AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಚೆನ್ನಾಗಿ ಅಲ್ಲಾಡಿಸಿದ್ದೀನಾ?’: ಬೆಳ್ಳುಳ್ಳಿ ಕಬಾಬ್ ಚಂದ್ರು ಬಳಿ ಅಭಿಪ್ರಾಯ ಕೇಳಿದ ಸುನಿ

‘ಚೆನ್ನಾಗಿ ಅಲ್ಲಾಡಿಸಿದ್ದೀನಾ?’: ಬೆಳ್ಳುಳ್ಳಿ ಕಬಾಬ್ ಚಂದ್ರು ಬಳಿ ಅಭಿಪ್ರಾಯ ಕೇಳಿದ ಸುನಿ

ಮದನ್​ ಕುಮಾರ್​
|

Updated on: Feb 13, 2024 | 12:40 PM

ಫೆ.12ರ ಸಂಜೆ ಬೆಂಗಳೂರಿನಲ್ಲಿ ‘ಒಂದು ಸರಳ ಪ್ರೇಮಕಥೆ’ ಸಿನಿಮಾದ ಸೆಲೆಬ್ರಿಟಿ ಶೋ ಏರ್ಪಡಿಸಲಾಗಿತ್ತು. ಬೆಳ್ಳುಳ್ಳಿ ಕಬಾಬ್​ ಖ್ಯಾತಿಯ ಚಂದ್ರು ಕೂಡ ಸೆಲೆಬ್ರಿಟಿ ಶೋನಲ್ಲಿ ಭಾಗಿ ಆಗಿದ್ದರು. ಸಿನಿಮಾ ನೋಡಿದ ಬಳಿಕ, ‘ಚೆನ್ನಾಗಿ ಅಲ್ಲಾಡಿಸಿದ್ದೀನಾ’ ಎಂದು ಚಂದ್ರಣ್ಣನ ಬಳಿ ನಿರ್ದೇಶಕ ಸಿಂಪಲ್​ ಸುನಿ ಅವರು ಅಭಿಪ್ರಾಯ ಕೇಳಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ ನೋಡಿ..

ನಿರ್ದೇಶಕ ಸಿಂಪಲ್​ ಸುನಿ (Simple Suni) ಅವರು ಆ್ಯಕ್ಷನ್​-ಕಟ್​ ಹೇಳಿರುವ ‘ಒಂದು ಸರಳ ಪ್ರೇಮಕಥೆ’ (Ondu Sarala Prema Kathe) ಸಿನಿಮಾ ಬಿಡುಗಡೆಯಾಗಿ ಎಲ್ಲರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈ ಸಿನಿಮಾದಲ್ಲಿ ಒಂದು ಡಿಫರೆಂಟ್​ ಆದ ಲವ್​ಸ್ಟೋರಿ ಇದೆ. ವಿನಯ್ ರಾಜ್​ಕುಮಾರ್​, ಸ್ವಾದಿಷ್ಟಾ, ಮಲ್ಲಿಕಾ ಸಿಂಗ್​, ರಾಜೇಶ್​ ನಟರಂಗ, ಸಾಧು ಕೋಕಿಲ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಸೋಮವಾರ (ಫೆಬ್ರವರಿ 12) ‘ಒಂದು ಸರಳ ಪ್ರೇಮಕಥೆ’ ಚಿತ್ರದ ಸೆಲೆಬ್ರಿಟಿ ಶೋ ಏರ್ಪಡಿಸಲಾಗಿತ್ತು. ಇದರಲ್ಲಿ ಬೆಳ್ಳುಳ್ಳಿ ಕಬಾಬ್ ಖ್ಯಾತಿಯ ಚಂದ್ರಣ್ಣ (Bellulli Kabab Chandru) ಕೂಡ ಭಾಗಿ ಆಗಿದ್ದರು. ಸಿನಿಮಾ ಮುಗಿದ ಬಳಿಕ ‘ಚೆನ್ನಾಗಿ ಅಲ್ಲಾಡಿಸಿದ್ದೀನಾ’ ಎಂದು ಅವರ ಬಳಿ ಸಿಂಪಲ್ ಸುನಿ ಅಭಿಪ್ರಾಯ ಕೇಳಿದ್ದಾರೆ. ‘ತುಂಬ ಚೆನ್ನಾಗಿ ಅಲ್ಲಾಡಿಸಿದ್ದೀರಿ. ಈ ಸಿನಿಮಾದಲ್ಲಿ ಎರಡು ಕ್ಲೈಮ್ಯಾಕ್ಸ್​ ಇದೆ. ನಮ್ಮ ರಾಹುಲ್ಲಾ.. ಅಲ್ಲ.. ಸುನಿಲ್ಲಾ ತುಂಬ ಚೆನ್ನಾಗಿ ಮಾಡಿದ್ದಾರೆ. ನನ್ನ ಬೆಳ್ಳುಳ್ಳಿ ಕಬಾಬ್​ಗೆ ನೀಡಿದ ಬೆಂಬಲದ ರೀತಿಯೇ ಕನ್ನಡ ಸಿನಿಮಾಗಳನ್ನು ಪ್ರೋತ್ಸಾಹಿಸಬೇಕು. ನೋಡ್ತಾ ಇರಬೇಕು, ಒನ್​ ಮೋರ್​ ಒನ್​ ಅಂತಾ ಇರಬೇಕು’ ಎಂದು ಚಂದ್ರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ