AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dharmasthala Mask Man Arrested; ಚಿನ್ನಯ್ಯ ಬಂಧನ ಒಳ್ಳೇ ಬೆಳವಣಿಗೆ, ಎಸ್ಐಟಿ ಕ್ರಮ ಸ್ವಾಗತಿಸುತ್ತೇನೆ: ಗಿರೀಶ್ ಮಟ್ಟಣ್ಣನವರ್

Dharmasthala Mask Man Arrested; ಚಿನ್ನಯ್ಯ ಬಂಧನ ಒಳ್ಳೇ ಬೆಳವಣಿಗೆ, ಎಸ್ಐಟಿ ಕ್ರಮ ಸ್ವಾಗತಿಸುತ್ತೇನೆ: ಗಿರೀಶ್ ಮಟ್ಟಣ್ಣನವರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 23, 2025 | 2:45 PM

Share

ಎಸ್ಐಟಿ ಅಧಿಕಾರಿಗಳು ಚಿನ್ನಯ್ಯನನ್ನು ಬಂಧಿಸಿದ್ದಾರೆ ಎಂಬ ಕಾರಣಕ್ಕೆ ಯಾರೂ ಅವರ ವಿರುದ್ಧ ಅಕ್ರೋಶ ವ್ಯಕ್ತಪಡಿಸಬಾರದು, ಎಸ್ಐಟಿ ತನ್ನದೇ ಆದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ, ಒಂದು ಪ್ಯಾಟರ್ನ್​ ಅನುಸರಿಸಿಕೊಂಡು ಕೆಲಸ ಮಾಡುತ್ತದೆ, ಹಾಗಾಗಿ ಸರ್ಕಾರ ಮತ್ತು ಸಾರ್ವಜನಿಕರು ಎಸ್​ಐಟಿ ಅಧಿಕಾರಿಗಳ ಕೆಲಸಕ್ಕೆ ವ್ಯತ್ಯಯ ಉಂಟುಮಾಡಬಾರದು ಎಂದು ಗಿರೀಶ್ ಮಟ್ಟಣ್ಣನವರ್ ಹೇಳಿದರು.

ಮಂಗಳೂರು, ಆಗಸ್ಟ್ 23: ಮಾಸ್ಕ್​ಮ್ಯಾನ್ ಸಿಎನ್ ಚಿನ್ನಯ್ಯನನ್ನು (CS Chinnaiah) ಬಂಧಿಸಿರುವುದು ಒಳ್ಳೆಯ ಬೆಳವಣಿಗೆ, ಎಸ್​ಐಟಿ ಕ್ರಮವನ್ನು ಸ್ವಾಗುತಿಸುತ್ತೇನೆ, ಅದರೆ ಅವರನ್ನು ಬಂಧಿಸಿದರಷ್ಟೇ ಸಾಲದು, ಅವರ ಮಂಪರು ಪರೀಕ್ಷೆ ನಡೆಸಬೇಕು, ಎಸ್​ಐಟಿಗೆ ಇದು ತನ್ನ ವಿನಂತಿ ಎಂದು ಗಿರೀಶ್ ಮಟ್ಟಣ್ಣನವರ್ ಹೇಳಿದರು. ತನ್ನ ವಿರುದ್ಧ ಎಫ್ಐಆರ್ ಆಗಿದೆ, ಹಾಗಾಗಿ ಲಿಖಿತ ಹೇಳಿಕೆ ನೀಡಲು ಬಂದಿದ್ದೆ ಎಂದು ಹೇಳಿದ ಮಟ್ಟಣ್ಣನವರ್, ಈ ಪ್ರಕರಣ ಒಂದು ಷಡ್ಯಂತ್ರ ಮಾತ್ರವೋ ಅಲ್ಲವೋ ಅನ್ನೋದನ್ನು ಎಸ್ಐಟಿ ಅಧಿಕಾರಿಗಳೇ ಹೇಳಬೇಕು, ತಾನು ತನಿಖಾಧಿಕಾರಿ ಅಲ್ಲ ಎಂದರು. ಎಸ್ಐಟಿಯವರು ವಿಚಾರಣೆಗೆ ತನ್ನನ್ನು ಕರೆದಿಲ್ಲ, ಕರೆದರೆ ಖಂಡಿತ ಹೋಗೋದಾಗಿ ಅವರು ಹೇಳಿದರು.

ಇದನ್ನೂ ಓದಿ:  ಧರ್ಮಸ್ಥಳ ಮಾಸ್ಕ್​ಮ್ಯಾನ್ ಬಂಧನ; ನಮ್ಮ ಸರ್ಕಾರ ಯಾರ ಪರವೂ ಅಲ್ಲ, ಕೇವಲ ನ್ಯಾಯದ ಪರ: ಶಿವಕುಮಾರ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ