್ನು ಕೂಗಿದ. ಅಷ್ಟೇ ಅಲ್ಲ ಅದಕ್ಕೆ ತಗಲುವ ಹಣವನ್ನು ಕೊಡಲು ಮುಂದಾದ. ಆಗ ನನ್ನ ಗಂಡ, ಇರಲಿ ಇದು ಯಾರಿಂದಲೂ ಸಹಜವಾಗಿ ಆಗುವಂಥದ್ದು ಎಂದು ಹೇಳಿದ್ದಾರೆ.’ ಎಂದಿದ್ದಾರೆ ಎಲಿ.

ಇದನ್ನೂ ಓದಿ : Viral: ದಿನಕ್ಕೆ ರೂ. 70 ಲಕ್ಷ ಶಾಪಿಂಗ್​ ಮಾಡುವುದೇ ಈ ಮಿಲಿಯನೇರ್​ ಗೃಹಿಣಿಯ ಹವ್ಯಾಸ

ಇದಾದ ನಂತರ ಮೇ 31ರಂದು ಇದೇ ಪೋಸ್ಟ್​ನ ಥ್ರೆಡ್​ನಲ್ಲಿ ಎಲಿ ಅಪ್​ಡೇಟ್ ಕೊಟ್ಟಿದ್ದಾರೆ. ಆ ಡೆಲಿವರಿ ಸಿಬ್ಬಂದಿ ಹೊಸ ಹೂಕುಂಡವನ್ನು ತಂದು ಅದರಡಿ ಹಸ್ತಾಕ್ಷರದಲ್ಲಿ ಒಂದು ಪತ್ರವನ್ನೂ ಬರೆದಿಟ್ಟು ಹೋಗಿದ್ದಾನೆ. ಹಾಗೆ ಹೋಗುವಾಗ ಅವನಿಗೆ ಹೇಳಿದೆ, ನೋಡು ಇದನ್ನು ನಾನು ಟ್ವೀಟ್ ಮಾಡಿದೆ ಮಿಲಿಯನ್​ಗಟ್ಟಲೆ ಜನ ನಿನ್ನ ಹೃದಯವಂತಿಕೆಯನ್ನು ಕೊಂಡಾಡಿದ್ದಾರೆ ಎಂದು ಹೇಳಿದೆ’ ಎಂದಿದ್ದಾರೆ ಎಲಿ.

ಇದನ್ನೂ ಓದಿ : Viral: ನನ್ನ ಆತ್ಮ ಪ್ಲಾಸ್ಟಿಕ್​ನಿಂದ ಮಾಡಲ್ಪಟ್ಟಿಲ್ಲ; 8 ವರ್ಷದ ಬಾಲಕಿಯ ಮೊದಲ ಕವನ

ಹೆಲೋ, ನಾನು ನಿಮ್ಮ ಊಬರ್ ಡ್ರೈವರ್, ಭಾನುವಾರ ಸಂಜೆ ನಾನು ನಿಮ್ಮ ಮನೆಗೆ ಡೆಲಿವರಿಗೆಂದು ಬಂದಾಗ ಅಕಸ್ಮಾತ್ ಆಗಿ ಕುಂಡವನ್ನು ಒಡೆದೆ. ಹಾಗಾಗಿ ಅದರ ಬದಲಾಗಿ ಈ ಕುಂಡವನ್ನು ನಿಮಗೆ ಕೊಡುತ್ತಿದ್ದೇನೆ. ಆದರೆ ಇದು ಉಡುಗೊರೆಯೂ ಅಲ್ಲ ಮತ್ತು ಯಾವುದೇ ಭಾವನಾತ್ಮಕ ಮಹತ್ವದಿಂದ ಕೂಡಿಲ್ಲ ಎಂದು ನಿಮಗನ್ನಿಸಬಹುದು ಎಂದು ಭಾವಿಸುತ್ತೇನೆ. ಮತ್ತಿದು ಇದು ಅಂಥಾ ಗುಣಮಟ್ಟದ್ದೇನಲ್ಲಆದರೂ ನೀವಿದನ್ನೂ ಉಪಯೋಗಿಸಿಕೊಳ್ಳಬಹುದು. ಇಂತಿ ಜೋರ್ಡಾನ್​.

ಓದಿದ ನಿಮ್ಮ ಮನಸ್ಸು ಮೃದುವಾಯಿತು ಅಲ್ಲವೆ? ಇಂಥ ಪ್ರಸಂಗಗಳು ನಿಮ್ಮನ್ನು ಎದುರುಗೊಂಡಿವೆಯೇ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 1:19 pm, Fri, 2 June 23

ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ಬಿಜೆಪಿ ಶಾಸಕರು ಪೀಠಕ್ಕೆ ಆಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಬಿಜೆಪಿ ಶಾಸಕರು ಪೀಠಕ್ಕೆ ಆಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್
ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!