AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ನನ್ನತ್ರ ಬರ್ಬೇಡ ಅಂದ್ರೂ ಮತ್ಯಾಕ್ ಬಂದೆ; ಕೋಪದಿಂದ ಯುವತಿಯನ್ನು ಒದ್ದೋಡಿಸಿದ ಗಜರಾಜ

ಆನೆಗಳು ತುಂಬಾನೇ ಮುದ್ದಾದ ಹಾಗೂ ಸಾದು ಪ್ರಾಣಿಗಳು. ಇಂತಹ ಆನೆಗಳನ್ನು ನೋಡಿದಾಗ ಎಂತಹವರಿಗೂ ಮುದ್ದಾಡಬೇಕು ಅಂತ ಅನ್ನಿಸುತ್ತದೆ. ಅದೇ ರೀತಿ ಇಲ್ಲೊಂದು ಯುವತಿ ಗಜರಾಜನ್ನು ಮುದ್ದಾಡಲು ಹೋಗಿ ಪಜೀತಿಗೆ ಸಿಳುಕಿದ್ದಾಳೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಮುದ್ದಾದ ಆನೆಯೊಂದು ಊಟ ಮಾಡುವಾಗ ನನ್ನತ್ರ ಬರ್ಬೇಡ ಅಂದ್ರೂ ಮತ್ಯಾಕ್ ಬಂದೆ ಎಂದು ಕೋಪದಿಂದ ಯುವತಿಯನ್ನು ಒದ್ದೋಡಿಸುವ ದೃಶ್ಯವನ್ನು ಕಂಡು ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

Viral Video: ನನ್ನತ್ರ ಬರ್ಬೇಡ ಅಂದ್ರೂ ಮತ್ಯಾಕ್ ಬಂದೆ; ಕೋಪದಿಂದ ಯುವತಿಯನ್ನು  ಒದ್ದೋಡಿಸಿದ ಗಜರಾಜ
ಕೋಪದಿಂದ ಯುವತಿಯನ್ನು ಒದ್ದೋಡಿಸಿದ ಗಜರಾಜ
ಮಾಲಾಶ್ರೀ ಅಂಚನ್​
| Edited By: |

Updated on: Feb 23, 2024 | 6:54 PM

Share

ಆನೆಗಳು ತುಂಬಾನೇ ಬುದ್ಧಿವಂತ ಪ್ರಾಣಿಗಳು. ಮನುಷ್ಯರಂತೆಯೇ ಆಲೋಚಿಸುವ ಹಾಗೂ ಇತರರ ಭಾವನೆಗಳನ್ನು ಅರ್ಥೈಸಿಕೊಳ್ಳುವ ಸಾಮಾರ್ಥ್ಯವವನ್ನು ಹೊಂದಿರುವ ಇವುಗಳು ತುಂಟಾಟವಾಡುವುದರಲ್ಲಿಯೂ ಎತ್ತಿದ ಕೈ. ಅಲ್ಲದೆ ಶಾಂತ ಸ್ವಾಭಾವದ ಈ ಪ್ರಾಣಿಗಳು ಅಷ್ಟಾಗಿ ಯಾರೊಬ್ಬರಿಗೂ ತೊಂದರೆ ಕೊಡಲು ಹೋಗುವುದಿಲ್ಲ. ಆದರೆ ಕೆಲವೊಮ್ಮೆ ಅವುಗಳಿಗೆ ಮದವೇರಿದರೆ ಅಥವಾ ಕೋಪ ಬಂದರೆ ರಂಪ ರಾಮಾಯಣ ಮಾಡುತ್ತವೆ. ಹೀಗೆ ಆನೆಗಳಿಗೆ ಮದವೇರಿದರೆ ಅವುಗಳು ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸುತ್ತವೆ. ಇದೇ ರೀತಿ ಇಲ್ಲೊಂದು ಘಟನೆ ನಡೆದಿದ್ದು, ತನ್ನ ಪಾಡಿಗೆ ಆಹಾರ ತಿನ್ನುತ್ತಿದ್ದ ಆನೆಯೊಂದು ಅದರ ಬಳಿ ಬಂದಂತಹ ಯುವತಿಯನ್ನು ಕೋಪದಿಂದ ಒದ್ದೋಡಿಸಿದೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಸಾಮಾಜಿಕ ಜಾಲತಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಆನೆಯೊಂದು ತನ್ನ ಬಳಿ ಬಂದ ಯುವತಿಯನ್ನು ಒದ್ದೋಡಿಸುವಂತಹ ದೃಶ್ಯವನ್ನು ಕಾಣಬಹುದು. ಈ ವಿಡಿಯೋವನ್ನು @PictureFolder ಎಂಬ ಹೆಸರಿನ X ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ವೈರಲ್ ವಿಡಿಯೋದಲ್ಲಿ ಯಾವುದೋ ಒಂದು ಆನೆ ಶಿಬಿರಕ್ಕೆ ಭೇಟಿ ಕೊಟ್ಟ ಯುವತಿ ಮುದ್ದಾದ ಆನೆಯೊಂದನ್ನು ಕಂಡು, ಈ ಆನೆಯನ್ನು ಮುದ್ದಾಡಬೇಕೆಂದು ಅದರ ಬಳಿ ಹೋಗ್ತಾಳೆ. ತನ್ನ ಪಾಡಿಗೆ ಶಾಂತ ರೀತಿಯಿಂದ ಆಹಾರ ತಿನ್ನುತ್ತಿದ್ದ ಆನೆ, ಈ ಯುವತಿ ಹತ್ತಿರ ಬರುತ್ತಿದ್ದಂತೆ, ತಲೆ ಅಲ್ಲಾಡಿಸುತ್ತಾ ನನ್ನ ಬಳಿ ಬರ್ಬೇಡ ನಾನು ಈಗ ಊಟ ಮಾಡ್ತಿದ್ದೇನೆ ಅಂತ ಸೂಚನೆ ಕೊಡುತ್ತೆ. ಆದ್ರೂ ಕೂಡಾ ಈ ಯುವತಿ ಆನೆಯ ಬಳಿ ಹೋಗೇ ಬಿಡ್ತಾಳೆ. ಇದ್ರಿಂದ ಕೋಪಗೊಂಡಂತಹ ಗಜರಾಜ, ನಾನು ಊಟ ಮಾಡುವಾಗ ನನ್ ಹತ್ರ ಬರ್ಬೇಡ ಅಂದ್ರೂ ಯಾಕ್ ಬರ್ತೀಯಾ ಅಂತ ಹೇಳುತ್ತಾ, ಯುವತಿಗೆ ಸೊಂಡಿಲಿನಿಂದ ಒದ್ದು ಆಕೆಯನ್ನು ಕೆಳಗೆ ದೂಡಿ ಹಾಕುತ್ತದೆ. ಆನೆ ಒದ್ದ ಒಂದೇ ಏಟಿಗೆ ಕೆಳಗೆ ಬಿದ್ದಂತಹ ಆ ಯುವತಿ, ಈ ಆನೆಯ ಕೋಪಕ್ಕೆ ಸಿಲುಕುವ ಮುನ್ನ ಇಲ್ಲಿಂದ ಎಸ್ಕೇಪ್ ಆದ್ರೆ ಸಾಕಪ್ಪಾ ಎನ್ನುತ್ತಾ, ಆ ತಕ್ಷಣವೇ ಅಲ್ಲಿಂದ ಆಕೆ ಕಾಲ್ಕಿತ್ತು ಓಡಿ ಹೋಗುವಂತಹ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ:  ಹಲ್ಲಿನ ಚಂದ ಹೆಚ್ಚಿಸಲು ಹೋಗಿ ಸಾವನ್ನಪ್ಪಿದ ಮದುಮಗ

ಫೆಬ್ರವರಿ 22 ರಂದು ಹಂಚಿಕೊಳ್ಳಲಾದ ಈ ವಿಡಿಯೋ 23.3 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 84 ಸಾವಿರ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಾಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಓ ದೇವ್ರೇ ಈ ದೃಶ್ಯವನ್ನು ಕಂಡು ನಗು ಬಂತುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಬಹುಶಃ ಆನೆಯು ಆಕೆ ತನ್ನ ಊಟವನ್ನು ಕಿತ್ತುಕೊಳ್ಳಲು ಬಂದಳೆಂದು, ಆಕೆಯ ಮೇಲೆ ಕೋಪಗೊಂಡಿರಬೇಕುʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಆಕೆಯ ಧೈರ್ಯಕ್ಕೆ ಮೆಚ್ಚಲೇಬೇಕುʼ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್