AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dharmasthala Mask Man Arrested; ಚಿನ್ನಯ್ಯ ಬಂಧನ ಒಳ್ಳೇ ಬೆಳವಣಿಗೆ, ಎಸ್ಐಟಿ ಕ್ರಮ ಸ್ವಾಗತಿಸುತ್ತೇನೆ: ಗಿರೀಶ್ ಮಟ್ಟಣ್ಣನವರ್

Dharmasthala Mask Man Arrested; ಚಿನ್ನಯ್ಯ ಬಂಧನ ಒಳ್ಳೇ ಬೆಳವಣಿಗೆ, ಎಸ್ಐಟಿ ಕ್ರಮ ಸ್ವಾಗತಿಸುತ್ತೇನೆ: ಗಿರೀಶ್ ಮಟ್ಟಣ್ಣನವರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 23, 2025 | 2:45 PM

Share

ಎಸ್ಐಟಿ ಅಧಿಕಾರಿಗಳು ಚಿನ್ನಯ್ಯನನ್ನು ಬಂಧಿಸಿದ್ದಾರೆ ಎಂಬ ಕಾರಣಕ್ಕೆ ಯಾರೂ ಅವರ ವಿರುದ್ಧ ಅಕ್ರೋಶ ವ್ಯಕ್ತಪಡಿಸಬಾರದು, ಎಸ್ಐಟಿ ತನ್ನದೇ ಆದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ, ಒಂದು ಪ್ಯಾಟರ್ನ್​ ಅನುಸರಿಸಿಕೊಂಡು ಕೆಲಸ ಮಾಡುತ್ತದೆ, ಹಾಗಾಗಿ ಸರ್ಕಾರ ಮತ್ತು ಸಾರ್ವಜನಿಕರು ಎಸ್​ಐಟಿ ಅಧಿಕಾರಿಗಳ ಕೆಲಸಕ್ಕೆ ವ್ಯತ್ಯಯ ಉಂಟುಮಾಡಬಾರದು ಎಂದು ಗಿರೀಶ್ ಮಟ್ಟಣ್ಣನವರ್ ಹೇಳಿದರು.

ಮಂಗಳೂರು, ಆಗಸ್ಟ್ 23: ಮಾಸ್ಕ್​ಮ್ಯಾನ್ ಸಿಎನ್ ಚಿನ್ನಯ್ಯನನ್ನು (CS Chinnaiah) ಬಂಧಿಸಿರುವುದು ಒಳ್ಳೆಯ ಬೆಳವಣಿಗೆ, ಎಸ್​ಐಟಿ ಕ್ರಮವನ್ನು ಸ್ವಾಗುತಿಸುತ್ತೇನೆ, ಅದರೆ ಅವರನ್ನು ಬಂಧಿಸಿದರಷ್ಟೇ ಸಾಲದು, ಅವರ ಮಂಪರು ಪರೀಕ್ಷೆ ನಡೆಸಬೇಕು, ಎಸ್​ಐಟಿಗೆ ಇದು ತನ್ನ ವಿನಂತಿ ಎಂದು ಗಿರೀಶ್ ಮಟ್ಟಣ್ಣನವರ್ ಹೇಳಿದರು. ತನ್ನ ವಿರುದ್ಧ ಎಫ್ಐಆರ್ ಆಗಿದೆ, ಹಾಗಾಗಿ ಲಿಖಿತ ಹೇಳಿಕೆ ನೀಡಲು ಬಂದಿದ್ದೆ ಎಂದು ಹೇಳಿದ ಮಟ್ಟಣ್ಣನವರ್, ಈ ಪ್ರಕರಣ ಒಂದು ಷಡ್ಯಂತ್ರ ಮಾತ್ರವೋ ಅಲ್ಲವೋ ಅನ್ನೋದನ್ನು ಎಸ್ಐಟಿ ಅಧಿಕಾರಿಗಳೇ ಹೇಳಬೇಕು, ತಾನು ತನಿಖಾಧಿಕಾರಿ ಅಲ್ಲ ಎಂದರು. ಎಸ್ಐಟಿಯವರು ವಿಚಾರಣೆಗೆ ತನ್ನನ್ನು ಕರೆದಿಲ್ಲ, ಕರೆದರೆ ಖಂಡಿತ ಹೋಗೋದಾಗಿ ಅವರು ಹೇಳಿದರು.

ಇದನ್ನೂ ಓದಿ:  ಧರ್ಮಸ್ಥಳ ಮಾಸ್ಕ್​ಮ್ಯಾನ್ ಬಂಧನ; ನಮ್ಮ ಸರ್ಕಾರ ಯಾರ ಪರವೂ ಅಲ್ಲ, ಕೇವಲ ನ್ಯಾಯದ ಪರ: ಶಿವಕುಮಾರ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More