AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಹಲ್ಲಿಕುತ್ತಿಗೆ; ಸೌಂದರ್ಯ ಚಿಕಿತ್ಸೆಯೊಂದರ ವಿಫಲಕಥೆ

Facebook : ಫೇಸ್​ಬುಕ್​ನಲ್ಲಿರುವ ಬ್ಯೂಟಿಷಿಯನ್​ ಸಲಹೆ ಮೇರೆಗೆ ಈಕೆ ಜೋತುಬಿದ್ದ ತನ್ನ ಗದ್ದವನ್ನು ಸರಿಪಡಿಸಿಕೊಳ್ಳಲು ಸೌಂದರ್ಯ ಚಿಕಿತ್ಸೆಗೆ ಮೊರೆಹೋದರು. ನಂತರ...

Viral: ಹಲ್ಲಿಕುತ್ತಿಗೆ; ಸೌಂದರ್ಯ ಚಿಕಿತ್ಸೆಯೊಂದರ ವಿಫಲಕಥೆ
TV9 Web
| Edited By: |

Updated on:Aug 11, 2022 | 3:47 PM

Share

Viral: ಎಷ್ಟೇ ವಯಸ್ಸಾಗಿದ್ದರೂ ಯಾವ ಕಾಲಕ್ಕೂ ಫಿಟ್ ಅಂಡ್ ಫೈನ್ ಆಗಿಯೇ ಕಾಣಿಸಿಕೊಳ್ಳಬೇಕೆಂಬ ಉಳ್ಳವರ ಈ ಖಯಾಲಿಗೆ ತಕ್ಕಂತೆ  ಕಾಸ್ಮೆಟಿಕ್ ಪ್ರಪಂಚದಲ್ಲಿ ಅನೇಕ ರೀತಿಯ ಸೌಂದರ್ಯ ಚಿಕಿತ್ಸೆಗಳು ಪ್ರಚಲಿತದಲ್ಲಿವೆ. ಅಮೆರಿಕದ 59 ವರ್ಷದ ಜೇನ್​ ಬೌಮನ್​ ಎಂಬ ಮಹಿಳೆ ತನ್ನ ಗದ್ದದ ಕೆಳಗಿನ ಚರ್ಮವನ್ನು ಬಿಗಿಗೊಳಿಸಿಕೊಳ್ಳಲು ರೂ. 40, 591 ಸುರಿದು ಚಿಕಿತ್ಸೆಯೇನೋ ಮಾಡಿಸಿಕೊಂಡರು. ಆದರೆ ಅವರ ಕತ್ತು ಈಗ ಹಲ್ಲಿಯ ಚರ್ಮದಂತೆ ಕಾಣತೊಡಗಿದೆ. ತೂಕವನ್ನು ಇಳಿಸಿಕೊಂಡ ನಂತರ ಜೋತುಬಿದ್ದ ಕೆಳಗದ್ದವನ್ನು ಸರಿಮಾಡಿಕೊಳ್ಳುವ ಇರಾದೆಯಿಂದ ಈಕೆ ಚಿಕಿತ್ಸೆಯ ಮೊರೆ ಹೋಗಿದ್ದರು.

ಚಿಕಿತ್ಸೆಯ ನಂತರ ಗದ್ದದಿಂದ ಹಿಡಿದು ಕತ್ತಿನವರೆಗೂ ಮೂಡಿದ ಕೆಂಪು ಚುಕ್ಕೆಗಳನ್ನು ಕನ್ನಡಿಯಲ್ಲಿ ನೋಡಿಕೊಂಡ ಜೇಮ್​ ಬೌಮನ್ ಭಯದಿಂದ ಹೌಹಾರಿದ್ದಲ್ಲದೆ ಚಿಂತಾಕ್ರಾಂತರೂ ಆಗಿದ್ದಾರೆ. ಫೈಬ್ರೊಪ್ಲಾಸ್ಟ್ ಪ್ಲಾಸ್ಮಾ ಎಂಬ ಶಸ್ತ್ರಚಿಕಿತ್ಸೆಯ ಮೂಲಕ ಚರ್ಮ ಬಿಗಿಗೊಳಿಸಿಕೊಳ್ಳುವ ಈ ಚಿಕಿತ್ಸೆಗೆ ಇವರು ಒಳಪಡುವ ಮೊದಲು ಫೇಸ್​ಬುಕ್​ನಲ್ಲಿರುವ ಬ್ಯೂಟಿಷಿಯನ್​ ಮೂಲಕ ಈ ಕುರಿತು ಸಲಹೆ ಪಡೆದಿದ್ದೇ ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಗಿದೆ.

‘​ಆ ದಿನ ಚಿಕಿತ್ಸೆ ನಂತರ ಚರ್ಮವು ಸುಟ್ಟುಹೋಗುತ್ತಿದೆಯೇನೋ ಎಂಬಂತೆ ಉರಿಯಲಾರಂಭಿಸಿತು. ಚಿಕಿತ್ಸಕರಿಗೆ ಈ ಬಗ್ಗೆ ಕೇಳಿಕೊಂಡರೂ ಪ್ರಯೋಜನವಾಗಲಿಲ್ಲ. ನಂತರ ಉರಿಯನ್ನು ಶಮನಗೊಳಿಸಿಕೊಳ್ಳಲು ಕ್ರೀಮ್ ಹಚ್ಚಿಕೊಂಡೆ. ಕುತ್ತಿಗೆಯ ಉದ್ದಕ್ಕೂ ಕೆಂಪುಕಲೆಗಳು ಮೂಡಿದವು. ಬಹಳ ಬೇಸರದಲ್ಲಿ ಈ ಚಿಕಿತ್ಸೆಯ ಕುರಿತು ನನ್ನ ಕೆಟ್ಟ ಅನುಭವವನ್ನು ಬರೆದು ದಾಖಲಿಸಿದೆ, ಈ ಬಗ್ಗೆ ವಕೀಲರಿಗೂ ತಿಳಿಸಿದೆ. ಆದರೆ ನನ್ನ ವಿರುದ್ಧವೇ ಚಿಕಿತ್ಸಕರು ವಕೀಲರ ಬಳಿ ಕೇಸ್​ ಫೈಲ್ ಮಾಡಿದ್ದಾರೆ. ಚಿಕಿತ್ಸೆ ಪಡೆದು ವಾರಗಳಾದರೂ ಈ ಭಯಾನಕ ಚುಕ್ಕೆಗಳ ಹೊರತಾಗಿ ಯಾವುದೇ ಬದಲಾವಣೆ ಆಗಿಲ್ಲವೆನ್ನುವುದು ಒಂದೆಡೆಯಾದರೆ, ನನ್ನ ಕುತ್ತಿಗೆಯ ಮೇಲಿರುವ ನೂರಾರು ಚುಕ್ಕೆಗಳಿಂದ ನಾನು ಹಲ್ಲಿಯಂತೆ ಕಾಣುತ್ತಿದ್ದೇನೆ. ’ ಎಂದು ಡೈಲಿ ಮೇಲ್​​ಗೆ ಜೇಮ್ ತಿಳಿಸಿದ್ದಾರೆ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಈ ಅಚಾತುರ್ಯಕ್ಕೆ ಒಳಗಾದ ನಂತರ ಮನೆಯಿಂದ ಹೊರಬರಲು ಅವರಿಗೆ ಸಂಕೋಚವೆನ್ನಿಸುತ್ತಿದೆ, ಬಂದರೂ ಸ್ಕಾರ್ಫ್ ಧರಿಸುತ್ತಿದ್ದಾರೆ. ಈ ಸೌಂದರ್ಯ ಚಿಕಿತ್ಸೆ ಒಟ್ಟಾರೆಯಾಗಿ ನನಗೆ ಸಂಕಟಕ್ಕೀಡು ಮಾಡಿದೆ ಎಂದು ಹೇಳಿಕೊಂಡಿದ್ಧಾರೆ.

ಇನ್ನಷ್ಟು ಟ್ರೆಂಡಿಂಗ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:41 pm, Thu, 11 August 22

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?