AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಹೀಗೊಂದು ಟ್ವಿಸ್ಟ್​ ಈ ವಿಡಿಯೋಗಿರಬಹುದು ಎಂದು ನೀವು ಊಹಿಸಲಾರಿರಿ

Creative Idea : ನಿಮ್ಮ ತಲೆಗೆ, ಕಲೆಗೆ ಭಾರೀ ಬೇಡಿಕೆ ಇದೆ. ಎಷ್ಟು ಸೃಜನಾತ್ಮಕವಾಗಿ ಯೋಚಿಸುತ್ತೀರಿ ಎನ್ನುವುದರ ಮೇಲೆ ನಿಮ್ಮ ಭವಿಷ್ಯ ರೂಪುಗೊಳ್ಳುವ ಕಾಲ ಇದಾಗಿದೆ. ಅಪ್ಪಟ ಸೃಜನಶೀಲತೆಗೆ ಈ ವಿಡಿಯೋ ಉತ್ತಮ ಉದಾಹರಣೆ.

Viral Video: ಹೀಗೊಂದು ಟ್ವಿಸ್ಟ್​ ಈ ವಿಡಿಯೋಗಿರಬಹುದು ಎಂದು ನೀವು ಊಹಿಸಲಾರಿರಿ
ನಾಳೆ ಅತಿಥಿಗಳು ಬರುವವರಿದ್ದಾರೆ ಒಂದು ಲೀಟರ್ ಜಾಸ್ತಿ ಕೊಡಿ ಅಣ್ಣಾ
TV9 Web
| Edited By: ಶ್ರೀದೇವಿ ಕಳಸದ|

Updated on:Jun 01, 2023 | 10:31 AM

Share

Scarcity : ಅಣ್ಣಾ, ನಾಳೆಯಿಂದ ಒಂದು ಲೀಟರ್ ಜಾಸ್ತಿ ಕೊಡಿ ಮನೆಗೆ ಅತಿಥಿಗಳು ಬರುವವರಿದ್ದಾರೆ ಎಂದು ಮನೆಯೊಡತಿ ಹೇಳಿದಾಗ, ಆಯ್ತು ಎಂದು ಹೇಳುತ್ತಾನೆ. ತುಂಬಿದ ಪಾತ್ರೆಯನ್ನು ತಂದು ಗ್ಯಾಸ್​ ಕಟ್ಟೆಯ ಮೇಲೆ ಇಡುವ ಹೊತ್ತಿಗೆ ಮಗು ಅಳುವ ಶಬ್ದ ಆಕೆ ಕೋಣೆಗೆ ಹೋಗುತ್ತಾಳೆ. ಕಿಟಕಿಯಿಂದ ಬಂದ ಬೆಕ್ಕು ಪಾತ್ರೆಯೊಳಗೆ ಇಣುಕುತ್ತದೆ. ಆದರೆ ಕುಡಿಯುವುದಿಲ್ಲ. ಯಾಕೆ? ಈ ವಿಡಿಯೋ ನೋಡಿ ಹಾಗಿದ್ದರೆ.

ನೀರನ್ನು ಉಳಿಸಿ ಇಲ್ಲವಾದರೆ ಭವಿಷ್ಯದಲ್ಲಿ ಇಂಥ ದಿನಗಳೂ ಬರಬಹದು ಎಂಬ ಹಿನ್ನೆಲೆ ಧ್ವನಿಯೊಂದಿಗೆ ಈ ಪುಟ್ಟ ವಿಡಿಯೋ ಸಂಪನ್ನಗೊಳ್ಳುತ್ತದೆ. ಕೊನೆಯ ತನಕ ನೀವು ಹಾಲು ಎಂದೇ ತಿಳಿದುಕೊಂಡಿರುತ್ತೀರಿ ಅಲ್ಲವೆ? ಮುಂದೊಂದು ದಿನ ಹಾಲು, ಪೆಟ್ರೋಲ್, ಎಣ್ಣೆ, ತುಪ್ಪದಂತೆ ನೀರನ್ನು ಬಳಸುವಂಥ ಕಷ್ಟವನ್ನು ತಂದುಕೊಳ್ಳದಂತೆ ಜವಾಬ್ದಾರಿಯಿಂದ ನಡೆದುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎನ್ನವು ಸಂದೇಶವನ್ನು ಇದು ಸಾರುತ್ತದೆ.

ಇದನ್ನೂ ಓದಿ : Viral: ಎಲಾನ್​ ಮಸ್ಕ್​ ಭಾರತದ ಅಳಿಯನಾಗಲಿದ್ದಾರೆಯೇ?!

ಡಿಜಿಟಲ್​ ಕಂಟೆಂಟ್​ ಕ್ರಿಯೇಷನ್​ ಎನ್ನುವುದು ಈವತ್ತು ದೊಡ್ಡ ಉದ್ಯಮವಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ ನಿಮ್ಮ ತಲೆಗೆ, ಕಲೆಗೆ ಭಾರೀ ಬೇಡಿಕೆ ಇದೆ. ಎಷ್ಟು ಸೃಜನಾತ್ಮಕವಾಗಿ ಯೋಚಿಸುತ್ತೀರಿ, ಬರೆಯುತ್ತೀರಿ, ವಿಡಿಯೋ ಕಂಟೆಂಟ್​ ಸೃಷ್ಟಿಸುತ್ತೀರಿ ಎನ್ನುವುದರ ಮೇಲೆ ಭವಿಷ್ಯ ರೂಪುಗೊಳ್ಳುತ್ತದೆ. ಜಾಹೀರಾತು ಕಂಪೆನಿಗಳು, ಡಿಜಿಟಲ್​ ಏಜೆನ್ಸಿಗಳು ನಿಮ್ಮಂಥವರಿಗಾಗಿ ಕಾಯುತ್ತಿರುತ್ತವೆ.

ಇದನ್ನೂ ಓದಿ : Viral Video: 22 ವರ್ಷಗಳ ನಂತರ ಒಡಹುಟ್ಟಿದವರ ಪುನರ್ಮಿಲನ

ತುಂಬಾ ಬುದ್ಧಿವಂತಿಕೆಯಿಂದ ಕೂಡಿದ ಐಡಿಯಾ ಇದಾಗಿದೆ ಆದರೆ ಕೊನೆಯಲ್ಲಿ ಈ ಕಂಪೆನಿಯ ಹೆಸರು ಬರಬಾರದಿತ್ತು ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಕಂಪೆನಿಯ ಜಾಹೀರಾತು ಎಂದು ನೋಡದೆ ಇದನ್ನು ಸೃಜನಶೀಲವಾಗಿ ಮತ್ತು ಸಂದೇಶಾತ್ಮಕವಾಗಿ ನೋಡಿದರೆ ಸಾಕು ಎಂದೂ ಕೆಲವರು ಹೇಳುತ್ತಿದ್ದಾರೆ.

ಕೊನೇತನಕ ಇಂಥದೊಂದು ಟ್ವಿಸ್ಟ್​ ಈ ವಿಡಿಯೋಗೆ ಇರಬಹುದು ಎಂಬ ಕಿಂಚಿತ್​ ಸುಳಿವೂ ನಿಮಗಿರಲಿಲ್ಲ ಅಲ್ಲವೇ, ಏನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 10:19 am, Thu, 1 June 23

Follow Us
ಹೊಸ ರಾಜಕೀಯ ಪಕ್ಷದ ಬಗ್ಗೆ ವಿವರ ಹಂಚಿಕೊಂಡ ನಟ ಚೇತನ್ ಅಹಿಂಸ
ಹೊಸ ರಾಜಕೀಯ ಪಕ್ಷದ ಬಗ್ಗೆ ವಿವರ ಹಂಚಿಕೊಂಡ ನಟ ಚೇತನ್ ಅಹಿಂಸ
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!