Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಹೀಗೊಂದು ಟ್ವಿಸ್ಟ್​ ಈ ವಿಡಿಯೋಗಿರಬಹುದು ಎಂದು ನೀವು ಊಹಿಸಲಾರಿರಿ

Creative Idea : ನಿಮ್ಮ ತಲೆಗೆ, ಕಲೆಗೆ ಭಾರೀ ಬೇಡಿಕೆ ಇದೆ. ಎಷ್ಟು ಸೃಜನಾತ್ಮಕವಾಗಿ ಯೋಚಿಸುತ್ತೀರಿ ಎನ್ನುವುದರ ಮೇಲೆ ನಿಮ್ಮ ಭವಿಷ್ಯ ರೂಪುಗೊಳ್ಳುವ ಕಾಲ ಇದಾಗಿದೆ. ಅಪ್ಪಟ ಸೃಜನಶೀಲತೆಗೆ ಈ ವಿಡಿಯೋ ಉತ್ತಮ ಉದಾಹರಣೆ.

Viral Video: ಹೀಗೊಂದು ಟ್ವಿಸ್ಟ್​ ಈ ವಿಡಿಯೋಗಿರಬಹುದು ಎಂದು ನೀವು ಊಹಿಸಲಾರಿರಿ
ನಾಳೆ ಅತಿಥಿಗಳು ಬರುವವರಿದ್ದಾರೆ ಒಂದು ಲೀಟರ್ ಜಾಸ್ತಿ ಕೊಡಿ ಅಣ್ಣಾ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jun 01, 2023 | 10:31 AM

Scarcity : ಅಣ್ಣಾ, ನಾಳೆಯಿಂದ ಒಂದು ಲೀಟರ್ ಜಾಸ್ತಿ ಕೊಡಿ ಮನೆಗೆ ಅತಿಥಿಗಳು ಬರುವವರಿದ್ದಾರೆ ಎಂದು ಮನೆಯೊಡತಿ ಹೇಳಿದಾಗ, ಆಯ್ತು ಎಂದು ಹೇಳುತ್ತಾನೆ. ತುಂಬಿದ ಪಾತ್ರೆಯನ್ನು ತಂದು ಗ್ಯಾಸ್​ ಕಟ್ಟೆಯ ಮೇಲೆ ಇಡುವ ಹೊತ್ತಿಗೆ ಮಗು ಅಳುವ ಶಬ್ದ ಆಕೆ ಕೋಣೆಗೆ ಹೋಗುತ್ತಾಳೆ. ಕಿಟಕಿಯಿಂದ ಬಂದ ಬೆಕ್ಕು ಪಾತ್ರೆಯೊಳಗೆ ಇಣುಕುತ್ತದೆ. ಆದರೆ ಕುಡಿಯುವುದಿಲ್ಲ. ಯಾಕೆ? ಈ ವಿಡಿಯೋ ನೋಡಿ ಹಾಗಿದ್ದರೆ.

ನೀರನ್ನು ಉಳಿಸಿ ಇಲ್ಲವಾದರೆ ಭವಿಷ್ಯದಲ್ಲಿ ಇಂಥ ದಿನಗಳೂ ಬರಬಹದು ಎಂಬ ಹಿನ್ನೆಲೆ ಧ್ವನಿಯೊಂದಿಗೆ ಈ ಪುಟ್ಟ ವಿಡಿಯೋ ಸಂಪನ್ನಗೊಳ್ಳುತ್ತದೆ. ಕೊನೆಯ ತನಕ ನೀವು ಹಾಲು ಎಂದೇ ತಿಳಿದುಕೊಂಡಿರುತ್ತೀರಿ ಅಲ್ಲವೆ? ಮುಂದೊಂದು ದಿನ ಹಾಲು, ಪೆಟ್ರೋಲ್, ಎಣ್ಣೆ, ತುಪ್ಪದಂತೆ ನೀರನ್ನು ಬಳಸುವಂಥ ಕಷ್ಟವನ್ನು ತಂದುಕೊಳ್ಳದಂತೆ ಜವಾಬ್ದಾರಿಯಿಂದ ನಡೆದುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎನ್ನವು ಸಂದೇಶವನ್ನು ಇದು ಸಾರುತ್ತದೆ.

ಇದನ್ನೂ ಓದಿ : Viral: ಎಲಾನ್​ ಮಸ್ಕ್​ ಭಾರತದ ಅಳಿಯನಾಗಲಿದ್ದಾರೆಯೇ?!

ಡಿಜಿಟಲ್​ ಕಂಟೆಂಟ್​ ಕ್ರಿಯೇಷನ್​ ಎನ್ನುವುದು ಈವತ್ತು ದೊಡ್ಡ ಉದ್ಯಮವಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ ನಿಮ್ಮ ತಲೆಗೆ, ಕಲೆಗೆ ಭಾರೀ ಬೇಡಿಕೆ ಇದೆ. ಎಷ್ಟು ಸೃಜನಾತ್ಮಕವಾಗಿ ಯೋಚಿಸುತ್ತೀರಿ, ಬರೆಯುತ್ತೀರಿ, ವಿಡಿಯೋ ಕಂಟೆಂಟ್​ ಸೃಷ್ಟಿಸುತ್ತೀರಿ ಎನ್ನುವುದರ ಮೇಲೆ ಭವಿಷ್ಯ ರೂಪುಗೊಳ್ಳುತ್ತದೆ. ಜಾಹೀರಾತು ಕಂಪೆನಿಗಳು, ಡಿಜಿಟಲ್​ ಏಜೆನ್ಸಿಗಳು ನಿಮ್ಮಂಥವರಿಗಾಗಿ ಕಾಯುತ್ತಿರುತ್ತವೆ.

ಇದನ್ನೂ ಓದಿ : Viral Video: 22 ವರ್ಷಗಳ ನಂತರ ಒಡಹುಟ್ಟಿದವರ ಪುನರ್ಮಿಲನ

ತುಂಬಾ ಬುದ್ಧಿವಂತಿಕೆಯಿಂದ ಕೂಡಿದ ಐಡಿಯಾ ಇದಾಗಿದೆ ಆದರೆ ಕೊನೆಯಲ್ಲಿ ಈ ಕಂಪೆನಿಯ ಹೆಸರು ಬರಬಾರದಿತ್ತು ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಕಂಪೆನಿಯ ಜಾಹೀರಾತು ಎಂದು ನೋಡದೆ ಇದನ್ನು ಸೃಜನಶೀಲವಾಗಿ ಮತ್ತು ಸಂದೇಶಾತ್ಮಕವಾಗಿ ನೋಡಿದರೆ ಸಾಕು ಎಂದೂ ಕೆಲವರು ಹೇಳುತ್ತಿದ್ದಾರೆ.

ಕೊನೇತನಕ ಇಂಥದೊಂದು ಟ್ವಿಸ್ಟ್​ ಈ ವಿಡಿಯೋಗೆ ಇರಬಹುದು ಎಂಬ ಕಿಂಚಿತ್​ ಸುಳಿವೂ ನಿಮಗಿರಲಿಲ್ಲ ಅಲ್ಲವೇ, ಏನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 10:19 am, Thu, 1 June 23

ಭೂಮಾಪನ ಇಲಾಖೆಯಲ್ಲಾದ ಬದಲಾವಣೆಗಳ ಕ್ರೆಡಿಟ್ ಮುಖ್ಯಮಂತ್ರಿಗೆ
ಭೂಮಾಪನ ಇಲಾಖೆಯಲ್ಲಾದ ಬದಲಾವಣೆಗಳ ಕ್ರೆಡಿಟ್ ಮುಖ್ಯಮಂತ್ರಿಗೆ
ಚುನಾವಣೆ ಹತ್ತಿರದಲ್ಲಿಲ್ಲ, ದಗಿಮಿಕ್ ಮಾಡ್ತಿಲ್ಲ; ಉಡುಪಿಯಲ್ಲಿ ವಿಜಯೇಂದ್ರ
ಚುನಾವಣೆ ಹತ್ತಿರದಲ್ಲಿಲ್ಲ, ದಗಿಮಿಕ್ ಮಾಡ್ತಿಲ್ಲ; ಉಡುಪಿಯಲ್ಲಿ ವಿಜಯೇಂದ್ರ
ನಗರಸಭೆ ಮತ್ತು ಜಿಲ್ಲಾಡಳಿತ ವಿರುದ್ಧ ಬೆಂಕಿಯುಗುಳಿದ ಯಾದಗಿರಿ ನಿವಾಸಿಗಳು
ನಗರಸಭೆ ಮತ್ತು ಜಿಲ್ಲಾಡಳಿತ ವಿರುದ್ಧ ಬೆಂಕಿಯುಗುಳಿದ ಯಾದಗಿರಿ ನಿವಾಸಿಗಳು
ಲೈವ್​ನಲ್ಲೇ ಅಂಬಾಟಿ ರಾಯುಡು ಚಳಿ ಬಿಡಿಸಿದ ನವಜೋತ್ ಸಿಂಗ್ ಸಿಧು
ಲೈವ್​ನಲ್ಲೇ ಅಂಬಾಟಿ ರಾಯುಡು ಚಳಿ ಬಿಡಿಸಿದ ನವಜೋತ್ ಸಿಂಗ್ ಸಿಧು
ಸಿಕ್ಕ‌ಸಿಕ್ಕ ಮನೆಗಳಿಗೆ ನುಗ್ಗಿದ ಆಸಾಮಿ: ಮೊಬೈಲ್, ವಾಚ್ ಕಳ್ಳತನ
ಸಿಕ್ಕ‌ಸಿಕ್ಕ ಮನೆಗಳಿಗೆ ನುಗ್ಗಿದ ಆಸಾಮಿ: ಮೊಬೈಲ್, ವಾಚ್ ಕಳ್ಳತನ
ಧನ್ವೀರ್ ಜೊತೆ ಸಿನಿಮಾ ಮಾಡ್ತಾರೆ ದರ್ಶನ್; ಸೂಚನೆ ಕೊಟ್ಟ ದಾಸ
ಧನ್ವೀರ್ ಜೊತೆ ಸಿನಿಮಾ ಮಾಡ್ತಾರೆ ದರ್ಶನ್; ಸೂಚನೆ ಕೊಟ್ಟ ದಾಸ
ಬಸನಗೌಡ ಯತ್ನಾಳ್ ಬಗ್ಗೆ ಮಾತಾಡಲು ಇಚ್ಛಿಸದ ವಿಜಯೇಂದ್ರ
ಬಸನಗೌಡ ಯತ್ನಾಳ್ ಬಗ್ಗೆ ಮಾತಾಡಲು ಇಚ್ಛಿಸದ ವಿಜಯೇಂದ್ರ
ತುಮಕೂರು ಜಿಲ್ಲೆ ನೀರಿನ ಯೋಜನೆಗಳ ಬಗ್ಗೆ ಶ್ರೀಗಳಿಗೆ ವಿವರಿಸಿದ ಪರಮೇಶ್ವರ್
ತುಮಕೂರು ಜಿಲ್ಲೆ ನೀರಿನ ಯೋಜನೆಗಳ ಬಗ್ಗೆ ಶ್ರೀಗಳಿಗೆ ವಿವರಿಸಿದ ಪರಮೇಶ್ವರ್
ಕಾಂಗ್ರೆಸ್ ಅಧಿಕಾರದಲ್ಲಿ 50 ವಸ್ತುಗಳ ಬೆಲೆ ಜಾಸ್ತಿಯಾಗಿದೆ: ಹಿರಿಯ ನಾಗರಿಕ
ಕಾಂಗ್ರೆಸ್ ಅಧಿಕಾರದಲ್ಲಿ 50 ವಸ್ತುಗಳ ಬೆಲೆ ಜಾಸ್ತಿಯಾಗಿದೆ: ಹಿರಿಯ ನಾಗರಿಕ
ತುಮಕೂರು ರೈಲ್ವೆ ನಿಲ್ದಾಣಕ್ಕೆ ಶ್ರೀಗಳ ಹೆಸರು: ಪರಮೇಶ್ವರ್ ಹೇಳಿದ್ದಿಷ್ಟು
ತುಮಕೂರು ರೈಲ್ವೆ ನಿಲ್ದಾಣಕ್ಕೆ ಶ್ರೀಗಳ ಹೆಸರು: ಪರಮೇಶ್ವರ್ ಹೇಳಿದ್ದಿಷ್ಟು