ಕೆಟ್ಟ ಭಾಷೆಯಲ್ಲಿ ಬಿಗ್​ ಬಾಸ್​ಗೆ ಬೈಯ್ಯುವ ಅರವಿಂದ್​-ದಿವ್ಯಾ ಫ್ಯಾನ್ಸ್​ಗೆ ಪರಮೇಶ್ವರ​ ಗುಂಡ್ಕಲ್​ ನೇರ ಪ್ರಶ್ನೆ

ಬಿಗ್​ ಬಾಸ್​ ಕಾರ್ಯಕ್ರಮ ಮುಗಿದರೂ ಅದರ ಕುರಿತಾದ ಮಾತುಕತೆ ನಿಂತಿಲ್ಲ. ಮಂಜು ಪಾವಗಡ ವಿನ್ನರ್​ ಆಗಿದ್ದರ ಬಗ್ಗೆ ಪರ-ವಿರೋಧದ ಚರ್ಚೆ ಇನ್ನೂ ನಡೆಯುತ್ತಿದೆ.

ಕೆಟ್ಟ ಭಾಷೆಯಲ್ಲಿ ಬಿಗ್​ ಬಾಸ್​ಗೆ ಬೈಯ್ಯುವ ಅರವಿಂದ್​-ದಿವ್ಯಾ ಫ್ಯಾನ್ಸ್​ಗೆ ಪರಮೇಶ್ವರ​ ಗುಂಡ್ಕಲ್​ ನೇರ ಪ್ರಶ್ನೆ
| Updated By: ಮದನ್​ ಕುಮಾರ್​

Updated on:Aug 15, 2021 | 10:09 AM

ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ದಿವ್ಯಾ ಉರುಡುಗ ಮತ್ತು ಅರವಿಂದ್​ ಸೋತಿರುವುದು ಅವರ ಫ್ಯಾನ್ಸ್​ಗೆ ಅಸಮಾಧಾನ ತಂದಿದೆ. ಹಾಗಾಗಿ ಅವರು ಬಿಗ್​ ಬಾಸ್​ ಆಯೋಜಕರ ವಿರುದ್ಧ ಕಿಡಿಕಾರುತ್ತಿದ್ದಾರೆ. ಈ ಕುರಿತು ಕಲರ್ಸ್​ ಕನ್ನಡ ವಾಹಿನಿಯ ಬ್ಯುಸಿನೆಸ್​ ಹೆಡ್​ ಪರಮೇಶ್ವರ ಗುಂಡ್ಕಲ್​ ಅವರು ನೇರವಾಗಿ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಬಗ್ಗೆ ತಮ್ಮ ನಿಲುವು ಏನು ಎಂಬುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ.

‘ಟ್ರೋಲ್​ ಮಾಡುವವರ ಪ್ರಶ್ನೆಗೆ ಉತ್ತರ ಕೊಟ್ಟು ಮುಗಿಸೋಕೆ ಆಗಲ್ಲ. ಯಾರೇ ಗೆದ್ದರೂ ಅವರು ಪ್ರಶ್ನೆ ಮಾಡುತ್ತಾರೆ. ಅರವಿಂದ್​ ಅವರು ಬಿಗ್​ ಬಾಸ್​ಗೆ ಬಂದಿದ್ದರಿಂದಲೇ ಅವರ ಜನಪ್ರಿಯತೆ ಹೆಚ್ಚಿತು. ಅವರು ಮಾಡಿದ ಸಾಧನೆಗಳ ಬಗ್ಗೆ ಜನರಿಗೆ ತಿಳಿಯಿತು. ಅರವಿಂದ್​ ಮತ್ತು ದಿವ್ಯಾ ಉರುಡುಗ ಫ್ಯಾನ್ಸ್​ಗೆ ನನ್ನದೊಂದು ಪ್ರಶ್ನೆ ಇದೆ. ಅವರಿಬ್ಬರು ಭೇಟಿ ಆಗಿದ್ದು ನನ್ನ ಶೋನಲ್ಲಿ. ಇಬ್ಬರನ್ನೂ ಬಿಗ್​ ಬಾಸ್​ಗೆ ಕರೆದುಕೊಂಡು ಬಂದಿದ್ದು ನಾವು. ಆದರೆ ಇಂದು ನಮ್ಮ ಬಗ್ಗೆ ಕೆಟ್ಟ ಕಮೆಂಟ್​ ಹಾಕುವವರಿಂದ ಅರವಿಂದ್​ಗೆ ಏನೂ ಪ್ರಯೋಜನ ಆಗಿರಲಿಲ್ಲ. ವೇದಿಕೆ ಒದಗಿಸಿಕೊಟ್ಟವರಿಗೆ, ಒಳ್ಳೆಯ ಗೌರವಧನ ಕೊಟ್ಟವರಿಗೆ ಅವರ ಫ್ಯಾನ್ಸ್​ ಬಾಯಿಗೆ ಬಂದಂತೆ ಬೈಯ್ಯುತ್ತಾರೆ. ಅದು ಅವರ ಮನಸ್ಸಿಗೆ ಬಿಟ್ಟಿದ್ದು’ ಎಂದು ಪರಮೇಶ್ವರ ಗುಂಡ್ಕಲ್​ ಹೇಳಿದ್ದಾರೆ.

ಇದನ್ನೂ ಓದಿ:

‘ಮಂಜು ತಂದೆ-ತಾಯಿ ಬಳಿ ಮದುವೆ ಬಗ್ಗೆ ಮಾತಾಡಿದ್ದೇನೆ’; ಎಲ್ಲರ ಮುಂದೆ ವಿಷಯ ತಿಳಿಸಿದ ದಿವ್ಯಾ ಸುರೇಶ್​

‘ಅರವಿಂದ್​ ಜತೆ ಮದುವೆ ಆಗ್ತೀರಾ? ಕನ್ನಡದಲ್ಲೇ ಉತ್ತರ ಕೊಡಿ’; ದಿವ್ಯಾಗೆ ಪಟ್ಟು ಹಿಡಿದು ಪ್ರಶ್ನೆ ಕೇಳಿದ ಮಂಜು

Published On - 9:57 am, Sun, 15 August 21

Follow us