AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಕಲ್​ ಟ್ರೇನ್​ನ ಮಹಿಳಾ ಕೂಲಿ ಕಾರ್ಮಿಕರಿಗೆ ಸಲಾಂ ಎನ್ನುತ್ತಿರುವ ನೆಟ್ಟಿಗರು

Local Train : ಯಾರೂ ಇಷ್ಟೊಂದು ಅಪಾಯವನ್ನು ಇಷ್ಟಪಟ್ಟು ತಂದುಕೊಳ್ಳಲಾರರು. ಇದು ಸ್ತ್ರೀಶಕ್ತಿಗಷ್ಟೇ ಸಂಬಂಧಿಸಿದ್ದಲ್ಲ. ಹೊಟ್ಟೆಪಾಡಿನ ಅನಿವಾರ್ಯತೆ ಇದು ಎನ್ನುತ್ತಿದ್ದಾರೆ ಒಬ್ಬರು. ರಕ್ಷಣೆಯ ಹೊಣೆ ಯಾರದು ಎಂದು ಕೇಳುತ್ತಿದ್ದಾರೆ ಮತ್ತೊಬ್ಬರು.

ಲೋಕಲ್​ ಟ್ರೇನ್​ನ ಮಹಿಳಾ ಕೂಲಿ ಕಾರ್ಮಿಕರಿಗೆ ಸಲಾಂ ಎನ್ನುತ್ತಿರುವ ನೆಟ್ಟಿಗರು
ಲೋಕಲ್ ಟ್ರೇನ್​ನಲ್ಲಿ ಸರಕು ಸಾಗಣೆ ಮಾಡುತ್ತಿರುವ ಮಹಿಳಾ ಕಾರ್ಮಿಕರು
TV9 Web
| Edited By: |

Updated on:Dec 09, 2022 | 10:10 AM

Share

Viral Video : ಲೋಕಲ್ ಟ್ರೇನ್​ನ ದೃಶ್ಯ ಇದು. ರೈಲು ಬರುವುದನ್ನೇ ಕಾಯುತ್ತ ನಿಂತಿದ್ದ ಮಹಿಳಾ ಕೂಲಿ ಕಾರ್ಮಿಕರು ರೈಲು ಬಂದೊಡನೆ ಸರಕುಗಳನ್ನು ಸಾಗಿಸುವಲ್ಲಿ ಹೇಗೆ ತೊಡಗಿಕೊಳ್ಳುತ್ತಾರೆ ನೋಡಿ. ಡಿ.ಕೆ. ಹರಿ ಮತ್ತು ಹೇಮಾ ಎನ್ನುವವರು ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. ಈ ಕೂಲಿ ಕಾರ್ಮಿಕರ ಚಾಕಚಕ್ಯತೆ, ಅನಿವಾರ್ಯತೆ ಎಲ್ಲವನ್ನೂ ಗಮನಿಸಿದ ನೆಟ್ಟಿಗರು ಇವರಿಗೆ ಯಾವ ರೀತಿಯ ಸುರಕ್ಷತೆ ಇದೆ, ಅದನ್ನು ಯಾರು ಒದಗಿಸುತ್ತಾರೆ ಎಂದು ಸಮಯೋಚಿತವಾಗಿ ಪ್ರಶ್ನಿಸಿದ್ಧಾರೆ.

ಎಂಥದೋ ಎಲೆಯ ಕಟ್ಟುಗಳನ್ನು ಇವರು ಸಾಗಿಸುತ್ತಿದ್ದಾರೆ. ಇವರ ಈ  ನಡೆಯನ್ನು ನೋಡಿದರೆ, ಅನೇಕ ವರ್ಷಗಳಿಂದ ಇವರು ಈ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ ಎನ್ನುವುದು ಭಾಸವಾಗುತ್ತದೆ. ಏಕೆಂದರೆ ಕೆಲವೇ ಕೆಲ ಸೆಕೆಂಡುಗಳ ಕಾಲ ನಿಲ್ಲುವ ರೈಲಿನೊಳಗೆ ಇಷ್ಟೊಂದು ಸರಕುಗಳನ್ನು ಸಾಗಿಸುವುದೆಂದರೆ ಅದೆಷ್ಟು ಮೈಯೆಲ್ಲ ಕಣ್ಣಾಗಿ ಎಚ್ಚರವಿರಬೇಕು.

ಅನೇಕ ನೆಟ್ಟಿಗರು ರೀಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ. ಅದ್ಭುತ! ಬುದ್ಧಿವಂತಿಕೆಗೆ ಅನುಭವವು ಮಾರ್ಗದರ್ಶನ ಮಾಡಿದೆ ಎಂದಿದ್ದಾರೆ ಒಬ್ಬರು. ಮುಂಬೈನ ಡಬ್ಬಾವಾಲಾ ಚಿತ್ರಣವನ್ನು ನೆನಪಿಸಿಕೊಂಡಿದ್ದಾರೆ ಕೆಲವರು. ಮುಂಬೈವಾಸಿಗಳ ಶ್ರಮ ಮತ್ತು ಸರ್ಕಾರದ ನಿರ್ಲಕ್ಷ್ಯವನ್ನು ಹೀಗೆ ರೊಮ್ಯಾಂಟಿಸೈಸ್ ಮಾಡುವ ಅನಿವಾರ್ಯತೆ ಉಂಟಾಗುತ್ತದೆ, ನಾನೂ ಇದಕ್ಕೆ ಹೊರತಾಗಿಲ್ಲ ಎಂದಿದ್ಧಾರೆ ಇನ್ನೊಬ್ಬರು. ಬದುಕು ಸುಲಭ ಅಲ್ಲ, ಯಾರೂ ಇಷ್ಟೊಂದು ಅಪಾಯವನ್ನು ಇಷ್ಟಪಟ್ಟು ತಂದುಕೊಳ್ಳಲಾರರು. ಇದು ಸ್ತ್ರೀಶಕ್ತಿಗಷ್ಟೇ ಸಂಬಂಧಿಸಿದ್ದಲ್ಲ. ಒಟ್ಟಾರೆ ಹೊಟ್ಟೆಪಾಡಿನ ಚಿಂತೆಯಿದು ಎಂದಿದ್ದಾರೆ ಮಗದೊಬ್ಬರು.

ಈಗಾಗಲೇ ಈ ವಿಡಿಯೋ ಅನ್ನು ಸುಮಾರು 2,40,000 ಕ್ಕೂ ಹೆಚ್ಚು ಜನ ನೋಡಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:09 am, Fri, 9 December 22

Follow Us
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು