AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಮೀಟಿಂಗ್ ನಾನು ಈಟಿಂಗ್; ಇಲಿಯೊಂದು ಕೇಕ್​ ತಿನ್ನುತ್ತಿರುವ ವಿಡಿಯೋ ವೈರಲ್

Rat Eating Cake : ಇಲ್ಲಿರುವ ಮಹಾಶಯರೆಲ್ಲ ಘನಗಂಭೀರವಾಗಿ ಮೀಟಿಂಗ್ ಮಾಡುತ್ತಿದ್ಧಾರೆ. ಆದರೆ, ಇದ್ಯಾವ ಪರಿವೆಯೂ ಇಲ್ಲದೆ ಈಟಿಂಗ್​ನಲ್ಲಿ ತೊಡಗಿಕೊಂಡಿದ್ದಾರೆ ಈ ಮೂಷಿಕ ಮಹಾರಾಯರು. ನೋಡಿ ವಿಡಿಯೋ.

ನೀವು ಮೀಟಿಂಗ್ ನಾನು ಈಟಿಂಗ್; ಇಲಿಯೊಂದು ಕೇಕ್​ ತಿನ್ನುತ್ತಿರುವ ವಿಡಿಯೋ ವೈರಲ್
ಮೀಟಿಂಗ್ ಮಾಡುತ್ತಿರುವಾಗ ಇಲಿ ಕೇಕ್ ತಿನ್ನುತ್ತಿರುವುದು
TV9 Web
| Edited By: ಶ್ರೀದೇವಿ ಕಳಸದ|

Updated on: Dec 07, 2022 | 10:38 AM

Share

Viral Video : ಮೀಟಿಂಗ್​ ಎಂದಮೇಲೆ ಇಂತಿಂಥವರು ಮಾತ್ರ ಹಾಜರಿರಬೇಕು ಎಂಬ ನಿಯಮವಿರುತ್ತದೆ. ಆದರೆ ಇಲ್ಲೊಬ್ಬರು ಆಹ್ವಾನವಿಲ್ಲದಿದ್ದರೂ ಮೀಟಿಂಗ್​ ಹಾಲ್​ನಲ್ಲಿ ಬಂದು ಕುಳಿತಿದ್ದಾರೆ. ಅದು ಮೀಟಿಂಗ್​ನಲ್ಲಿ ಮುಳುಗಿದವರಿಗೆ ಅರಿವಿಲ್ಲ. ಆದರೆ ಆಹ್ವಾನವಿಲ್ಲದೇ ಇಲ್ಲಿಗೆ ಬಂದವರು ಮಾತ್ರ ನಿರಾತಂಕವಾಗಿ ಪ್ಲೇನ್ ಕೇಕ್​ ಮೆಲ್ಲುತ್ತ ಕುಳಿತಿದ್ದಾರೆ. ಇದು ಕ್ಯಾಮೆರಾ ಕಣ್ಣಿಗೆ ಬಿದ್ದು ಸಾಮಾಜಿಕ ಜಾಲತಾಣಕ್ಕೆ ವಿಡಿಯೋ ಅಪ್​ಲೋಡ್ ಆಗುತ್ತಿದ್ದಂತೆ  ವೈರಲ್ ಆಗಿದೆ.

ಡಾ. ಆರಿಫ್ ಖ್ವಾಜಾ ಎಂಬ ಟ್ವಿಟರ್ ಖಾತೆದಾರರು ಈ ವಿಡಿಯೋ ಹಂಚಿಕೊಂಡಿದ್ದಾರೆ. ಇವರ ಬಯೋ ಹೇಳುವಂತೆ ಆರೀಫ್​ ಖ್ವಾಜಾ ಜಮ್ಮು-ಕಾಶ್ಮೀರದಲ್ಲಿರುವ ದಂತ ಶಸ್ತ್ರಚಿಕಿತ್ಸಕರು. 26 ಸೆಕೆಂಡುಗಳ ಈ ಕ್ಲಿಪ್​ನಲ್ಲಿ ಇಲ್ಲಿರುವ ಜನ ಗಂಭೀರವಾದ ಚರ್ಚೆಯಲ್ಲಿ ತೊಡಗಿದ್ದಾರೆ. ಆದರೆ ಮೂಷಿಕರಾಯರು ಮಾತ್ರ ಕೇಕ್​ನಲ್ಲಿ ಮುಳುಗಿದ್ದಾರೆ. 50,000 ಕ್ಕೂ ಹೆಚ್ಚು ಜನ ಈ ವಿಡಿಯೋ ನೋಡಿದ್ಧಾರೆ.

ಇಲಿಯನ್ನು ತಿನ್ನಲು ಆಹ್ವಾನಿಸಿದ್ದಾರೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಬಹುಶಃ ಇದು ಪಾಕಿಸ್ತಾನದಿಂದ ಬಂದ ಇಲಿ ಆಗಿರಬೇಕು ಎಂದಿದ್ದಾರೆ ಒಬ್ಬರು. ಇಲಿಯೂ ಸಮಾನವಾಗಿ ಈ ಮೀಟಿಂಗ್​​ನಲ್ಲಿ ಭಾಗಿಯಾಗಿದೆ ಎಂದಿದ್ದಾರೆ ಮತ್ತೊಬ್ಬರು. ಅಂತೂ ಮೀಟಿಂಗ್​ಗೆ ಬಂದ ಇಲಿ ಈಟಿಂಗೂ ಮಾಡಿದೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Follow Us
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ