Viral Video: ಹೀಗೊಂದು ಟ್ವಿಸ್ಟ್​ ಈ ವಿಡಿಯೋಗಿರಬಹುದು ಎಂದು ನೀವು ಊಹಿಸಲಾರಿರಿ

Creative Idea : ನಿಮ್ಮ ತಲೆಗೆ, ಕಲೆಗೆ ಭಾರೀ ಬೇಡಿಕೆ ಇದೆ. ಎಷ್ಟು ಸೃಜನಾತ್ಮಕವಾಗಿ ಯೋಚಿಸುತ್ತೀರಿ ಎನ್ನುವುದರ ಮೇಲೆ ನಿಮ್ಮ ಭವಿಷ್ಯ ರೂಪುಗೊಳ್ಳುವ ಕಾಲ ಇದಾಗಿದೆ. ಅಪ್ಪಟ ಸೃಜನಶೀಲತೆಗೆ ಈ ವಿಡಿಯೋ ಉತ್ತಮ ಉದಾಹರಣೆ.

Viral Video: ಹೀಗೊಂದು ಟ್ವಿಸ್ಟ್​ ಈ ವಿಡಿಯೋಗಿರಬಹುದು ಎಂದು ನೀವು ಊಹಿಸಲಾರಿರಿ
ನಾಳೆ ಅತಿಥಿಗಳು ಬರುವವರಿದ್ದಾರೆ ಒಂದು ಲೀಟರ್ ಜಾಸ್ತಿ ಕೊಡಿ ಅಣ್ಣಾ
Follow us
| Updated By: ಶ್ರೀದೇವಿ ಕಳಸದ

Updated on:Jun 01, 2023 | 10:31 AM

Scarcity : ಅಣ್ಣಾ, ನಾಳೆಯಿಂದ ಒಂದು ಲೀಟರ್ ಜಾಸ್ತಿ ಕೊಡಿ ಮನೆಗೆ ಅತಿಥಿಗಳು ಬರುವವರಿದ್ದಾರೆ ಎಂದು ಮನೆಯೊಡತಿ ಹೇಳಿದಾಗ, ಆಯ್ತು ಎಂದು ಹೇಳುತ್ತಾನೆ. ತುಂಬಿದ ಪಾತ್ರೆಯನ್ನು ತಂದು ಗ್ಯಾಸ್​ ಕಟ್ಟೆಯ ಮೇಲೆ ಇಡುವ ಹೊತ್ತಿಗೆ ಮಗು ಅಳುವ ಶಬ್ದ ಆಕೆ ಕೋಣೆಗೆ ಹೋಗುತ್ತಾಳೆ. ಕಿಟಕಿಯಿಂದ ಬಂದ ಬೆಕ್ಕು ಪಾತ್ರೆಯೊಳಗೆ ಇಣುಕುತ್ತದೆ. ಆದರೆ ಕುಡಿಯುವುದಿಲ್ಲ. ಯಾಕೆ? ಈ ವಿಡಿಯೋ ನೋಡಿ ಹಾಗಿದ್ದರೆ.

ನೀರನ್ನು ಉಳಿಸಿ ಇಲ್ಲವಾದರೆ ಭವಿಷ್ಯದಲ್ಲಿ ಇಂಥ ದಿನಗಳೂ ಬರಬಹದು ಎಂಬ ಹಿನ್ನೆಲೆ ಧ್ವನಿಯೊಂದಿಗೆ ಈ ಪುಟ್ಟ ವಿಡಿಯೋ ಸಂಪನ್ನಗೊಳ್ಳುತ್ತದೆ. ಕೊನೆಯ ತನಕ ನೀವು ಹಾಲು ಎಂದೇ ತಿಳಿದುಕೊಂಡಿರುತ್ತೀರಿ ಅಲ್ಲವೆ? ಮುಂದೊಂದು ದಿನ ಹಾಲು, ಪೆಟ್ರೋಲ್, ಎಣ್ಣೆ, ತುಪ್ಪದಂತೆ ನೀರನ್ನು ಬಳಸುವಂಥ ಕಷ್ಟವನ್ನು ತಂದುಕೊಳ್ಳದಂತೆ ಜವಾಬ್ದಾರಿಯಿಂದ ನಡೆದುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎನ್ನವು ಸಂದೇಶವನ್ನು ಇದು ಸಾರುತ್ತದೆ.

ಇದನ್ನೂ ಓದಿ : Viral: ಎಲಾನ್​ ಮಸ್ಕ್​ ಭಾರತದ ಅಳಿಯನಾಗಲಿದ್ದಾರೆಯೇ?!

ಡಿಜಿಟಲ್​ ಕಂಟೆಂಟ್​ ಕ್ರಿಯೇಷನ್​ ಎನ್ನುವುದು ಈವತ್ತು ದೊಡ್ಡ ಉದ್ಯಮವಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ ನಿಮ್ಮ ತಲೆಗೆ, ಕಲೆಗೆ ಭಾರೀ ಬೇಡಿಕೆ ಇದೆ. ಎಷ್ಟು ಸೃಜನಾತ್ಮಕವಾಗಿ ಯೋಚಿಸುತ್ತೀರಿ, ಬರೆಯುತ್ತೀರಿ, ವಿಡಿಯೋ ಕಂಟೆಂಟ್​ ಸೃಷ್ಟಿಸುತ್ತೀರಿ ಎನ್ನುವುದರ ಮೇಲೆ ಭವಿಷ್ಯ ರೂಪುಗೊಳ್ಳುತ್ತದೆ. ಜಾಹೀರಾತು ಕಂಪೆನಿಗಳು, ಡಿಜಿಟಲ್​ ಏಜೆನ್ಸಿಗಳು ನಿಮ್ಮಂಥವರಿಗಾಗಿ ಕಾಯುತ್ತಿರುತ್ತವೆ.

ಇದನ್ನೂ ಓದಿ : Viral Video: 22 ವರ್ಷಗಳ ನಂತರ ಒಡಹುಟ್ಟಿದವರ ಪುನರ್ಮಿಲನ

ತುಂಬಾ ಬುದ್ಧಿವಂತಿಕೆಯಿಂದ ಕೂಡಿದ ಐಡಿಯಾ ಇದಾಗಿದೆ ಆದರೆ ಕೊನೆಯಲ್ಲಿ ಈ ಕಂಪೆನಿಯ ಹೆಸರು ಬರಬಾರದಿತ್ತು ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಕಂಪೆನಿಯ ಜಾಹೀರಾತು ಎಂದು ನೋಡದೆ ಇದನ್ನು ಸೃಜನಶೀಲವಾಗಿ ಮತ್ತು ಸಂದೇಶಾತ್ಮಕವಾಗಿ ನೋಡಿದರೆ ಸಾಕು ಎಂದೂ ಕೆಲವರು ಹೇಳುತ್ತಿದ್ದಾರೆ.

ಕೊನೇತನಕ ಇಂಥದೊಂದು ಟ್ವಿಸ್ಟ್​ ಈ ವಿಡಿಯೋಗೆ ಇರಬಹುದು ಎಂಬ ಕಿಂಚಿತ್​ ಸುಳಿವೂ ನಿಮಗಿರಲಿಲ್ಲ ಅಲ್ಲವೇ, ಏನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 10:19 am, Thu, 1 June 23

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ