AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಚಿವ ಡಿ ಸುಧಾಕರ್ ಆಪ್ತನಿಂದ ಪೊಲೀಸರಿಗೆ ಆವಾಜ್, ಸಚಿವನಿಂದ ಗೂಂಡಾಪಡೆ ಪೋಷಣೆ?

ಸಚಿವ ಡಿ ಸುಧಾಕರ್ ಆಪ್ತನಿಂದ ಪೊಲೀಸರಿಗೆ ಆವಾಜ್, ಸಚಿವನಿಂದ ಗೂಂಡಾಪಡೆ ಪೋಷಣೆ?

ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Mar 04, 2025 | 10:52 AM

Share

ಅಸಲಿಗೆ ಸರ್ಕಾರ ಇಂಥ ಗೂಂಡಾಗಳ ನಟ್ಟು ಬೋಲ್ಟುಗಳನ್ನು ಸರ್ಕಾರ ಟೈಟ್ ಮಾಡಬೇಕಿದೆ. ಭರತ್ ರೆಡ್ಡಿ ಸಚಿವ ಡಿ ಸುಧಾಕರ್ ಆಪ್ತನಾಗಿರುವ ಕಾರಣಕ್ಕೆ ಅವನ ವಿರುದ್ಧ ದೂರು ಕೂಡ ದಾಖಲಾಗಲ್ಲ. ಏನ್ಸಾರ್ ಹೀಗೆ ಅಂತ ಗೃಹ ಸಚಿವನನ್ನು ಕೇಳಿದರೆ, ನನ್ನ ಗಮನಕ್ಕೆ ಬಂದಿಲ್ಲ, ಅಂಥದೇನಾದರೂ ಇದ್ದರೆ ಚಿತ್ರದುರ್ಗ ಪೊಲೀಸ್ ವರಿಷ್ಠಾಧಿಕಾರಿ ನೋಡಿಕೊಳ್ಳುತ್ತಾರೆ ಎಂಬ ಉತ್ತರ ಮಾಧ್ಯಮದವರಿಗೆ ಸಿಗುತ್ತದೆ.

ಚಿತ್ರದುರ್ಗ, ಮಾರ್ಚ್ 4: ಇವನ್ಯಾವನೋ ಭರತ್ ರೆಡ್ಡಿ ಅಂತೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ (D Sudhakar) ಆಪ್ತನಂತೆ. ಸಚಿವ ತಮ್ಮ ಕ್ಷೇತ್ರದಲ್ಲಿ ಗೂಂಡಾಪಡೆಯನ್ನು ಪೋಷಿಸುತ್ತಿದ್ದಾರೆಯೇ ಅಂತ ಇವನನ್ನು ನೋಡಿದರೆ ಅನುಮಾನ ಹುಟ್ಟುತ್ತೆ. ಮಾರ್ಚ್ 2 ರಂದು ದುರ್ಗದ ಜಯದೇವ ಕ್ರೀಡಾಂಗಣ ಬಳಿ ನಡೆದಿರುವ ಘಟನೆ ಇದು. ರಾತ್ರಿ ಸಮಯದಲ್ಲಿ ಗುಂಪಾಗಿ ನಿಂತಿದ್ದೇಕೆ ಎಂದು ಕರ್ತವ್ಯನಿರತ ಪೊಲೀಸರು ಕೇಳಿದ್ದಕ್ಕೆ ಭರತ್ ರೆಡ್ಡಿ ಎನ್ನುವವನು ಹೊಯ್ಸಳ ವಾಹನದ ಕಸಿದು ರೋಪ್ ಹಾಕುತ್ತಿದ್ದಾನೆ. ಪೊಲೀಸರು ಸಭ್ಯವಾಗಿ ಕೀ ಕೊಡಿ ಅಂತ ಕೇಳಿದರೆ ಕೊಡಲ್ಲ ಏನ್ ಮಾಡ್ತೀಯಾ ಮಾಡ್ಕೋ ಯಾರಿಗೆ ಬೇಕಾದರೂ ಫೋನ್ ಮಾಡು ಅಂತಾನೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಚಿತ್ರದುರ್ಗ ಮುರುಘಾ ಮಠದ ಮುರುಘಾಶ್ರೀಗೆ ಮತ್ತೊಂದು ಹೊಸ ಸಂಕಷ್ಟ, ಏನದು? 

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.