AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಮೀಟಿಂಗ್ ನಾನು ಈಟಿಂಗ್; ಇಲಿಯೊಂದು ಕೇಕ್​ ತಿನ್ನುತ್ತಿರುವ ವಿಡಿಯೋ ವೈರಲ್

Rat Eating Cake : ಇಲ್ಲಿರುವ ಮಹಾಶಯರೆಲ್ಲ ಘನಗಂಭೀರವಾಗಿ ಮೀಟಿಂಗ್ ಮಾಡುತ್ತಿದ್ಧಾರೆ. ಆದರೆ, ಇದ್ಯಾವ ಪರಿವೆಯೂ ಇಲ್ಲದೆ ಈಟಿಂಗ್​ನಲ್ಲಿ ತೊಡಗಿಕೊಂಡಿದ್ದಾರೆ ಈ ಮೂಷಿಕ ಮಹಾರಾಯರು. ನೋಡಿ ವಿಡಿಯೋ.

ನೀವು ಮೀಟಿಂಗ್ ನಾನು ಈಟಿಂಗ್; ಇಲಿಯೊಂದು ಕೇಕ್​ ತಿನ್ನುತ್ತಿರುವ ವಿಡಿಯೋ ವೈರಲ್
ಮೀಟಿಂಗ್ ಮಾಡುತ್ತಿರುವಾಗ ಇಲಿ ಕೇಕ್ ತಿನ್ನುತ್ತಿರುವುದು
TV9 Web
| Updated By: ಶ್ರೀದೇವಿ ಕಳಸದ|

Updated on: Dec 07, 2022 | 10:38 AM

Share

Viral Video : ಮೀಟಿಂಗ್​ ಎಂದಮೇಲೆ ಇಂತಿಂಥವರು ಮಾತ್ರ ಹಾಜರಿರಬೇಕು ಎಂಬ ನಿಯಮವಿರುತ್ತದೆ. ಆದರೆ ಇಲ್ಲೊಬ್ಬರು ಆಹ್ವಾನವಿಲ್ಲದಿದ್ದರೂ ಮೀಟಿಂಗ್​ ಹಾಲ್​ನಲ್ಲಿ ಬಂದು ಕುಳಿತಿದ್ದಾರೆ. ಅದು ಮೀಟಿಂಗ್​ನಲ್ಲಿ ಮುಳುಗಿದವರಿಗೆ ಅರಿವಿಲ್ಲ. ಆದರೆ ಆಹ್ವಾನವಿಲ್ಲದೇ ಇಲ್ಲಿಗೆ ಬಂದವರು ಮಾತ್ರ ನಿರಾತಂಕವಾಗಿ ಪ್ಲೇನ್ ಕೇಕ್​ ಮೆಲ್ಲುತ್ತ ಕುಳಿತಿದ್ದಾರೆ. ಇದು ಕ್ಯಾಮೆರಾ ಕಣ್ಣಿಗೆ ಬಿದ್ದು ಸಾಮಾಜಿಕ ಜಾಲತಾಣಕ್ಕೆ ವಿಡಿಯೋ ಅಪ್​ಲೋಡ್ ಆಗುತ್ತಿದ್ದಂತೆ  ವೈರಲ್ ಆಗಿದೆ.

ಡಾ. ಆರಿಫ್ ಖ್ವಾಜಾ ಎಂಬ ಟ್ವಿಟರ್ ಖಾತೆದಾರರು ಈ ವಿಡಿಯೋ ಹಂಚಿಕೊಂಡಿದ್ದಾರೆ. ಇವರ ಬಯೋ ಹೇಳುವಂತೆ ಆರೀಫ್​ ಖ್ವಾಜಾ ಜಮ್ಮು-ಕಾಶ್ಮೀರದಲ್ಲಿರುವ ದಂತ ಶಸ್ತ್ರಚಿಕಿತ್ಸಕರು. 26 ಸೆಕೆಂಡುಗಳ ಈ ಕ್ಲಿಪ್​ನಲ್ಲಿ ಇಲ್ಲಿರುವ ಜನ ಗಂಭೀರವಾದ ಚರ್ಚೆಯಲ್ಲಿ ತೊಡಗಿದ್ದಾರೆ. ಆದರೆ ಮೂಷಿಕರಾಯರು ಮಾತ್ರ ಕೇಕ್​ನಲ್ಲಿ ಮುಳುಗಿದ್ದಾರೆ. 50,000 ಕ್ಕೂ ಹೆಚ್ಚು ಜನ ಈ ವಿಡಿಯೋ ನೋಡಿದ್ಧಾರೆ.

ಇಲಿಯನ್ನು ತಿನ್ನಲು ಆಹ್ವಾನಿಸಿದ್ದಾರೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಬಹುಶಃ ಇದು ಪಾಕಿಸ್ತಾನದಿಂದ ಬಂದ ಇಲಿ ಆಗಿರಬೇಕು ಎಂದಿದ್ದಾರೆ ಒಬ್ಬರು. ಇಲಿಯೂ ಸಮಾನವಾಗಿ ಈ ಮೀಟಿಂಗ್​​ನಲ್ಲಿ ಭಾಗಿಯಾಗಿದೆ ಎಂದಿದ್ದಾರೆ ಮತ್ತೊಬ್ಬರು. ಅಂತೂ ಮೀಟಿಂಗ್​ಗೆ ಬಂದ ಇಲಿ ಈಟಿಂಗೂ ಮಾಡಿದೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್