Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮೊಸಳೆಗಳಿರುವ ನದಿಯಲ್ಲಿ ಈ ವ್ಯಕ್ತಿಯ ಸಾಹಸ, ಈತನ ಭಂಡ ಧೈರ್ಯಕ್ಕೆ ಮೆಚ್ಚಲೇಬೇಕು!

ನೂರಾರು ಸಂಖ್ಯೆಯ ಮೊಸಳೆಗಳಿರುವ ಕಿರಿದಾದ ನದಿಯೊಂದರಲ್ಲಿ ವ್ಯಕ್ತಿಯೊಬ್ಬ ಮೋಟಾರು ದೋಣಿಯಲ್ಲಿ ಪಯಣಿಸುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ ಮೊಸಳೆಗಳ ಸಾಮ್ರಾಜ್ಯವನ್ನು ಕಂಡು ನೋಡುಗರು ಭಯಬೀತರಾಗಿದ್ದಾರೆ.

Viral Video: ಮೊಸಳೆಗಳಿರುವ ನದಿಯಲ್ಲಿ ಈ ವ್ಯಕ್ತಿಯ ಸಾಹಸ, ಈತನ ಭಂಡ ಧೈರ್ಯಕ್ಕೆ ಮೆಚ್ಚಲೇಬೇಕು!
ವೈರಲ್​ ವೀಡಿಯೊ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Jun 02, 2023 | 6:25 PM

ಹಾವು, ಮೊಸಳೆ ಇತ್ಯಾದಿ ಸರೀಸೃಪಗಳನ್ನು ಕಂಡರೆ ಹೆಚ್ಚಿನ ಜನರು ಭಯಪಡುತ್ತಾರೆ. ಅವುಗಳು ವಿಷಪೂರಿತವಾಗಿರುತ್ತವೆ, ಅಲ್ಲದೆ ಅವುಗಳು ಮನುಷ್ಯರನ್ನೇ ಕೊಲ್ಲುವಂತಹ ಅಪಾಯಕಾರಿ ಪರಭಕ್ಷಕ ಜೀವಿಗಳು ಹೌದು. ಆದ್ದರಿಂದ ಜನರು ಇಂತಹ ಅಪಾಯಕಾರಿ ಸರೀಸೃಪಗಳಿಂದ ಆದಷ್ಟು ದೂರವಿರುತ್ತಾರೆ. ಇನ್ನೂ ನದಿಯ ಬಳಿಗೆ ಹೋಗಿ ಮೊಸಳೆಯಂತಹ ಸರೀಸೃಪದ ದಾಳಿಗೆ ಮನುಷ್ಯರು ಹಾಗೂ ಇತರ ಪ್ರಾಣಿಗಳು ಬಲಿಯಾಗಿರುವ ಸುದ್ದಿಗಳನ್ನು ನಾವೆಲ್ಲರೂ ನೋಡಿರುತ್ತೇವೆ ಹಾಗೂ ಕೇಳಿರುತ್ತೇವೆ. ಹಾಗಾಗಿ ನೀರಿನ ಪ್ರದೇಶಕ್ಕೆ ಹೋಗುವಾಗ ಹೆಚ್ಚಿನ ಜನರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಮತ್ತು ಮೊಸಳೆಗಳ ವಾಸ್ತವ್ಯವಿರುವ ಸ್ಥಳಗಳಿಗೆ ಹೋಗುವುದನ್ನು ಆದಷ್ಟು ತಪ್ಪಿಸಿಕೊಳ್ಳುತ್ತಾರೆ. ಅದರೆ ಇಲ್ಲೊಂದು ಇದಕ್ಕೆ ವಿರುದ್ಧವಾದ ಘಟನೆ ನಡೆದಿದೆ. ಮೊಸಳೆಗಳ ರಾಶಿಯಲ್ಲಿಯೇ ತುಂಬಿರುವ ನದಿಯೊಂದರಲ್ಲಿ ವ್ಯಕ್ತಿಯೊಬ್ಬ ಮೋಟಾರು ದೋಣಿಯ ಮೂಲಕ ಪ್ರಯಾಣಿಸಿದ್ದಾನೆ. ಈ ಭಯಾನಕ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.

ಆಡ್ಲೀ ಟೆರ್ರಿಫೈಯಿಂಗ್ (@Oddly Trrefying) ಎಂಬ ಹೆಸರಿನ ಟ್ವಿಟರ್ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಇದಕ್ಕೆ ‘ನದಿಯ ಮೂಲಕ ಸಾಗುವ ಭಯಾನಕ ದೋಣಿ ಮಾರ್ಗವನ್ನು ವೀಕ್ಷಿಸಿ’ ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ವೈರಲ್ ವೀಡಿಯೋದಲ್ಲಿ ಮೊಸಳೆಗಳ ಸಾಮ್ರಾಜ್ಯವೇ ಇರುವ ಭಯಾನಕ ನದಿಯಲ್ಲಿ ಮೋಟಾರು ದೋಣಿಯೊಂದು ಸಾಗುವುದನ್ನು ಕಾಣಬಹುದು.

ಇದನ್ನೂ ಓದಿ:Viral Video: ಇದನ್ನು ಆಸ್ಕರ್​ಗೆ ಕಳಿಸಬೇಕಿತ್ತು! ನೆಟ್ಟಿಗರ ಒಕ್ಕೊರಲಿನ ದನಿ

ದೋಣಿಯು ನದಿಗೆ ಪ್ರವೇಶಿಸುತ್ತಿದ್ದಂತೆ ಒಂದಿಷ್ಟು ಮೊಸಳೆಗಳ ದಂಡು ಅಲ್ಲಿದ್ದವು, ಅವುಗಳು ದೋಣಿಯ ಮೋಟಾರಿನ ಶಬ್ಧಕ್ಕೆ ಭಯಪಟ್ಟು ವೇಗವಾಗಿ ಹೋಗಿ ನದಿಯ ದಡಕ್ಕೆ ಸೇರಿಕೊಳ್ಳುತ್ತವೆ. ಹೀಗೆ ಮುಂದೆ ಮುಂದೆ ದೋಣಿ ಸಾಗಿದಂತೆ ನದಿಯಲ್ಲಿ ಬರಿ ಮೊಸಳೆಗಳೇ ತುಂಬಿದ್ದವು. ಅಬ್ಬಬ್ಬಾ ನದಿಯಲ್ಲಿ ನೀರಿಗಿಂತ ಹೆಚ್ಚಾಗಿ ಮೊಸಳೆಗಳೇ ಇರುವ ಭಯಾನಕ ದೃಶ್ಯಾವಳಿ ನೋಡುಗರಲ್ಲಿ ನಡುಕ ಹುಟ್ಟಿಸಿದೆ.

ಈ ವೈರಲ್ ವೀಡಿಯೋ ಇಲ್ಲಿಯವರೆಗೆ 2.7 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 11.7 ಸಾವಿರ ಲೈಕ್ಸ್ ಗಳನ್ನು ಪಡೆದಿದೆ. ಮಾತ್ರವಲ್ಲದೆ ಅನೇಕರು ಈ ಬಗ್ಗೆ ಕಮೆಂಟ್​​​ ಮಾಡಿದ್ದಾರೆ. ಒಬ್ಬ ಬಳಕೆದಾರರು ‘ಮೊಸಳೆಗಳು ದೋಣಿಗೆ ಹೆದರುತ್ತಿರುವಂತೆ ತೋರುತ್ತದೆ’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಇದು ಯಾವ ಸ್ಥಳ, ಇಷ್ಟೊಂದು ಭಯಾನಕವಾಗಿದೆ’ ಎಂದು ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಇದು ತುಂಬಾ ಭಯಾನಕವಾಗಿದೆ ಎಂದು ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 6:18 pm, Fri, 2 June 23

ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್
ಎಲ್ಲರ ಆಶೀರ್ವಾದ ಮಗ ದರ್ಶನ್ ಮೇಲಿರಲಿ: ಮೀನಾ ತೂಗುದೀಪ
ಎಲ್ಲರ ಆಶೀರ್ವಾದ ಮಗ ದರ್ಶನ್ ಮೇಲಿರಲಿ: ಮೀನಾ ತೂಗುದೀಪ
ಡೀಸೆಲ್ ಬೆಲೆ ಹೆಚ್ಚಳದಿಂದ ಹಲವಾರು ವಸ್ತುಗಳ ಬೆಲೆ ಜಾಸ್ತಿಯಾಗುತ್ತದೆ: ಅಶೋಕ
ಡೀಸೆಲ್ ಬೆಲೆ ಹೆಚ್ಚಳದಿಂದ ಹಲವಾರು ವಸ್ತುಗಳ ಬೆಲೆ ಜಾಸ್ತಿಯಾಗುತ್ತದೆ: ಅಶೋಕ
ಹೊಸಪಕ್ಷ ಕಟ್ಟುವ ಕುರಿತು ಯತ್ನಾಳ್ ಮನಸ್ಸಿನಲ್ಲಿರೋದು ಗೊತ್ತಿಲ್ಲ: ನಿರಾಣಿ
ಹೊಸಪಕ್ಷ ಕಟ್ಟುವ ಕುರಿತು ಯತ್ನಾಳ್ ಮನಸ್ಸಿನಲ್ಲಿರೋದು ಗೊತ್ತಿಲ್ಲ: ನಿರಾಣಿ
ಮಾತಾಡಿದ್ದು ನಿರಾಣಿ, ಆಸ್ಥೆಯಿಂದ ಕೇಳಿಸಿಕೊಂಡಿದ್ದು ಶಿವಕುಮಾರ್!
ಮಾತಾಡಿದ್ದು ನಿರಾಣಿ, ಆಸ್ಥೆಯಿಂದ ಕೇಳಿಸಿಕೊಂಡಿದ್ದು ಶಿವಕುಮಾರ್!
ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ
ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ
ತಾವು ರಾಷ್ಟ್ರೀಯ ಪಕ್ಷವೆಂಬ ಹಮ್ಮು ಬಿಜೆಪಿ ನಾಯಕರಿಗಿರಬಹುದು: ಸುರೇಶ್ ಬಾಬು
ತಾವು ರಾಷ್ಟ್ರೀಯ ಪಕ್ಷವೆಂಬ ಹಮ್ಮು ಬಿಜೆಪಿ ನಾಯಕರಿಗಿರಬಹುದು: ಸುರೇಶ್ ಬಾಬು
ಸರ್ಕಾರದ ಏಜೆಂಟ್​​​ನಂತೆ ವರ್ತಿಸುವ ಸ್ಪೀಕರ್​ಗೆ ಧಿಕ್ಕಾರ: ಪ್ರತಿಭಟನೆಕಾರರು
ಸರ್ಕಾರದ ಏಜೆಂಟ್​​​ನಂತೆ ವರ್ತಿಸುವ ಸ್ಪೀಕರ್​ಗೆ ಧಿಕ್ಕಾರ: ಪ್ರತಿಭಟನೆಕಾರರು