AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೊಂದು ವರದಕ್ಷಿಣೆ ಕಿರುಕುಳ ಪ್ರಕರಣ, ಮದುವೆಯಾದ ನಾಲ್ಕನೇ ದಿನದಿಂದಲೇ ಹಿಂಸೆ ಶುರು ಎನ್ನುವ ಯುವತಿ

ಮತ್ತೊಂದು ವರದಕ್ಷಿಣೆ ಕಿರುಕುಳ ಪ್ರಕರಣ, ಮದುವೆಯಾದ ನಾಲ್ಕನೇ ದಿನದಿಂದಲೇ ಹಿಂಸೆ ಶುರು ಎನ್ನುವ ಯುವತಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 30, 2025 | 2:02 PM

Share

ಪ್ರಜ್ವಲ್ ಶಂಕರ್​ನ ತಂದೆ ತಾಯಿ ಇಬ್ಬರೂ ಸರ್ಕಾರೀ ಶಾಲಾ ಶಿಕ್ಷಕರಂತೆ ಮತ್ತು ತನ್ನ ಗಂಡ ಕೆಪಿಎಸ್​ಸಿ ಪರೀಕ್ಷೆ ಬರೆದಿದ್ದಾರೆ ಅಂತ ಸೌಮ್ಯ ಹೇಳುತ್ತಾರೆ. ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ, ಅತ್ತೆ-ಮಾವ ಮತ್ತು ಗಂಡ ತಮ್ಮ ಪ್ರಭಾವ ಬಳಸಿ ಪೊಲೀಸರು ಕ್ರಮ ತೆಗೆದುಕೊಳ್ಳದಂತೆ ಮಾಡಿದ್ದಾರೆ, ಗಂಡನಿಗೆ ಕೆಲಸವಿಲ್ಲ, ತಾನು ತವರುಮನೆಗೆ ಹೋಗಿ 5 ತಿಂಗಳಾದರೂ ಅವರಿಂದ ಫೋನ್, ಮೆಸೇಜ್ ಇಲ್ಲ ಎಂದು ಸುಪ್ರಿಯ ಹೇಳುತ್ತಾರೆ.

ತುಮಕೂರು, ಆಗಸ್ಟ್ 30: ಈ ಯುವತಿ ಹೇಳೋ ಮಾತುಗಳೆಲ್ಲ ನಿಜವಾಗಿದ್ದರೆ ಇದು ಮತ್ತೊಂದು ವರದಕ್ಷಿಣೆ ಕಿರುಕುಳದ ಕತೆ ಮಾರಾಯ್ರೇ. ತುಮಕೂರು ನಗರದಲ್ಲಿರುವ ಗಂಡ ಪ್ರಜ್ವಲ್ ಶಂಕರ್ ಮನೆ ಮುಂದೆ ಸುಪ್ರಿಯರಾಣಿ (Supriya Rani) ಹೆಸರಿನ ಯುವತಿ ಕೂತು ನ್ಯಾಯ ಬೇಕು ಅಂತ ಪ್ರತಿಭಟನೆ ನಡೆಸುತ್ತಿದ್ದಾರೆ. 8 ತಿಂಗಳ ಹಿಂದೆ ಮದುವೆಯಾದ ಇವರಿಗೆ ಗಂಡನ ಮನೆಗೆ ಬಂದ ನಾಲ್ಕನೇ ದಿನದಿಂದಲೇ ವರದಕ್ಷಿಣೆ ಕಿರುಕುಳ ಶುರುವಾಗಿದೆ. ಒಂದು ಚಿಕ್ಕ ಹೋಟೆಲ್ ಇಟ್ಟುಕೊಂಡಿರುವ ಸುಪ್ರಿಯ ತಂದೆ-ತಾಯಿ $ 20 ಲಕ್ಷ ಖರ್ಚು ಮಾಡಿ ಮಗಳ ನಿಶ್ಚಿತಾರ್ಥ ಮಾಡಿದ್ದಾರೆ ಮತ್ತು ಮದುವೆಯ ಸಮಯದಲ್ಲಿ 130 ಗ್ರಾಂ ಚಿನ್ನ ಹಾಗೂ 2 ಕೆಜಿ ಬೆಳ್ಳಿಯನ್ನು ನೀಡಿದ್ದಾರಂತೆ. ಗಂಡ ತನ್ನನ್ನು ಬೇಡ ಅನ್ನುತ್ತಿರುವುದರಿಂದ ತನಗೆ ಸೇರಿದ ಒಡವೆ, ಬೇರೆ ವಸ್ತುಗಳು ಅವರ ಮನೆಯಲ್ಲೇ ಇವೆ, ವಾಪಸ್ಸು ಕೊಡಲಿ ಎಂದು ಸುಪ್ರಿಯ ಧರಣಿಗೆ ಕೂತಿದ್ದಾರೆ.

ಇದನ್ನೂ ಓದಿ:   ಧರ್ಮಸ್ಥಳ ಪಿಎಸ್​ಐ ಕಿಶೋರ್ ವಿರುದ್ಧ ಪತ್ನಿಯಿಂದ ವರದಕ್ಷಿಣೆ ಕಿರುಕುಳ ಆರೋಪ, ಬೆಂಗಳೂರಲ್ಲಿ ದೂರು

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ