Viral: ಗ್ರಾಹಕರ ಹೂಕುಂಡವೇನೋ ಒಡೆಯಿತು, ಡೆಲಿವರಿ ಸಿಬ್ಬಂದಿ ಮುಂದೇನು ಮಾಡಿದ?

Honesty : ಲೆಕ್ಕಕ್ಕೆ ಲೆಕ್ಕವನ್ನೂ ಮರೆತು ಬದುಕುತ್ತಿರುವ ಅನೇಕ ಉಕ್ಕಿನ ಎದೆಗಳಿಗೆ ಇಂಥ ಅನುಭವಗಳು ತಾಕಬೇಕಿದೆ. ನಿತ್ಯವೂ ಮೈಮುರಿದು ದುಡಿಯುವ ಪ್ರಾಮಾಣಿಕ, ಸಹೃದಯಿ ಜೋರ್ಡಾನ್​ನಂಥ ಅನೇಕರ ಭವಿಷ್ಯವು ಉಜ್ವಲವಾಗಬೇಕಿದೆ.

Viral: ಗ್ರಾಹಕರ ಹೂಕುಂಡವೇನೋ ಒಡೆಯಿತು, ಡೆಲಿವರಿ ಸಿಬ್ಬಂದಿ ಮುಂದೇನು ಮಾಡಿದ?
ಊಬರ್​ ಡ್ರೈವರ್​ ಪತ್ರ ಬರೆದಿಟ್ಟು ಕೊಟ್ಟ ಹೂಕುಂಡ
Follow us
| Updated By: ಶ್ರೀದೇವಿ ಕಳಸದ

Updated on:Jun 02, 2023 | 1:25 PM

Delivery Boy : ಗ್ರಾಹಕರಿಗೆ ತಲುಪಿಸುವಾಗ ಅಕಸ್ಮಾತ್ ಆಗಿ ಈ ಹೂಕುಂಡ (Flower Pot) ಒಡೆದುಬಿಟ್ಟಿದೆ. ಆದರೆ ಡೆಲಿವರಿ ಸಿಬ್ಬಂದಿ ಎದೆ ಒಡೆದುಕೊಳ್ಳದೆ ಮತ್ತು ನೆಪ ಹೇಳಿ ನುಣುಚಿಕೊಳ್ಳದೆ ಅಥವಾ ಓಡಿಹೋಗದೆ ಸಹೃದಯದಿಂದ, ವಿಚಾರಪೂರ್ಣವಾಗಿ ವರ್ತಿಸಿದ್ದಾನೆ. ಈ ಮೂಲಕ ಮಿಲಿಯನ್​ಗಟ್ಟಲೆ ಜನರ ಮನಸ್ಸನ್ನು ಗೆದ್ದಿದ್ದಾನೆ. ಈ ಕುರಿತ ಟ್ವೀಟ್​ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್​ ಆದಾಗಿನಿಂದ ಈತನಕ ಎರಡೂವರೆ ಮಿಲಿಯನ್​ ಜನರು ಟ್ವೀಟ್​ ನೋಡಿದ್ದಾರೆ. ಸುಮಾರು 35,000 ಜನರು ಇದನ್ನು ಇಷ್ಟಪಟ್ಟಿದ್ದಾರೆ.

ಎಲಿ ಮ್ಯಾಕ್​ಕಾನ್​ ಎನ್ನುವವರು ಮೇ 28ರಂದು ಈ ಟ್ವೀಟ್ ಮಾಡಿದ್ದಾರೆ. ‘ನನ್ನ ಗಂಡ ರಾತ್ರಿ ಊಟಕ್ಕಾಗಿ ಆರ್ಡರ್​ ಮಾಡಿದ್ದರು. ಸಿಬ್ಬಂದಿ ಡೆಲಿವರಿಗೆ ಬಂದಾಗ ನಮ್ಮ ಅಂಗಳದಲ್ಲಿದ್ದ ಸುಂದರವಾದ ಹೂಕುಂಡ ಅಕಸ್ಮಾತ್ ಆಗಿ ತಾಗಿ ಒಡೆದುಹೋಯಿತು. ಈ ಪ್ರಮಾದಕ್ಕೆ ಕ್ಷಮೆ ಯಾಚಿಸಲು ಆತ ನಮ್ಮನ್ನು ಕೂಗಿದ. ಅಷ್ಟೇ ಅಲ್ಲ ಅದಕ್ಕೆ ತಗಲುವ ಹಣವನ್ನು ಕೊಡಲು ಮುಂದಾದ. ಆಗ ನನ್ನ ಗಂಡ, ಇರಲಿ ಇದು ಯಾರಿಂದಲೂ ಸಹಜವಾಗಿ ಆಗುವಂಥದ್ದು ಎಂದು ಹೇಳಿದ್ದಾರೆ.’ ಎಂದಿದ್ದಾರೆ ಎಲಿ.

ಇದನ್ನೂ ಓದಿ : Viral: ದಿನಕ್ಕೆ ರೂ. 70 ಲಕ್ಷ ಶಾಪಿಂಗ್​ ಮಾಡುವುದೇ ಈ ಮಿಲಿಯನೇರ್​ ಗೃಹಿಣಿಯ ಹವ್ಯಾಸ

ಇದಾದ ನಂತರ ಮೇ 31ರಂದು ಇದೇ ಪೋಸ್ಟ್​ನ ಥ್ರೆಡ್​ನಲ್ಲಿ ಎಲಿ ಅಪ್​ಡೇಟ್ ಕೊಟ್ಟಿದ್ದಾರೆ. ಆ ಡೆಲಿವರಿ ಸಿಬ್ಬಂದಿ ಹೊಸ ಹೂಕುಂಡವನ್ನು ತಂದು ಅದರಡಿ ಹಸ್ತಾಕ್ಷರದಲ್ಲಿ ಒಂದು ಪತ್ರವನ್ನೂ ಬರೆದಿಟ್ಟು ಹೋಗಿದ್ದಾನೆ. ಹಾಗೆ ಹೋಗುವಾಗ ಅವನಿಗೆ ಹೇಳಿದೆ, ನೋಡು ಇದನ್ನು ನಾನು ಟ್ವೀಟ್ ಮಾಡಿದೆ ಮಿಲಿಯನ್​ಗಟ್ಟಲೆ ಜನ ನಿನ್ನ ಹೃದಯವಂತಿಕೆಯನ್ನು ಕೊಂಡಾಡಿದ್ದಾರೆ ಎಂದು ಹೇಳಿದೆ’ ಎಂದಿದ್ದಾರೆ ಎಲಿ.

ಇದನ್ನೂ ಓದಿ : Viral: ನನ್ನ ಆತ್ಮ ಪ್ಲಾಸ್ಟಿಕ್​ನಿಂದ ಮಾಡಲ್ಪಟ್ಟಿಲ್ಲ; 8 ವರ್ಷದ ಬಾಲಕಿಯ ಮೊದಲ ಕವನ

ಹೆಲೋ, ನಾನು ನಿಮ್ಮ ಊಬರ್ ಡ್ರೈವರ್, ಭಾನುವಾರ ಸಂಜೆ ನಾನು ನಿಮ್ಮ ಮನೆಗೆ ಡೆಲಿವರಿಗೆಂದು ಬಂದಾಗ ಅಕಸ್ಮಾತ್ ಆಗಿ ಕುಂಡವನ್ನು ಒಡೆದೆ. ಹಾಗಾಗಿ ಅದರ ಬದಲಾಗಿ ಈ ಕುಂಡವನ್ನು ನಿಮಗೆ ಕೊಡುತ್ತಿದ್ದೇನೆ. ಆದರೆ ಇದು ಉಡುಗೊರೆಯೂ ಅಲ್ಲ ಮತ್ತು ಯಾವುದೇ ಭಾವನಾತ್ಮಕ ಮಹತ್ವದಿಂದ ಕೂಡಿಲ್ಲ ಎಂದು ನಿಮಗನ್ನಿಸಬಹುದು ಎಂದು ಭಾವಿಸುತ್ತೇನೆ. ಮತ್ತಿದು ಇದು ಅಂಥಾ ಗುಣಮಟ್ಟದ್ದೇನಲ್ಲಆದರೂ ನೀವಿದನ್ನೂ ಉಪಯೋಗಿಸಿಕೊಳ್ಳಬಹುದು. ಇಂತಿ ಜೋರ್ಡಾನ್​.

ಓದಿದ ನಿಮ್ಮ ಮನಸ್ಸು ಮೃದುವಾಯಿತು ಅಲ್ಲವೆ? ಇಂಥ ಪ್ರಸಂಗಗಳು ನಿಮ್ಮನ್ನು ಎದುರುಗೊಂಡಿವೆಯೇ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 1:19 pm, Fri, 2 June 23

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ