ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಕಡೆ ಕಡವೆ, ಜಿಂಕೆ ಶಿಕಾರಿ

Edited By:

Updated on: Sep 09, 2026 | 7:33 PM

ಕಾವೇರಿ ವನ್ಯಜೀವಿಧಾಮದ ಹೂಗ್ಯ ಶಾಖೆಯ ಹೊಳೆಮುರಿದಟ್ಟಿ ಅರಣ್ಯದಲ್ಲಿ ಇತ್ತೀಚಿಗೆ ನಡೆದ ಶೂಟೌಟ್‌ ಪ್ರಕರಣ ತನಿಖೆ ನಡೆಯುತ್ತಿದೆ. ಇದರ ಮಧ್ಯೆ ಇದೀಗ ಚಾಮರಾಜನಗರ ಜಿಲ್ಲೆಯಲ್ಲಿ ಮತ್ತೆ ಕಾಡುಗಳ್ಳರು ಮತ್ತೆ ಆ್ಯಕ್ಟಿವ್ ಆಗಿದ್ದಾರೆ. ಅರಣ್ಯ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆಯನ್ನ ಟಾರ್ಗೆಟ್ ಮಾಡಿರುವ ಕಾಡುಗಳ್ಳರು, ಮೊದಲು ಎಪಿಸಿ ಕ್ಯಾಂಪ್ ಗಳಿಗೆ ಬೆಂಕಿ ಹಚ್ಚಿ ಜಿಲೆಟಿನ್ ಕಡ್ಡಿಯಿಟ್ಟು ಬ್ಲಾಸ್ಟ್ ಮಾಡಿದ್ರು.

ಚಾಮರಾಜನಗರ, ಸೆಪ್ಟೆಂಬರ್ 09): ಕಾವೇರಿ ವನ್ಯಜೀವಿಧಾಮದ ಹೂಗ್ಯ ಶಾಖೆಯ ಹೊಳೆಮುರಿದಟ್ಟಿ ಅರಣ್ಯದಲ್ಲಿ ಇತ್ತೀಚಿಗೆ ನಡೆದ ಶೂಟೌಟ್‌ ಪ್ರಕರಣ ತನಿಖೆ ನಡೆಯುತ್ತಿದೆ. ಇದರ ಮಧ್ಯೆ ಇದೀಗ ಚಾಮರಾಜನಗರ ಜಿಲ್ಲೆಯಲ್ಲಿ ಮತ್ತೆ ಕಾಡುಗಳ್ಳರು ಮತ್ತೆ ಆ್ಯಕ್ಟಿವ್ ಆಗಿದ್ದಾರೆ. ಅರಣ್ಯ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆಯನ್ನ ಟಾರ್ಗೆಟ್ ಮಾಡಿರುವ ಕಾಡುಗಳ್ಳರು, ಮೊದಲು ಎಪಿಸಿ ಕ್ಯಾಂಪ್ ಗಳಿಗೆ ಬೆಂಕಿ ಹಚ್ಚಿ ಜಿಲೆಟಿನ್ ಕಡ್ಡಿಯಿಟ್ಟು ಬ್ಲಾಸ್ಟ್ ಮಾಡಿದ್ರು. ಈ ಪ್ರಕರಣ ಮಾಸುವ ಮುನ್ನವೇ ಮತ್ತೆ ಒಂದು ವಾರದಲ್ಲಿ ಮಲೆ ಮಹದೇಶ್ವರ ವನ್ಯಜೀವಿಧಾಮದ ಹಾನೂರು ಬಫರ್ ಝೋನ್ ನಲ್ಲಿ ಎರೆಡು ಬಾರಿ ಕಾಡು ಪ್ರಾಣಿ ಬೇಟೆಯಾಡಿದ್ದಾರೆ.

ಸೆಪ್ಟೆಂಬರ್ 1ರಂದು ಹನೂರು ತಾಲೂಕಿನ ಉಡುತೊರೆ ಹಳ್ಳದ ಬಳಿ ಬೃಹತ್ ಕಡವೆಗೆ ಗುಂಡಿಕ್ಕಿ ಬೇಟೆಯಾಡಿ ಮಾಂಸ ಬೇರ್ಪಡಿಸುವಾಗ ಅರಣ್ಯ ಸಿಬ್ಬಂದಿ ಬರುತ್ತಿದ್ದಂತೆಯೇ ಎಸ್ಕೇಪ್ ಆಗಿದ್ರು. ಈಗ ಮತ್ತೆ ಹನೂರು ತಾಲೂಕಿನ ಪಚ್ಚೆದೊಡ್ಡಿ ಗ್ರಾಮದಲ್ಲಿ ಗಂಡು ಜಿಂಕೆಗೆ ಗುಂಡಿಕ್ಕಿ ಶಿಕಾರಿ ಮಾಡಿದ್ದು ಅರಣ್ಯ ಸಿಬ್ಬಂದಿಯ ಜೀಪ್ ಶಬ್ಧಕೇಳುತ್ತಿದ್ದಂತೆಯೇಮೃತ ಜಿಂಕೆಯ ಎದೆ ಭಾಗವನ್ನ ಹಾಗೂ ಅರ್ಧ ಕತ್ತನ್ನ ಕತ್ತರಿಸಿ ಎಸ್ಕೇಪ್ ಆಗಿದ್ದಾರೆ. ಹೀಗೆ ಎನ್ ಕೌಂಟರ್ ಬಳಿಕ ಕಾಡುಗಳ್ಳರು ಜಿದ್ದಿಗೆ ಬಿದ್ದಿದ್ದು ಪದೇ ಪದೆ ಶಿಕಾರಿಗೆ ಮುಂದಾಗುತ್ತಿರುವುದು ಅರಣ್ಯ ಸಿಬ್ಬಂದಿಯ ನಿದ್ದೆಗೆಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us