AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bangalore Rains: ಮಳೆ ಅಬ್ಬರಕ್ಕೆ ಶಾಂತಿನಗರದಲ್ಲಿ ಭಾಗಶಃ ಮುಳುಗಿದ ಬಸ್​ಗಳು, ಡಿಪೋದಿಂದ ಹೊರ ತೆಗೆಯಲಾಗದೆ ಹೈರಾಣಾದ ಸಿಬ್ಬಂದಿ

Bangalore Rains: ಮಳೆ ಅಬ್ಬರಕ್ಕೆ ಶಾಂತಿನಗರದಲ್ಲಿ ಭಾಗಶಃ ಮುಳುಗಿದ ಬಸ್​ಗಳು, ಡಿಪೋದಿಂದ ಹೊರ ತೆಗೆಯಲಾಗದೆ ಹೈರಾಣಾದ ಸಿಬ್ಬಂದಿ

Ganapathi Sharma
|

Updated on: May 19, 2025 | 8:00 AM

ಬೆಂಗಳೂರು ಮಳೆ: ಒಂದೆರಡು ದಿನ ಸುರಿದ ಮಳೆ ಬೆಂಗಳೂರಿನಲ್ಲಿ ಭಾರಿ ಅನಾಹುತಗಳನ್ನೇ ಸೃಷ್ಟಿಸಿದೆ. ಭಾನುವಾರ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಬೆಂಗಳೂರಿನ ಶಾಂತಿನಗರ ಬಸ್ ಡಿಪೋ ಜಲಾವೃತಗೊಂಡಿದೆ. ಬಿಎಂಟಿಸಿ ಬಸ್​​ಗಳು ಭಾಗಶಃ ಮುಳುಗಡೆಯಾಗಿದ್ದರಿಂದ ಬೆಳಗ್ಗೆ ಕರ್ತವ್ಯಕ್ಕೆಂದು ಬಂದ ಸಿಬ್ಬಂದಿ ಬಸ್​​ಗಳನ್ನು ಹೊರ ತೆಗೆಯಲಾಗದೆ ಒದ್ದಾಡಿದರು. ವಿಡಿಯೋ ಇಲ್ಲಿದೆ ನೋಡಿ.

ಬೆಂಗಳೂರು, ಮೇ 19: ಬೆಂಗಳೂರು ನಗರದಾದ್ಯಂತ ಭಾನುವಾರ ರಾತ್ರಿ ಸುರಿದ ಭಾರಿ ಮಳೆ ಅನೇಕ ಅವಾಂತರಗಳನ್ನು ಸೃಷ್ಟಿಸಿದೆ. ವರುಣಾರ್ಭಟಕ್ಕೆ ಶಾಂತಿನಗರ ಬಸ್ ಡಿಪೋದಲ್ಲಿ ಬಿಎಂಟಿಸಿ ಬಸ್​​ಗಳು ಭಾಗಶಃ ಮುಳುಗಿವೆ. ಶಾಂತಿ ನಗರ ಬಸ್​ ಡಿಪೋ ಪೂರ್ತಿ ಜಲಾವೃತಗೊಂಡಿದೆ. ಇದರಿಂದಾಗಿ ಬೆಳಗ್ಗೆ ಡ್ಯೂಟಿಗೆ ಬಂದ ಬಿಎಂಟಿಸಿ ಸಿಬ್ಬಂದಿಗೆ ಶಾಕ್ ಎದುರಾಗಿದೆ. ಡಿಪೋದಿಂದ ಬಸ್​ ಹೊರ ತೆಗೆಯಲಾಗದೆ ಸಂಕಷ್ಟ ಅನುಭವಿಸಬೇಕಾಗಿ ಬಂತು.

ಕರ್ನಾಟಕದ ಇನ್ನಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ