AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಓನು ಬಂಗಾರಾ ಓನು ಪುಟ್ಟಾ, ಈ ವೀಕೆಂಡ್​ ಎಲ್ಲಿ ಹೋಗೋಣ?

Motherhood : ಈ ವಿಡಿಯೋ ಅನ್ನು 3.7 ಮಿಲಿಯನ್ ಜನರು ನೋಡಿದ್ದಾರೆ. ಮಂಗನಿಂದ ಮಾನವನೋ ಮಾನವನಿಂದ ಮಂಗನೋ, ಈ ವಿಡಿಯೋ ನೋಡಿದ ಮೇಲೆ ಗೊಂದಲ ಮತ್ತಷ್ಟು ಹೆಚ್ಚಾಗುತ್ತಿದೆ ಎನ್ನುತ್ತಿದ್ದಾರೆ ನೆಟ್ಟಿಗರು. ನೀವೇನಂತೀರಿ?

Viral Video: ಓನು ಬಂಗಾರಾ ಓನು ಪುಟ್ಟಾ, ಈ ವೀಕೆಂಡ್​ ಎಲ್ಲಿ ಹೋಗೋಣ?
ಮನುಷ್ಯನಂತೆ ಮರಿಯನ್ನು ಮುದ್ದಾಡುತ್ತಿರುವ ಕೋತಿ
TV9 Web
| Edited By: ಶ್ರೀದೇವಿ ಕಳಸದ|

Updated on:Jun 03, 2023 | 10:19 AM

Share

Monkey : ಅಮ್ಮಕೋತಿ ಎಷ್ಟೇ ಜೋರಾಗಿ ಓಡಲಿ, ಎಷ್ಟೇ ಎತ್ತರದಲ್ಲಿ ಹಾರಲಿ ಮರಿಕೋತಿ ಮಾತ್ರ ಆಕೆಯನ್ನು ಅವುಚಿಕೊಂಡು ಗಟ್ಟಿ ಹಿಡಿದುಕೊಂಡಿರುತ್ತದೆ. ಉಳಿದಂತೆ ಕುಳಿತಾಗ ಅಮ್ಮನ ಮೇಲೆ ಕುಳಿತುಕೊಂಡಿರುತ್ತದೆ. ನೆತ್ತಿ ನೇವರಿಸುತ್ತಲೋ ಮಡಿಲೊಳಗೆ ಎತ್ತಿಕೊಂಡೋ ಮರಿಯನ್ನು ಅಮ್ಮಕೋತಿ ಸಮಾಧಾನ ಮಾಡುತ್ತಿರುತ್ತದೆ. ಈ ದೃಶ್ಯಗಳೆಲ್ಲವೂ ನಮಗೆ ನೋಡಲು ಸಿಗುವಂಥವು. ಆದರೆ ಇಲ್ಲಿರುವ ಈ ದೃಶ್ಯ ನೋಡಿ. ನಮ್ಮ ನಿಮ್ಮಂತೆ ತನ್ನ ಮಗುವನ್ನು ಎತ್ತಿ ಆಡಿಸುತ್ತಿದೆ ಈ ಅಮ್ಮಕೋತಿ.

ಈ ತನಕ ಈ ವಿಡಿಯೋ ಅನ್ನು 3.7 ಮಿಲಿಯನ್​ ಜನರು ನೋಡಿದ್ದಾರೆ. ಆಹಾ ಎಷ್ಟು ಛಂದ ಮುದ್ದು ಮಾಡುತ್ತಿದೆ ಮತ್ತು ಮುತ್ತು ನೀಡುತ್ತಿದೆ ಈ ಅಮ್ಮಕೋತಿ. ನಿಜಕ್ಕೂ ಇದು ಅಪರೂಪದ ದೃಶ್ಯ ನಾನು ಈತನಕ ನೋಡಿಯೇ ಇಲ್ಲ. ಇದೇನು ಮನುಷ್ಯನನ್ನು ನೋಡಿ ಕಲಿತಿದ್ದಲ್ಲ, ಇದು ಅವುಗಳ ಮೂಲ ಸ್ವಭಾವ. ಖಂಡಿತ ಜೀವವಿಕಾಸವಾಗುತ್ತಿದೆ ಇಲ್ಲಿ… ಅಂತೆಲ್ಲ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Viral: ನನ್ನ ಆತ್ಮ ಪ್ಲಾಸ್ಟಿಕ್​ನಿಂದ ಮಾಡಲ್ಪಟ್ಟಿಲ್ಲ; 8 ವರ್ಷದ ಬಾಲಕಿಯ ಮೊದಲ ಕವನ

ಪೋಷಕರು ಮಕ್ಕಳನ್ನು ಮುದ್ದಿಸುವುದು ಎಲ್ಲಾ ಜೀವಿಗಳಲ್ಲೂ ಸಹಜ ಅಂಥದ್ದೇನಿದೆ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ನಾನು ನನ್ನ ನಾಯಿಯನ್ನು ಹೀಗೇ ಮುದ್ದಿಸುತ್ತೇನೆ ಎಂದು ಇನ್ನೊಬ್ಬರು ಹೇಳಿದ್ದಾರೆ. ಈ ವಿಡಿಯೋದ ಹಿನ್ನೆಲೆಯ ಸಂಗೀತ ಯಾವುದು ಎಂದು ಕೇಳಿದ್ದಾರೆ ಒಬ್ಬರು. ನಾವು ಕೋತಿಗಳನ್ನು ಅನುಸರಿಸುತ್ತಿದ್ದೇವೆಯೋ ಅವುಗಳು ನಮ್ಮನ್ನು ಅನುಕರಿಸುತ್ತಿದ್ದಾವೆಯೋ, ಈ ವಿಡಿಯೋ ನೋಡಿದ ಮೇಲೆ ನನ್ನ ಗೊಂದಲ ಹೆಚ್ಚಾಗುತ್ತಿದೆ ಎಂದು ಕೆಲವರು ಹೇಳಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:18 am, Sat, 3 June 23

Follow Us
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ