AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತನ್ನ ಪ್ರೀತಿಯನ್ನು ವಿಧವೆ ನಿರಾಕರಿಸಿದಾಗ ರೊಚ್ಚಿಗೆದ್ದವನು ನಡೆರಸ್ತೆಯಲ್ಲೇ ಅಕೆಯನ್ನು ಇರಿದು ಕೊಂದ

ತನ್ನ ಪ್ರೀತಿಯನ್ನು ವಿಧವೆ ನಿರಾಕರಿಸಿದಾಗ ರೊಚ್ಚಿಗೆದ್ದವನು ನಡೆರಸ್ತೆಯಲ್ಲೇ ಅಕೆಯನ್ನು ಇರಿದು ಕೊಂದ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 17, 2025 | 6:39 PM

Share

ಸಂಜು ಬನ್ಸೋಡೆ, ರೇಣುಕಾ ಹಿಂದೆ ಬಿದ್ದಿದ್ದ ಮತ್ತು ತನ್ನನ್ನು ಪ್ರೀತಿಸುವಂತೆ ಗೋಗರೆಯುತ್ತಿದ್ದ. ಆದರೆ ಅವನ ಇಂಗಿತವನ್ನು ರೇಣುಕಾ ಅಸಡ್ಡೆ ಮಾಡುತ್ತಿದ್ದರು. ರೇಣುಕಾ ಸಹೋದರ ಪೊಲೀಸರಿಗೆ ಹೇಳಿ ಸಂಜುಗೆ ಎಚ್ಚರಿಸಿದ್ದರಂತೆ. ಆದರೆ ನಾಯಿಬಾಲದಂತಿದ್ದ ಅವನು ಪುನಃ ರೇಣುಕಾರನ್ನು ಅಡ್ಡಗಟ್ಟಿ ಪೀಡಿಸುತ್ತಿದ್ದ. ಅವರು ತನ್ನ ಕೈಗೆ ಸಿಗಲಾರರು ಅಂತ ಖಚಿತವಾದಾಗ ಕಳೆದ ಬುಧವಾರ ಇರಿದು ಕೊಂದುಬಿಟ್ಟಿದ್ದಾನೆ. ಪೊಲೀಸರು ಸಂಜುನನ್ನು ವಶಕ್ಕೆ ಪಡೆದಿದ್ದಾರೆ.

ವಿಜಯಪುರ, ಜೂನ್ 17: ರಾಜ್ಯದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ ಮತ್ತು ಹಂತಕರು ಹಾಡು ಹಗಲು ನಡುರಸ್ತೆಯಲ್ಲಿ ಎಲ್ಲರ ಕಣ್ಣೆದುರೇ ಕೊಲೆಗಳನ್ನು ಮಾಡುತ್ತಿದ್ದಾರೆ. ಪೊಲೀಸರ ಭಯ ಇವರಿಗೆ ಕಿಂಚಿತ್ತೂ ಇದ್ದಂತಿಲ್ಲ. ಕಳೆದ ಬುಧವಾರ ಸಂಜು ಬನ್ಸೋಡೆ ಹೆಸರಿನ ವ್ಯಕ್ತಿಯೊಬ್ಬ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ರೇಣುಕಾ ಸಾಯಿಬಣ್ಣ ಕನ್ನೊಳ್ಳಿ (Renuka Saibanna Kannolli) ಹೆಸರಿನ ಮೂರು ಮಕ್ಕಳ ವಿಧವೆಯನ್ನು ಆಕೆ ತನ್ನ ಆಫೀಸಿಗೆ ಹೋಗುವಾಗ ಚಾಕುವಿನಿಂದ ಮನಬಂದಂತೆ ಇರಿದು ಕೊಂದಿದ್ದಾನೆ. ರೇಣುಕಾ ಸಹೋದರ ಹೇಳುವಂತೆ ಅಕೆ ಇಂಡಿ ಪಟ್ಟಣದ ಸಮಾಜ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು. ಪತಿ ತೀರಿಕೊಂಡ ನಂತರ ರೇಣುಕಾಗೆ ಅನುಕಂಪ ಆಧಾರದಲ್ಲಿ ನೌಕರಿ ಸಿಕ್ಕಿತ್ತಂತೆ.

ಇದನ್ನೂ ಓದಿ:  ಮೇಘಾಲಯದಲ್ಲಿ ಕೊಲೆಗೂ ಮೊದಲಿನ ರಾಜ ರಘುವಂಶಿಯ ಕೊನೆಯ ವಿಡಿಯೋ ಬಯಲು

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More