‘ಚಿತ್ರಮಂದಿರಕ್ಕೆ ಬರಲ್ಲ ಅಂತ ಜನರನ್ನು ದೂಷಿಸಬಾರದು’: ಉಪೇಂದ್ರ

ಈಗ ಜನರು ಒಟಿಟಿಯಲ್ಲಿ ಹೆಚ್ಚು ಮನರಂಜನೆ ಬಯಸುತ್ತಿದ್ದಾರೆ. ಚಿತ್ರಮಂದಿರಕ್ಕೆ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಬರುತ್ತಿಲ್ಲ. ಹಾಗಂತ ಜನರನ್ನು ದೂಷಿಸಲು ಸಾಧ್ಯವಿಲ್ಲ ಎಂಬುದು ಉಪೇಂದ್ರ ಅವರ ಅಭಿಪ್ರಾಯ. ಆ ಕುರಿತು ಅವರು ಮಾತನಾಡಿದ್ದಾರೆ. ‘ಎ’ ಸಿನಿಮಾ ಮರು ಬಿಡುಗಡೆ ಆಗಲು ಸಜ್ಜಾಗಿದ್ದು, ಈ ಹಿನ್ನೆಲೆಯಲ್ಲಿ ಅವರು ಸಂದರ್ಶನ ನೀಡಿದ್ದಾರೆ.

‘ಚಿತ್ರಮಂದಿರಕ್ಕೆ ಬರಲ್ಲ ಅಂತ ಜನರನ್ನು ದೂಷಿಸಬಾರದು’: ಉಪೇಂದ್ರ
| Updated By: ಮದನ್​ ಕುಮಾರ್​

Updated on: May 14, 2024 | 9:42 PM

ಇತ್ತೀಚಿನ ದಿನಗಳಲ್ಲಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿಲ್ಲ ಎಂಬ ಕೂಗು ಗಾಂಧಿನಗರದಲ್ಲಿ ಕೇಳಿಬರುತ್ತಲೇ ಇದೆ. ಅನೇಕ ಸಿಂಗಲ್​ ಸ್ಕ್ರೀನ್​ ಚಿತ್ರಮಂದಿರಗಳು ಬಾಗಿಲು ಮುಚ್ಚುತ್ತಿವೆ. ಹಾಗಾದರೆ ಇದಕ್ಕೆ ಕಾರಣ ಏನು ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ಆ ಬಗ್ಗೆ ನಟ, ನಿರ್ದೇಶಕ ಉಪೇಂದ್ರ (Upendra) ಅವರು ಮಾತನಾಡಿದ್ದಾರೆ. ಉಪೇಂದ್ರ ನಟಿಸಿದ ‘ಎ’ ಸಿನಿಮಾ (A Kannada Movie) ಮರು ಬಿಡುಗಡೆ ಆಗುತ್ತಿದೆ. ಮೇ 17ಕ್ಕೆ ಚಿತ್ರಮಂದಿರಗಳಲ್ಲಿ ‘ಎ’ ರೀ-ರಿಲೀಸ್​ ಆಗಲಿದೆ. ಈ ಪ್ರಯುಕ್ತ ನೀಡಿದ ಸಂದರ್ಶನದಲ್ಲಿ ಉಪೇಂದ್ರ ಕೆಲವು ಇಂಟರೆಸ್ಟಿಂಗ್​ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ‘ಈಗ ಮೊಬೈಲ್​ನಲ್ಲಿ ಎಲ್ಲವೂ ಇದೆ. ಕೈಯಲ್ಲೇ ವಿವಿಧ ಬಗೆಯ ಮನರಂಜನೆ ಸಿಗುತ್ತಿದೆ. ಇದನ್ನೂ ಮೀರಿದ್ದನ್ನು ಜನರು ನಿರೀಕ್ಷಿಸುತ್ತಿದ್ದಾರೆ. ಬರೀ ದೊಡ್ಡ ಬಜೆಟ್​ ಸಿನಿಮಾ ಅಂತಲ್ಲ. ಮೇಕಿಂಗ್​, ಕಂಟೆಂಟ್​ ದೃಷ್ಟಿಯಿಂದಲೂ ಹೊಸತನ್ನು ಬಯಸಿದ್ದಾರೆ. ಪ್ರೇಕ್ಷಕರು ಥಿಯೇಟರ್​ಗೆ ಬರಲ್ಲ ಅಂತ ನಾವು ಜನರನ್ನು ದೂಷಿಸಲು ಸಾಧ್ಯವಿಲ್ಲ. ಒಂದು ಒಳ್ಳೆಯ ಸಿನಿಮಾ ನಂತರದ 5 ಸಿನಿಮಾಗಳಿಗೆ ಜನರನ್ನು ಕರೆದುಕೊಂಡು ಬರುತ್ತದೆ. ಒಂದು ಕೆಟ್ಟ ಸಿನಿಮಾ ಮುಂದಿನ 5 ಒಳ್ಳೆಯ ಸಿನಿಮಾಗಳಿಗೆ ಜನರನ್ನು ತಡೆಯುತ್ತದೆ. ಬೇರೆ ಬೇರೆ ಕಾರಣಗಳು ಕೂಡ ಇರುತ್ತದೆ. ಆ ಸಮಯ ಸೂಕ್ತವಾಗಿಲ್ಲದೇ ಇರಬಹುದು. ಆದರೂ ಜನರು ಒಳ್ಳೆಯ ಸಿನಿಮಾವನ್ನು ಕೈ ಹಿಡಿದಿದ್ದಾರೆ. ಜನರನ್ನು ದೂಷಿಸಬಾರದು’ ಎಂದು ಉಪೇಂದ್ರ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us