‘ಲೀಲಾವತಿ ರೀತಿ ಅದಿತಿ ಪ್ರಭುದೇವಗೂ ಒಳ್ಳೆಯ ಗುಣ ಇದೆ’: ಹಿರಿಯ ನಟ ಬೆಂಗಳೂರು ನಾಗೇಶ್
‘ಎಲ್ಲರಿಗೂ ಒಳ್ಳೆಯದಾಗಬೇಕು ಎಂಬ ಭಾವನೆ ಲೀಲಾವತಿ ಅವರಿಗೆ ಇತ್ತು. ಅಂಥ ಭಾವನೆ ಎಲ್ಲ ನಟಿಯರಿಗೆ ಇರೋದಿಲ್ಲ’ ಎಂದು ಬೆಂಗಳೂರು ನಾಗೇಶ್ ಹೇಳಿದ್ದಾರೆ.
ನಟ ಬೆಂಗಳೂರು ನಾಗೇಶ್ (Bangalore Nagesh) ಅವರಿಗೆ ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳ ಅನುಭವ ಇದೆ. ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಲೀಲಾವತಿ (Leelavathi) ಮುಂತಾದ ಕಲಾವಿದರ ಜೊತೆ ಕೆಲಸ ಮಾಡಿದ್ದ ಅವರು ತಮ್ಮ ನೆನಪಿನ ಪುಟವನ್ನು ತೆರೆದಿದ್ದಾರೆ. ಬೆಂಗಳೂರು ನಾಗೇಶ್ ಅವರು ತಮ್ಮ ಯೌವನದ ದಿನಗಳಲ್ಲಿ ಸಿಗರೇಟ್ ಸೇದುವ ಅಭ್ಯಾಸ ಇಟ್ಟುಕೊಂಡಿದ್ದರು. ಅದನ್ನು ಗಮನಿಸಿದ ಲೀಲಾವತಿಯವರು ಬುದ್ಧಿಮಾತು ಹೇಳಿದ್ದರು. ಅಂದಿನಿಂದ ಇಂದಿನವರೆಗೆ ತಾವು ಸಿಗರೇಟ್ ಸೇದಿಲ್ಲ ಎಂದಿದ್ದಾರೆ ಬೆಂಗಳೂರು ನಾಗೇಶ್. ‘ಎಲ್ಲರಿಗೂ ಒಳ್ಳೆಯದಾಗಬೇಕು ಎಂಬ ಭಾವನೆ ಲೀಲಾವತಿ ಅವರಿಗೆ ಇತ್ತು. ಅಂಥ ಭಾವನೆ ಎಲ್ಲ ನಟಿಯರಿಗೆ ಇರೋದಿಲ್ಲ. ಈ ದಿನಗಳಲ್ಲಿ ಅದಿತಿ ಪ್ರಭುದೇವ (Aditi Prabhudeva) ಅವರು ಒಳ್ಳೆಯ ಮನೋಭಾವ ಹೊಂದಿದ್ದಾರೆ. ಅವರ ಜೊತೆ ‘ಓಲ್ಡ್ ಮಾಂಕ್’ ಸಿನಿಮಾದಲ್ಲಿ ನಟಿಸಿದ್ದೇನೆ. ಅವರ ರೀತಿಯ ವ್ಯಕ್ತಿತ್ವ ಇದ್ದರೆ ಎಲ್ಲರೂ ಖುಷಿಯಿಂದ ಕೆಲಸ ಮಾಡಬಹುದು’ ಎಂದು ಬೆಂಗಳೂರು ನಾಗೇಶ್ ಹೇಳಿದ್ದಾರೆ.
ಇದನ್ನೂ ಓದಿ:
ಅದಿತಿ ಪ್ರಭುದೇವಗೆ ಹುಟ್ಟುಹಬ್ಬದ ಸಂಭ್ರಮ; ಸ್ಯಾಂಡಲ್ವುಡ್ ಸುಂದರಿಯ ಕ್ಯೂಟ್ ಫೋಟೋ ಆಲ್ಬಂ
‘ಗಂಧದ ಗುಡಿ’ ಬಳಿಕ ರಾಜ್ಕುಮಾರ್-ವಿಷ್ಣುವರ್ಧನ್ ಏಕೆ ಒಟ್ಟಾಗಿ ನಟಿಸಲಿಲ್ಲ? ಕಾರಣ ನೀಡಿದ ಹಿರಿಯ ನಟ
Published on: Jan 21, 2022 09:58 AM
ಸಲಾಲ್ ಡ್ಯಾಂನ ಗೇಟ್ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಮದುವೆ ಬಳಿಕ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಿಕ್ಕಣ್ಣ, ಪಾವನಾ ಭೇಟಿ
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್ ಅಪ್ಡೇಟ್:ಪರಿಷ್ಕರಣೆಗೆ ಗಡುವು ವಿಸ್ತರಣೆ

